ವಿವಿಧ ಕ್ಷೇತ್ರಗಳ ಪಾರಂಪರ್ಯೇತರ ಟ್ರಸ್ಟಿಗಳ ನೇಮಕಕ್ಕೆ ಅರ್ಜಿ ಆಹ್ವಾನ

ಕಾಸರಗೋಡು: ಮಲಬಾರ್ ದೇವಸ್ವಂ ಬೋರ್ಡ್‌ನ ಅಧೀನದ ಲ್ಲಿರುವ ಮಂಜೇಶ್ವರ ತಾಲೂಕಿನ ವರ್ಕಾಡಿ ಪಂಚಾಯತ್  ಶ್ರೀ ಮಡಿಕತ್ತಾಯ ಧೂಮಾ ವತಿ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಪಾರಂಪರ್ಯೇತರ ಟ್ರಸ್ಟಿಗಳ ಎರಡು ಸ್ಥಾನ ಭರ್ತಿಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ. ಇದೇ ರೀತಿ ಇಚ್ಲಂಗೋಡು ಶ್ರೀ ಸದಾಶಿವ ಕ್ಷೇತ್ರದಲ್ಲಿ ಈಗ ಖಾಲಿ ಇರುವ ೫ ಪಾರಂಪ ರ್ಯೇತರ ಟ್ರಸ್ಟಿಗಳ ನೇಮಕಕ್ಕೂ ಅರ್ಜಿ ಆಹ್ವಾನಿಸಲಾಗಿದೆ. ಶಿರಿಯ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಈಗ ಕಾಲಿ ಇರುವ ೫ ಪಾರಂಪ ರ್ಯೇತರ ಟ್ರಸ್ಟಿಗಳ ನೇಮಕಕ್ಕೂ ಅರ್ಜಿ  ಆಹ್ವಾನಿಸಲಾಗಿದೆ. ಅದೇ ರೀತಿ ಕಾಸರಗೋಡು ತಾಲೂಕಿನ ಕಳನಾಡು ಗ್ರಾಮದ ಅಚ್ಚೇರಿ ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಖಾಲಿ ಇರುವ ನಾಲ್ಕು ಪಾರಂಪರ್ಯೇತರ ಟ್ರಸ್ಟಿಗಳ ನೇಮಕಕ್ಕೂ ಅರ್ಜಿ ಆಹ್ವಾನಿಸಲಾಗಿದೆ. ಕ್ಷೇತ್ರಗಳ ಪರಿಸರದಲ್ಲಿ ವಾಸಿಸುವ ಹಿಂದೂ ಧರ್ಮ ಆಚರಿಸುವ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Leave a Reply

Your email address will not be published. Required fields are marked *

You cannot copy content of this page