ವಿಷಾಹಾರ: ಅಣಬೆ ತಿಂದ 6 ಮಂದಿ ಆಸ್ಪತ್ರೆಗೆ ದಾಖಲು

ಕಲ್ಲಿಕೋಟೆ: ತಾಮರಶ್ಶೇರಿ ಪೂನೂರ್‌ನಲ್ಲಿ ವಿಷಯುಕ್ತ ಅಣಬೆ ಅಡುಗೆ ಮಾಡಿ ಸೇವಿಸಿದ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿ ಸಲಾಗಿದೆ. ವಾಂತಿ ಹಾಗೂ ಅಸ್ವಸ್ಥತೆ ಕಂಡು ಬಂದ ಹಿನ್ನೆಲೆಯಲ್ಲಿ ಇವರನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿ ಲಾಗಿದೆ. ಪೂನೂರ್ ನಿವಾಸಿ ಅಬೂಬಕ್ಕರ್, ಶಬ್ನ, ಸೈದ, ಫಿರೋಸ್, ದಿಯಾ ಫೆಬಿನ್, ಮುಹಮ್ಮದ್ ರಸಾನ್ ಎಂಬಿವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿತ್ತಿಲಿನಿಂದ ಲಭಿಸಿದ ಅಣಬೆಯನ್ನು ಸ್ಥಳೀಯ ಎರಡು ಕುಟುಂಬಗಳು ನಿನ್ನೆ ಅಡುಗೆ ಮಾಡಿ ಸೇವಿಸಿದ್ದರು. ಇವರಿಗೆ ವಾಂತಿ ಹಾಗೂ ಅಸ್ವಸ್ಥತೆ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED NEWS

You cannot copy contents of this page