ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿ ಬಂಧನ

ಕಾಸರಗೋಡು:   ಯುವಮೋರ್ಛಾ ದ.ಕ. ಜಿಲ್ಲಾ ಕಾರ್ಯಕಾರಿ ಸದಸ್ಯ     ಪ್ರವೀಣ್ ನೆಟ್ಟಾರು ಅವರನ್ನು   ಕೊಲೆಗೈದ ಪ್ರಕರಣ ದಲ್ಲಿ ತಲೆಮರೆಸಿಕೊಂಡ ಆರೋಪಿ ಉಮ್ಮರ್ ಫಾರೂಕ್ ಎಂಬಾತ ಸೆರೆಗೀಡಾಗಿದ್ದಾನೆ. ಎನ್‌ಐಎ ಈತನನ್ನು ಕೊಚ್ಚಿಯಿಂದ ಬಂಧಿಸಿದೆ.  ಈತನ ಕುರಿತು ಮಾಹಿತಿ ನೀಡುವವರಿಗೆ ಎನ್‌ಐಎ  4 ಲಕ್ಷ ರೂಪಾಯಿ  ಪಾರಿತೋಷಕ ಘೋಷಿ ಸಿತ್ತು.  2022 ಜುಲೈ 26ರಂದು ಪ್ರವೀಣ್ ನೆಟ್ಟಾರುರನ್ನು ತಂಡವೊಂ ದು ಮಾರಕಾಯುಧ ಗಳಿಂದ ಆಕ್ರ ಮಿಸಿ ಕೊಲೆಗೈದಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಹಲವು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಮಾದಕದ್ರವ್ಯ ವ್ಯವಹಾರಕ್ಕೆ ನಕಲಿ ದಾಖಲುಪತ್ರ ತಯಾರಿ: ಕಾಸರಗೋಡು ನಿವಾಸಿ ಸಹಿತ ಇಬ್ಬರ ಬಂಧನ; ನಕಲಿ ದಾಖಲುಪತ್ರಗಳನ್ನು ತಯಾರಿಸುತ್ತಿರುವುದು ಬೆಂಗಳೂರಿನಲ್ಲಿ

ಕಾಸರಗೋಡು: ಮಾದಕದ್ರವ್ಯ ಮಾರಾಟ ಹಾಗೂ ಇತರ ವಂಚನೆಗಳಿಗಾಗಿ ಬ್ಯಾಂಕ್ ಖಾತೆಗಳನ್ನು ತೆರೆಯಲು ನಕಲಿ ದಾಖಲುಪತ್ರಗಳನ್ನು ತಯಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಸೇರಿ ಇಬ್ಬರನ್ನು ತಲಶ್ಶೇರಿ ಎಎಸ್‌ಪಿ ಡಾ. ಎಂ ನಂದಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಕಾಸರಗೋಡು ಮೊಗ್ರಾಲ್ ಕೂಟ್ಟಾಯಂ ವಳಪ್ಪಿಲ್ ಅಬ್ದುಲ್ ರಹ್ಮಾನ್ (36) ಮತ್ತು ಎರ್ನಾಕುಳಂ ಪಳ್ಳುತುರುತ್ತಿಯ ಕೆ.ಎಂ. ರಿಶಾದ್ (41) ಬಂಧಿತ ಆರೋಪಿಗ ಳಾಗಿದ್ದಾರೆ. ಬೆಂಗಳೂರಿನಿಂದ ಈ  ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ನೂರರಷ್ಟು ಆಧಾರ್ ಕಾರ್ಡ್‌ಗಳು,  ಪಾನ್‌ಕಾರ್ಡ್‌ಗಳು, ಹಲವು ನಕಲಿ ಸರ್ಟಿಫಿಕೇಟ್‌ಗಳು, …

ಹೃದಯಾಘಾತದಿಂದ ಅರ್ಚಕ ನಿಧನ

ಮುಳ್ಳೇರಿಯ: ಎದೆನೋವು ಕಾಣಿಸಿಕೊಂಡು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ  ಅರ್ಚಕ ಹೃದಯಾಘಾತದಿಂದ ನಿಧನಹೊಂದಿದರು.  ಮೂಲತಃ ಅನಂತಪುರ ನಿವಾಸಿಯೂ, ಪ್ರಸ್ತುತ ಕುಂಟಾರು  ಬಳಿಯ ಮಣಿಯೂರಿ ನಲ್ಲಿ ವಾಸಿಸುತ್ತಿದ್ದ ಮುರಳೀಧರ ಪೆರ್ಲಾಯ  (46) ಮೃತಪಟ್ಟ ವ್ಯಕ್ತಿ.  ಇವರಿಗೆ ಮೊನ್ನೆ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದ ರಿಂದ ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆನಿನ್ನೆ ಹೃದಯಾಘಾತ ವುಂಟಾಗಿ ದೆಯೆಂದು ತಿಳಿದುಬಂದಿದೆ.  ಮುರಳೀಧರ ಪೆರ್ಲಾಯ  ಅವರು ಕಳೆದ ೨೫ ವರ್ಷಗಳಿಂದ ಕುಂಟಾರು ದೇವಸ್ಥಾನ ಹಾಗೂ ತಾಂತ್ರಿಕ ಸದನದಲ್ಲಿ  ವೈದಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. …

ಸಹಪಾಠಿಗಳೊಂದಿಗೆ ಆಟವಾಡುತ್ತಿದ್ದ ಮಗುವಿನ ಕಣ್ಣಿಗೆ ಪೆನ್ಸಿಲ್ ಚುಚ್ಚಿ ಗಂಭೀರ

ಕುಂಬಳೆ:  ಶಾಲೆಯಲ್ಲಿ ಸಹ ಪಾಠಿಗಳೊಂದಿಗೆ ಆಟವಾಡುತ್ತಿದ್ದ ಮಗುವಿನ ಕಣ್ಣಿಗೆ ಪೆನ್ಸಿಲ್ ಚುಚ್ಚಿ ಗಂಭೀರ ಗಾಯಗೊಂಡ ಘಟನೆ ನಡೆ ದಿದೆ. ಈಗಾಗಲೇ ಎರಡು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆದರೆ ದೃಷ್ಟಿ ಪೂರ್ವಸ್ಥಿತಿಗೆ ತಲುಪದ ಹಿನ್ನೆಲೆ ಯಲ್ಲಿ ತಜ್ಞ ಚಿಕಿತ್ಸೆಗಾಗಿ ಮಗುವನ್ನು ಕೊಯಂಬತ್ತೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಉಪ್ಪಳದ ಎಎಲ್‌ಪಿ ಶಾಲೆಯೊಂದರ  ಎಲ್‌ಕೆಜಿ ವಿದ್ಯಾರ್ಥಿಯೂ ಉಪ್ಪಳ ಕೈಕಂಬ ನಿವಾಸಿಯಾದ  ಮೂರರ ಹರೆಯದ ಮಗುವಿನ ಕಣ್ಣಿಗೆ ಗಾಯವಾಗಿದೆ.   ಜುಲೈ ೨೯ರಂದು ಮಗುವಿನ  ಕಣ್ಣಿಗೆ ಪೆನ್ಸಿಲ್ ಚುಚ್ಚಿ ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಮಕ್ಕಳು ಆಟವಾಡುತ್ತಿದ್ದಂತೆ  ಈ ಮಗುವಿನ …

ಸಂಚರಿಸುತ್ತಿದ್ದ ಆಟೋ ರಿಕ್ಷಾ ಚಾಲಕನ ದೇಹಕ್ಕೆ ಹತ್ತಿದ ಹಾವು

ಕುಂಬಳೆ: ಸಂಚರಿಸುತ್ತಿದ್ದ ಆಟೋ ರಿಕ್ಷಾದೊಳಗೆ ಹಾವೊಂದು ಚಾಲಕನ ದೇಹಕ್ಕೆ ಹತ್ತಿದ್ದು ಕೂಡಲೇ ಚಾಲಕ ರಿಕ್ಷಾವನ್ನು ನಿಲ್ಲಿಸಿ  ಕೆಳಗಿಳಿದುದರಿಂದ ಅಪಾಯದಿಂದ ಪಾರಾಗಿದ್ದಾರೆ. ಅನಂತರ ಹಾವು ಹಿಡಿಯುವವರು ತಲುಪಿ ಹಾವನ್ನು   ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟಿದ್ದಾರೆ. ನಿನ್ನೆ ಬೆಳಿಗ್ಗೆ  ಚೇವಾರ್‌ನಲ್ಲಿ ಈ ಘಟನೆ ನಡೆದಿದೆ. ಪೈವಳಿಕೆ ಚೇವಾರಿ ನಲ್ಲಿ ಆಟೋ ರಿಕ್ಷಾ ಬಾಡಿಗೆ ನಡೆಸುವ ಪಿಯುಸ್ ಡಿ’ಸೋಜಾ ನಿನ್ನೆ ಬೆಳಿಗ್ಗೆ ಇಬ್ಬರು ಪ್ರಯಾಣಿಕರನ್ನು ಸುಬ್ಬಯ್ಯಕಟ್ಟೆಗೆ ಕರೆದೊಯ್ಯುತ್ತಿದ್ದರು. ಆಟೋ ರಿಕ್ಷಾ ಸಂಚರಿಸುತ್ತಿದ್ದಂತೆ ಪಿಯುಸ್ ಡಿ’ಸೋಜಾರ ಕೈಗೆ  ಯಾವುದೋ ಜೀವಿ ಹತ್ತಿದ ಅನುಭವವುಂ ಟಾಯಿತು. …

ವಿದ್ಯುತ್ ಬೆಳಕಿಲ್ಲದ ಮನೆಗೆ ಕೊನೆಗೂ ವಿದ್ಯುತ್ ಸಂಪರ್ಕ: ಕುಟುಂಬದ ಸಂತಸದಲ್ಲಿ ಭಾಗಿಯಾದ ಬಿಜೆಪಿ ನೇತಾರರು, ಸ್ಥಳೀಯರು

ಕುಂಬಳೆ: ವಿದ್ಯುತ್ ದೀಪಗಳು ತಮ್ಮ ಮನೆಯಲ್ಲೂ ಬೆಳಗತೊಡಗುವು ದರೊಂದಿಗೆ ಬಡ ಕುಟುಂಬವೊಂದು ಹಲವು ವರ್ಷಗಳಿಂದ ಬಯಸುತ್ತಿದ್ದ ಆಗ್ರಹ ಕೊನೆಗೂ ಈಡೇರಿದೆ.  ಕುಂಬಳೆ ಕುಂಟಂಗೇರಡ್ಕ ಶಾಂತಿನ ಗರದ ಎಸ್‌ಸಿ ಉನ್ನತಿಯ ಅಭಿಮಾನ್ ಎಂಬವರ ಮನೆಗೆ ಕೊನೆಗೂ ವಿದ್ಯುತ್ ಸಂಪರ್ಕ ಲಭಿಸಿದ್ದು, ಇದು ಇವರ ಕುಟುಂಬಕ್ಕೆ  ಅತೀ ಸಂತೋಷದ ವಿಷಯವಾಗಿದೆ. ಅಭಿಮಾನ್‌ರ ಮಕ್ಕಳೂ ವಿದ್ಯಾರ್ಥಿಗಳಾದ ಕುಮಾರ, ಅಜಯ್ ಕುಮಾರ್, ಪಂಚಮಿ ಎಂಬಿವರು ದೀಪದ ಬೆಳಕಿನಲ್ಲೇ  ಓದಬೇಕಾದ ಸ್ಥಿತಿ ಇದುವರೆಗೆ ಉಂಟಾಗಿತ್ತು. ಮಾತ್ರವಲ್ಲದೆ ಮನೆಯಲ್ಲೂ ಬೆಳಕಿಗಾಗಿ ಚಿಮಿಣಿ ದೀಪ ಅಥವಾ ಮೇಣದ …

ಬದಿಯಡ್ಕ ಪಂ. ಕುಟುಂಬಶ್ರೀ ‘ಆಷಾಡ ಗಂಜಿ’ ಉದ್ಘಾಟನೆ

ಬದಿಯಡ್ಕ: ಪಂಚಾಯತ್ ಕುಟುಂಬಶ್ರೀ ಮಾದರಿ ಸಿಡಿಎಸ್‌ನ ನೇತೃತ್ವದಲ್ಲಿ ಸಿಡಿಎಸ್ ಹಾಲ್‌ನಲ್ಲಿ ಜರಗಿದ `ಆಷಾಡ ಗಂಜಿ’ ಕಾರ್ಯ ಕ್ರಮವನ್ನು ಪಂಚಾಯತ್ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು. ಕುಟುಂಬಶ್ರೀ ಯವರ ಈ ರೀತಿಯ ಸಮಾಜಮುಖಿ ಹಾಗೂ ಸಂಸ್ಕೃತಿಯುಕ್ತ ಕಾರ್ಯಕ್ರಮ ಗಳು ಅಭಿನಂದನಾರ್ಹ ಎಂದರು. ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಂಚಾಯತ್ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಜಿಲ್ಲಾ ಪಂ.ಸದಸ್ಯ ರಾಮಪ್ಪ ಮಂ ಜೇಶ್ವರ, ಪಂಚಾಯತ್ ಸದಸ್ಯರಾದ …

ಕಾಸರಗೋಡು ರೈಲು ನಿಲ್ದಾಣದ ಹಳೆಯ ಕಾಲ್ನಡೆ  ಮೇಲ್ಸೇತುವೆಗೆ ಬೀಗ: ಪ್ರಯಾಣಿಕರಿಗೆ ಸಂಕಷ್ಟ

ಕಾಸರಗೋಡು: ರೈಲ್ವೇ ನಿಲ್ದಾಣದ ಹಳೆಯ ಕಾಲ್ನಡೆ ಮೇಲ್ಸೇತುವೆ ಮುಚ್ಚಲಾಗಿದೆ. ಇದರಿಂದಾಗಿ ಪ್ರಯಾಣಿಕರು ಸಂಕ್ಕಷ್ಟಕ್ಕೀಡಾಗಿದ್ದಾರೆ. ಇನ್ನು ರೈಲ್ವೇ ನಿಲ್ದಾಣಕ್ಕೆ ತಲುಪುವ ಪ್ರಯಾಣಿಕರು ತೆಂಕಣ ಭಾಗದಲ್ಲಿರುವ ಮೇಲ್ತೇಸುವೆಯ ಮೂಲಕ ಸಂಚರಿಸಿ ೧ನೇ ನಂಬ್ರದ ಪ್ಲಾಟ್ ಫಾರ್ಮ್‌ಗೆ ಹಾಗೂ ಅಲ್ಲಿಂದ ವಾಪಸ್ ನಡೆದುಹೋಗಬೇಕಾಗಿದೆ. ಈ ಕಾಲ್ನಡೆ ಮೇಲ್ಸೇತುವೆಯ ಲಿಫ್ಟ್ ಹಾನಿಯಾದ ಹಿನ್ನೆಲೆಯಲ್ಲಿ ವೃದ್ದರು ಹಾಗೂ ಭಿನ್ನ ಸಾಮರ್ಧ್ಯದವರು, ರೋಗಿಗಳು ಬಹಳ ತೊಂದರೆ ಅನುಭವಿಸಿದರು. ಹೆಚ್ಚಿನ ಸಮಯಗಳಲ್ಲಿ ಲಿಫ್ಟ್ ಹಾನಿಯಾಗುತ್ತಿದೆ ಎಂದು ಪ್ರಯಾಣಿಕರು ತಿಳಿಸುತ್ತಾರೆ. ಒಂದು ವಾರದ ಹಿಂದೆ ಪಾಲಕ್ಕಾಡ್ ಡಿವಿಶನ್‌ನ ಡಿಆರ್‌ಎಂ …

ಯೋಜನಾ ಮೊತ್ತ ಕಡಿತ: ಮೀಂಜ ಪಂ.ಗೆ ಎಲ್‌ಡಿಎಫ್ ಮಾರ್ಚ್

ಮಂಜೇಶ್ವರ: ಸ್ಥಳೀಯಾಡಳಿತ ಸಂಸ್ಥೆಗಳ ಯೋಜನಾ ನಿಧಿ ಕಡಿತಗೊಳಿಸಿದ, ಸ್ತ್ರೀ ಸುರಕ್ಷಾ ಪಿಂಚಣಿ ರದ್ದುಗೊಳಿಸಿದ, ಲೈಫ್ ಭವನ ಯೋಜನೆಯನ್ನು ಬುಡಮೇಲುಗೊಳಿಸಿದ, ಉದ್ಯೋಗ ಖಾತರಿ ಯೋಜನೆಯ ಮೊತ್ತ ಕಡಿತಗೊಳಿಸಿದ ಯುಡಿಎಫ್ ಸರಕಾರದ ಜನದ್ರೋಹ ನೀತಿಗೆದುರಾಗಿ ಎಡರಂಗದ ನೇತೃತ್ವದಲ್ಲಿ ಮೀಂಜ ಪಂಚಾಯತ್ ಕಚೇರಿ ಮಾರ್ಚ್ ನಡೆಸಲಾಯಿತು. ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಕಮಲಾಕ್ಷ ದೇರಂಬಳ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಏರಿಯಾ ಸಮಿತಿ ಸದಸ್ಯ ಹಾರಿಸ್ ಪೈವಳಿಕೆ, ಸಿಪಿಐ ನೇತಾರ ಮುಸ್ತಫಾ ಕಡಂಬಾರ್ ಮಾತನಾಡಿದರು. ಲೋಕೇಶ ಚಿನಾಲ, ರಾಮಚಂದ್ರ …

ಯೋಗದಲ್ಲಿ ಅನ್ಶಿಕಗೆ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್

ಕಾಸರಗೋಡು: ಮೆಡೋನ್ಹಾ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅನ್ಶಿಕ ಎಂ. ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಯೋಗದಲ್ಲಿ ಅತ್ಯಂತ ಕ್ಲಿಷ್ಟಕರ ಆಸನವಾದ ಪತಂಗಾಸನವನ್ನು ಒಂದು ನಿಮಿಷ 35 ಸೆಕೆಂಡ್ ಕೈಗೊಂಡು,  ಕೌಂಟಿನ್ಯಾಸನದಲ್ಲಿ ಎರಡು ನಿಮಿಷ ಯೋಗ ಕೈಗೊಂಡು ಈಕೆ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ಪಡೆದುಕೊಂಡಿದ್ದಾಳೆ. ಕರಂದಕ್ಕಾಡ್ ಯೋಗ ಫಾರ್ ಕಿಡ್ಸ್‌ನಲ್ಲಿ ಯೋಗ ತರಬೇತಿ ಪಡೆಯುತ್ತಿರುವ ಈಕೆಗೆ ಅಧ್ಯಾಪಿಕೆ ತೇಜ ಕುಮಾರಿ ಯೋಗ ತರಬೇತಿ ನೀಡುತ್ತಿದ್ದಾರೆ. ಕುತ್ತಿಕ್ಕೋಲ್ ವಳವ್‌ನ ಬಾಲಕೃಷ್ಣನ್- ಪ್ರದೀಪ ದಂಪತಿ ಪುತ್ರಿಯಾಗಿದ್ದಾಳೆ.