ಕುಂಬಳೆ ಪೇಟೆಯಲ್ಲಿ ಕಟ್ಟಿ ನಿಂತ ಮಳೆನೀರು: ಬಸ್ ಪ್ರಯಾಣಿಕರಿಗೆ ಸಂಕಷ್ಟ

ಕುಂಬಳೆ: ಬೇಸಿಗೆಯ ಮಳೆ ಬಿಸಿಗೆ ಅಲ್ಪ ತಂಪು ಎರಚಿದ ಮಧ್ಯೆ ಕುಂಬಳೆಯಲ್ಲಿ ನೀರು ಕಟ್ಟಿ ನಿಂತು ಸಮಸ್ಯೆ ಸೃಷ್ಟಿಯಾಗಿದೆ. ಕುಂಬಳೆ ಪೇಟೆಯಲ್ಲಿ ಬದಿಯಡ್ಕ, ಮುಳ್ಳೇರಿಯ, ಪೇರಾಲ್ ಕಣ್ಣೂರು ಭಾಗಗಳಿಗೆ ತೆರಳುವ ಬಸ್ ತಂಗುದಾಣದ ಬಳಿಯಲ್ಲೇ ನೀರು ಕಟ್ಟಿ ನಿಂತ ಕಾರಣ ಬಸ್‌ನವರಿಗೆ ಜನರನ್ನು ಇಳಿಸಲು, ಹತ್ತಿಸಲು ಸಮಸ್ಯೆಯಾಯಿತು. ರಸ್ತೆ ನಿರ್ಮಾಣದ ವೇಳೆ ಕೈಗೊಂಡ ಅವೈಜ್ಞಾನಿಕ ಚರಂಡಿಯಿಂದಾಗಿ ಮಳೆ ನೀರು ಇಲ್ಲಿ ಕಟ್ಟಿ ನಿಲ್ಲುತ್ತಿರುವುದಾಗಿ ಸ್ಥಳೀಯರು ದೂರುತ್ತಾರೆ. ಒಂದು ಮಳೆಗೆ ಈ ರೀತಿ ಸಮಸ್ಯೆ ಉಂಟಾದರೆ ಮಳೆಗಾಲದಲ್ಲಿ ಇಲ್ಲಿನ …

ಕಾಸರಗೋಡು, ಮಂಜೇಶ್ವರದಲ್ಲಿ ಐಕ್ಯರಂಗಕ್ಕೆ ಸುಲಭ ಜಯ- ಚೆನ್ನಿತ್ತಲ

ಕಾಸರಗೋಡು: ಮಂಜೇಶ್ವರ, ಕಾಸರಗೋಡು ವಿಧಾನಸಭಾ ಮಂಡಲಗಳಲ್ಲಿ ಐಕ್ಯರಂಗದ ಅಭ್ಯರ್ಥಿಗಳು ಸುಲಭದಲ್ಲಿ ಜಯಗಳಿಸುವರೆಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ನುಡಿದರು. ಪ್ರೆಸ್‌ಕ್ಲಬ್‌ನ ಮೀಟ್ ದ ಪ್ರೆಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಎರಡು ಮಂಡಲಗಳಲ್ಲಿ ಐಕ್ಯರಂಗಕ್ಕೆ ಯಾವುದೇ ಆತಂಕವಿಲ್ಲ. ರಾಜ್ಯದಲ್ಲಿ ಐಕ್ಯರಂಗ 100ಕ್ಕೂ ಹೆಚ್ಚು ಸೀಟು ಗಳಿಸಿ ಅಧಿಕಾರಕ್ಕೇರಲಿದೆ. ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ- ಬಿಜೆಪಿ ಮಧ್ಯೆ ಡೀಲ್ ಇದೆ. 2021ರ ಚುನಾವಣೆಯಲ್ಲಿ 60 ಮಂಡಲಗಳಲ್ಲಿ ಈ ರೀತಿಯ ಡೀಲ್ ನಡೆಸಲಾಗಿತ್ತು ಎಂದು ಚೆನ್ನಿತ್ತಲ ಆರೋಪಿಸಿದರು. ಕಲ್ಲಟ್ರ ಮಾಹಿನ್ ಹಾಜಿ, …

ತ್ಯಾಜ್ಯ ಉಪೇಕ್ಷೆ ಉಪಟಳ: ಶಾಂತಿಪಳ್ಳ- ಭಾಸ್ಕರನಗರ ರಸ್ತೆ ಬದಿ ನವೋದಯ ಫ್ರೆಂಡ್ಸ್ ಕ್ಲಬ್‌ನಿಂದ ಸೋಲಾರ್ ಕ್ಯಾಮರಾ ಸ್ಥಾಪನೆ

ಕುಂಬಳೆ: ಶಾಂತಿಪಳ್ಳದಿಂದ ಭಾಸ್ಕರನಗರ ವರೆಗಿರುವ ರಸ್ತೆ ಬದಿಯಲ್ಲಿ ತ್ಯಾಜ್ಯ ತಂದೆಸೆಯುವವರು ಇನ್ನು ಜಾಗ್ರತೆ ವಹಿಸದಿದ್ದರೆ ಸಮಸ್ಯೆಯಾಗಲಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಉಪೇಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ನವೋದಯ ಫ್ರೆಂಡ್ಸ್ ಕ್ಲಬ್ ಈ ಪರಿಸರದಲ್ಲಿ ಸೋಲಾರ್ ಕ್ಯಾಮರಾ ಸ್ಥಾಪಿಸಿದೆ. ಶಾಂತಿಪಳ್ಳದಿಂದ ಭಾಸ್ಕರನಗರ ವರೆಗಿರುವ ರಸ್ತೆ ಬದಿ ಕ್ಲಬ್ ಕ್ಯಾಮರಾ ಸ್ಥಾಪಿಸಿದ್ದು, ತ್ಯಾಜ್ಯ ತಂದೆಸೆಯುವವರು ಇದರಲ್ಲಿ ಸಿಕ್ಕಿ ಬೀಳುವ ಸಾಧ್ಯತೆ ಇದೆ. ರಸ್ತೆ ಬದಿಯನ್ನು ಕ್ಲಬ್‌ನವರು ಇತ್ತೀಚೆಗೆ ಶುಚಿಗೊಳಿಸಿದ್ದರು. ಅಲ್ಲದೆ ಎರಡು ಬಾರಿ ತ್ಯಾಜ್ಯ ತಂದೆಸೆಯುವವರನ್ನು ಸೆರೆ ಹಿಡಿದು ದಂಡ ವಸೂಲಿ ಮಾಡಲಾಗಿತ್ತು. …

ಬಿಸಿಲ ಬೇಗೆಯನ್ನು ಗಣನೆಗೆ ತೆಗೆಯದೆ ಅಭ್ಯರ್ಥಿಗಳ ಬಿರುಸಿನ ಮತಯಾಚನೆ

ಕಾಸರಗೋಡು: ಬಿರು ಬೇಸಿಗೆಯ ಬಿಸಿಲ ತಾಪವನ್ನು ಗಣನೆಗೆ ತೆಗೆಯದೆ ಅಭ್ಯರ್ಥಿಗಳು ಓಡಾಟದಲ್ಲಿ ನಿರತರಾಗಿದ್ದಾರೆ. ಎಂಡೋಸಲ್ಫಾನ್ ದುರಂತ ಮಳೆ ಸುರಿದ ಬದಿಯಡ್ಕ ಪಂಚಾಯತ್‌ನಲ್ಲಿ ಕಾಸರಗೋಡು ಮಂಡಲ ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ಪ್ರಚಾರ ನಡೆಸಿದರು. ಕವಿ ಕಯ್ಯಾರ ಕಿಂಞಣ್ಣ ರೈಯವರ ಮನೆ, ಮಾನ್ಯ ಜೆಎಸ್‌ಬಿಎಸ್ ಶಾಲೆ, ಅಲ್ಲಿನ ಕೊರಗತನಿಯ ಸ್ಥಾನ ಸಹಿತ ಹಲವಾರು ಪ್ರಮುಖ ಕೇಂದ್ರಗಳನ್ನು ಅವರು ಸಂದರ್ಶಿಸಿ ಬದಿಯಡ್ಕ ಪೇಟೆಯ ಮಸೀದಿಯಲ್ಲಿ ಜುಮುಅ ನಿರ್ವಹಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಮಾಹಿನ್ ಕೇಳೋಟ್, ಅನಸ್ ಎದ್ರುತೋಡು, ಶ್ಯಾಮ್ …

ಕನಿಲ ಶ್ರೀ ಭಗವತೀ ಕ್ಷೇತ್ರ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಜೇಶ್ವರ: ಕನಿಲ ಶ್ರೀ ಭಗವತೀ ಕ್ಷೇತ್ರ  ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಉದ್ಯಮಿ ಲಂಚುಲಾಲ್ ಬಿಡುಗಡೆಗೊಳಿಸಿದರು. ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿ ನವೀನ್‌ರಾಜ್ ಕೆ.ಜೆ, ಕೋಶಾಧಿಕಾರಿ ಲಕ್ಷ್ಮಣ ಸಾಲಿಯಾನ್, ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ಕುದ್ರು, ಪ್ರಧಾನ ಕಾರ್ಯದರ್ಶಿ ದೇವದಾಸ್ ವರ್ಕಾಡಿ, ಕೋಶಾಧಿಕಾರಿ ವಿಜಯ ಕನಿಲ, ಕ್ಷೇತ್ರದ ಆಚಾರಪಟ್ಟವರು, ಗುರಿಕ್ಕಾರರು ಉಪಸ್ಥಿತರಿದ್ದರು.

ಗೋಸಾಡ ಕ್ಷೇತ್ರದಲ್ಲಿ ಚಂಡಿಕಾಯಾಗ ಆಮಂತ್ರಣ ಪತ್ರಿಕೆ ಬಿಡುಗಡೆ

ಗೋಸಾಡ: ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರದಲ್ಲಿ ಮೇ 5, 6ರಂದು ಜರಗಲಿರುವ ಚಂಡಿಕಾಯಾಗ ಹಾಗೂ ವಿಶೇಷ ಮೂಡಪ್ಪಸೇವೆಯ ಆಮಂತ್ರಣ ಪತ್ರಿಕೆಯನ್ನು ನಿನ್ನೆ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಕ್ಷೇತ್ರ ಸೇವಾ ಸಮಿತಿ ಉಪಾಧ್ಯಕ್ಷ ಪ್ರಭಾಕರ ರೈ ಮಠದಮೂಲೆ ಅಧ್ಯಕ್ಷತೆ ವಹಿಸಿದರು. ಉದ್ಯಮಿ ನಿತ್ಯಾನಂದ ಶೆಣೈ, ನಿವೃತ್ತ ಜಿಲ್ಲಾ ಮೆಡಿಕಲ್ ಆಫೀಸರ್ ರಾಮಚಂದ್ರ ಮಾರ್ಪನಡ್ಕ, ಉದ್ಯಮಿ ಶಂಕರನಾರಾ ಯಣ ಮಯ್ಯ, ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಸೇವಾ ಸಮಿತಿ ಉಪಾಧ್ಯಕ್ಷ ಪ್ರಸಾದ ಮಣಿಯಾಣಿ ಗೋಸಾಡ, ಅರ್ಚಕ ರಾಘವೇಂದ್ರ ಚಡಗ, ಜನಜಾಗೃತಿ ವೇದಿಕೆ …

ಮಂಜೇಶ್ವರ ಐಕ್ಯರಂಗದ ಅಭ್ಯರ್ಥಿಯ ದ್ವಿತೀಯ ಹಂತದ ಪ್ರಚಾರ

ಮಂಜೇಶ್ವರ: ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್‌ರ ಚುನಾವಣಾ ಪ್ರಚಾರ ದ್ವಿತೀಯ ಹಂತ ಪೂರ್ತಿಗೊಳಿಸಿದೆ. ಮಂಜೇಶ್ವರ ಪಂಚಾಯತ್ ಐಕ್ಯರಂಗ ಸಮಾವೇಶಗಳು ಪೂರ್ತಿಗೊಂಡಿತು. ಸಮಾವೇಶವನ್ನು ಕರ್ನಾಟಕ ಕ್ಯಾಶ್ಯೂ ಬೋರ್ಡ್ ಅಧ್ಯಕ್ಷೆ ಮಮತಾ ಗಟ್ಟಿ ಉದ್ಘಾಟಿಸಿದರು. ಐಕ್ಯರಂಗದ ಪಂಚಾಯತ್ ಸಮಿತಿ ಅಧ್ಯಕ್ಷ ಅಸೀಸ್ ಹಾಜಿ ಅಧ್ಯಕ್ಷತೆ ವಹಿಸಿದರು. ಸಂಚಾಲಕ ಹನೀಫ್ ಪಡಿಂಞ್ಞಾರ್ ಸ್ವಾಗತಿಸಿದರು. ಮಂಜುನಾಥ ಆಳ್ವ, ಅಸೀಸ್ ಮರಿಕ್ಕೆ, ಸೋಮಶೇಖರ ಜೆ.ಎಸ್, ಡಿಎಂಕೆ ಮೊಹಮ್ಮದ್, ಲಕ್ಷ್ಮಣ ಪ್ರಭು, ಟಿ.ಎ. ಮೂಸಾ, ಎಂ. ಅಬ್ಬಾಸ್, ಎ.ಕೆ. ಆರಿಫ್, ಸೈಫುಲ್ಲಾ ತಂಙಳ್, ಹರ್ಷಾದ್ ವರ್ಕಾಡಿ,  …

ಯುವತಿ ನಾಪತ್ತೆ  ಯುವಕನ ಬಗ್ಗೆ ತನಿಖೆ

ಕಾಸರಗೋಡು:  ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ತೃಕರಿಪುರ, ಉಡುಮುಂದಲದಲ್ಲಿ 19ರ ಹರೆಯದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಕರಿಕ್ಕಡವ್ ನಿವಾಸಿ ಎಂ. ಸಮೀರರ ಪುತ್ರಿ ಜಾಸ್ಮೀನ (19) ನಾಪತ್ತೆಯಾಗಿದ್ದು ತಾಯಿ ನೀಡಿದ ದೂರಿನಂತೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಅಪರಾಹ್ನ3.30ಕ್ಕೆ ಮನೆಯಿಂದ ಹೊರಹೋದ ಈಕೆ ಮರಳಿ ಬಂದಿಲ್ಲವೆಂದು,  ಸಜೀರ್ ಎಂಬ ವ್ಯಕ್ತಿಯ ಜೊತೆ ಹೋಗಿರಬೇಕೆಂದು ಶಂಕಿಸುತ್ತಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ. ಯುವತಿಯನ್ನು ಪತ್ತೆ ಹಚ್ಚುವುದಕ್ಕಾಗಿ ಸೈಬರ್ ಸೆಲ್‌ನ ಸಹಾಯ ಪಡೆಯಲಾಗಿದೆ. ಸಜೀರ್‌ನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು …

ನಗರದಲ್ಲಿ ಉತ್ಸಾಹ ಸೃಷ್ಟಿಸಿ ಸಂಸದ ಶಾಫಿ ಪರಂಬಿಲ್

ಕಾಸರಗೋಡು: ಐಕ್ಯರಂಗದ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ಚುನಾವಣೆ ಪ್ರಚಾರಾರ್ಥ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಫಿ ಪರಂಬಿಲ್ ಭಾಗವಹಿಸಿದರು. ನಿನ್ನೆ ರಾತ್ರಿ 8 ಗಂಟೆಗೆ ನಿಗದಿಪಡಿಸಿದ್ದ ಉದ್ಘಾಟನಾ ಕಾರ್ಯಕ್ರಮ ಮಧ್ಯರಾತ್ರಿ 12 ಗಂಟೆಗೆ ಆರಂಭಗೊಂಡಿದೆ. ತೃಕರಿಪುರದಲ್ಲಿ ನಡೆಸಿದ ರೋಡ್‌ಶೋ ವಿಳಂಬಗೊಂಡಿರುವುದೇ ಕಾರ್ಯಕ್ರಮ ದಲ್ಲಿ ಶಾಫಿ ಪರಂಬಿಲ್ ಭಾಗವಹಿಸಲು ತಡವಾಗಿರುವುದು. ಆದರೆ ಆ ಸಮಯದಲ್ಲೂ ಕಾರ್ಯಕರ್ತರು ಉತ್ಸಾಹಭರಿತಲಾಗಿ ಭಾಗವಹಿಸಿದರು. ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಕೂಡಾ ಕಾರ್ಯಕರ್ತರ ಉತ್ಸಾಹದಲ್ಲಿ ಪಾಲ್ಗೊಂಡರು. ಯುಡಿವೈಎಫ್ ಕಾಸರಗೋಡು ವಿಧಾನಸಭಾ ಮಂಡಲ ಅಧ್ಯಕ್ಷ ಸಿದ್ದಿಕ್ ಸಂತೋಷ್‌ನಗರ್ …

ಕುಂಬಳೆಯಲ್ಲಿ ಎನ್‌ಡಿಎ ಶಕ್ತಿ ಪ್ರದರ್ಶಿಸಿದ ರೋಡ್ ಶೋ

ಕುಂಬಳೆ: ಎನ್‌ಡಿಎ ಮಂಜೇಶ್ವರ ವಿಧಾನಸಭಾ ಮಂಡಲ ಅಭ್ಯರ್ಥಿ ಕೆ. ಸುರೇಂದ್ರನ್ ಹಾಗೂ ತಿರುವನಂತಪುರ ಮೇಯರ್ ವಿ.ವಿ. ರಾಜೇಶ್ ನೇತೃತ್ವ ನೀಡಿದ ರೋಡ್ ಶೋದಲ್ಲಿ  ಹಲವಾರು ಕಾರ್ಯಕರ್ತರು ಭಾಗವಹಿಸಿ ಎನ್‌ಡಿಎ ಬಲಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಪರಿಸರದಿಂದ ಆರಂಭಗೊಂಡ ರೋಡ್ ಶೋ ಪೇಟೆ ಸುತ್ತಿ ಟ್ಯಾಕ್ಸಿ ಸ್ಟ್ಯಾಂಡ್ ಪರಿಸರದಲ್ಲಿ ಸಮಾಪ್ತಿಗೊಂ ಡಿತು. ಮಂಜೇಶ್ವರದಲ್ಲಿ ಕೆ. ಸುರೇಂದ್ರನ್ ಜಯಗಳಿಸಿದರೆ ಬಹಳ ಅಭಿವೃದ್ಧಿ ಉಂಟಾಗಲಿದೆಯೆಂದು, ಕೇಂದ್ರ ಸರಕಾರದ ಯೋಜನೆಗಳನ್ನು ಗರಿಷ್ಠವಾಗಿ  ಮಂಡಲಕ್ಕೆ ತಲುಪುವುದಾಗಿ ತಿರುವನಂತಪುರದ ಮೇಯರ್ ವಿ.ವಿ. ರಾಜೇಶ್ …