ಬದಿಯಡ್ಕ: ಪುತ್ತಿಗೆ ಪಂ ಚಾಯತ್ ವಿರಾಟ್ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಸಂಗ್ರಹವಾದ ಮೊತ್ತದಲ್ಲಿ ಉಳಿತಾಯವಾಗಿರುವ 9250 ರೂ.ವನ್ನು ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿರಾಟ್ ಹಿಂದು ಸಂಗಮ ಕಾರ್ಯಕ್ರಮದ ಅಧ್ಯಕ್ಷ ದಾಮೋದರ ಡಿ., ರಕ್ಷಾ ಅಧಿಕಾರಿಗಳಾದ ಅಶೋಕ ಮಾಸ್ತರ್, ವಿಘ್ನೇಶ್ವರ ಮಾಸ್ತರ್, ಆಶ್ರಮದ ಟ್ರಸ್ಟಿಗಳಾದ ರಮೇಶ ಕಳೇರಿ, ಬಾಲಕೃಷ್ಣ ಏಣಿಯರ್ಪ, ಇತರರಾದ ಗಂಗಾಧರ ಪಳ್ಳತ್ತಡ್ಕ, ಪ್ರೋ. ಶ್ರೀನಾಥ್ ಉಪಸ್ಥಿತರಿದ್ದರು.






