ಬಿಜೆಪಿ ಅಭ್ಯರ್ಥಿಯಿಂದ ಚರ್ಚ್‌ಗಳ ಸಹಿತ ವಿವಿಧೆಡೆ ಮತ ಯಾಚನೆ

ಕಾಸರಗೋಡು:  ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರು ನಿನ್ನೆ ವಿವಿಧ ಕಡೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.  ಮಧೂರು ಪಂಚಾ ಯತ್ ಸದಸ್ಯ, ಬಿಜೆಪಿ ನೇತಾರನಾದ  ರವಿ ಗಟ್ಟಿಯವರ ಮನೆಯಿಂದ ನಿನ್ನೆಯ ಪ್ರಚಾರ ಕಾರ್ಯ ಆರಂಭಗೊಂಡಿತು. ಬಳಿಕ ಗರಿಗಳ ರವಿವಾರ ಆಚರಣೆಯಂಗವಾಗಿ ಬೇಳ, ಕೊಲ್ಲಂಗಾನ, ಕಾಸರಗೋಡು ಕೋಟೆಕಣಿಯ ಚರ್ಚ್‌ಗಳಿಗೆ ಎಂ.ಎಲ್. ಅಶ್ವಿನಿ ಹಾಗೂ ನೇತಾರರು ಭೇಟಿ ನೀಡಿ ಶುಭಾಶಯ ತಿಳಿಸಿದರು.  ಮಧೂರು ಮಿತ್ರಕಲಾ ವೃಂದದ ಆಶ್ರಯದಲ್ಲಿ ಹಮ್ಮಿಕೊಂಡ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ತಂಡಗಳಿಗೆ ಅವರು …

ಯುಡಿಎಫ್ ಅಭ್ಯರ್ಥಿಯಿಂದ ವಿವಿಧ ಚರ್ಚ್‌ಗಳಿಗೆ ಸಂದರ್ಶನ

ಕಾಸರಗೋಡು:  ಕಾಸರಗೋಡು ವಿಧಾಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಅವರು ಗರಿಗಳ ರವಿವಾರದ ಅಂಗವಾಗಿ ನಿನ್ನೆ ವಿವಿಧ ಚರ್ಚ್‌ಗಳಿಗೆ ಭೇಟಿ ನೀಡಿ ಶುಭಾಶಯ ತಿಳಿಸಿದರು.  ಬೇಳ ಅವರ್ ಲೇಡಿ ಆಫ್ ಡೋಲರ್ಸ್ ಚರ್ಚ್‌ಗೆ ಭೇಟಿ ನೀಡಿ ಫಾದರ್ ಸ್ಟ್ಯಾನಿ ಪೆರೇರ, ಬದಿಯಡ್ಕ ಸೈಂಟ್ ಮೇರೀಸ್ ಚರ್ಚ್‌ನ ಫಾದರ್ ಚಾಕೋ ಕುಡಿಪರಂಬಿಲ್, ಉಕ್ಕಿನಡ್ಕ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್‌ನ  ಫಾದರ್ ಸುನಿಲ್ ಮಿರಾಂಡ ಮೊದಲಾದವರನ್ನು  ಭೇಟಿ ನೀಡಿ ಶುಭಾಶಯ ಕೋರಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ …

ಶಾರದನಗರ ಸಮುದ್ರ ತೀರ ಪ್ರದೇಶದಲ್ಲಿ ಬಿಜೆಪಿ ಸಭೆ: ಉಡುಪಿ ಶಾಸಕರಿಂದ ಮಾರ್ಗದರ್ಶನ

ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ರ ಚುನಾವಣಾ ಪ್ರಚಾರದ ಅಂಗವಾಗಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಹನುಮಾನ್ ನಗರ ಹಾಗೂ ಶಾರದಾ ನಗರ ಸಮುದ್ರ ತೀರ ಪ್ರದೇಶದ ಬಿಜೆಪಿ ಸಭೆ ಶಾರದಾನಗರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಿನ್ನೆ ಸಭೆ ನಡೆಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ನಾಡಿನ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು. ಬಿಜೆಪಿ ಮುಖಂಡರಾದ ಕೆ.ಪಿ. ವಲ್ಸರಾಜ್, ವಿಜಯ ಕುಮಾರ್, ದಿನೇಶ್ ಚೆರುಗೋಳಿ, ಜಯಪ್ರಕಾಶ ಸುಳ್ಯ ಮೊದಲಾದವರು …

ಯುಡಿಎಫ್‌ನ ಒತ್ತಡದಿಂದ ಎಸ್‌ಡಿಪಿಐ ನಾಮಪತ್ರ ಹಿಂತೆಗೆದುಕೊಂಡಿದೆ-ಎಂ.ಎ. ಬೇಬಿ

ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ  ಎಸ್‌ಡಿಪಿಐ ಯೊಂದಿಗೆ ಎಡರಂಗ ಯಾವುದೇ ರೀತಿಯ ಡೀಲ್ ಮಾಡಿಕೊಂಡಿಲ್ಲ ವೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದ್ದಾರೆ. ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ನಿನ್ನೆ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್‌ನ ಒತ್ತಡಕ್ಕೆ ಮಣಿದು ಅಲ್ಲಿ ಎಸ್‌ಡಿಪಿಐ ಅಭ್ಯರ್ಥಿ ತನ್ನ ನಾಮಪತ್ರ ಹಿಂಪಡೆದುಕೊಂಡಿದೆ ಎಂದು ಎಂ.ಎ. ಬೇಬಿ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ. ಎಸ್‌ಡಿಪಿಐ ಅದರ ನಿಲುವನ್ನು ಈಗಾಗಲೇ ಘೋಷಿಸಿದೆ. ಆದರೆ ಎಸ್‌ಡಿಪಿಐಯ ಮತ ಎಡರಂಗಕ್ಕೆ ಬೇಡವೆಂದು …

ಯುವತಿ, ಇಬ್ಬರು ಮಕ್ಕಳು ನಾಪತ್ತೆ

ಕಾಸರಗೋಡು: ಯುವತಿ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾದ ಬಗ್ಗೆ ದೂರಲಾಗಿದೆ. ನೆಲ್ಲಿಕುಂಜೆ ಬೀಚ್ ರೋಡ್‌ನ ಎನ್. ಯಮುನ ಎಂಬವರ ಪುತ್ರಿ ಶರಣ್ಯ (27) ಹಾಗೂ ಈಕೆಯ ಆರರ ಹರೆಯದ ಪುತ್ರ, ಎರಡರ ಹರೆಯದ ಪುತ್ರಿ ಎಂಬಿವರು ನಾಪತ್ತೆಯಾದ ವರಾಗಿದ್ದಾರೆ. ಶನಿವಾರ ಮಧ್ಯಾಹ್ನ ಕೋಟಿಕುಳದಲ್ಲಿರುವ ಪತಿಯ ಮನೆಗೆ ಹೋಗುವುದಾಗಿ ತಿಳಿಸಿ ಶರಣ್ಯ ಮಕ್ಕ ಳನ್ನು ಕರೆದುಕೊಂಡು ಮನೆಯಿಂದ ಹೋಗಿದ್ದು ಅನಂತರ ಅವರು ನಾಪತ್ತೆ ಯಾಗಿರುವುದಾಗಿ ತಾಯಿ ಕಾಸರ ಗೋಡು ನಗರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.