ವಿ.ಡಿ. ಸತೀಶನ್‌ರ ಆಡಳಿತ ಬ್ರಿಟೀಷರನ್ನು  ನೆನಪಿಸುವ ರೀತಿಯಲ್ಲಿದೆ-ಪಿ.ಕೆ. ಕೃಷ್ಣದಾಸ್

ಕುಂಬಳೆ: ವಂದೇ ಮಾತರಂನಂತಹ ರಾಷ್ಟ್ರೀಯ ಭಾವೈಕ್ಯತಾ ಗೀತೆಯನ್ನು, ಅದನ್ನು ಆಲಾಪಿಸುವುದಕ್ಕೆ ನಿಷೇಧ ಏರ್ಪಡಿಸಿದ ರಾಜ್ಯದ ಮುಖ್ಯಮಂತ್ರಿ ವಿ.ಡಿ. ಸತೀಶನ್‌ರ ಆಡಳಿತ ಭಾರತದ ವಿಭಜನೆ ಕಾಲದಲ್ಲಿನ ಬ್ರಿಟೀಷ್ ಆಡಳಿತವನ್ನು ನೆನಪಿಸುವಂತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ನುಡಿದರು. ರಾಷ್ಟ್ರ ಸ್ವಾಭಿಮಾನ್ ಸಮಿತಿಯ ಆಶ್ರಯದಲ್ಲಿ ಕುಂಬಳೆ ಪೇಟೆಯಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ತಿರಂಗ ಯಾತ್ರ ಉದ್ಘಾಟಿಸಿ ಅವರು ಮಾತನಾಡಿದರು. ಜವಹಾರ್‌ಲಾಲ್ ನೆಹರು, ಪಿ.ಸಿ. ಜೋಶಿ, ಮುಹಮ್ಮದಲಿ ಜಿನ್ನಾ ಭಾರತದ ವಿಭಜನೆಗೆ ನೇತೃತ್ವ ನೀಡಿದವರಾಗಿದ್ದಾರೆ. ೮೦ …

ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ, ನಾಟಿವೈದ್ಯ ನಿಧನ

ಪೆರ್ಲ: ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸದಸ್ಯ, ನಾಟಿ ವೈದ್ಯ ಗೋಪಾಲಕೃಷ್ಣ ಭಟ್ ನೀಲಗಿರಿ (88) ನಿಧನ ಹೊಂದಿದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಸರಸ್ವತಿ, ಮಕ್ಕಳಾದ ವಿಜಯಲಕ್ಷ್ಮಿ ಬದಿಯಡ್ಕ, ಡಾ. ಶ್ಯಾಮಸುಂದರ ಬೇಳ, ರಾಜಶೇಖರ ಭಟ್, ಸೊಸೆಯಂದಿರಾದ ಸಾವಿತ್ರಿ, ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.