ಶಸ್ತ್ರ ಚಿಕಿತ್ಸೆ ಮಧ್ಯೆ ಮೃತಪಟ್ಟ ಬಾಲಕನ ಮೃತದೇಹ: ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂಗೆ ;ಆಸ್ಪತ್ರೆಗೆ ಡಿವೈಎಫ್‌ಐ ಮಾರ್ಚ್

ಕಾಸರಗೋಡು: ಇಲ್ಲಿನ ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ಮೃತಪಟ್ಟ ನಾಲ್ಕನೇ ತರಗತಿ ವಿದ್ಯಾರ್ಥಿಯ ಮೃತದೇಹವನ್ನು ತಜ್ಞ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾ ಯಿತು.  ಬೇಡಗಂ ತಲೇಕುನ್ನು ನಿವಾಸಿ ಅಶ್ರಫ್ ಸಖಾಫಿ ಎಂಬವರ ಪುತ್ರ  ಇಯಾಸ್ (9)ನ ಮೃತದೇಹವನ್ನು ಇಂದು ಬೆಳಿಗ್ಗೆ ಪರಿಯಾರಂಗೆ ಕೊಂಡೊಯ್ಯ ಲಾಗಿದೆ.  ಬಾಲಕನ ಸಾವಿಗೆ ಸಂಬಂಧಿಸಿ  ವ್ಯಾಪಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಪರಿಯಾರಂನಲ್ಲಿ ನಡೆಸಲು ನಿರ್ಧರಿಸಲಾಗಿದೆ.  ಉದರಸಂಬಂಧ  ಅಸೌಖ್ಯ ಬಾಧಿಸಿದ್ದ ಇಯಾಸ್‌ನನ್ನು ನಿನ್ನೆ ಬೆಳಿಗೆ ಜನರಲ್ ಆಸ್ಪತ್ರೆಯಲ್ಲಿ …

ಏಳ್ಕಾನದಿಂದ ರಬ್ಬರ್ ಶೀಟ್ ಯಂತ್ರ ಕಳವು: ಓರ್ವ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ

ಬದಿಯಡ್ಕ: ಶೇಣಿ ಏಳ್ಕಾನ ದಿಂದ ರಬ್ಬರ್ ಶೀಟ್ ಯಂತ್ರ ಕಳವಿಗೀ ಡಾದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬದಿಯಡ್ಕ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ಅರಿಯಪ್ಪಾಡಿ ಕೋಟ ನಿವಾಸಿಯಾದ ೧೯ರ ಹರೆಯದ ಯುವಕ  ಕಸ್ಟಡಿಯಲ್ಲಿದ್ದು ಈತನನ್ನು ಸಮಗ್ರ ತನಿಖೆ ಗೊಳಪಡಿಸ ಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪ್ರಾಯ ಪೂ ರ್ತಿಯಾಗದ ಮತ್ತಿಬ್ಬರ ಸಹಾಯದಿಂದ ಈತ 600 ಕಿಲೋ ತೂಕವುಳ್ಳ ರಬ್ಬರ್ ರೋಲರ್  ಕಳವುಗೈದಿರು ವುದಾಗಿ ಸಂಶಯಿಸ ಲಾಗುತ್ತಿದೆ. ಈಬಗ್ಗೆ ಕನ್ನಾಟಿಕಾನದ ಸೋಜನ್ ಜೋರ್ಜ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. …

ದ್ವಿಚಕ್ರ ವಾಹನದಿಂದ ಯುವತಿಯನ್ನು ದೂಡಿಹಾಕಿ ಸರ ಎಗರಿಸಿದ ಇಬ್ಬರ ಸೆರೆ

ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ದೂಡಿಹಾಕಿ ಆಕೆಯ ಕುತ್ತಿಗೆಯಿಂದ ಮೂರು ಪವನ್‌ನ ಚಿನ್ನದ ಸರ ಎಗರಿಸಿ ಪರಾರಿಯಾದ ಇಬ್ಬರು ಆರೋಪಿಗಳನ್ನು ಹೊಸದುರ್ಗ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ದಿನೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಕೊಯಿಲಾಂಡಿ ಮಾವಿಲೆಕಂಡಿ ಹೌಸ್‌ನ  ಸೂರ್ಯನ್ (26), ತಾಮರಶ್ಶೇರಿ ಅಡಿವಾರಂ ಮುಪ್ಪದೇಕರ್ ಹೌಸ್‌ನ ಅನಸ್  ಯಾನೆ ರಂಬೂಟನ್ ಅನಸ್ (29) ಎಂಬಿವರು  ಬಂಧಿತ ಆರೋಪಿಗಳಾಗಿ ದ್ದಾರೆ.  ಮಟ್ಟನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಈ ಇಬ್ಬರು ಆರೋಪಿಗಳು ಇದೇ ರೀತಿಯ ಕೃತ್ಯ ನಡೆಸಿದ್ದರು. ಅದಕ್ಕೆ ಸಂಬಂಧಿಸಿ …

ವಿದ್ಯುತ್ ನಿಯಂತ್ರಣ ಮುಂದುವರಿಯಲಿದೆ-ಸಚಿವ ಸನ್ನಿ ಜೋಸೆಫ್

ತಿರುವನಂತಪುರ: ರಾಜ್ಯದಲ್ಲಿ  ವಿದ್ಯುತ್  ಉಪಯೋಗ ತಾರಕ್ಕೇರತೊಡಗಿದ್ದು ಇದರಿಂದಾಗಿ  ಹೇರಲಾಗಿರುವ ವಿದ್ಯುತ್ ನಿಯಂತ್ರಣ ಇನ್ನು ಎಷ್ಟು ದಿನಗಳ ತನಕ ಮುಂದುವರಿಯಲಿದೆಯೆಂಬ ಬಗ್ಗೆ ಸದ್ಯ ಏನೂ ಹೇಳುವಂತಿಲ್ಲ ವೆಂದು ವಿದ್ಯುತ್ ಖಾತೆ ಸಚಿವ ಸನ್ನಿ ಜೋಸೆಫ್  ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಮುಂಗಾರುಮಳೆ ಕೈಗೊಟ್ಟಿರುವುದೇ ವಿದ್ಯುತ್ ಉತ್ಪಾದನೆ ಕುಸಿಯಲು ಹಾಗೂ ತಾಪಮಾನ ಮಟ್ಟ ಹೆಚ್ಚಿ ವಿದ್ಯುತ್ ಉಪಯೋಗ ಏರಲು ಕಾರಣವಾಗಿದೆ.  ವಿದ್ಯುತ್ ಉಪಯೋಗವನ್ನು ಜನರು ಗರಿಷ್ಠ ಪ್ರಮಾಣದಲ್ಲಿ  ಕಡಿಮೆ ಮಾಡಲು  ಮುಂದಾಗಬೇಕೆಂದು ಇದೇ ಸಂದರ್ಭದಲ್ಲಿ ಸಚಿವರು …

ಹೆಚ್ಚುತ್ತಿರುವ ಬಿಸಿಲಿನ ತಾಪ: ಜಲಮೂಲಗಳಲ್ಲಿ ನೀರಿನ ಮಟ್ಟ ಕುಸಿದು ಕೃಷಿಕರಲ್ಲಿ ಆತಂಕ

ಉಪ್ಪಳ: ‘ಹುಯ್ಯೋ ಹುಯ್ಯೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ…’ ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕೆಲವರಾದರೂ ಈ ಹಾಡನ್ನು ಕಲಿತಿರಬಹುದು. ಈಗ ಪರಿಸ್ಥಿತಿ ಮತ್ತೆ ಅದೇ ಹಂತಕ್ಕೆ ತಲುಪಿದೆ. ಮಳೆ ಸುರಿಯದೆ ಜಿಲ್ಲೆಯ ವಿವಿಧ ನದಿಗಳು ಬತ್ತಿ ಬರಡಾಗುವ ಸ್ಥಿತಿಗೆ ತಲುಪಿದೆ. ತೋಡುಗಳಲ್ಲಿ ನೀರ ಹರಿವು ನಿಂತುಹೋಗಿದೆ. ಬಿಸಿಲಿನ ತಾಪ ಹೆಚ್ಚುತ್ತಿದ್ದು, ನೀರು ಆವಿಯಾಗುವ ಗಂಭೀರ ಸಮಸ್ಯೆ ಉಂಟಾಗುತ್ತಿದೆ. ಹೊಳೆ, ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ವರ್ಕಾಡಿ ಮೊದಲಾದ ಪಂಚಾಯತ್ …

ಕುಂಬಳೆಯಲ್ಲಿ ಖಾಸಗಿ ಬಸ್, ಆಟೋ ರಿಕ್ಷಾಗಳ ನಿಲುಗಡೆ ಸಮಸ್ಯೆ: ಪಂ.ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಚರ್ಚೆ ಪರಾಭವ

ಕುಂಬಳೆ: ಕುಂಬಳೆಯಲ್ಲಿ ಖಾಸಗಿ ಬಸ್‌ಗಳು ಹಾಗೂ ಆಟೋ ರಿಕ್ಷಾಗಳ ನಿಲುಗಡೆಗೆ ಸಂಬಂಧಿಸಿದ ತರ್ಕ ಪರಿಹರಿಸಲು ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ನೇತೃತ್ವದಲ್ಲಿ ನಿನ್ನೆ ನಡೆದ ಚರ್ಚೆ ವಿಫಲಗೊಂಡಿದೆ. ಕುಂಬಳೆ ಪಂಚಾಯತ್ ಕಚೇರಿ ಯಲ್ಲಿ ನಿನ್ನೆ ಅಪರಾಹ್ನ ನಡೆದ ಚರ್ಚೆಯಲ್ಲಿ ಬಸ್ ಹಾಗೂ ಆಟೋ ರಿಕ್ಷಾ ನೌಕರರು ಪಾಲ್ಗೊಂಡಿದ್ದರು. ಸೀತಾಂಗೋಳಿ ಭಾಗದಿಂದ ಬರುವ ಬಸ್‌ಗಳು ಕುಂಬಳೆ ಹಳೆ ಬಸ್ ನಿಲ್ದಾಣಕ್ಕೆ ತಲುಪಿ   ಪ್ರಯಾಣಿಕರನ್ನು ಅಲ್ಲಿ ಇಳಿಸಿದ ಬಳಿಕ ಜಿಲ್ಲಾ ಸಹಕಾರಿ ಆಸ್ಪತ್ರೆ ಸಮೀಪದ ೬ನೇ ನಂಬ್ರ …

ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿಗೆ ನೂತನ ಪದಾಧಿಕಾರಿಗಳು

ಉಪ್ಪಳ: ಮಂಜೇಶ್ವರ ಮಂಡಲ ಮುಸ್ಲಿಂ ಲೀಗ್ ಪದಾಧಿಕಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಮಂಡಲ ಕೋಶಾಧಿಕಾರಿ ಸೈಫುಲ್ಲಾ ತಂಙಳ್ ಬ್ಲೋಕ್ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಂಡಲ ಉಪಾಧ್ಯಕ್ಷರಾಗಿದ್ದ ಅಬ್ದುಲ್ಲ ಮಾದೇರಿ ಯವರನ್ನು ನೂತನ ಕೋಶಾಧಿಕಾರಿ ಯಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮೊಯ್ದೀನ್ ಪ್ರಿಯ, ಅಬೂಬಕ್ಕರ್ ಪೆರ್ಣೆ ಎಂಬಿವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಮುಸ್ಲಿಂ ಲೀಗ್ ಉಪಾಧ್ಯಕ್ಷ ಟಿ. ಮೂಸ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಅಸೀಸ್ ಮರಿಕೆ ಅಧ್ಯಕ್ಷತೆ ವಹಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಎ.ಕೆ. ಆರೀಫ್ ಸ್ವಾಗತಿಸಿದರು. …

ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನಿಂದ ರಿಸ್ಕ್‌ಫಂಡ್ ವಿತರಣೆ

ವರ್ಕಾಡಿ: ರಾಜ್ಯ ಸರಕಾರದ ರಿಸ್ಕ್ ಫಂಡ್ ಯೋಜನೆ  ಪ್ರಕಾರ ಲಭಿಸಿದ 1 ಲಕ್ಷ ರೂ. ಮೊತ್ತದ ಚೆಕ್‌ನ್ನು ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನಿಂದ ಪಾವೂರು ನಿವಾಸಿ ದಿ| ದಯಾನಂದರ ಪುತ್ರ ಪ್ರಶಾಂತ್ ಡಿ. ಬಂಗೇರರಿಗೆ ಬ್ಯಾಂಕ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಸ್ತಾಂತರಿಸಿದರು. ಈ ವೇಳೆ ಬ್ಯಾಂಕ್‌ನ ಉಪಾಧ್ಯಕ್ಷ ಸತ್ಯನಾರಾಯಣ ಭಟ್, ನಿಕೋಲಸ್ ಮೊಂತೇರೊ, ಜಗದೀಶ್ ಚೆಂಡೇಲ್, ಮೂಸ ಕುಂಞಿ, ರಂಜಿತ್, ಸುಮನ್, ಕಾರ್ಯದರ್ಶಿ ಶ್ರೀವತ್ಸ ಭಟ್ ಉಪಸ್ಥಿತರಿದ್ದರು.

ಶಾಲೆಯಿಂದ ಅಕ್ಕಿ, ಪಾತ್ರೆಗಳ ಕಳವು: 180 ಮಕ್ಕಳಿಗೆ ಮಧ್ಯಾಹ್ನದೂಟ ಮೊಟಕು

ತೃಶೂರು: ಶಾಲೆಗೆ ನುಗ್ಗಿದ ಕಳ್ಳ ಮಕ್ಕಳಿಗೆ  ಮಧ್ಯಾಹ್ನದೂಟ ಕ್ಕಾಗಿರಿಸಿದ್ದ ಅಕ್ಕಿ ಹಾಗೂ ಪಾತ್ರೆಗಳ ಸಹಿತ ಸಾಮಗ್ರಿಗಳನ್ನು ಲಪಟಾಯಿಸಿದ್ದಾನೆ. ಇದರಿಂದಾಗಿ 180ರಷ್ಟು ಮಕ್ಕಳ ಮಧ್ಯಾಹ್ನದೂಟ ಮೊಟಕುಗೊಂಡಿತು. ಕೊಡುಂಗಲ್ಲೂರು ಕೋತಪರಂಬ್ ವಾಸುದೇವ ವಿಳಾಸ ಎಲ್‌ಪಿ ಶಾಲೆಯಲ್ಲಿ ಕಳವು ನಡೆದಿದೆ. ನಿನ್ನೆ ಬೆಳಿಗ್ಗೆ ನೌಕರರು ತಲುಪಿದಾಗ ಕಳವಿನ ಬಗ್ಗೆ ತಿಳಿದು ಬಂದಿದೆ. ಬಾಗಿಲನ್ನು ಮುರಿದು ಒಳನುಗ್ಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಶಾಲೆಗೆ ಹೊಂದಿಕೊಂಡಿರುವ ಅಡುಗೆ ಕೊಠಡಿ, ಸ್ಟೋರ್ ರೂಮ್ ಬಾಗಿಲನ್ನು ಕೂಡಾ ಮುರಿದಿದ್ದು, ಐದು ಕಿಲೋ ಅಕ್ಕಿ, ಪದಾರ್ಥಕ್ಕಿರುವ ಮಸಾಲೆಗಳು, ಪಾತ್ರೆಗಳು, …

ಕಾಸರಗೋಡು ನಿವಾಸಿಯ ಮಾಹಿತಿ ಕೇಳಿ ತಲುಪಿದ  ವ್ಯಕ್ತಿ ವೃದ್ದೆಯ ಚಿನ್ನದ ಸರ ಅಪಹರಿಸಿ ಪರಾರಿ

ಕಣ್ಣೂರು: ಕಾಸರಗೋಡು ನಿವಾಸಿಯ ಬಗ್ಗೆ ಮಾಹಿತಿ ಕೇಳಿ ತಲುಪಿದ ವ್ಯಕ್ತಿ ಸಿಪಿಎಂ ನೇತಾರನ ಸಹೋದರಿಯ ಕುತ್ತಿಗೆಯಿಂದ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾಗಿದ್ದಾನೆ. ತಳಿಪರಂಬ್ ಪೂಮಂಗಲತ್ ಎಂಬಲ್ಲಿ ಘಟನೆ ನಡೆದಿದೆ. ಸಿಪಿಎಂ ತಳಿಪರಂಬ್ ಏರಿಯಾ ಸಮಿತಿ ಸದಸ್ಯ ಕೆ. ನಾರಾಯಣನ್‌ರ ಹಿರಿಯ ಸಹೋದರಿ ಪಾವಳತ್ ಕೋಳಿಯನ್ ಕಲ್ಯಾಣಿ (೮೦)ರ ಚಿನ್ನದ ಸರವನ್ನು ಅಪಹರಿಸಲಾಗಿದೆ. ೨೭ ವರ್ಷದಿಂದ ಇವರು ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಇವರ ಮನೆಯ ಸಮೀಪದಲ್ಲೇ ಕಾಸರಗೋಡು ನಿವಾಸಿಗಳಾದ ದಂಪತಿ ವಾಸ ಮಾಡುತ್ತಿದ್ದಾರೆ. ಇವರ ಬಗ್ಗೆ ಮಾಹಿತಿ ಕೇಳಿ ತಲುಪಿದ …