ಪ್ರಕೃತಿ ವಿಕೋಪ ವೇಳೆ ಸಹಾಯಹಸ್ತ ನೀಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸೋಮಶೇಖರ ಕರೆ

ಪೈವಳಿಕೆ: ವಿಪರೀತ ಮಳೆಯಿಂ ದಾಗಿ ಪ್ರಾಕೃತಿಕ ವಿಕೋಪಗಳು ಸಂs ವಿಸಿದ್ದು, ಇಂತಹ ಸಂದರ್ಭಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾಗರೂ ಕತೆಯಿಂದ ಜನರಿಗೆ ಅಗತ್ಯಗಳಿಗೆ ಸ್ಪಂದಿಸಲು ಸಿದ್ಧರಾಗಿರಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಕರೆ ನೀಡಿದ್ದಾರೆ. ಬಾಯಾರಿನ ಯುವಕ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ  ಬಾಯಾರುಪದವಿನಲ್ಲಿ ಸ್ಥಾಪಿಸಿದ ಪಕ್ಷದ ನೂತನ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಕುಮಾರ್  ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ …

ಕಡಲ್ಕೊರೆತ ತೀವ್ರ: ಸಂತ್ರಸ್ತರಿಗೆ ಸಹಾಯ ಲಭ್ಯಗೊಳಿಸಲು ಶಾರದಾನಗರ ಉಳಿಸಿ ಕ್ರಿಯಾ ಸಮಿತಿ ರೂಪೀಕರಣ

ಉಪ್ಪಳ: ಕಡಲ್ಕೊರೆತದಿಂದ ಮನೆ, ಬೆಳೆ ಕಳೆದುಕೊಂಡ ಜನರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದಲ್ಲಿ 11 ಸದಸ್ಯರ ಶಾರದಾನಗರ ಉಳಿಸಿ ಕ್ರಿಯಾ ಸಮಿತಿಯನ್ನು ರೂಪೀಕರಿಸಲಾಯಿತು. ಶಾರದಾನಗರ ಭಜನಾಮಂದಿರದಲ್ಲಿ ನಡೆದ ಸಭೆಯಲ್ಲಿ ಮಂಗಲ್ಪಾಡಿ ಪಂಚಾಯತ್‌ನ ಶಾರದಾ ನಗರದಲ್ಲಿ ಮೀನು ಕಾರ್ಮಿಕರು ಸಹಿತದ ತೀರ ನಿವಾಸಿಗಳು ಮನೆ, ಭೂಮಿ ಕಳೆದುಕೊಂಡಿದ್ದು, ಇವರಿಗೆ ಮನೆ ನಿರ್ಮಿಸಲು ೪೦ ಲಕ್ಷ ರೂ., ಮನೆ ಕಳೆದುಕೊಂಡವರಿಗೆ 25ಲಕ್ಷ ರೂ. ಸರಕಾರ ಒದಗಿಸಬೇಕೆಂದು ಕ್ರಿಯಾ ಸಮಿತಿ ರೂಪೀಕರಣ ಸಭೆಯಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. …

ಬಿರುಸಿನ ಮಳೆ: ವಿವಿಧ ಹೊಳೆಗಳಲ್ಲಿ ಉಕ್ಕಿ ಹರಿಯುತ್ತಿರುವ ನೀರು

ಉಪ್ಪಳ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಉಪ್ಪಳ ಸಹಿತ ವಿವಿಧ ಹೊಳೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಉಪ್ಪಳ, ಶಿರಿಯ, ಕುಬಣೂರು, ಸುವರ್ಣಗಿರಿ ಹೊಳೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಸಮೀಪದ ತೋಟಗಳಿಗೆ ನುಗ್ಗಿದೆ. ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರದ ಒಳಗಡೆ ನೀರು ತುಂಬಿ ಜಲಾವೃತಗೊಂಡಿದೆ. ಶಾಂತಿಗುರಿ- ಕುಬಣೂರು ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರ ಮೊಟಕಾಗುವ ಭೀತಿ ಕಂಡು ಬಂದಿದೆ. ಕುಬಣೂರು ಹೊಳೆಯ ದೇರ್ಜಾಲ್ ಸೇತುವೆ ಬಳಿ ಭಾರೀ ಪ್ರಮಾಣದಲ್ಲಿ ಮರದ ದಿಮ್ಮಿಗಳು, ತ್ಯಾಜ್ಯಗಳು …

ಕಡಲ್ಕೊರೆತ ತೀವ್ರಗೊಂಡ ಕೊಪಾಡಿ, ಶಾರದಾನಗರ ಕಡಪ್ಪುರಗಳಿಗೆ ಜಿಲ್ಲಾಧಿಕಾರಿ ತಂಡ ಭೇಟಿ

ಕಾಸರಗೋಡು: ಕಡಲ್ಕೊರೆತದಿಂದ ತೀವ್ರ ಸಂದಿಗ್ಧತೆಯಲ್ಲಿರುವ ಕುಂಬಳೆ ಕೊಪಾಡಿ ಕಡಪ್ಪುರಂ, ಉಪ್ಪಳ ಶಾರದಾ ನಗರ ಕಡಪ್ಪುರಂಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳೀ ಯರೊಂದಿಗೆ ಮಾತನಾಡಿದ ಜಿಲ್ಲಾಧಿ ಕಾರಿ, ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಕೊಪಾಡಿ ಕಡಪ್ಪುರದಲ್ಲಿ ೩ ಕುಟುಂ ಬಗಳನ್ನು ಈ ಮೊದಲೇ ಸ್ಥಳಾಂತರಿ ಸಲಾಗಿದೆ. ಪುನರ್ಗೇಹಂ ಯೋಜನೆ ಪ್ರಕಾರ ಸ್ಥಳೀಯ ನಿವಾಸಿಗಳಿಗೆ ಪುನರ್ವಸತಿ ಕ್ರಮಗಳನ್ನು ಶೀಘ್ರವೇ ನಡೆಸಲಾಗುವುದೆಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದರು. ಕಡಲ್ಕೊರೆತದ ಹಿನ್ನೆಲೆಯಲ್ಲಿ ಇಲ್ಲಿಂದ ಸ್ಥಳಾಂತರಗೊಳ್ಳಲು ಒಪ್ಪದಿದ್ದ ಕುಟುಂಬಗಳು ಕೂಡಾ …