ಉಪ್ಪಳ: ಪೆರ್ಮುದೆಯಿಂದ ಪೆರ್ಲಕ್ಕೆ ಸಂಚರಿಸುವ ದಾರಿ ಮಧ್ಯೆ ಹಲವು ತಿರುವುಗಳಲ್ಲಿ ಬೆಳೆದು ನಿಂತಿರುವ ಕಾಡುಪೊದೆಗÀಳು ವಾಹನ ಸವಾರರಲ್ಲಿ ಆತಂಕ ಉಂಟು ಮಾಡಿದೆ. ಅಂಗಡಿ ಮೊಗರು, ಬಾಡೂರು ಸಹಿತ ಹಲವಾರು ತಿರುವುಗಳು ಈ ರಸ್ತೆಯಲ್ಲಿ ಕಂಡು ಬರುತ್ತಿದ್ದು, ಇಕ್ಕೆಡೆಗಳಲ್ಲಿ ಕಾಡುಪೊದೆಗಳು ಬೆಳೆದು ಎದುರು ಭಾಗದಿಂದ ಬರುವ ವಾಹನಗಳು ಗಮನಕ್ಕೆ ಬಾರದೆ ಅಪಘಾತಕ್ಕೆ ಆಹ್ವಾ ನೀಡಿದಂತಾಗುತ್ತಿದೆ ಎಂದು ದೂರಲಾ ಗಿದೆ. ಅಚ್ಚು ಕಟ್ಟಾಗಿ ವ್ಯವಸ್ಥಿತ ವಾಗಿರುವ ಲೋಕೋಪಯೋಗಿ ಇಲಾಖೆಯ ಈ ರಸ್ತೆಯಲ್ಲಿ ವಾಹನ ಗಳು ವೇಗದಿಂದ ಸಂಚರಿಸುವಾಗ ತಿರುವುನಲ್ಲಿ ದ್ವಿಚಕ್ರ ಸಹಿತ ಇತರ ವಾಹನ ಸವಾರರಿಗೆ ಆತಂಕ ಉಂಟು ಮಾಡಿದೆ. ತಿರುವಿನ ಕಾಡು ಪೊದೆ ಗಳನ್ನು ಕಡಿದು ಶುಚೀಕರಣ ಗೊಳಿ ಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.





