ಕಾಸರಗೋಡು: ಕಣ್ಣೂರು, ಕಲ್ಲಿಕೋಟೆ ಜಿಲ್ಲೆಗಳು ಒಳಗೊಳ್ಳುವ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಚುಕ್ಕಾಣಿ ಹಿಡಿಯಲು ಬಿಜೆಪಿ ರಾಜ್ಯ ನಾಯಕತ್ವ ಕಲ್ಲಿಕೋಟೆ ವಲಯ ಅಧ್ಯಕ್ಷರಾದ ಕೆ. ಶ್ರೀಕಾಂತ್ರನ್ನು ವಲಯ ಪ್ರಭಾರಿಯಾಗಿ ನೇಮಿಸಿದೆ. ಈ ಹಿಂದೆ ಈ ಹೊಣೆಗಾರಿಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಗೋಪಾಲಕೃಷ್ಣನ್ರಿಗಾಗಿತ್ತು. ಮಂಜೇಶ್ವರ ಸಹಿತ ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಚಟುವಟಿಕೆಗಳ ಮೇಲ್ನೋಟ ಇನ್ನು ಶ್ರೀಕಾಂತ್ರಿಗಾಗಿದೆ.






