ಬದಿಯಡ್ಕ ನಿವಾಸಿ ರೈಲು ಪ್ರಯಾಣ ಮಧ್ಯೆ ಹೊಳೆಗೆ ಬಿದ್ದು ನಾಪತ್ತೆ

ಬದಿಯಡ್ಕ:  ಬದಿಯಡ್ಕ ನಿವಾಸಿಯೊಬ್ಬರು ರೈಲು ಪ್ರಯಾಣ ವೇಳೆ ನಾಪತ್ತೆಯಾದ ಘಟನೆ ನಡೆದಿದೆ. ಬದಿಯಡ್ಕ ಪೆಟ್ರೋಲ್ ಬಂಕ್ ಸಮೀಪದ ದಿ| ರವೀಂದ್ರ ಶೆಣೈಯವರ ಪುತ್ರ ಅಚ್ಯುತಾನಂದ ಶೆಣೈ (40) ಎಂಬವರು  ತೃಶೂರು ಚಾಲಕ್ಕುಡಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದಾರೆ. ಇವರನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ಅಗ್ನಿಶಾಮಕದಳ ಶೋಧ ಮುಂದುವರಿಸುತ್ತಿದೆ.  ವಿಷಯ ತಿಳಿದು ಸಂಬಂಧಿಕರು ತೃಶೂರಿಗೆ ತೆರಳಿದ್ದಾರೆ.  ನಿನ್ನೆ ಬೆಳಿಗ್ಗೆ 10.45ರ ವೇಳೆ ಘಟನೆ ನಡೆದಿದೆ. ತಿರು ವನಂತಪುರದಿಂದ ತೃಶೂರಿಗೆ ತೆರಳುತ್ತಿದ್ದ ವೇನಾಡ್ ಎಕ್ಸ್‌ಪ್ರೆಸ್‌ನಲ್ಲಿ ಅಚ್ಯುತಾನಂದ ಶೆಣೈ ಪ್ರಯಾಣಿಸುತ್ತಿ ದ್ದರು. ಇವರು …

ಮನೆಯೊಳಗೆ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ: ಮೃತಪಟ್ಟಿರುವುದು ಬೇಕಲ ಫೆಸ್ಟ್ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ವಿದ್ಯಾರ್ಥಿಯ ತಂದೆ, ತಾಯಿ

ಕಾಸರಗೋಡು: ಬೇಕಲ ಬೀಚ್ ಫೆಸ್ಟ್ ವೇಳೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾ ರ್ಥಿಯ ತಂದೆ, ತಾಯಿ ಮನೆಯೊಳಗೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಪೊಯಿನಾಚಿಪರಂಬ್‌ನ ವೇಣುಗೋಪಾಲನ್ ನಾಯರ್ (55), ಪತ್ನಿ ಸ್ಮಿತಾ (45) ಎಂಬಿವರು ಮೃತಪಟ್ಟವರಾಗಿದ್ದಾರೆ. ಇಂದು ಬೆಳಿಗ್ಗೆ ಮನೆಯ ಸೆಂಟ್ರಲ್ ಹಾಲ್‌ನಲ್ಲಿ ಮೃತದೇಹಗಳು ಕಂಡು ಬಂದಿವೆ. ವಿಷಯ ತಿಳಿದು ಮೇಲ್ಪರಂಬ ಪೊಲೀ ಸರು ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ. ವೇಣುಗೋಪಾಲನ್ ನಾಯರ್- ಸ್ಮಿತಾ ದಂಪತಿಯ ಏಕೈಕ ಪುತ್ರನೂ, ಮಂಗಳೂರಿನಲ್ಲಿ ಇಂಜಿನಿಯರಿಂಗ್  ವಿದ್ಯಾರ್ಥಿಯಾಗಿದ್ದ ಎಂ. …

ರಬ್ಬರ್ ಕೃಷಿಕ ತೋಟದ ಶೆಡ್‌ನಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ರಬ್ಬರ್ ಕೃಷಿಕರೊ ಬ್ಬರು ತೋಟದ ಶೆಡ್‌ನಲ್ಲಿ  ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಚಂಬಲ್ತಿಮಾರ್ ಅಲಕ್ಕೆಲ್ ನಿವಾಸಿ ಜೋಸ್ ಅಲಕ್ಕೆಲ್ (70) ಎಂಬವರು ಮೃತ ವ್ಯಕ್ತಿ. ಇವರಿಗೆ  ವಿದ್ಯಾಗಿರಿಯಲ್ಲಿ ರಬ್ಬರ್ ತೋಟವಿದೆ. ನಿನ್ನೆ ಮಧ್ಯಾಹ್ನ  ತೋಟಕ್ಕೆ ತೆರಳಿದವರು ಮರಳಿ ಬಾರದ ಹಿನ್ನೆಲೆಯಲ್ಲಿ ಶೋಧ ನಡೆಸಿದಾಗ ತೋಟದ ಶೆಡ್‌ನಲ್ಲಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆನ್ನ ಲಾಗಿದೆ.  ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಮೃತದೇ ವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತರು …

ದೇವಸ್ಥಾನಗಳಲ್ಲಿ ಕಳವು ನಡೆಸಿದ ತಂಡದ ಇಬ್ಬರ ಸೆರೆ

ಕಾಸರಗೋಡು:  ದೇವಸ್ಥಾನಗ ಳಲ್ಲಿ ಕಳವುಗೈದ ಪ್ರಕರಣದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ತೃಶೂರು ಆಂಬಲ್ಲೂರು ಕಳಲಿ ಹೌಸ್‌ನ ಶಿಬು ರಾಫೆಲ್ (54) ಮತ್ತು ಕಣ್ಣೂರು ಮಟ್ಟನ್ನೂರು ಕೋಳಾರಿ ಪಾಲೋಟ್‌ಪಳ್ಳಿ ಬದರ್ ಮಂಜಿಲ್‌ನ ಅಬ್ದುಲ್ ಜಲೀಲ್ (50) ಎಂಬಿವರು ಬಂಧಿತ ಆರೋಪಿಗಳು. ನೀಲೇಶ್ವರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಎ.ವಿ. ಶ್ರೀಕುಮಾರ್‌ರ  ನೇತೃತ್ವದ ಪೊಲೀಸರ ತಂಡ ಈ ಇಬ್ಬರು ಆರೋಪಿಗಳನ್ನು ತಮಿಳುನಾಡಿನ ಎರ್ವಾಡಿನಿಂದ ಸೆರೆಹಿಡಿದಿದೆ.  ಕಳೆದ ಫೆಬ್ರವರಿ 21ರಂದು ರಾತ್ರಿ ನೀಲೇಶ್ವರಕ್ಕೆ ಸಮೀಪದ ಪೇರೋಲ್ ಕೊಳುಂತಿಲ್ ನಾರಾಂಕುಳಂಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ …

ಇಚ್ಲಂಪಾಡಿ, ಛತ್ರಂಪಳ್ಳ ಭಾಗಗಳಲ್ಲಿ  ಕಾಡುಕೋಣ: ನಾಗರಿಕರಲ್ಲಿ ಆತಂಕ

ಕುಂಬಳೆ: ಇಚ್ಲಂಪಾಡಿ, ಛತ್ರಂಪಳ್ಳ ಭಾಗಗಳಲ್ಲಿ ನಿನ್ನೆ ಸಂಜೆ ಕಾಡುಕೋಣ ಕಂಡುಬಂದ ಬಗ್ಗೆ ವರದಿಯಾಗಿದೆ. ಈ ಭಾಗದ ರಸ್ತೆಯಲ್ಲಿ ನಿನ್ನೆ ಸಂಜೆ ಸಂಚರಿಸುತ್ತಿದ್ದವರಿಗೆ ಕಾಡು ಕೋಣ ಕಾಣಿಸಿದೆ. ಜನರನ್ನು ಕಂಡೊಡನೆ ಕೋಣ ಓಡಿ ಸಮೀಪದ ಹಿತ್ತಿಲಿಗೆ ನುಗ್ಗಿದೆ. ವಿಷಯ ತಿಳಿದು ಅರಣ್ಯಾಧಿ ಕಾರಿಗಳು ತಲುಪಿ ಹುಡುಕಾಡಿದರೂ ಕಾಡುಕೋಣ ವನ್ನು ಪತ್ತೆಹಚ್ಚಲಾಗಿಲ್ಲ. ಈ ಭಾಗದ ಕಾಡಿನಲ್ಲಿ ಎಲ್ಲಾದರೂ ಕೋಣ ತಂಗಿರಬಹುದೆಂದು ಅಂದಾಜಿಸಲಾಗಿದೆ. ಕಳೆದ ಸೋಮವಾರ ರಾತ್ರಿ ನೀರ್ಚಾಲು ಬಳಿಯ ಕನ್ಯಪ್ಪಾಡಿ ಯಲ್ಲೂ ಕಾಡುಕೋಣ ಕಂಡುಬಂ ದಿತ್ತು. ಅಲ್ಲಿ ಬೀದಿ ನಾಯಿಗಳು …

ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸಾಗಿಸಿದ 103.68 ಲೀಟರ್ ಮದ್ಯ ವಶ; ಕುಂಜತ್ತೂರು ನಿವಾಸಿ ಸೆರೆ

ಕಾಸರಗೋಡು: ಮಾರುತಿ ಸ್ವಿಫ್ಟ್‌ಕಾರಿನಲ್ಲಿ ಸಾಗಿಸುತ್ತಿದ್ದ 103.68 ಲೀಟರ್ ಕರ್ನಾಟಕ, ಗೋವಾ ನಿರ್ಮಿತ ಮದ್ಯ ಸಹಿತ ಯುವಕ ಸೆರೆಯಾಗಿದ್ದಾನೆ. ಕುಂಜತ್ತೂರು ಅಣ್ಣಮಜಲ್ ನಿವಾಸಿ ಕೆ.ಎ. ರವಿಕಿರಣ್ (38ನನ್ನು ಕಾಸರಗೋಡು ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಟಿ.ಕೆ. ಅಶ್ವಿನ್ ಹಾಗೂ ತಂಡ ಬಂಧಿಸಿದೆ. ಮುಂಜಾನೆ ಬೇಳ ನೀರ್ಚಾಲ್‌ನಲ್ಲಿ ಮದ್ಯ ವಶಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಸೆರೆಗೀಡಾದ ರವಿಕಿರಣ್ ಖಾಯಂ ಆಗಿ ಮದ್ಯ ಸಾಗಿಸುವ ವ್ಯಕ್ತಿಯಾಗಿದ್ದಾನೆಂದು ಈತನನ್ನು ತಿಂಗಳುಗಳಿಂದ ನಿರೀಕ್ಷಿಸುತ್ತಿದ್ದುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ. ಗೋವಾ ನಿರ್ಮಿತವಾದ 180 ಮಿಲ್ಲಿಯ ಬಾಟ್ಲಿಗಳು, ಕರ್ನಾಟಕ …

ಮರಿಕೆ ಈಶ್ವರ ನಾಯ್ಕ್ ನಿಧನ

ಪೈವಳಿಕೆ: ಮರಿಕೆ ನಿವಾಸಿ ಈಶ್ವರ ನಾಯ್ಕ್ (68) ನಿಧನ ಹೊಂದಿದರು. ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್‌ನಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸಿದ್ದರು. ಇವರ ತಂದೆ ರಾಮ ನಾಯ್ಕ್, ತಾಯಿ ವೆಂಕಮ್ಮ, ಸಹೋದರ ಕೃಷ್ಣ ನಾಯ್ಕ್ ಈ ಹಿಂದೆ ನಿಧನ ಹೊಂದಿದ್ದಾರೆ. ಅವಿವಾಹಿತರಾಗಿದ್ದರು. ನಿಧನಕ್ಕೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಹಾರಿಸ್ ಪೈವಳಿಕೆ, ಶ್ರೀನಿವಾಸ ಭಂಡಾರಿ, ನಾರಾಯಣ ಶೆಟ್ಟಿ ಅಂಬಿಕಾನ, ಎಕೆಎಸ್ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಚಂದ್ರ ನಾಕ್ ಮಾನಿಪ್ಪಾಡಿ ಮನೆಗೆ ತೆರಳಿ …

ಕೋಡಿಬೈಲು: ರಸ್ತೆ ಹದಗೆಟ್ಟು ಸಂಚಾರಕ್ಕೆ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕೋಡಿಬೈಲುನಲ್ಲಿ ಎರಡು ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಮಣ್ಣಂಗುಳಿಯಿಂದ ಕೋಡಿಬೈಲು ಹಾಗೂ ಉಪ್ಪಳ ಪತ್ವಾಡಿ ರಸ್ತೆಯಿಂದ ಕೋಡಿಬೈಲು ಪ್ರದೇಶಕ್ಕೆ ಸೇರುವ ರಸ್ತೆಗಳು ಶೋಚನೀಯಗೊಂಡಿದೆ. ಈ ಪ್ರದೇಶದಲ್ಲಿ ಶಾಲೆ, ನೂರಾರು ಮನೆಗಳಿದ್ದು, ನೂರಾರು ವಾಹನಗಳು ದಿನನಿತ್ಯ ಸಂಚರಿಸುತ್ತಿವೆ. ರಸ್ತೆಯ ಅಲ್ಲಲ್ಲಿ ಡಾಮಾರೀಕರಣ, ಕಾಂಕ್ರೀಟ್, ಇಂಟರ್‌ಲಾಕ್ ಇದ್ದು ಇವುಗಳೆಲ್ಲ ಹೊಂಡ ಗುಂಡಿಗಳಿAದ ಕೂಡಿ ಸಂಚಾರ ದುಸ್ತರವಾಗಿದೆ. ಸಂಬAಧ ಪಟ್ಟ ಅಧಿಕಾರಿಗಳು ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಸಾರ್ವಜನಿಕರು …

ಲಾಲ್ಭಾಗ್- ಕುರುಡಪದವು ರಸ್ತೆ ಕಾಮಗಾರಿ ಶೀಘ್ರ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸಲು ಬಿಜೆಪಿ ಆಗ್ರಹ

ಪೈವಳಿಕೆ:  ಹಲವು ತಿಂಗಳ ಹಿಂದೆಯೇ ಆರಂಭಗೊಂಡ ಆದರೆ ಇನ್ನೂ ಪೂರ್ತಿಗೊಳ್ಳದ ಪೈವಳಿಕೆ ಪಂಚಾಯತ್‌ನ ಲಾಲ್ಭಾಗ್- ಕುರುಡಪದವು ಲೋಕೋಪಯೋಗಿ ಇಲಾಖೆ ರಸ್ತೆಯ ಕಾಮಗಾರಿಯನ್ನು ಶೀಘ್ರವೇ ಮುಗಿಸಿ ವಾಹನ ಸಂಚಾರಕ್ಕೆ ತೆರೆದುಕೊಡಬೇಕೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ. ಅವರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡುತ್ತಿದ್ದರು. ಲಾಲ್ಭಾಗ್‌ನಿಂದ ಅಮ್ಮೇರಿ ತನಕ ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ಮೂರೂವರೆ ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ನಡೆಯುತ್ತಿದೆ. ಆದರೆ ಕಾಮಗಾರಿ ಇದುವರೆಗೂ ಪೂರ್ತಿಗೊಳ್ಳದಿರುವುದು ಸ್ಥಳೀಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾಮಗಾರಿ …

ವಿದ್ಯುತ್ ಸಬ್ ಸ್ಟೇಶನ್ ಬಳಿ ಭಾರೀ ಬೆಂಕಿ ಅನಾಹುತ: 65 ಲಕ್ಷ ರೂ. ಮೌಲ್ಯದ ಕೇಬಲ್ ಭಸ್ಮ

ಕಾಸರಗೋಡು: ವಿದ್ಯಾನಗರದಲ್ಲಿ ರುವ ವಿದ್ಯುತ್ ಸಬ್ ಸ್ಟೇಶನ್ ಬಳಿ ಇರಿಸಲಾಗಿದ್ದ ವಿದ್ಯುತ್ ಕೇಬಲ್‌ಗಳಿಗೆ ಬೆಂಕಿ ತಗಲಿ ಸುಮಾರು 65 ಲಕ್ಷ ರೂ.ತನಕ ನಷ್ಟ ಉಂಟಾಗಿದೆ. ನಿನ್ನೆ ಸಂಜೆ ಈ ಬೆಂಕಿ ಅನಾಹುತ ಸಂಭವಿಸಿದೆ. ಪ್ರಸ್ತುತ ಸಬ್ ಸ್ಟೇಶನ್ ಬಳಿಯ ರಸ್ತೆ ಬದಿ ರಾಶಿ ಹಾಕಿದ್ದ ಅಂಡರ್ ಗ್ರೌಂಡ್ ಕೇಬಲ್‌ಗಳು, 600 ಮೀಟರ್ ಪೀಸುಗಳು, ಜಿಲ್ಲೆಯ ವಿವಿಧೆಡೆಗಳಲ್ಲಾಗಿ ಕೆ-ಫೋನ್ ಸ್ಥಾಪಿಸಲೆಂದು ತಂದಿರಿಸಲಾಗಿದ್ದ ಒಪ್ಟಕ್ಕಲ್ ಫೈಬರ್‌ನ 97,000  ಮೀಟರ್ ನಷ್ಟು ಕೇಬಲ್‌ಗಳು ಬೆಂಕಿಗಾಹುತಿಯಾಗಿದೆ. ವಿದ್ಯುತ್  ಲೈನ್‌ನಲ್ಲಿ ಸ್ಪಾರ್ಕ್ ಉಂಟಾಗಿ ಅದು …