ಮಧೂರು: ಇಲ್ಲಿಗೆ ಸಮೀಪದ ಅರ್ಜುನಗುಳಿ ನಿವಾಸಿ ಶಂಕರನಾರಾ ಯಣ ಭಟ್ (66) ನಿಧನಹೊಂ ದಿದರು. ಕೃಷಿಕನಾಗಿದ್ದರು ಇವರು ಉಪ ವೃತ್ತಿಯಾಗಿ ನೀರ್ಚಾಲು ಪೇಟೆಯಲ್ಲಿ ಜೀಪುಟ್ಯಾಕ್ಸಿ ನಡೆಸುತ್ತಿದ್ದರು. ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮತ್ತು ಮುಳ್ಳೇರಿಯ ಹವ್ಯಕ ಮಂಡಲದ ಕಾಸರಗೋಡು ವಲಯದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಮೃತರು ಪತ್ನಿ ಸವಿತಾ ಎಸ್.ಎನ್. ಭಟ್, ಪುತ್ರ ಅನೀಶ್ಕೃಷ್ಣ (ಇಂಜಿನಿ ಯರ್ ಬೆಂಗಳೂರು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕಾಸರಗೋಡು ಬ್ರಾಹ್ಮಣ ಮಹಾಸಭಾ ತೀವ್ರ ಸಂತಾಪ ವ್ಯಕ್ತಪಡಿಸಿದೆ.





