ಅರ್ತಲ ರಕ್ತೇಶ್ವರೀ ಕ್ಷೇತ್ರದ ಗರ್ಭಗುಡಿಗೆ ದಾರಂದ ಮುಹೂರ್ತ

ನೀರ್ಚಾಲು: ಕೊಲ್ಲಂಗಾನ ಅರ್ತಲ ಶ್ರೀ ರಕ್ತೇಶ್ವರೀ ಕ್ಷೇತ್ರದ ನೂತನ ಗರ್ಭ ಗುಡಿಯ ದಾರಂದ ಮುಹೂರ್ತ ಮತ್ತು ನಾಗನ ಕಟ್ಟೆಯ ಶಿಲಾನ್ಯಾಸ ಜರಗಿತು. ಡಾ| ಅನಂತ ಕಾಮತ್ ಕಾಸರಗೋಡು ದೀಪಬೆಳಗಿಸಿ ಸಭೆ ಉದ್ಘಾಟಿಸಿದರು.
ಸುಬ್ಬಣ್ಣ ನಾಯ್ಕ ಅರ್ತಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲ್ಲಿಕೋಟೆ ಟ್ರಾಫಿಕ್ ಎಸ್‌ಪಿ ಹರಿಶ್ಚಂದ್ರ ನಾಯ್ಕ, ಉದ್ಯಮಿಗಳಾದ ಬಾಬೂಜಿ ಭಟ್, ಶೋಭಾ ಗೋಪಾಲನ್, ಮಧೂರು ಪಂ. ಅಧ್ಯಕ್ಷ ಗೋಪಾಲಕೃಷ್ಣ ಸಂತೋಷ್ ಕುಮಾರ್ ಮಾನ್ಯ, ಮಹೇಶ್ ವಳಕ್ಕುಂಜ, ಪಿ.ವಿ.ಶಿವರಾಮ ಚಿತ್ತಾರಿ, ಕೃಷ್ಣಪ್ರಸಾದ ಚಿತ್ತಾರಿ ಮಾತನಾಡಿದರು. ಗೋಪಾಲಕೃಷ್ಣ ಮೇಗಿನಡ್ಕ, ವೆಂಕಪ್ಪ ನಾಯ್ಕ ಬೋಂದೇಲ್, ವೆಂಕಪ್ಪ ನಾಯ್ಕ ಅರ್ತಲ, ವನಿತಾ ಐತ್ತಪ್ಪ ನಾಯ್ಕ, ಸುಲೋಚನಾ ಗೋವಿಂದ ನಾಯ್ಕ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಶ್ರೀನಾಥ್ ಕೊಲ್ಲಂಗಾನ ಸ್ವಾಗತಿಸಿ, ಕಾರ್ಯದರ್ಶಿ ಪ್ರಮೋದ್ ಕುಮಾರ್ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ಐತ್ತಪ್ಪನಾಯ್ಕ, ನಾರಾಯಣ ನಾಯ್ಕ, ಶಿವನಾಯ್ಕ, ವೇಣುಗೋಪಾಲ. ರಾಧಾಕೃಷ್ಣ, ವಿಜಯಕುಮಾರ್, ಅಶೋಕ ಕುಮಾರ್,ಆದರ್ಶ್ ನೇತ್ರತ್ವ ವಹಿಸಿದರು. ಶಿಲ್ಪಿಗಳಾದ ಮನೋಜ್ ಮಾಂಗಾಡ್, ದಯಾನಂದ ಮೇಗಿನಡ್ಕ, ಜಗನ್ನಿವಾಸ ಆಚಾರ್ಯ, ಜಿತೇಂದ್ರ ಆಚಾರ್ಯ ಪುತ್ತಿಗೆ, ವಾಮನ ನಾಯ್ಕ ಆರಂತೋಡು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page