ಎಂ.ಎಲ್. ಅಶ್ವಿನಿ ಇಂದು ಬದಿಯಡ್ಕದಲ್ಲಿ ಮನೆಗಳಿಗೆ ಭೇಟಿ ನೀಡಿ ಮತ ಯಾಚನೆ

ಬದಿಯಡ್ಕ: ಕಾಸರಗೋಡು ಮಂಡಲದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಇಂದು ಬದಿಯಡ್ಕ ಪಂಚಾಯತ್‌ನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿಯ  ಸಕ್ರಿಯ ಕಾರ್ಯಕರ್ತನೂ, ಪಂ. ಮಾಜಿ ಉಪಾಧ್ಯಕ್ಷರಾದ ಗಣೇಶಾನಂದ ಆಳ್ವರ ಮನೆಗೆ  ಭೇಟಿ ನೀಡಿದ ಅಶ್ವಿನಿ ಅವ ರಿಂದ ಆಶೀರ್ವಾದ ಪಡೆದ ಬಳಿಕ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಆರಂಭಿಸಿ ದ್ದಾರೆ. 

ಪಂಚಾಯತ್ ಅಧ್ಯಕ್ಷ ಡಿ. ಶಂಕರ, ಸೂರ್ಯಪ್ರಕಾಶ್ ಶೆಟ್ಟಿ, ಸುಕುಮಾರ ಕುದ್ರೆಪ್ಪಾಡಿ, ಮೋಹನ್ ದಾಸ್ ರೈ, ಮೋಹನ, ಸುರೇಶ್, ಮನ್ವಿತ್ ಎಂಬಿವರು ಅಭ್ಯರ್ಥಿಯೊಂದಿಗಿದ್ದರು.

You cannot copy contents of this page