ಪೊಲೀಸ್ ಜೀಪು ಅಪಘಾತ: ತಪ್ಪಿದ ದುರಂತ

ಕಾಸರಗೋಡು: ವಾಹನ ತಪಾಸಣೆ ನಡೆಸಿ ಠಾಣೆಗೆ ಮರಳುತ್ತಿದ್ದ ಪೊಲೀಸ್ ಜೀಪು ಅಪಘಾತಕ್ಕೀಡಾಗಿದೆ. ರಾಜಪುರಂ ಠಾಣೆಯ ವಾಹನ ನಿನ್ನೆ ರಾತ್ರಿ 9 ಗಂಟೆಗೆ ಮುಂಡೋಟ್ ಸೈಂಟ್ ಫಯಸ್ ಕಾಲೇಜು ಮುಂಭಾಗ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಜೀಪು ಮೋರಿ ಸಂಕಕ್ಕೆ ಢಿಕ್ಕಿ ಹೊಡೆದ ಬಳಿಕ ರೋಡಿಗೆ ಮಗುಚಿ ಬಿದ್ದಿದೆ. ವಾಹನದಲ್ಲಿ ಸಿಐಪಿ ಪ್ರದೀಪ್ ಕುಮಾರ್, ಎಎಸ್‌ಐ ಮೋನ್ಸ್ ಎಂಬಿವರಿದ್ದರು. ಇವರು ಅದೃಷ್ಟವಶಾತ್ ಗಾಯಗಳಿಲ್ಲದೆ ಪಾರಾಗಿದ್ದಾರೆ.

RELATED NEWS

You cannot copy contents of this page