ಮಧೂರು: ಮಧೂರು ಅಗ್ರಿಕಲ್ಚರಿಸ್ಟ್ ಸಹಕಾರಿ ಸಂಘದ ವತಿಯಿಂದ ನಡೆಸುವ ಓಣಂ ಮಾರಾಟ ಮಳಿಗೆಯನ್ನು ಸಂಘದ ಅಧ್ಯಕ್ಷ ಎಂ. ಕೆ.ರವೀಂದ್ರನ್ ಉದ್ಘಾಟಿಸಿದರು.ಉಪಾಧ್ಯಕ್ಷ ಎಂ ಅಶೋಕ ರೈ ಅಧ್ಯಕ್ಷತೆ ವಹಿಸಿದರು.ಮಾಜಿ ಅಧ್ಯಕ್ಷ ಎ.ರವೀಂದ್ರನ್, ತುಳು ಅಕಾಡೆಮಿ ಸದಸ್ಯ ಕೆ ಬುಜಂಗ ಶೆಟ್ಟಿ, ಪಂಚಾಯತ್ ಸದಸ್ಯರಾದ ಸಿ ಉದಯ್ ಕುಮಾರ್, ಪಿ ಎಂ ಬಶೀರ್, ಮೊಹಮ್ಮದ್ ಅಸ್ಲಾಂ ಶುಭ ಹಾರೈಸಿದರು. ಕಾರ್ಯದರ್ಶಿ. ರಾಜಶ್ರೀ ಸ್ವಾಗತಿಸಿ, ನಿರ್ದೇಶಕ ಶ್ರೀ ಸುಬ್ರಮಣ್ಯ ತಂತ್ರಿ ವಂದಿಸಿದರು.
