ಮಧೂರಿಗೆ ಕೆಎಸ್‌ಆರ್‌ಟಿಸಿ ಬಸ್ ಮಂಜೂರು ಮಾಡಲು ವ್ಯಾಪಾರಿ ಸಮಿತಿ ಮಧೂರು ಘಟಕ ಆಗ್ರಹ

ಮಧೂರು: ಪ್ರಸಿದ್ಧ ದೇವಸ್ಥಾನವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರಕ್ಕೆ ದಿನಂಪ್ರತಿ ಸಾವಿರಾರು ಮಂದಿ ತಲುಪುತ್ತಿದ್ದು, ಈ ಪ್ರದೇಶದಲ್ಲೇ ಇತರ ಹಲವಾರು ಕ್ಷೇತ್ರಗಳು, ಮಸೀದಿಗಳು, ಸರಕಾರಿ ಶಾಲೆಗಳು, ಆಸ್ಪತ್ರೆಗಳು, ಪಂಚಾಯತ್ ಕಚೇರಿ, ವಿಲ್ಲೇಜ್ ಕಚೇರಿ ಮೊದಲಾದ ಸರಕಾರಿ ಕಚೇರಿಗಳು ನೆಲೆಗೊಂಡಿವೆ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಕೆಎಸ್‌ಆರ್‌ಟಿಸಿ ಬಸ್ ಆರಂಭಿಸಬೇ ಕೆಂದು ಕೇರಳ ರಾಜ್ಯ ವ್ಯಾಪಾರಿ ವ್ಯವಸಾಯಿ ಸಮಿತಿ ಮಧೂರು ಘಟಕ ಸಂಬಂಧಪಟ್ಟವರಲ್ಲಿ ಆಗ್ರಹಿಸಿದೆ. ದಿನಂಪ್ರತಿ ವಿವಿಧ ಅಗತ್ಯಗಳಿಗಾಗಿ ಸಾವಿರಾರು ಮಂದಿ ಸಂಚರಿಸುವ ಈ ರೂಟ್‌ನಲ್ಲಿ ಈಗ ಖಾಸಗಿ …

 ಪಿಣರಾಯಿ ಸರಕಾರದ ಹಾದಿಯಲ್ಲೇ ವಿ.ಡಿ. ಸತೀಶನ್‌ರ ಪೊಲೀಸರೂ ಸಾಗುತ್ತಿದ್ದಾರೆ-ಎಂ.ಎಲ್.ಅಶ್ವಿನಿ

ಕಾಸರಗೋಡು: ಕೇರಳದಲ್ಲಿ ಪ್ರಸ್ತುತ  ವಿ.ಡಿ ಸತೀಶನ್ ಅವರ ಪೊಲೀಸರು ಕೂಡಾ ಈ ಹಿಂದೆ ಪಿಣರಾಯಿ ವಿಜಯನ್ ಸರಕಾರ ಇದ್ದಾಗ ಸಾಗಿದ  ಹಾದಿಯಲ್ಲೇ  ಸಾಗುತ್ತಿದ್ದಾರೆ ಎಂದು  ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಆರೋಪಿಸಿದ್ದಾರೆ.  ಉಗ್ರಗಾಮಿಗಳಿಗೆ, ಮಾವೋವಾದಿಗಳಿಗೆ ಕೇರಳವು ಸುರಕ್ಷಿತ ತಾಣವಾಗಿ  ಮಾರ್ಪಟ್ಟಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವಮೋರ್ಛಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎನ್.ಐ.ಎ ಕೊಚ್ಚಿಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಿರುವುದೇ ಇದಕ್ಕೆ ಉದಾಹರಣೆ ಯಾಗಿದೆ.  ಪ್ರವೀಣ್ ನೆಟ್ಟಾರು ಕೊಲೆ ನಡೆದು ನಾಲ್ಕು ವರ್ಷಗಳು ಕಳೆದರೂ ಆರೋಪಿಗಳು …

ದಂಬಯ್ಯ ಮೂಲ್ಯ ನಿಧನ

ಮೀಂಜ: ಮೀಯಪದವು ನಿವಾಸಿ ದಂಬಯ್ಯ ಮೂಲ್ಯ(70) ನಿಧನಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಸಂಜೆ ನಿಧನ ಸಂಭವಿಸಿದೆ. ಇವರು ಈ ಹಿಂದೆ ಬಡಗಿ ವೃತ್ತಿ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಸುಲೋಚನ, ಮಕ್ಕಳಾದ ಶಿವಪ್ರಸಾದ್, ಚೇತನ, ಅಳಿಯ ರಮೇಶ್, ಸೊಸೆ ವಿಮಲ, ಸಹೋದರ-ಸಹೋದರಿಯರಾದ ಬಾಬು, ಸುರೇಶ (ಮೀಯಪದವಿನಲ್ಲಿ ‘ಕಾರವಲ್’ ಏಜೆಂಟ್), ವಿಶಾಲಾಕ್ಷಿ, ಮಮತ, ಹರಿಣಿ, ಹರಿಣಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಕೇಶವ ಎಂಬವರು ಈ ಹಿಂದೆ ನಿಧನರಾಗಿದ್ದಾರೆ.

ಅಸೌಖ್ಯ: ಔಷಧಿ ಅಂಗಡಿ ನೌಕರ ನಿಧನ

ಪೈವಳಿಕೆ: ಚಿಪ್ಪಾರುಗುತ್ತು ಸೊಣಾಜೆ ನಿವಾಸಿ ರವೀಂದ್ರ ರೈ (62) ಮಂಗಳವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೃಷಿಕರಾಗಿದ್ದು, ಬಾಯಾರುಪದವು ವಿಶ್ವ ಮೆಡಿಕಲ್‌ನಲ್ಲಿ ಹಲವಾರು ವರ್ಷಗಳಿಂದ ನೌಕರನಾಗಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ತಾಯಿ ಅಕ್ಕಮ್ಮ, ಪತ್ನಿ ಶಶಿಕಲಾ, ಮಕ್ಕಳಾದ ನಿಶಾನ್, ಶರವಿ, ಸಹೋದರಿಯರಾದ ಮನೋರಮ ಶೆಟ್ಟಿ ಕುರಿಯ, ಪ್ರಭಾವತಿ ರೈ ತೊಟ್ಲ, ಸುಧಾ ರೈ, ಸರಸ್ವತಿ ಹಾಗೂ ಅಪಾರ ಬಂಧು -ಬಳಗವನ್ನು ಅಗಲಿದ್ದಾರೆ. ಮನೆಗೆ ಪೈವಳಿಕೆ ಪಂಚಾಯತ್ ಸದಸ್ಯೆ ಯಶೋದ, ಬ್ಲೋಕ್ ಪಂಚಾಯತ್ ಸದಸ್ಯೆ ಚಂದ್ರಾವತಿ …

ಜಿಲ್ಲೆಯ ಅತ್ಯಂತ ಹಿರಿಯ ಮತದಾರ ಎಂಕಪ್ಪು ನಾಯ್ಕ್ ನಿಧನ

ಕಾಸರಗೋಡು: ಜಿಲ್ಲೆಯ ಅತ್ಯಂತ ಹೆಚ್ಚು ಪ್ರಾಯದ ಮತದಾರರಾದ ಪನತ್ತಡಿಯ ಶತಾಯುಷಿ ಎಂಕಪ್ಪು ನಾಯ್ಕ್ (107) ನಿಧನ ಹೊಂದಿದರು. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿ ಭಾಗವಹಿಸಿ ಇವರು ಗಮನ ಸೆಳೆದಿದ್ದರು. ಚುನಾವಣಾ ಆಯೋಗ ಏರ್ಪಡಿಸಿದ ‘ಮನೆಯಲ್ಲಿ ಮತ’ ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ತನ್ನ ಮತದಾನ ಹಕ್ಕನ್ನು ವಿನಿಯೋಗಿಸಿದ್ದರು. ಜಿಲ್ಲಾಧಿಕಾರಿ ಇವರನ್ನು ಗೌರವಿಸಿದ್ದರು. ಪನತ್ತಡಿಯ ಉತ್ತಮ ಕೃಷಿಕನಾಗಿಯೂ ಆಯ್ಕೆಯಾಗಿದ್ದರು. ನಿನ್ನೆ ಬೆಳಿಗ್ಗೆ ಮನೆ ಹಿತ್ತಿಲಲ್ಲಿ ಅಂತ್ಯ ಸಂಸ್ಕಾರ ನಡೆದಿದೆ. ಇವರ ಪತ್ನಿ ಅಕ್ಕುಬಾಯಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ತಿಮ್ಮು …