ಕಾಸರಗೋಡು: ಇದೀಗ ಬಹಿರಂಗಗೊಂಡ ಸಮೀಕ್ಷೆಗಳಲ್ಲಿ ಹಲವು ಪೈಡ್ ಸಮೀಕ್ಷೆಗಳಾಗಿವೆ ಎಂದು ಕಾಂಗ್ರೆಸ್ ನೇತಾರ ವಿ.ಡಿ. ಸತೀಶನ್ ಅಭಿಪ್ರಾಯಪಟ್ಟಿದ್ದಾರೆ. ಕಾಸರಗೋಡಿನಲ್ಲಿ ಚುನಾವಣಾ ಪ್ರಚಾರಕ್ಕೆ ತಲುಪಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ ಈ ಬಗ್ಗೆ ತಿಳಿಸಿದ್ದಾರೆ.
ಸರ್ವೆಗಳಲ್ಲಿ ಹಲವು ಸುಳ್ಳಾಗಿವೆ ಎಂದು ಆರೋಪಿಸಿದ ಅವರು ಜನರಲ್ಲಿ ತಪ್ಪು ಭಾವನೆ ಮೂಡಿಸುವ ಇಂತಹ ಯತ್ನ ಫಲಕಾರಿಯಾಗದೆಂದು ತಿಳಿಸಿದರು. ಯುಡಿಎಫ್ ನೂರಕ್ಕೂ ಹೆಚ್ಚು ಸೀಟುಗಳನ್ನು ಗಳಿಸಿ ಅಧಿಕಾರಕ್ಕೇರಲಿದೆ ಎಂದು ಅವರು ತಿಳಿಸಿದರು. ಎಸ್ಡಿಪಿಐ- ಆರ್ಎಸ್ಎಸ್ ಬೆಂಬಲದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೌನ ಪಾಲಿಸುತ್ತಿರುವುದಾಗಿಯೂ ವಿ.ಡಿ. ಸತೀಶನ್ ಆರೋಪಿಸಿದ್ದಾರೆ. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಸಹಿತ ನೇತಾರರು ಜತೆಗಿದ್ದರು. ವಿ.ಡಿ. ಸತೀಶನ್ ಇಂದು ಹಲವೆಡೆ ನಡೆಯುವ ಯುಡಿಎಫ್ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.






