ಕೊಚ್ಚಿ: ವಕ್ಫ್ ಮಂಡಳಿಯ ಕೇರಳ ಘಟಕ ತಮ್ಮ ಆಸ್ತಿಗಳನ್ನು ಕಬಳಿಸುತ್ತಿದೆ ಎಂದು ಆರೋಪಿಸಿ ಕಳೆದ 173 ದಿನಗಳಿಂದ ಹೋರಾಟ ನಡೆಸುತ್ತಿರುವ ಮುನಂಬಂ ಗ್ರಾಮಸ್ತರು ಸಂಸತ್ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾಗುತ್ತಿರುವಂತೆಯೇ ಸಂಭ್ರಮಿಸಿದ್ದು, ಅದರ ಜೊತೆಗೆ ನರೇಂದ್ರ ಮೋದಿ ಜಿಂದಾಬಾದ್ ಎಂಬ ಜೈಕಾರವನ್ನು ಮೊಳಗಿಸಿದ್ದಾರೆ. ಹೀಗೆ ಪ್ರತಿಭಟನೆ ನಡೆಸಿದವರಲ್ಲಿ ಹೆಚ್ಚಿನವರು ಕ್ರೈಸ್ತರೇ ಆಗಿದ್ದಾರೆ ಎಂಬುವುದು ವಿಶೇಷ.







