ಕಿಳಿಂಗಾರು ಸಾಯಿರಾಂ ಭಟ್ ಕುಟುಂಬದಿಂದ ಧನಸಹಾಯ ವಿತರಣೆ

ಬದಿಯಡ್ಕ: ಕಿಳಿಂಗಾರು ದಿ| ಸಾಯಿರಾಂ ಭಟ್ ಕುಟುಂಬದ ವತಿಯಿಂದ ಬಡ ಜನತೆಗೆ ನೆರವು ಹಸ್ತಾಂತರ ನಡೆಯಿತು. ವೇದಮೂರ್ತಿ ಮಹಾಲಿಂಗೇಶ್ವರ ಉಪಾಧ್ಯಾಯ ಮಣಿಮುಂಡ, ವೇದಮೂರ್ತಿ ಗೋಪಾಲಕೃಷ್ಣ ಭಟ್ ಕಿಳಿಂಗಾರು ಸಹಾಯ ವಿತರಿಸಿದರು. ಸಾಯಿರಾಂ ಕೃಷ್ಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ರಮೇಶ್ ಬೇರಿಕೆ ಅವರಿಗೆ  ಚಿಕಿತ್ಸಾ ಧನಸಹಾಯ, ಭವ್ಯ ಬಾಂಜತ್ತಡ್ಕ, ರಾಜೀವಿ ಬೇಳ, ನಾರಾಯಣ ಮಣಿಯಾಣಿ ಅವರಿಗೆ ಮನೆ ದುರಸ್ತಿಗೆ, ಯಶೋಧ ಬೇಳರಿಗೆ ಮದುವೆ ಧನಸಹಾಯ ನೀಡಲಾಯಿತು. ಪಂಚಾಯತ್ ಅಧ್ಯಕ್ಷ ಶಂಕರ ಡಿ, ಗೋಪಾಲಕೃಷ್ಣ ಭಟ್ ಅಡ್ಯನಡ್ಕ, ಸಂದೇಶ, ವೇಣುಗೋಪಾಲ …

ಹೊಸಂಗಡಿ ಆನೆಕಲ್ಲು ರಸ್ತೆಯ ಇಕ್ಕಡೆಗಳಲ್ಲಿ ಭೀತಿಯೊಡ್ಡುವ ಮರಗಳು: ವಾಹನ ಪ್ರಯಾಣಿಕರಲ್ಲಿ ಆತಂಕ

ಮಂಜೇಶ್ವರ: ಹೊಸಂಗಡಿಯಿAದ ಆನೆಕಲ್ಲು ಭಾಗಕ್ಕೆ ತೆರಳುವ ರಸ್ತೆಯಲ್ಲಿ ಅಪಾಯ ಭೀತಿಯುಂಟುಮಾಡುವ ಹಲವು ಮರಗಳಿವೆ. ಈ ರಸ್ತೆ ಉದ್ದಕ್ಕೂ ಇಕ್ಕೆಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಆತಂಕವನ್ನುAಟುಮಾಡುತ್ತಿದೆ. ಮರದ ಬೃಹತ್ ರೆಂಬೆಗಳು ರಸ್ತೆಗೆ ಬಾಗಿಕೊಂಡು ವಾಹನಗಳಿಗೆ ಅಡಚಣೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಕಳೆದ ವರ್ಷ ಸುರಿದ ಭಾರೀ ಮಳೆ ಗಾಳಿಗೆ ಇದೇ ರಸ್ತೆಯ ಅಲ್ಲಲ್ಲಿ ಮರಗಳು ಧರಾಶಾಯಿಗಿದ್ದು, ಕೆಲವು ವಾಹನಗಳಿಗೆ ಹಾನಿ ಹಾಗೂ ಇನ್ನೂ ಕೆಲವು ಸವಾರರು ಅಪಾಯದಿಂದ ಪಾರಾಗಿರುವುದಾಗಿ ಹೇಳಲಾಗುತ್ತಿದೆ. ಅಲ್ಲಲ್ಲಿ ವಿದ್ಯುತ್ ತಂತಿಗಳು ಹಾದುಹೋಗಿದ್ದು, ಮಳೆ, ಗಾಳಿಗೆ ಮರ …

ಒಂದೇ ಮನೆಯಿಂದ ಏಕಕಾಲದಲ್ಲಿ ಎಸ್‌ಐಗಳಾಗಿ ಉದ್ಯೋಗಕ್ಕೆ ನೇಮಕಗೊಂಡ ಸಹೋದರರು

ಕಾಸರಗೋಡು: ಒಂದೇ ಮನೆಯಿಂದ ಏಕ ಕಾಲದಲ್ಲಿ ಕೇರಳ ಪೊಲೀಸ್ ಸೇನೆಯಲ್ಲಿ ಎಸ್‌ಐಗಳಾಗಿ ತರಬೇತಿ  ಪೂರ್ತಿಗೊಳಿಸಿ ಸಹೋದ ರರು ಗಮನ ಸೆಳೆದಿದ್ದಾರೆ. ಚುನಾವಣಾ ಕರ್ತವ್ಯ ಮುಗಿಯುವುದರೊಂದಿಗೆ ಈ ಇಬ್ಬರು ಸೇವೆಗೆ ಸೇರ್ಪಡೆಗೊಳ್ಳ ಲಿದ್ದಾರೆ. ಮಡಿಕೈ ಏಚ್ಚಿಕ್ಕಾನಂ ಅಂಚೆ ಕಚೇರಿಯ ಪೋಸ್ಟ್ ಮಾಸ್ತರ್ ವಿ. ತಂಬಾನ್‌ರ ಮಕ್ಕಳಾದ ಮಡಿಕೈ ಪೂತಕ್ಕಾಲ್‌ನ  ಇಲ್ಲತ್ತ್ ವಳಪ್ಪಿಲ್ ಟಿ.ಸಿ. ಅಕ್ಷಯ್, ಟಿ.ಸಿ. ಅಜಯ್ ಎಂಬಿವರಿಗೆ ಈ ಅಪೂರ್ವ ಭಾಗ್ಯ ಲಭಿಸಿದೆ. ಎಸ್‌ಐ ನೇಮಕಾತಿ ಲಭಿಸಿದ ಈ ಇಬ್ಬರು 2025 ಎಪ್ರಿಲ್ 3ರಂದು ತೃಶೂರು ಪೊಲೀಸ್ …