ಓರ್ವನ ಪ್ರಿಯತಮೆಯೊಂದಿಗೆ ಬೇರೊಬ್ಬನಿಗೆ ಪ್ರೇಮ: ತಂಡದಿಂದ ಮಧ್ಯವರ್ತಿ ಮೇಲೆ ಮಾರಕಾಯುಧಗಳಿಂದ ಹಲ್ಲೆ

ಕುಂಬಳೆ: ಪ್ರಿಯತಮೆಯನ್ನು ಪ್ರೀತಿಸುವ ಬೇರೊಬ್ಬನ ಮೇಲೆ ದ್ವೇಷ ತೀರಿಸಲು ಮಾರಕಾಯುಧಗ ಳೊಂದಿಗೆ ತಲುಪಿದ ಪ್ರಿಯಮನ ಸಹಿತ ೮ ಮಂದಿಯ ತಂಡ ಮಧ್ಯವರ್ತಿ ಮೇಲೆ ಹಲ್ಲೆಗೈದು ಗಂಭೀರ ಗಾಯ ಗೊಳಿಸಿದ ಘಟನೆ ನಡೆದಿದೆ. ಹಲ್ಲೆಗೀ ಡಾದ ಕುಂಬಳೆ ಮಾಟೆಂಗುಳಿಯ ಮೊಹಮ್ಮದ್ ಅಫ್ನಾನ್ ಫಹದ್ (19)ನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.   ತಲೆ ಸಹಿತ ದೇಹದಾದ್ಯಂತ ಕಬ್ಬಿಣದ ಸರಳುಗ ಳಿಂದ ಹೊಡೆತದ ಗಾಯಗಳು ಉಂಟಾಗಿದೆ. ನಿನ್ನೆ  ರಾತ್ರಿ 12.30 ಕ್ಕೆ ಈ ಘಟನೆ ನಡೆದಿದೆ.  ಬೇರೊಬ್ಬನ ಪ್ರಿಯತಮೆಯೊಂದಿಗೆ ಮೊಹಮ್ಮದ್ …

ಜುಗಾರಿ ಕೇಂದ್ರಕ್ಕೆ ಪೊಲೀಸ್ ದಾಳಿ ಏಳು ಮಂದಿ ಸೆರೆ; 59,500 ರೂ. ವಶ

ಉಪ್ಪಳ:  ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ವೇಳೆ ನಡೆಯುತ್ತಿದ್ದ ಜುಗಾರಿ ಕೇಂದ್ರಕ್ಕೆ ಪೊಲೀಸರು ಮಫ್ತಿ ವೇಷದಲ್ಲಿ ದಾಳಿ ನಡೆಸಿ ಏಳು ಮಂದಿಯನ್ನು ಸೆರೆಹಿಡಿದಿದ್ದಾರೆ.  ಇದೇ ವೇಳೆ ಜುಗಾರಿ ನಿರತರಾಗಿದ್ದ ಇತರ 13 ಮಂದಿ ಓಡಿ ಪರಾರಿಯಾಗಿದ್ದಾರೆ. ಜುಗಾರಿ ಸ್ಥಳದಿಂದ 59,500 ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಾವೂರು ಗ್ರಾಮದ ತಚ್ಚಿರೆಪದವಿನ  ಮೈದಾನ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಜುಗಾರಿ ಕೇಂದ್ರಕ್ಕೆ  ಇಂದು ಮುಂಜಾನೆ 2 ಗಂಟೆ ವೇಳೆ ಮಂಜೇಶ್ವರ ಎಸ್‌ಐಗಳಾದ ಉಮೇಶ್ ಕೆ.ಆರ್, ವೈಷ್ಣವ್ ರಾಮಚಂದ್ರನ್, ಎಎಸ್‌ಐ ರಾಜೀವನ್, ಪೊಲೀಸರಾದ …

ವಾಗ್ವಾದ ದೃಶ್ಯ ಚಿತ್ರೀಕರಿಸಿದ ದ್ವೇಷದಿಂದ ಯುವಕನಿಗೆ ಹಲ್ಲೆ: 3 ಮಂದಿ ವಿರುದ್ಧ ಪ್ರಕರಣ ದಾಖಲು

ಕುಂಬಳೆ:  ವಾಗ್ವಾದ ನಡೆಯುತ್ತಿದ್ದ ವೇಳೆ  ಅದರ ದೃಶವನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ ದ್ವೇಷದಿಂದ ತಂಡವೊಂದು ಯುವಕನ ಮೇಲೆ  ಹಲ್ಲೆ ನಡೆಸಿರುವುದಾಗಿ  ಆರೋಪಿಸಿ ನೀಡಿದ ದೂರಿನಂತೆ ಮೂವರ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ.  ಕುಂಬಳೆ ಶ್ರೀ ನಿತ್ಯಾನಂದ ಆಶ್ರಮ ಬಳಿಯ  ಅಂದುಪ್ಪ ಹೌಸ್‌ನ ಮುಹಮ್ಮದ್ ಹಿಲಾಲ್ ಕೆ.ಎ(19) ಈ ಬಗ್ಗೆ ದೂರು ನೀಡಿದ್ದು ಇದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಸಂಜೆ ಕುಂಬಳೆ ಪೇಟೆಯಲ್ಲಿ ದೂರದರ್ಶನ ಚ್ಯಾನೆಲ್‌ನ  ಡಿಬೇಟ್ ಕಾರ್ಯಕ್ರಮ ನಡೆದ ಬಳಿಕ …

ಹೊಳೆಯ ಮರಳು ಅಕ್ರಮ ಸಾಗಾಟ: ಸರಕಾರಿ ಮಾಲು ಕದ್ದ ಆರೋಪದಂತೆ 5 ಮಂದಿ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ಶಿರಿಯ ಹೊಳೆಯಿಂದ ಸರಿಯಾದ ದಾಖಲು ಪತ್ರಗಳಿಲ್ಲದೆ ಸರಕಾರಿ ಮಾಲು ಆಗಿರುವ ಹೊಳೆಯ ಹೊಯ್ಗೆಯನ್ನು ಟಿಪ್ಪರ್ ಲಾರಿಯಲ್ಲಿ ಕದ್ದು ಸಾಗಿಸಿದ ಆರೋಪದಂತೆ, ಲಾರಿ ಚಾಲಕ ಸೇರಿದಂತೆ ಐದು ಮಂದಿಯ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಯ್ಗೆ ಹೇರಿದ ಲಾರಿಯನ್ನು  ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಆದರೆ ಆರೋಪಿಗಳು ತಪ್ಪಿಸಿಕೊಂಡಿದ್ದರೆಂದೂ, ಸರಕಾರಿ ಮಾಲು ಆಗಿರುವ ಹೊಳೆ ಹೊಯ್ಗೆ ಕದ್ದು ಸಾಗಿಸಿದ ಆರೋಪದಂತೆ ಇವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ …

ಮಲಯಾಳಂ ಭಾಷಾ ಮಸೂದೆ ತಿದ್ದುಪಡಿಗೆ ಆಗ್ರಹಿಸಿ ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು ಸಭೆ

ಕಾಸರಗೋಡು: ಮಲಯಾಳ ಭಾಷಾ ಮಸೂದೆಯಲ್ಲಿ ಕನ್ನಡ ಭಾಷಾ ಅಲ್ಪ ಸಂಖ್ಯಾತರನ್ನು ಹೊರತು ಪಡಿಸಲು ಆಗ್ರಹಿಸಿ, ಮುಂದಿನ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಚುನಾಯಿತರಾದ ನೂತನ ಆಡಳಿತ ಸಮಿತಿ ಒಮ್ಮತದಿಂದ ಈ ಮಸೂದೆಯನ್ನು ಮರು ಪರಿಶೀಲಿಸಿ ಸೂಕ್ತ ತಿದ್ದುಪಡಿ ಯೊಂದಿಗೆ ಪುನ: ಅನುಷ್ಠಾನಗೊಳಿಸಬೇಕೆಂದು ಕಾಸರಗೋಡು ಪ್ರದೇಶದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಒಗ್ಗೂಡಿ ‘ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು’ ಮೂಲಕ ಮನವಿ ಸಿದ್ಧಪಡಿಸಿ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಯಿತು.ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ …

ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಪಿಕಪ್‌ನ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಯುವಕ ಮೃತ್ಯು

ಕುಂಬಳೆ: ಕೆಟ್ಟುಹೋದ ಹಿನ್ನೆ ಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನದ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ತಲಪ್ಪಾಡಿ ಕೆ.ಸಿ ರೋಡ್ ನಿವಾಸಿ  ಮುಹಿಯುದ್ದೀನ್ ಸಿನಾನ್ (28) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ೬.೧೫ರ ವೇಳೆ ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡಿನಲ್ಲಿ ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಮುಹಿಯುದ್ದೀನ್ ಸಿನಾನ್‌ರನ್ನು ಕೂಡಲೇ ಮಂಗಳೂ ರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮುಹಿಯುದ್ದೀನ್ ಸಿನಾನ್ ಉಪ್ಪಳ ಭಾಗದಿಂದ ಕುಂಬಳೆ ಭಾಗಕ್ಕೆ   ಬೈಕ್‌ನಲ್ಲಿ …

ಕಲ್ಲಿಕೋಟೆ ಬಳಿ ರೈಲಿಗೆ ಕಲ್ಲೆಸೆತ: ಯುವತಿಗೆ ಗಾಯ

ಕಲ್ಲಿಕೋಟೆ: ಕಲ್ಲಿಕೋಟೆ ಸಮೀಪ ಸಂಚರಿಸುತ್ತಿದ್ದ ರೈಲಿನ ಮೇಲೆ ಕಲ್ಲೆಸೆತವುಂಟಾಗಿದ್ದು   ಇದ ರಿಂದ  ಪ್ರಯಾಣಿಕೆ ಗಾಯಗೊಂ ಡಿದ್ದಾರೆ.  ವಡಗರ ಪುರಮೇರಿ ಎರಂ ಞೋಳಿ ತಾಯಕುನಿಯದ ಐಶ್ವರ್ಯ ರಾಮಕೃಷ್ಣ (೧೮) ಎಂಬವರು  ಗಾಯಗೊಂಡಿದ್ದಾರೆ.  ಇವರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಲುವಾದಿಂದ  ವಡಗರೆಗೆ ಪ್ರಯಾ ಣಿಸುತ್ತಿದ್ದರು.  ಕಲ್ಲು ಐಶ್ವರ್ಯರ ಮುಖಕ್ಕೆ ಬಡಿದಿದ್ದು, ಇದರಿಂದ ಇವರ ಮೂರು ಹಲ್ಲುಗಳು ಕಿತ್ತುಹೋಗಿದ್ದು, ತುಟಿಗೂ ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ. ರೈಲುಗಾಡಿ ಕಡಲುಂಡಿ ಸೇತುವೆ ಹಾಗೂ  ಫರೋಕ್‌ನ ಮಧ್ಯೆ ತಲುಪಿದಾಗ ನಿನ್ನೆ ರಾತ್ರಿ ೧೦ ಗಂಟೆ ವೇಳೆ …

ಶಂಕರನಾರಾಯಣ ಭಟ್ ನಿಧನ

ಮಧೂರು: ಇಲ್ಲಿಗೆ ಸಮೀಪದ ಅರ್ಜುನಗುಳಿ ನಿವಾಸಿ ಶಂಕರನಾರಾ ಯಣ ಭಟ್ (66) ನಿಧನಹೊಂ ದಿದರು.  ಕೃಷಿಕನಾಗಿದ್ದರು ಇವರು ಉಪ ವೃತ್ತಿಯಾಗಿ ನೀರ್ಚಾಲು ಪೇಟೆಯಲ್ಲಿ ಜೀಪುಟ್ಯಾಕ್ಸಿ ನಡೆಸುತ್ತಿದ್ದರು.  ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮತ್ತು  ಮುಳ್ಳೇರಿಯ ಹವ್ಯಕ ಮಂಡಲದ ಕಾಸರಗೋಡು ವಲಯದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಮೃತರು ಪತ್ನಿ ಸವಿತಾ ಎಸ್.ಎನ್. ಭಟ್, ಪುತ್ರ ಅನೀಶ್‌ಕೃಷ್ಣ (ಇಂಜಿನಿ ಯರ್ ಬೆಂಗಳೂರು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕಾಸರಗೋಡು ಬ್ರಾಹ್ಮಣ ಮಹಾಸಭಾ  ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಕನ್ನಡಿಗ ವೈದ್ಯೆ ಡಾ| ಚೇತನಾರಿಗೆ ಇಂಗ್ಲೆಂಡ್‌ನ ರಾಯಲ್ ಕಾಲೇಜಿನ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿ

ಕಾಸರಗೋಡು: ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜೆನ್ಸ್ ನೀಡುವ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿಯಾದ ಹಾಲಟ್ ಪ್ರೈಜ್ ಮೆಡಲ್ ಪ್ರಶಸ್ತಿಯನ್ನು ಮೇಲ್ಪರಂಬ ನಿವಾಸಿ ಕನ್ನಡಿಗರಾದ ಡಾ| ಚೇತನಾ ಅವರಿಗೆ ಪ್ರದಾನ ಮಾಡಲಾ ಯಿತು. ಎಂಆರ್‌ಸಿಎಸ್ ಪರೀಕ್ಷೆಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದರೆ ಮಾತ್ರವೇ ಈ ಪ್ರಶಸ್ತಿಗೆ ಅರ್ಹತೆಯಿದೆ. ಡಾ| ಚೇತನಾ ಪ್ರಥಮ ಪ್ರಯತ್ನದಲ್ಲೇ ಶೇ. 92 ಅಂಕ ಗಳಿಸಿ ಪ್ರಥಮಸ್ಥಾನ ಪಡೆದು ಈ ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಭಾರತದಲ್ಲಿ ಕೆಲವೇ ವೈದ್ಯರುಗಳು ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕಾಸರಗೋಡಿನ ಕನ್ನಡಿಗ …

ಅಲಂಕೃತಗೊಂಡ ಅಡ್ಕತ್ತಬೈಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಪುನಃಪ್ರತಿಷ್ಠಾ ವಾರ್ಷಿಕ ದಿನಾಚರಣೆ ಆರಂಭ

ಕಾಸರಗೋಡು: ಅಡ್ಕತ್ತಬೈಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಹೊಸಮನೆಯಲ್ಲಿ ಪುನಃಪ್ರತಿಷ್ಠಾ ವಾರ್ಷಿಕ ದಿನಾಚರಣೆ, ಬ್ರಹ್ಮಬಲಿ ಮತ್ತು ಬೈದರ್ಕಳ ನೇಮೋತ್ಸವ ಇಂದು ಆರಂಭಗೊಂಡಿತು. ಇಂದು ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ, ಮುಡಿಪು ಶುದ್ಧಿ (ಪಾನಕ ಪೂಜೆ) ನಡೆಯಿತು. ಬಳಿಕ ನಾಗತಂಬಿಲ, ಬ್ರಹ್ಮೆರ್, ದೇಯಿ ಬೈದ್ಯೆತಿ, ಕೋಟಿಚೆನ್ನಯ್ಯ ಹಾಗೂ ಇತರ ದೈವಗಳಿಗೆ ಪೂಜಾ ಕಾರ್ಯಕ್ರಮಗಳು, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ರಿಂದ ವಿದ್ಯಾಶ್ರಯ ಭಜನ್ಸ್ ಮಜಲ್ ಇವರಿಂದ ಭಜನೆ, ರಾತ್ರಿ 7ಕ್ಕೆ ಸಂಧ್ಯಾಪೂಜೆ, ೮ಕ್ಕೆ ಗುಳಿಗ ದೈವಕೋಲ, ಕೊರತಿಅಮ್ಮನ …