ಅಡೂರಿನ ಡಾ. ಕೆ.ಎನ್. ಅಡಿಗರಿಗೆ ಪ್ರಶಸ್ತಿ ಪ್ರದಾನ

ಕಾಸರಗೋಡು: ಅಡೂರು ಕೋಟೆಗದ್ದೆಯ ಡಾ. ಕೆ.ಎನ್ ಅಡಿಗ ಅವರಿಗೆ ಈಚೆಗೆ ಬೆಂಗಳೂರಿನಲ್ಲಿ ಕರುನಾಡ ಕಲಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಹೈಡ್ ಪಾರ್ಕ್ ಅಪಾರ್ಟ್ ಸಭಾಂಗಣದಲ್ಲಿ ಚಿತ್ರ ಸಂತೆ ತಂಡವು ಆಯೋಜಿಸಿದ ವರ್ಷದ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವೇದಮೂರ್ತಿ ಡಾ. ಕಾಡಯ್ಯ ಶಿವಮೂರ್ತಿ ಹಿರೇಮಠ ಸ್ವಾಮಿಗಳು, ಖ್ಯಾತ ಸಂಗೀತ ನಿರ್ದೇಶಕ ಕೆ ಎನ್ ರಮೇಶ್, ಚಲನಚಿತ್ರ ನಟಿ ಭೂಮಿಕಾ ಎ. ಕೆ, ಚಲನಚಿತ್ರ ನಿರ್ದೇಶಕ ಅಲ್ಲೂರಿ ಸೀತಾರಾಮ ರಾಜು ಮೊದಲಾದವರು ಇದ್ದರು.

RELATED NEWS

You cannot copy contents of this page