ವಿಕಲಚೇತನ ಬಾಲಕಿಗೆ ಕಿರುಕುಳ: 5 ಪೋಕ್ಸೋ ಕೇಸು ದಾಖಲು; ಆರೋಪಿಗಳಿಗಾಗಿ ಶೋಧ

ಕಾಸರಗೋಡು: ವಿಕಲ ಚೇತನಳಾದ  17ರ ಹರೆಯದ ಬಾಲಕಿಗೆ ದೌರ್ಜನ್ಯವೆಸಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಚೈಲ್ಡ್ ವೆಲ್ಫೇರ್ ಕಮಿಟಿ ನೀಡಿದ ವರದಿಯ ಪ್ರಕಾರ  ಬೇಕಲ ಪೊಲೀಸರು 5 ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ಪಳ್ಳಿಕ್ಕೆರೆ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿ ದೌರ್ಜನ್ಯಕ್ಕೊಳಗಾಗಿರುವುದಾಗಿ ದೂರಲಾಗಿದೆ.  ಮೊದಲು ಓರ್ವ ಆಟೋ ಚಾಲಕ ಕಿರುಕುಳ ನೀಡಿರುವು ದಾಗಿ ಹೇಳಲಾಗುತ್ತಿದೆ. ಅನಂತರ  ಈ ಚಾಲಕನ ಸ್ನೇಹಿತ ಸಹಿತ ೪ ಮಂದಿ ಕಿರುಕುಳ ನೀಡಿರುವುದಾಗಿ ಆರೋಪಿ ಸಲಾಗಿದೆ. ಈ ಬಗ್ಗೆ ಬೇಕಲ ಪೊಲೀಸರಿಗೆ   ಮೊದಲೇ ಸೂಚನೆಗಳು ಲಭಿಸಿತ್ತು. …

ಮಧ್ಯವಯಸ್ಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮುಳ್ಳೇರಿಯ: ವ್ಯಕ್ತಿಯೊಬ್ಬರು ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸುತ್ತಿದ್ದಂತೆ ಮೃತಪಟ್ಟ ಘಟನೆ ನಡೆದಿದೆ.  ಗಾಡಿಗುಡ್ಡೆ ಬಳಿಯ ತಲೆಬೈಲು ನಿವಾಸಿ  ರೋಬರ್ಟ್ ಕ್ರಾಸ್ತ (50) ಮೃತಪಟ್ಟ ವ್ಯಕ್ತಿ. ಕೂಲಿ ಕಾರ್ಮಿಕನಾಗಿದ್ದ ಇವರು ಅವಿವಾಹಿತನಾಗಿದ್ದು, ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಇಂದು ಬೆಳಿಗ್ಗೆ  ಇವರು ಹೊರಗೆಲ್ಲೂ ಕಾಣಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ತೆರಳಿ ನೋಡಿದಾಗ  ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ರೋಬರ್ಟ್ ಕ್ರಾಸ್ತ ಕಂಡುಬಂದಿ ದ್ದಾರೆ. ಕೂಡಲೇ ಅವರನ್ನು ಕೆಳಗಿಳಿಸಿ ಮುಳ್ಳೇರಿಯದ ಆಸ್ಪತ್ರೆಗೆ ಕೊಂಡೊ ಯ್ಯುತ್ತಿದ್ದಂತೆ ಮೃತಪಟ್ಟಿದ್ದಾರೆ.   ಮೃತದೇಹವನ್ನು …

ಕಾಡುತ್ಪನ್ನ ಮಾರಾಟ ಅಂಗಡಿಯಲ್ಲಿ ಕಳವು

ಕಾಸರಗೋಡು: ಕಾಡುತ್ಪನ್ನಗಳ ಮಾರಾಟದಂಗಡಿಗೆ ಕಳ್ಳರು ನುಗ್ಗಿ ಬಾರೀ  ಕಾಡುತ್ಪನ್ನಗಳನ್ನು ಕದ್ದು ಸಾಗಿಸಿದ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಮುಟ್ಟತ್ತೋಡಿ ಗ್ರಾಮದ ಆಲಂಪಾಡಿ ಸಿ.ಎಚ್.ನಗರ ದತ್ತ್ ಮೂಲೆ ಹೌಸ್ ನ ಇಸ್ಮಾಯಿಲ್ ಎಂಬವರ ಅಂಗಡಿಯಲ್ಲಿ ಈ ಕಳವು ನಡೆದಿದೆ. ಆಲಂಪಾಡಿ ಸಿ.ಎಚ್. ನಗರದಲ್ಲಿರುವ ತನ್ನ ಕಾಡುತ್ಪನ್ನ ಮಾರಾಟದಂಗಡಿಗೆ ಜೂನ್ 30ರಿಂದ ಜುಲೈ 1ರ ನಡುವಿನ ಯಾವುದೋ ಸಮಯದಲ್ಲಿ ಕಳ್ಳರು  ಅಂಗಡಿಯ ಬೀಗ ಒಡೆದು ಒಳನುಗ್ಗಿ ಅಲ್ಲಿ ದಾಸ್ತಾನು ಇರಿಸಲಾಗಿದ್ದ 450 ಕಿಲೋ ಅಡಿಕೆ, 10 ಕಿಲೋದಷ್ಟು …

ಯುವತಿಯನ್ನು ದೂಡಿ ಹಾಕಿ ಮೂರು ಪವನ್‌ನ ಕರಿಮಣಿ ಸರ ಅಪಹರಣ: ಸ್ಕೂಟರ್‌ನಲ್ಲಿ ತಲುಪಿದ ಆರೋಪಿಗಳಿಗಾಗಿ ತೀವ್ರ ಶೋಧ

ಕಾಸರಗೋಡು:  ಹಾಡಹಗಲೇ ದ್ವಿಚಕ್ರ ವಾಹನದಲ್ಲಿ ತಲುಪಿದ ತಂಡ ಯುವತಿಯನ್ನು ದೂಡಿಹಾಕಿ ಆಕೆಯ ಕುತ್ತಿಗೆಯಿಂದ ಮೂರು ಪವನ್‌ನ ಕರಿಮಣಿಸರವನ್ನು ಕಸಿದು ಪರಾರಿಯಾದ ಘಟನೆ ನಡೆದಿದೆ. ಮಾವುಂಗಾಲ್ ನೆಲ್ಲಿತ್ತರ ಕ್ಯಾಂಪ್ಕೋ ಸಮೀಪ ನಿನ್ನೆ ಸಂಜೆ ಈ ಘಟನೆ ನಡೆದಿದೆ. ನೆಲ್ಲಿತ್ತರದ ಫುಡ್ ಪ್ರೊಡಕ್ಟ್ಸ್ ಸಂಸ್ಥೆಯ ನೌಕರೆಯೂ ಪುಲಯನಡ್ಕದ ರವಿ ಎಂಬವರ ಪತ್ನಿ  ಕೆ.ಸಿಂಧು(42) ಅವರ ಕುತ್ತಿಗೆಯಿಂದ ಚಿನ್ನದ ಕರಿಮಣಿಸರವನ್ನು ತಂಡ ಎಗರಿಸಿದೆ. ಕೆಲಸ ಮುಗಿಸಿ ಮನೆಗೆ ತಲುಪಿದ ಸಿಂಧು  ಸ್ಕೂಟರ್‌ನಲ್ಲಿ ಸಾಮಗ್ರಿ ಖರೀದಿಸಲೆಂದು ತೆರಳಿ ದ್ದರು. ಮರಳಿ ಮನೆಗೆ ಹೋಗುತ್ತಿದ್ದ …

ಬಾವಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕದಳ

ಕಾಸರಗೋಡು: 25 ಕೋಲು ಆಳ ಹಾಗೂ 8 ಕೋಲು ನೀರಿರುವ ಬಾವಿಗೆ ಬಿದ್ದ ವ್ಯಕ್ತಿಯನ್ನು ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ ರಕ್ಷಿಸಿದ ಘಟನೆ ನಡೆದಿದೆ. ಚೆಮ್ನಾಡ್ ಅಣಿಂಞ್ಞದ ರಾಜ್‌ಮೋಹನ್ (65)ರನ್ನು ರಕ್ಷಿಸಲಾಗಿದೆ. ಇವರು ಇಂದು ಬೆಳಿಗ್ಗೆ ಮನೆಯ ಬಾವಿಗೆ ಬಿದ್ದಿದ್ದರು. ವಿಷಯ ತಿಳಿದು ತಲುಪಿದ ನಾಗರಿಕರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಆದರೆ ಅವರನ್ನು ಮೇಲಕ್ಕೆತ್ತಲಾಗಲಿಲ್ಲ. ಇದರಿಂದ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಯಿತು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಂ. ಸತೀಶನ್‌ರ ನೇತೃತ್ವದಲ್ಲಿ ಅಗ್ನಿಶಾಮ ಕದಳ ತಲುಪಿ ರಾಜ್‌ಮೋಹನ್‌ರನ್ನು …

ಹನ್ನೊಂದರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ: ನಿವೃತ್ತ ಎಸ್‌ಐ ಸೆರೆ

ಕಾಸರಗೋಡು:  11ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ನಿವೃತ್ತ ಸಬ್ ಇನ್ಸ್‌ಪೆಕ್ಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪರಿಯಾರಂ ಕಾಪುಮೈಲ್  ಇಳಯಡತ್ ನಿವಾಸಿ ಇ.ವಿ. ಗೋಪಿನಾಥನ್ (62) ಬಂಧಿತ ಆರೋಪಿ. ಪರಿಯಾರಂ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ 11ರ ಹರೆಯದ ಬಾಲಕಿಯನ್ನು ಮೊನ್ನೆ ಪುಸಲಾಯಿಸಿ ಆರೋಪಿ ಮನೆಗೆ ಕರೆತಂದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಪರಿಯಾರಂ ಪೊಲೀಸರು ಗೋಪಿನಾಥನ್ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿ ಆತನನ್ನು …

ಬಾವಿಗೆ ಹಾರಿದ ಯುವತಿ ಮೃತ್ಯು: ರಕ್ಷಿಸಲೆತ್ನಿಸಿದ ತಾಯಿಗೆ ಗಂಭೀರ

ಹೊಸದುರ್ಗ: ಯುವತಿ ಯೋರ್ವೆ ಬಾವಿಗೆ ಹಾರಿ ಮೃತ ಪಟ್ಟಿದ್ದು, ಈಕೆಯನ್ನು ರಕ್ಷಿಸಲು ಹಾರಿದ ತಾಯಿ ಗಂಭೀರ ಗಾಯ ಗೊಂಡಿದ್ದಾರೆ.  ತಳಿಪರಂಬ ಬಳಿಯ ಚವನಪ್ಪುಳ ಎಂಬಲ್ಲಿ ಘಟನೆ ನಡೆದಿದ್ದು, ಕರಿಯ್ಯಾಪತ್ತ್ ಚಿತ್ರಲೇಖ (38) ಮೃತಪಟ್ಟ ಯುವತಿಯಾಗಿ ದ್ದಾರೆ.   ಚಿತ್ರಲೇಖ ಹಾಗೂ ತಾಯಿ ಲಕ್ಷ್ಮಿ ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದರು.  ಚಿತ್ರಲೇಖರಿಗೆ ಮಾನಸಿಕ  ಅಸ್ವಸ್ಥತೆ ಇದ್ದುದಾಗಿ ಹೇಳಲಾಗುತ್ತಿದೆ. ನಿನ್ನೆ ಬೆಳಿಗ್ಗಿನಿಂದ ತಾಯಿ ಹಾಗೂ ಮಗಳು ನಾಪತ್ತೆಯಾಗಿದ್ದರು. ಸಂಬಂಧಿಕರು  ಹಾಗೂ ನೆರೆಮನೆ ನಿವಾಸಿಗಳು ಇವರಿಗೆ ಫೋನ್ ಮಾಡಿದರೂ ಪ್ರತಿಕ್ರಿಯೆ ಉಂಟಾಗಿಲ್ಲ. ಇದರಿಂದ  ಸಂಜೆ …

2 ಲಕ್ಷ ರೂ. ನೀಡದಿದ್ದರೆ ನಗ್ನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಪಡಿಸುವ ಬೆದರಿಕೆ: 63ರ ಹರೆಯದ ವ್ಯಕ್ತಿ ವಿರುದ್ಧ ಕೇಸು

ಕಾಸರಗೋಡು: ಹಣ ನೀಡದಿದ್ದರೆ ನಗ್ನ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುವು ದಾಗಿ ಬೆದರಿಕೆಯೊಡ್ಡಿ ಹಣ ಪಡೆಯಲು ಯತ್ನಿಸಿದ ಘಟನೆಯಲ್ಲಿ ಕೇಸು ದಾಖಲಿಸಲಾಗಿದೆ. ನೀಲೇಶ್ವರ ಪಳ್ಳಿಕೆರೆ ನಿವಾಸಿಯಾದ 63ರ ಹರೆಯದ ವ್ಯಕ್ತಿ ನೀಡಿದ ದೂರಿನಂತೆ ಆಲಕ್ಕೋಡ್ ನಿವಾಸಿ ಕೆ.ಕೆ. ನಾರಾಯಣ (69)ನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ೯ ತಿಂಗಳ ಹಿಂದೆ ಎರ್ನಾಕುಳಂನ ಒಂದು ಹೋಟೆಲ್‌ನಲ್ಲಿ ೬೩ರ ವ್ಯಕ್ತಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಆತ ತಿಳಿಯದಂತೆ ಆರೋಪಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದನು. ಈ ದೃಶ್ಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಪಡಿಸುವುದಾಗಿಯೂ, …

ಮನೆ ಕುಸಿತ: ವ್ಯಾಪಕ ನಾಶನಷ್ಟ

ಮಂಜೇಶ್ವರ: ಹೆಂಚು ಹಾಸಿದ ಮನೆಯೊಂದು ನಿನ್ನೆ  ರಾತ್ರಿ ಕುಸಿದುಬಿದ್ದಿದ್ದು ಕುಟುಂಬ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದೆ. ಮಂಜೇಶ್ವರ ರೈಲು ನಿಲ್ದಾಣ ಪರಿಸರದ ನಿವಾಸಿಯಾಗಿ ರುವ ವೇದಾವತಿ ಎಂಬವರ ಮನೆ ನಿನ್ನೆ ರಾತ್ರಿ 12 ಗಂಟೆ ವೇಳೆ ಕುಸಿದಿದೆ. ಶಬ್ದ ಕೇಳಿ ಮನೆಯವರು ಹೊರಗೆ ಓಡಿ ಹೋಗಿದ್ದು, ಇದರಿಂದ ಭಾರೀ ದುರಂತ ತಪ್ಪಿಹೋಗಿದೆ. ಹೆಂಚು ಹಾಸಿದ ಮನೆಯ ಛಾವಣಿ ಕುಸಿದು ಬಿದ್ದಿದ್ದು ಇದರಿಂದ ವ್ಯಾಪಕ ನಾಶನಷ್ಟ ಸಂಭವಿಸಿದೆ. ಬಿಜೆಪಿ ನೇತಾರ ಹರಿಶ್ಚಂದ್ರ ಮಂಜೇಶ್ವರ, ಕಲ್ಕಿ ಮಂಜೇಶ್ವರ ಇದರ  ಪದಾಧಿಕಾರಿ ಅರುಣ್ …

ಹವಾಮಾನ ವೈಪರೀತ್ಯ ದುರಂತಗಳಿಗೆ ಶೀಘ್ರವೇ ನಷ್ಟಪರಿಹಾರ ಲಭ್ಯಗೊಳಿಸಲು ಜಿಲ್ಲಾಧಿಕಾರಿ ನಿರ್ದೇಶ

ಕಾಸರಗೋಡು: ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿ ಉಂಟಾಗಿರುವ ದುರಂತಗಳಿಗೆ ಶೀಘ್ರದಲ್ಲಿಯೇ ನಷ್ಟ ಪರಿಹಾರ ಲಭ್ಯಗೊಳಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರದ ಸಭೆಯಲ್ಲಿ ಆಗ್ರಹಿಸಲಾಗಿದೆ. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಅಧ್ಯಕ್ಷತೆ ವಹಿಸಿದರು. ಹವಾಮಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಏರ್ಪಟ್ಟಿರುವ ಅಧಿಕಾರಿಗಳು ಯಾವುದೇ ಸನ್ನಿವೇಶವನ್ನು ಎದುರಿಸಲು ಯಾವಾಗಲೂ ಸಿದ್ಧರಾಗಿರಬೇಕೆಂದು, ದುರಂತಗಳು ಸಂಭವಿಸಿದರೆ ಕೂಡಲೇ ಮಧ್ಯಪ್ರವೇಶಿಸಿ ಶೀಘ್ರವೇ ನಷ್ಟ ಪರಿಹಾರ ಲಭ್ಯಗೊಳಿಸುವು ದಕ್ಕಿರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದರು. ಶಿಬಿರಗಳನ್ನು ಸಜ್ಜುಗೊಳಿಸಬೇಕಾದ ಸಿದ್ಧತೆಗಳನ್ನು ಮುಂದಾಗಿಯೇ ಕಂಡುಕೊಳ್ಳಬೇಕೆಂದು ಜಿಲ್ಲಾಧಿಕಾರಿ …