ಅನಂತಪುರ ಉದ್ದಿಮೆ ಪಾರ್ಕ್‌ನ ದುರ್ನಾತ ಪರಿಹಾರಕ್ಕೆ ಒತ್ತಾಯ: 8ರಂದು ಕ್ರಿಯಾ ಸಮಿತಿಯಿಂದ ಮಾರ್ಚ್, ಧರಣಿ

ಕುಂಬಳೆ: ಅನಂತಪುರ ಉದ್ದಿಮೆಪಾರ್ಕ್‌ನ ಫ್ಯಾಕ್ಟರಿಗಳಿಂದ ಹೊರಸೂಸುವ ದುರ್ನಾತಕ್ಕೆ ಪರಿಹಾರ ಕಾಣಲು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು, ಜನರ ಜೀವ ಹಾಗೂ ಸೊತ್ತಿಗೆ ಬೆದರಿಕೆ ಯಾಗುವ ಕೈಗಾರಿಕೆಗಳನ್ನು ಮುಚ್ಚುಗಡೆಗೊಳಿಸಬೇಕೆಂದು ಕ್ರಿಯಾ ಸಮಿತಿ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಫಾರಂನಲ್ಲಿ ಕರೆದ ಪತ್ರಿಕಾಗೋ ಷ್ಠಿಯಲ್ಲಿ ಒತ್ತಾಯಿಸಿದ್ದಾರೆ.  ಚರಂಡಿ ಇಲ್ಲದಿರುವುದರಿಂದ ಮಲಿನ ಜಲ ಹರಿದು ಕುಡಿಯುವ ನೀರು ಮೂಲ ಗಳಿಗೆ ತಲುಪಿ ಶುದ್ಧ ನೀರು ಕಲುಷಿ ತಗೊಳ್ಳುತ್ತಿದೆಯೆಂದು ಪದಾಧಿಕಾರಿಗಳು ಆರೋಪಿಸಿದ್ದಾರೆ. ನೂತನವಾಗಿ ಆರಂಭಿಸಲಿರುವ ಕೈಗಾರಿಕೆಗಳಿಗೆ ಅನುಮತಿ ನೀಡ ಕೂಡದು.  ಕೈಗಾರಿಕೆ ಹೆಸರಲ್ಲಿ …

ಮಗುವಿನ ಬರ್ಭರ ಕೊಲೆ: ಉಪ್ಪಳದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಉಪ್ಪಳ: ಕೇರಳದ ನೆಡುಮಂ ಙಾಡ್ ಎಂಬಲ್ಲಿ ಯುವತಿಯೊಬ್ಬಳು ಅನ್ಯಮತೀಯನಾದ ಪ್ರಿಯತಮನೊಂ ದಿಗೆ ಸೇರಿ  ಹೆತ್ತ ಕರುಳ ಕುಡಿಯನ್ನೇ ಕೊಲೆಗೈದಿರುವುದನ್ನು ಪ್ರತಿಭಟಿಸಿ ಹಿಂದೂ ಹಿತರಕ್ಷಣಾ ವೇದಿಕೆ ಮಂಗಲ್ಪಾಡಿ ಪಂಚಾಯತ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಭಾರತೀಯ ಜನತಾ ಪಕ್ಷದ ಕಲ್ಲಿಕೋಟೆ ವಲಯದ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿ, ಕಾನೂನು ಬಾಹಿರವಾಗಿ ಒಂದಾಗಿ  ಜೀವಿಸಿ  ಪುಟ್ಟ ಮಗುವನ್ನು ಕೊಲೆಗೈದ ಅಸ್ಕರ್ ಹಾಗೂ ಅಖಿಲ  ಎಂಬಿವರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಸರಕಾರ ಕ್ರಮ ಕೈಗೊಳ್ಳಬೇಕೆಂದು   ಒತ್ತಾಯಿಸಿದರು. ರಾಷ್ಟ್ರೀಯ ಸ್ವಯಂ …

ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಹೊಸ ಮುಖ್ಯ ಸರ್ವೇಯರ್‌ನ್ನು ತುರ್ತಾಗಿ ನೇಮಿಸಬೇಕು-ವಲ್ಸರಾಜ್ ಕೆ.ಪಿ

ಉಪ್ಪಳ: ಮಂಜೇಶ್ವರ ತಾಲೂಕು ಕಚೇರಿಯಲ್ಲಿ ಮೀಸಲು ವಿಭಾಗದಲ್ಲಿ ಮುಖ್ಯ ಸರ್ವೇಯರ್ ಇಲ್ಲದ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮಂಜೇಶ್ವರ ತಾಲೂಕು ಕಚೇರಿಯಲ್ಲಿ  ತಿಂಗಳುಗಳಿಂದ ಮುಖ್ಯ ಸರ್ವೇಯರ್ ಇಲ್ಲ. ಇರುವ ಮುಖ್ಯ ಸರ್ವೇಯರ್ ರಜೆಯಲ್ಲಿದ್ದಾರೆ.  ಬೇರೆ ಯಾವುದೇ ಅಧಿಕಾರಿಗೆ ಮುಖ್ಯ ಸರ್ವೇಯರ್‌ನ ಉಸ್ತುವಾರಿ ನೀಡಿಲ್ಲ. ಅನೇಕ  ಜನರು ಸರ್ವೇ ರಿಪೋರ್ಟ್ ನಡೆಸಿ ಹೆಡ್ ಸರ್ವೇಯರ್ ವರದಿಗಾಗಿ ಕಾಯುತ್ತಿದ್ದಾರೆ. ತಿಂಗಳಿಂದ ಎಷ್ಟೋ ಜನರು ತಾಲೂಕು ಕಚೇರಿಗೆ ಹೋಗಿ ಬರಿಗೈಯಲ್ಲಿ ಮರಳುತ್ತಿದ್ದಾರೆ. ಉನ್ನತ ಅಧಿಕಾರಿಗಳನ್ನು ವಿಚಾರಿಸಿದಾಗ ಹೊಸ  ಮುಖ್ಯ ಸರ್ವೇಯರ್ ಬಂದಿಲ್ಲವೆಂಬ …

ಪೆರ್ಮುದೆ- ಪೆರ್ಲ ರಸ್ತೆಯ ತಿರುವುಗಳಲ್ಲಿ ಕಾಡುಪೊದೆ ಬೆಳೆದು ವಾಹನ ಸವಾರರಿಗೆ ಆತಂಕ

ಉಪ್ಪಳ: ಪೆರ್ಮುದೆಯಿಂದ ಪೆರ್ಲಕ್ಕೆ ಸಂಚರಿಸುವ ದಾರಿ ಮಧ್ಯೆ ಹಲವು ತಿರುವುಗಳಲ್ಲಿ ಬೆಳೆದು ನಿಂತಿರುವ ಕಾಡುಪೊದೆಗÀಳು ವಾಹನ ಸವಾರರಲ್ಲಿ ಆತಂಕ ಉಂಟು ಮಾಡಿದೆ. ಅಂಗಡಿ ಮೊಗರು, ಬಾಡೂರು ಸಹಿತ ಹಲವಾರು ತಿರುವುಗಳು ಈ ರಸ್ತೆಯಲ್ಲಿ ಕಂಡು ಬರುತ್ತಿದ್ದು, ಇಕ್ಕೆಡೆಗಳಲ್ಲಿ ಕಾಡುಪೊದೆಗಳು ಬೆಳೆದು ಎದುರು ಭಾಗದಿಂದ ಬರುವ ವಾಹನಗಳು ಗಮನಕ್ಕೆ ಬಾರದೆ ಅಪಘಾತಕ್ಕೆ ಆಹ್ವಾ ನೀಡಿದಂತಾಗುತ್ತಿದೆ ಎಂದು ದೂರಲಾ ಗಿದೆ. ಅಚ್ಚು ಕಟ್ಟಾಗಿ ವ್ಯವಸ್ಥಿತ ವಾಗಿರುವ ಲೋಕೋಪಯೋಗಿ ಇಲಾಖೆಯ ಈ ರಸ್ತೆಯಲ್ಲಿ ವಾಹನ ಗಳು ವೇಗದಿಂದ ಸಂಚರಿಸುವಾಗ ತಿರುವುನಲ್ಲಿ ದ್ವಿಚಕ್ರ …