ಜಿಲ್ಲಾ ಆಟೋರಿಕ್ಷಾ ಮಜ್ದೂರ್ ಸಂಘ್‌ನಿಂದ ಕ್ಷೇಮನಿಧಿ ಕಚೇರಿ ಮಾರ್ಚ್

ಕಾಸರಗೋಡು: ಜಿಲ್ಲಾ ಆಟೋರಿಕ್ಷಾ ಮಜ್ದೂರ್ ಸಂಘ್ ಬಿಎಂಎಸ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕ್ಷೇಮನಿಧಿ ಕಚೇರಿಗೆ ಮಾರ್ಚ್, ಧರಣಿ ನಡೆಸಲಾಯಿತು. ಶಾಲಾ ಅಧ್ಯಯನ ವರ್ಷದಲ್ಲಿ ಸದಸ್ಯರ ಮಕ್ಕಳ ಕಲಿಕೋಪಕರಣಗಳನ್ನು ಕೂಡಲೇ ವಿತರಿಸಬೇಕು, ಕ್ಷೇಮನಿಧಿ ಲೋಪದೋಷಗಳನ್ನು ಪರಿಹರಿಸಬೇಕು, ಸೌಲಭ್ಯಗಳನ್ನು ಕಾಲಾನುಸಾರವಾಗಿ ಹೆಚ್ಚಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ಸರಕಾರದ ನಿಷ್ಕ್ರಿಯತ್ವದ ವಿರುದ್ಧ ಜಿಲ್ಲಾ ಕ್ಷೇಮನಿಧಿ ಕಚೇರಿಗೆ ಮಾರ್ಚ್, ಧರಣಿ ನಡೆಸಲಾಗಿದೆ. ಧರಣಿಯನ್ನು ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಜಿಲ್ಲಾ ಆಟೋರಿಕ್ಷಾ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಸುನಿಲ್ ವಾಳಕ್ಕೋಡ್, ಜಿಲ್ಲಾ ಕೋಶಾಧಿಕಾರಿ ಕುಂಞಿಕಣ್ಣನ್ ಚಾತಂಗೈ, ಸದಸ್ಯರಾದ ಎ. ಕೇಶವ, ಕುಂಞಿರಾಮನ್, ಕೃಷ್ಣನ್ ಚೇಟುಕುಂಡ್, ಮನೋಜ್, ಕುಂಞಿಕಣ್ಣನ್, ಸದಾಶಿವ ಮುಳ್ಳೇರಿಯ, ಬಾಲಕೃಷ್ಣನ್, ಎಸ್.ಕೆ. ಉಮೇಶ್, ಪ್ರಸಾದ್ ಕಾಸರಗೋಡು, ಮೋಹನ್‌ದಾಸ್ ಅಡ್ಕತ್ತಬೈಲು, ಅರವಿಂದ ಕಾಸರಗೋಡು, ಜಯಂತ ಮುಳ್ಳೇರಿಯ ಮಾತನಾಡಿದರು.

ಆಟೋರಿಕ್ಷಾ ಜಿಲ್ಲಾ ಕಾರ್ಯದರ್ಶಿ ಭರತನ್ ಸ್ವಾಗತಿಸಿ, ಜೊತೆಕಾರ್ಯದರ್ಶಿ ಪ್ರಭಾಶಂಕರ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page