ಬದಿಯಡ್ಕ: ಬದಿಯಡ್ಕ ಪಂಚಾ ಯತ್ ಹಸಿರು ಕ್ರಿಯಾ ಸೇನೆಯ ಹೆಸರಲ್ಲಿ 40,000 ರೂಪಾಯಿ ಸಂಗ್ರಹಿಸಿದ ಹಸಿರು ಕ್ರಿಯಾಸೇನೆ ಸದಸ್ಯೆ 4,000 ರೂ.ವನ್ನು ಪಂಚಾಯತ್ನ ಹೆಸರಲ್ಲಿ ಬ್ಯಾಂಕ್ನಲ್ಲಿ ಪಾವತಿಸಿ ಬಾಕಿ ಮೊತ್ತವನ್ನು ಜೇಬಿಗಿಳಿಸಿರುವುದಾಗಿ ದೂರಲಾಗಿದೆ. ಇದೇ ವೇಳೆ ಬ್ಯಾಂಕ್ ನಲ್ಲಿ ಹಣ ಪಾವತಿಸಿದ ರಶೀದಿಯ ಕೌಂಟರ್ ಫೋಯಿಲ್ನಲ್ಲಿ ಪಾವತಿ ಸಿದ ಮೊತ್ತವಾಗಿ ಕಾಣಿಸಿದ 4000 ದೊಂದಿಗೆ ಒಂದು ಸೊನ್ನೆ ಸೇರಿಸಿ ಬರೆದು ಪಂ. ಅಧಿಕಾರಿಗಳಿಗೆ ನೀಡಲಾಗಿದೆ.
ಇನ್ನೊಂದು ಘಟನೆಯಲ್ಲಿ 18,000 ರೂ. ಸಂಗ್ರಹಿಸಿದಾಗ ಬ್ಯಾಂಕ್ನಲ್ಲಿ ಪಾವತಿಸಿರುವುದು 8,500 ರೂ.ಗಳಾಗಿದೆ. ಹಣ ಪಾವತಿಸಿದ ರಶೀದಿಯ ಕೌಂಟರ್ ಫೋಯಿಲ್ನಲ್ಲಿ 8,500 ಎಂಬುದನ್ನು 18,೦೦೦ ಎಂಬುದಾಗಿ ತಿದ್ದಿ ಪಂಚಾಯತ್ ಕಚೇರಿಯಲ್ಲಿ ನೀಡಲಾಗಿದೆ. ಈ ವಂಚನೆಯ ಕುರಿತು ಮಾಹಿತಿ ಲಭಿಸಿದ ಪಂಚಾಯತ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಈ ವಿಷಯವನ್ನು ಪಂಚಾಯತ್ ಸಭೆಯಲ್ಲಿ ತಿಳಿಸಿದ್ದಾರೆ. ಪಂಚಾಯತ್ನ 17ನೇ ವಾರ್ಡ್ ಹಸಿರು ಸೇನಾ ಲೀಡರ್ ಸೀನತ್, ಸಹಾಯಕಿ ಶಾರದ ಎಂಬಿವರನ್ನು ಹಸಿರು ಕ್ರಿಯಾಸೇನೆಯಿಂದ ವಜಾಗೊಳಿಸಲು ಹಾಗೂ ವಂಚನೆಯ ಕುರಿತು ವಿಜಿಲೆನ್ಸ್ ತನಿಖೆ ನಡೆಸಲು ಪಂಚಾಯತ್ ಆಡಳಿತ ಸಮಿತಿ ತೀರ್ಮಾನಿಸಿದೆ. ಇದರ ಆಧಾರದಲ್ಲಿ ಪಂಚಾಯತ್ ಅಧಿಕಾರಿಗಳು ಈ ಮಾಹಿತಿಯನ್ನು ಜಿಲ್ಲಾ ಹಸಿರು ಸೇನಾ ಕಚೇರಿಗೆ ತಿಳಿಸಿದ್ದು, ಇದರಂತೆ ಅಧಿಕಾರಿಗಳು ಆಡಿಟ್ ತಂಡವನ್ನು ಪಂಚಾಯತ್ ಕಚೇರಿಗೆ ಕಳುಹಿಸಿದ್ದಾರೆ. 17ನೇ ವಾರ್ಡ್ ಹಸಿರು ಕ್ರಿಯಾ ಸೇನೆ ಪ್ರತೀ ಮನೆಯಿಂದ ಸಂಗ್ರಹಿಸಿದ ಯೂಸರ್ ಫೀಸ್ನ ಕುರಿತು ಆಡಿಟಿಂಗ್ ಪೂರ್ತಿಗೊಂಡಿರುವುದಾಗಿ ಹೇಳಲಾ ಗುತ್ತಿದೆ. ಎಲ್ಲಾ ವಾರ್ಡ್ಗಳಲ್ಲೂ ಯೂಸರ್ ಫೀಸ್ ಕಲೆಕ್ಷನ್ ಆಡಿಟ್ ನಡೆಸಲಾಗುತ್ತಿದೆ. ಆಡಿಟ್ ರಿಪೋರ್ಟ್ ನಲ್ಲಿ ಹೆಚ್ಚಿನ ವಂಚನೆ ಪತ್ತೆಹಚ್ಚಲು ಸಾಧ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಂಚನೆ ಪತ್ತೆಹಚ್ಚಲಾದ 17ನೇ ವಾರ್ಡ್ ಹಸಿರು ಕ್ರಿಯಾಸೇನೆ ನೇತಾರೆ ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಅಸೋಸಿಯೇಶನ್ ನೀರ್ಚಾಲು ವಿಲ್ಲೇಜ್ ಕಮಿಟಿ ಅಧ್ಯಕ್ಷೆಯಾ ಗಿದ್ದಾರೆ. ಆಡಿಟಿಂಗ್ನ ಆಧಾರದಲ್ಲಿ ವಿಜಿಲೆನ್ಸ್ ತನಿಖೆಗೆ ಆಗ್ರಹಪಡಲು ತೀರ್ಮಾನಿಸಲಾಗಿದೆ. ತನಿಖೆ ಪೂರ್ತಿ ಗೊಳ್ಳುವವರೆಗೆ ಸೇವೆಯಿಂದ ಬಿಟ್ಟು ನಿಲ್ಲಲು ಇವರೊಂದಿಗೂ ಪಂಚಾಯತ್ ತಿಳಿಸಿದೆ.