ಕರ್ಕಾಟಕ ಅಮವಾಸ್ಯೆ: ಪಿತೃತರ್ಪಣಕ್ಕೆ ಕ್ಷೇತ್ರಗಳಲ್ಲಿ ಸಿದ್ಧತೆ

ಕಾಸರಗೋಡು:  ಕರ್ಕಾಟಕ ಅಮವಾಸ್ಯೆ ಹಿನ್ನೆಲೆಯಲ್ಲಿ ಪಿತೃತರ್ಪಣ ನಡೆಸುವುದಕ್ಕೆ ತೀರ್ಥ ಕ್ಷೇತ್ರಗಳು ಸಿದ್ಧತೆನಡೆಸುತ್ತಿವೆ. ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ತೃಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ಕ್ಷೇತ್ರದಲ್ಲಿ ಬಲಿತರ್ಪಣ 12ರಂದು ಬೆಳಿಗ್ಗೆ 5.30ರಿಂದ ಆರಂಭಗೊಳ್ಳಲಿದೆ. ಅರ್ಚಕ ನವೀನ್‌ಚಂದ್ರ ಕಾಯರ್‌ತ್ತಾಯ, ಪುರೋಹಿತ ರಾಜೇಂದ್ರ ಅರಳಿತ್ತಾಯ ಎಂಬಿವರು ನೇತೃತ್ವ ನೀಡುವರು. ೨೦ರಷ್ಟು ವೈದಿಕರು ಇಲ್ಲಿ ಬಲಿತರ್ಪಣ ನಡೆಸಿಕೊಡುವರು. ಭಕ್ತರಿಗೆ ಕುಡಿಯುವ ನೀರು, ಔಪಹಾರ, ಪೊಲೀಸ್, ಹೆಲ್ತ್ ವಿಭಾಗಗಳ ಸೇವೆ, ಸಾರಿಗೆ ಸೌಕರ್ಯ ಎಂಬಿವುಗಳನ್ನು ಏರ್ಪಡಿಸಲಾಗಿದೆ. ತೃಕ್ಕನ್ನಾಡ್ ಹೊರತಾಗಿ ಚಟ್ಟಂಚಾಲ್ ಶ್ರೀ ಮಹಿಷ ಮರ್ದಿನಿ ಕ್ಷೇತ್ರ ತ್ರಿವೇಣಿ …

ಸರಕಾರ ಹಾಗೂ ಆರೋಗ್ಯ ಸಚಿವ ಬದಲಾವಣೆಯಾಗುತ್ತಿದೆ,ಆದರೆ ಜಿಲ್ಲೆಯ ಆರೋಗ್ಯ ಕೇಂದ್ರಗಳು ಯಥಾಸ್ಥಿತಿ

ಕುಂಬಳೆ: ಸರಕಾರ, ಆರೋಗ್ಯಸಚಿವ ಬದಲಾವಣೆಯಾಗುವುದಲ್ಲದೆ ಜಿಲ್ಲೆಯ ಆರೋಗ್ಯ ಕೇಂದ್ರಗಳಿಗೆ ಯಾವುದೇ ಬದಲಾವಣೆ ಉಂಟಾಗುತ್ತಿಲ್ಲವೆಂದು ಸ್ಥಳೀಯರು ದೂರುತ್ತಾರೆ. ಜಿಲ್ಲೆಯ ಹೆಚ್ಚಿನ ಆರೋಗ್ಯ ಕೇಂದ್ರಗಳು ಕೂಡಾ ವೆಂಟಿಲೇಟರ್, ಐಸಿಯುವಿನಲ್ಲಾಗಿದೆ ಎಂದು ಇವರು ಅಭಿಪ್ರಾಯಪಡುತ್ತಾರೆ. ಜ್ವರ ತಗಲಿ ಆಸ್ಪತ್ರೆಗೆ ತಲುಪುವ ರೋಗಿಗಳನ್ನು ತಪಾಸಣೆ ನಡೆಸಲು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಡಾಕ್ಟರ್‌ಗಳಿಲ್ಲ. ಜಿಲ್ಲೆಯ ಹೆಚ್ಚಿನ ಆರೋಗ್ಯ ಕೇಂದ್ರಗಳಲ್ಲೂ ಡಾಕ್ಟರ್‌ಗಳ ಕುರ್ಚಿ ಖಾಲಿಯಾಗಿವೆ. ಇದನ್ನು ಭರ್ತಿಗೊಳಿಸಲು ಯಾವುದೇ ಕ್ರಮವೂ ಉಂಟಾಗುತ್ತಿಲ್ಲ. ಕುಂಬಳೆಯ ತೀರ ವಲಯದ ಸರಕಾರದ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ ಕಳೆದೆರಡು ದಶಕಗಳಿಂದ …

ಶತಾಯುಷಿ ನಿಧನ

ಉಪ್ಪಳ :ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯ ಕರ್ತರಾಗಿದ್ದ ಮಂಗಲ್ಪಾಡಿಯ ದಿ| ರಮಾನಾಥ ಶೆಣೈ ಅವರ ಪತ್ನಿ ಶತಾಯುಷಿ ಸೀತಾ ಭಾಯಿ (100) ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ರಾದರು. ಮೃತರು ಮಕ್ಕಳಾದ ಪ್ರಭಾಕರ ಶೆಣೈ, ರಾಜಾರಾಮ ಶೆಣೈ, ಸುದರ್ಶನ ಶೆಣೈ, ಶಿವರಾಯ ಶೆಣೈ, ಗುರುದಾಸ ಶೆಣೈ , ಭಾರತಿ ಶೆಣೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರ ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ …