ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಆರಂಭ

ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕ ಮತ್ತು ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ಹತ್ತು ದಿನಗಳ ತನಕ ನಡೆಯುವ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ಆರಂಭಗೊAಡಿತು.
ದೇವಸ್ಥಾನದ ಪಾತ್ರಿ ಪಾಂಗೋಡು ಪ್ರವೀಣ್ ನಾಯಕ್ ದೀಪ ಪ್ರಜ್ವಲನೆಗೈದು ದಸರಾ ಸಾಂಸ್ಕೃತಿಕೋತ್ಸವಕ್ಕೆ ಚಾಲನೆ ನೀಡಿದರು. ಧಾರ್ಮಿಕ ಮುಖಂಡ ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ನರಗಸಭಾ ಸದಸ್ಯೆ ಸವಿತಾ ಟೀಚರ್, ಡಾ|ಮಂಜುಳಾ ಅನಿಲ್ ರಾವ್, ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ, ದೇವಸ್ಥಾನದ ಗೌರವ ಅಧ್ಯಕ್ಷ ಭಾಸ್ಕರ ರಾವ್ ಮಂಗಳೂರು, ಹಿರಿಯ ಸಮಾಜ ಸೇವಕ ನಿರಂಜನ ಕೊರಕೋಡು, ಪತ್ರಕರ್ತ ಜಗನ್ನಾಥ ಶೆಟ್ಟಿ, ನಿವೃತ್ತ ಅಧ್ಯಾಪಕ ವಿಶಾಲಾಕ್ಷ ಪುತ್ರಕಳ, ರವಿ ನಾಯ್ಕಾಪು, ನ್ಯಾಯವಾದಿ ತೋಮಸ್ ಡಿ’ಸೋಜ, ಜಗದೀಶ್ ಕೂಡ್ಲು, ಪತ್ರಕರ್ತ ಪುರುಷೋತ್ತಮ ಪೆರ್ಲ ಭಾಗವಹಿಸಿದರು. ದಸರಾ ಸಂಕೀರ್ತನಾ ದಶಾಹವನ್ನು ಸಂಕೀರ್ತನ ಸಾಮ್ರಾಟ್ ಜಯಾನಂದ ಕುಮಾರ್ ಹೊಸದುರ್ಗ ಉದ್ಘಾಟಿಸಿದರು. ಕನ್ನಡ ಭವನ ಅಧ್ಯಕ್ಷ ವಾಮನ್ ರಾವ್ ಬೇಕಲ ಪ್ರಾಸ್ತಾವಿಕ ನುಡಿದರು. ಆ ಬಳಿಕ ಭಜನಾ ಗಾಯನೋತ್ಸವ ಜರಗಿತು.

Leave a Reply

Your email address will not be published. Required fields are marked *

You cannot copy content of this page