ಸ್ನೇಹಿತರೊಂದಿಗೆ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು

ಉಪ್ಪಳ: ಸ್ನೇಹಿತರೊಂದಿಗೆ  ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೆರಿಂಗಡಿಯ ಅಲಿ ಹಾಗೂ ಸುಲೈಖ ದಂಪತಿಯ ಪುತ್ರ ಅಬೂ ಬಕರ್ ಅಸಾನ್ (13) ಮೃತಪಟ್ಟ ದುರ್ದೈವಿ. ಈತ ಮಂಗಲ್ಪಾಡಿ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ನಿನ್ನೆ ಸಂಜೆ ೫ ಗಂಟೆಗೆ ಘಟನೆ ಸಂಭವಿಸಿದೆ. ಪೆರಿಂಗಡಿ ಮಸೀದಿಯ ಕೆರೆಯಲ್ಲಿ  ಸ್ನೇಹಿತರೊಂ ದಿಗೆ ಸ್ನಾನ ಮಾಡುತ್ತಿದ್ದಾಗ ಅಬೂಬಕರ್ ಅಸಾನ್ ನೀರಿನಲ್ಲಿ ಮುಳುಗಿದ್ದಾನೆನ್ನಲಾ ಗಿದೆ. ಜತೆಗಿದ್ದವರು ಸ್ನಾನ ಮಾಡಿ ಮನೆಗೆ ತೆರಳಲು ಸಿದ್ಧತೆಯಲ್ಲಿದ್ದಾಗ …

ಚಾಲಕನನ್ನು ಹೊರಗಿಳಿಸಿ ಕಾರು ಅಪಹರಣ

ಕುಂಬಳೆ: ಕಾರು ತಡೆದು ನಿಲ್ಲಿಸಿ ಚಾಲಕನನ್ನು ಹೊರಗಿಳಿಸಿದ ಬಳಿಕ ಕಾರನ್ನು ಅಪಹರಣಗೈದ ಬಗ್ಗೆ ದೂರಲಾಗಿದೆ. ಕುಂಬಳೆ ಪೂಕಟ್ಟೆ ನಿವಾಸಿ ಮೊಹಮ್ಮದ್ ಸಯ್ಯೀದ್ ಮುಸಮ್ಮಿಲ್ ಎಂಬವರು ಈ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ದೂರುಗಾರ ಚಲಾಯಿಸುತ್ತಿದ್ದ ಕಾರನ್ನು ಖಾದರ್ ಎಂಬ ವ್ಯಕ್ತಿ ಹಿಂಬಾಲಿಸಿದ್ದಾನೆ. ಬಳಿಕ ಸೀತಾಂಗೋಳಿಯಲ್ಲಿ ಕಾರನ್ನು ತಡೆದು ನಿಲ್ಲಿಸಿ ಚಾಲಕನನ್ನು ಹೊರಗಿಳಿಸಿದ ಬಳಿಕ ವ್ಯಕ್ತಿ ಕಾರನ್ನು ಅಪಹರಣಗೈದಿರುವುದಾಗಿ ದೂರಲಾಗಿದೆ. ಟಾಟಾ ಟಿಯಾಗೊ ಇಲೆಕ್ಟ್ರಿಕ್ ಕಾರನ್ನು ಅಪಹರಣಗೈದಿದ್ದು,  ಚಟ್ಟಂಚಾಲ್‌ಗೆ ತಲುಪಿದಾಗ ಕಾರಿನ …

ಎಂಡಿಎಂಎ ಸಹಿತ ಸೆರೆಗೀಡಾದ ಯೂತ್ ಕಾಂಗ್ರೆಸ್ ಕಾರ್ಯಕರ್ತ ಪಕ್ಷದಿಂದ ಹೊರಕ್ಕೆ

ಕಾಸರಗೋಡು: ಕಾಲಿಕ್ಕಡವಿನಲ್ಲಿ ಎಂಡಿಎಂಎ ಸಹಿತ ಸೆರೆಗೀಡಾದ ಯೂತ್ ಕಾಂಗ್ರೆಸ್ ಕಾರ್ಯಕರ್ತನನ್ನು ಪಕ್ಷದಿಂದ ಹೊರಹಾಕಲಾಗಿದೆ. ಪೆರುಂಬಾವೂರ್ ವಲಿಯಕುಳಂ ಯೂನಿಟ್ ಸದಸ್ಯ ಮುಹಮ್ಮದ್ ಹುಸೈನ್   ಈ ತಿಂಗಳ ೯ರಂದು ಎಂಡಿಎಂಎ ಸಹಿತ ಸೆರೆಗೀಡಾಗಿ ದ್ದನು.  ಅದೇ ದಿನದಂದು ಈತ ನನ್ನು ಪಕ್ಷದ ಪ್ರಾಥಮಿಕ ಸದಸ್ಯ ತ್ವದಿಂದ ಹೊರ ಹಾಕಲಾಗಿ ದೆಯೆಂದು ಯೂತ್ ಕಾಂಗ್ರೆಸ್ ಎರ್ನಾಕುಳಂ ಜಿಲ್ಲಾಧ್ಯಕ್ಷ ಸಿಜೋ ಜೋಸೆಫ್ ತಿಳಿಸಿದ್ದಾರೆ. 139.29 ಗ್ರಾಂ ಎಂಡಿಎಂಎ ಸಹಿತ ಪೆರುಂಬಾವೂರು ಅರಕ್ಕಪ್ಪಡಿ ನಿವಾಸಿಗಳಾದ ಪಿ.ಎ. ಅಬ್ದುಲ್ ಸಲಾಂ (27), ಕೆ.ಎಚ್. ಮುಹಮ್ಮದ್ ಹುಸೈನ್ …

ನಕಲಿ ಚಿನ್ನ ಅಡವಿರಿಸಿ 5.75 ಲಕ್ಷ ರೂ. ಸಾಲ ಪಡೆದು ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು: ಸಹಕಾರಿ ಸೊಸೈಟಿಯಲ್ಲಿ ನಕಲಿ ಚಿನ್ನದೊಡವೆ ಗಳನ್ನು ಅಡವಿರಿಸಿ 5.75 ಲಕ್ಷ ರೂ.ಸಾಲ ಪಡೆದು ವಂಚನೆಗೈದ ದೂರಿನಂತೆ ಇಬ್ಬರ ವಿರುದ್ಧ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಂದ್ರಗಿರಿ ಕೀಯೂರು ಹೌಸ್‌ನ ತಾಜುದ್ದೀನ್ (47)ಮತ್ತು ಚಾತಂಗೈ ಮಣಿಯರದ ಕೆ. ಸಂತೋಷ (39) ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಳನಾಡಿನಲ್ಲಿರುವ ಚೆಮ್ನಾಡ್ ಪಂಚಾಯತ್ ವನಿತಾ ಸರ್ವೀಸ್ ಸೊಸೈಟಿಯಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದಿರುವುದಾಗಿ ಆರೋಪಿಸಿ ಪ್ರಸ್ತುತ ಸೊಸೈಟಿಯ ಕಾರ್ಯದರ್ಶಿ ಎ. ಉಷಾ ಕುಮಾರಿ ನೀಡಿದ ದೂರಿನಂತೆ ಪೊಲೀಸರು ಈ …

ಮನೆಯೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟ: ವ್ಯಾಪಕ ನಾಶನಷ್ಟ

ಕಾಸರಗೋಡು:  ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಪೋಟ ಗೊಂಡು  ವಿವಿಧ ಸಾಮಗ್ರಿಗಳು ಉರಿದು ನಾಶಗೊಂಡ ಘಟನೆ ತೃಕರಿಪುರ ಬೀರಿಚ್ಚೇರಿ ಎಂಬಲ್ಲಿ ಸಂಭವಿಸಿದೆ.  ಸ್ಫೋಟದ ಸದ್ದು ಕೇಳಿ ಕುಟುಂಬ ಮನೆಯಿಂದ ಹೊರಗೆ ಓಡಿದುದರಿಂದ ಭಾರೀ ದುರಂತ ತಪ್ಪಿಹೋಗಿದೆ.  ನಿನ್ನೆ ಅಪರಾಹ್ನ ೩ ಗಂಟೆ ವೇಳೆ ಬೀರಿಚ್ಚಾರಿ ಕುಲೇರಿ ಎಂಬಲ್ಲಿನ ಕೆ.ಪಿ. ನಿಸಾರ್‌ರ ಮನೆಯಲ್ಲಿ ಈ ದುರ್ಘಟನೆ ಉಂಟಾಗಿದೆ. ಆಹಾರ ತಯಾರಿಸುತ್ತಿದ್ದಾಗ ಸಿಲಿಂಡರ್‌ನಿಂದ ಅನಿಲ ಸೋರಿಕೆ ಉಂಟಾಗಿದ್ದು ಅಲ್ಪ ಹೊತ್ತಿನಲ್ಲೇ ಸ್ಫೋಟ ಉಂಟಾಗಿದೆ.  ತಕ್ಷಣ ಬೆಂಕಿ ಹತ್ತಿಕೊಂಡಿತ್ತೆನ್ನಲಾಗಿದೆ.  ಈ ಹೊತ್ತಿನಲ್ಲಿ …

ಶಬರಿಮಲೆ ಯುವತಿ ಪ್ರವೇಶ: ಸುಪ್ರೀಂಕೋರ್ಟ್ ಸಂವಿಧಾನ ಪೀಠದ ತೀರ್ಪು ಅಕ್ಟೋಬರ್‌ನಲ್ಲಿ

ನವದೆಹಲಿ: ಶಬರಿಮಲೆ ದೇಗುಲಕ್ಕೆ ಯುವತಿಯರ ಪ್ರವೇಶ ಸೇರಿದಂತೆ ಧಾರ್ಮಿಕ ನಂಬುಗೆಗೆ ಅನ್ವಯಿಸಿರುವ ಇತರ ಏಳು ವಿಷಯಗಳ ಕುರಿತಾದ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್‌ನ ನವ ಸದಸ್ಯರ ಸಂವಿಧಾನ ಪೀಠ ಅಕ್ಟೋಬರ್‌ನಲ್ಲಿ ನೀಡಲಿದೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಈ ಬಗ್ಗೆ   ಪೂರ್ವ ಮಾಹಿತಿ ನೀಡಿದ್ದಾರೆ. ಬಿಹಾರಿನ ಬೋದ್‌ಗಯ ಕ್ಷೇತ್ರದ ಆಡಳಿತ ಸಮಿತಿಗೆ ಸಂಬಂಧಪಟ್ಟ ಪ್ರಕರಣದ ಅರ್ಜಿಯನ್ನು ಪರಿಶೀಲಿಸು ತ್ತಿದ್ದ ವೇಳೆ  ಈ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ ಬೋದ್‌ಗಯ ಕ್ಷೇತ್ರದ ಆಡಳಿತ ಸಮಿತಿಯ ಪ್ರಕರಣದ ವಿಚಾರಣೆಯನ್ನು ಶಬರಿಮಲೆ …

ಕನ್ನಡ ಎಲ್‌ಪಿ ಅಧ್ಯಾಪಕ ರ‍್ಯಾಂಕ್ ಲಿಸ್ಟ್‌ನಿಂದ ನೇಮಕಕ್ಕೆ ಯೂತ್ ಲೀಗ್ ಮನವಿ

ಮಂಜೇಶ್ವರ: ಎಲ್‌ಪಿ ವಿಭಾಗ ಕನ್ನಡ ಅಧ್ಯಾಪಕ ರ‍್ಯಾಂಕ್ ಲಿಸ್ಟ್‌ನಿಂದ ನೇಮಕಾತಿಗೆ ಉಂಟಾಗುತ್ತಿರುವ ವಿಳಂಬವನ್ನು ಹೊರತುಪಡಿಸಬೇಕೆಂದು ಮೀಂಜ ಪಂಚಾಯತ್ ಯೂತ್ ಲೀಗ್ ಸಚಿವ ಶಂಸುದ್ದೀನ್‌ರಿಗೆ ಮನವಿ ನೀಡಿದೆ. ಕನ್ನಡ ಎಲ್‌ಪಿ ಅಧ್ಯಾಪಕ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕೆಂದು, ಅದಕ್ಕಾಗಿ ನಿರ್ದೇಶ ನೀಡಬೇಕೆಂದು ಯೂತ್ ಲೀಗ್ ಪಂಚಾಯತ್ ಸಮಿತಿ ಅಧ್ಯಕ್ಷ ರಿಯಾಸ್ ಚಿಗುರುಪಾದೆ, ಪ್ರಧಾನ ಕಾರ್ಯದರ್ಶಿ ಜಾಸಿಮ್ ಕಡಂಬೇರಿ, ಅಶ್ರಫ್ ಮಜೀರ್ಪಳ್ಳ ಸಚಿವರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಬೆಂಗಳೂರು ಕೃಷ್ಣರಾಜಪುರದಲ್ಲಿ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ ನೂತನ ಶೋರೂಂ ಉದ್ಘಾಟನೆ

 . ಕಾಸರಗೋಡು: ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನ 25ನೇ ಶೋರೂಂ ಹಾಗೂ ಬೆಂಗಳೂರು ನಗರದ 8ನೇ ಶೋರೂಂ ಕೃಷ್ಣರಾಜಪುರದಲ್ಲಿ ನಟಿ ನಿಕ್ಕಿ ಗಲ್‌ರಾಣಿ ಉದ್ಘಾಟಿಸಿದರು. ಈ ಶೋರೂಂನಲ್ಲಿ ಚಿನ್ನ, ಡೈಮಂಡ್, ಪ್ಲಾಟಿನಂ, ಪೋಲ್ಕಿ, ಅನ್‌ಕಟ್ ಡೈಮಂಡ್, ಪ್ರೀಶ್ಯಸ್, ಬೆಳ್ಳಿ ಆಭರಣ ಗಳು ಎಂಬಿವುಗಳ ವಿಪುಲ ಸಂಗ್ರಹ ಸಿದ್ಧಪಡಿಸಲಾಗಿದೆ ಎಂದು ಮೆನೇಜಿಂಗ್ ಡೈರೆಕ್ಟರ್ ಅಬ್ದುಲ್ ರೌಫ್ ತಿಳಿಸಿದ್ದಾರೆ. ಗ್ರಾಹಕರ ವಿಶ್ವಾಸ ಕಂಪೆನಿಯ ಅತ್ಯಂತ ದೊಡ್ಡ ಶಕ್ತಿಯಾಗಿದ್ದು, ಪ್ರತೀ ಆಭರ ಣಕ್ಕೂ ಅಂತಾರಾಷ್ಟ್ರೀಯ ಗುಣಮಟ್ಟ ವಿರುವ ಸರ್ಟಿಫಿಕೇಶನ್ ಖಚಿತಪಡಿಸ ಲಾಗುತ್ತಿದೆ …

ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರ ನವರಾತ್ರಿ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರದಲ್ಲಿ ಶ್ರೀ ನಿತ್ಯಾನಂದ ಸ್ವಾಮಿಯ 66ನೇ ಸಮಾಧಿ ವಾರ್ಷಿಕ, ಗುರುಪೂಜೆ ಇತ್ತೀಚೆಗೆ ನಡೆದಿದ್ದು, ಈ ವೇಳೆ ಈ ವರ್ಷದ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಜರಗಿತು. ಕ್ಷೇತ್ರದ ಅಧ್ಯಕ್ಷ ಸಿ.ವಿ. ಪೊದು ವಾಳ್ ಅಧ್ಯಕ್ಷತೆ ವಹಿಸಿದ್ದು, ಮಾಜಿ ಅಧ್ಯಕ್ಷ ಯು.ಎಸ್. ಬಾಲನ್ ಉದ್ಘಾಟಿಸಿದರು. ಡಾ. ಭರತನ್, ಕೆ.ಎನ್. ವೇಣುಗೋಪಾಲ್, ಯಶೋಧ ಚಂದ್ರನ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆ. ಸುಜಿತ್ ಕುಮಾರ್ ಸ್ವಾಗತಿಸಿ, ಕೋಶಾಧಿಕಾರಿ ಕೆ. ಮನೋಜ್ ಕುಮಾರ್ ವಂದಿಸಿದರು. …

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸಾಧಕಾಭಿವಂದನಂ ಅಭಿಯಾನಕ್ಕೆ ಚಾಲನೆ

ಬದಿಯಡ್ಕ: ಸೇವಾ ಕ್ಷೇತ್ರದ ಸಾಧನೆ ಹಾಗೂ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ೫೦ ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಕಿನ್ನಿಂಗಾರು ವಸಂತ್ ಶೆಣೈ- ಸುಧಾ ವಿ. ಶೆಣೈ ದಂಪತಿಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ನಿನ್ನೆ ಅವರ ಮನೆಯಲ್ಲಿ ಗೌರವಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ಯುವವರನ್ನು ಅಭಿನಂದಿಸುವ ಅಕಾಡೆಮಿಯ ಸರಣಿ ಕಾರ್ಯಕ್ರಮಕ್ಕೆ ಈ ವೇಳೆ ಚಾಲನೆ ನೀಡಲಾಯಿತು. ನಿವೃತ್ತ ತಹಶೀಲ್ದಾರ್ ನಾರಾಯಣ ಗೋಸಾಡ ಉದ್ಘಾಟಿಸಿದರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕುಂಜಾರು ಮೊಹಮ್ಮದ್ ಹಾಜಿ …