ಪಾಲಕ್ಕಾಡ್: ಕರಿಮಣಿ, ಉಂಗುರ, ದಾರೆಯ ಸೀರೆ ಯಾವುದೂ ಇಲ್ಲದೆ ವಿವಾಹವಾದರೆ ಹೇಗಿರಬಹುದು? ಆದರೆ ಈ ರೀತಿಯ ಒಂದು ವಿವಾಹಕ್ಕೆ ನೆಮ್ಮಾರ ಸಬ್ ರಿಜಿಸ್ಟ್ರಾರ್ ಕಚೇರಿ ಸಾಕ್ಷ್ಯ ವಹಿಸಿದೆ. ಕೊಲ್ಲಂ ಕರುನಾಗಪಳ್ಳಿ ನಿವಾಸಿಯಾದ ಪಿ.ಎಸ್. ಶೀತಲ್ ಹಾಗೂ ಐಲೂರು ನಿವಾಸಿಯಾದ ಆರ್. ಜಿತಿನ್ಕೃಷ್ಣರ ಮಧ್ಯೆಗಿನ ವಿವಾಹ ಯಾವುದೇ ದುಂದುವೆಚ್ಚದ ಕಾರ್ಯಗಳಿಲ್ಲದೆ ಸರಳವಾಗಿ ನೆರವೇರಿತು. ಸಂಬಂಧಿಕರನ್ನು ಸಾಕ್ಷಿಗಳನ್ನಾಗಿ ಮಾಡಿ ದೇಶದ ಸಂವಿಧಾನವನ್ನು ಹಸ್ತಾಂತರಿಸಿ ಪ್ರತಿಜ್ಞೆ ಸ್ವೀಕರಿಸಿ ಜಿತಿನ್ ಶೀತಲ್ಳನ್ನು ತನ್ನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಪಾಲಕ್ಕಾಡ್ ಕಣ್ಣಾಡಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಿಕೆಯಾಗಿರುವ ಶೀತಲ್ ಸಂವಿಧಾನ ಸಾಕ್ಷರತಾ ರಂಗದಲ್ಲಿ ಕಾರ್ಯಾಚರಿಸುವ ಕಾನ್ಸ್ಟಿಟ್ಯೂಶನ್ ಲಿಟರಸಿ ಕೌನ್ಸಿಲ್ ಎಂಬ ಎನ್ಜಿಒ ಸಂಘಟನೆಯ ಕಾರ್ಯಕರ್ತೆಯಾಗಿದ್ದಾರೆ. ಜಿತಿನ್ ಪಾಲಕ್ಕಾಡ್ ತೆಂಗುರುಶಿ ವಿಲ್ಲೇಜ್ ಅಸಿಸ್ಟೆಂಟ್ ಆಗಿದ್ದಾರೆ.







