ಶ್ರೀಗಂಧ ಮರ ಸಾಗಾಟ: ಇಬ್ಬರ ಸೆರೆ

ಹೊಸದುರ್ಗ: ಶ್ರೀಗಂಧ ಮರ ಕಡಿದು ಸಾಗಿಸುವ ತಂಡದ ಇಬ್ಬರು ಸೆರೆಗೀಡಾಗಿದ್ದಾರೆ. ಇರಿಯಕಿಳಕ್ಕೇ ವೀಟಿಲ್‌ನ ಕೆ. ಅಜೀಶ್, ಅಂಬಲತ್ತರ ಪಾರಪಳ್ಳಿಯ ಬಿ. ನಸೀರ್ ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಭೀಮನಡಿ ಸೆಕ್ಷನ್ ಫಾರೆಸ್ಟ್ ಆಫೀಸರ್ ಕೆ.ಎನ್. ಲಕ್ಷ್ಮಣನ್, ಬೀಟ್ ಆಫೀಸರ್‌ಗಳಾದ ಕೆ. ವಿಶಾಖ್, ವಿ. ಯಧುಕೃಷ್ಣನ್, ಅಪರ್ಣ, ಚಂದ್ರನ್ ಎಂಬಿವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಕರಿಂದಳ ಕಯನಿಯಿಂದ ೫೦ ಕಿಲೋ ಶ್ರೀಗಂಧ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧನ ನಡೆದಿದೆ.

Leave a Reply

Your email address will not be published. Required fields are marked *

You cannot copy content of this page