ಮದ್ಯ ಬೇಟೆ: ಅಪಾರ ಪ್ರಮಾಣದ ಮದ್ಯ ವಶ; ಇಬ್ಬರ ಸೆರೆ

ಕಾಸರಗೋಡು: ಕಾಸರಗೋಡು ನಗರದ ಎರಡೆಡೆಗಳಲ್ಲಿ ಅಬಕಾರಿ ತಂಡ ನಡೆಸಿದ ದಾಳಿಯಲ್ಲಿ ಕರ್ನಾಟಕ ನಿರ್ಮಿತ ೩೪.೫೬ ಲೀಟರ್ ಮದ್ಯ ಮತ್ತು ಅನಧಿಕೃತವಾಗಿ ಕೈವಶ ವಿರಿಸಿಕೊಳ್ಳಲಾದ ಆರು ಲೀಟರ್ ಕೇರಳ ಮದ್ಯವನ್ನು ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಇಬ್ಬರನ್ನು ಅಬಕಾರಿ ತಂಡ ಬಂಧಿಸಿದೆ.

ಕಾಸರಗೋಡು ನೆಲ್ಲಿಕುಂಜೆ ಪಿ.ಎಸ್ ಗುಡ್ಡೆ ಪರಿಸಬದಲ್ಲಿ ಕಾಸರಗೋಡು ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ (ಗ್ರೇಡ್) ಜೋಸೆಫ್ ಜೆ.ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೩೪.೫೬ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪಿ.ಎಸ್. ಗುಡ್ಡೆಯ ನಾರಾಯಣ ಎನ್. (೬೩), ಮತ್ತು ಬೋವಿಕ್ಕಾನದ ಸತೀಶನ್ (೪೪) ಎಂಬವರನ್ನು ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಒಂದನೇ ಆರೋಪಿ ನಾರಾಯಣನನ್ನು ಅಬಕಾರಿ ತಂಡ ಬಂಧಿಸಿದೆ. ಇನ್ನೋರ್ವ ಪರಾರಿಯಾಗಿರುವುದಾಗಿ ಅಬಕಾರಿ ತಂಡ ತಿಳಿಸಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್‌ಗಳಾದ ಉಣ್ಣಿಕೃಷ್ಣನ್ ಕೆ, ರಂಜಿತ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಶ್ಯಾಮ್‌ಜಿತ್, ಮುರಳಿ, ರಾಜೇಶ್ ಪಿ, ಧನ್ಯ ಟಿ.ವಿ. ಎಂಬವರು ಒಳಗೊಂಡಿದ್ದರು.

ಇದೇ ರೀತಿ ವಿದ್ಯಾನಗರದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು  ಮದ್ಯ ಕೈವಶವಿರಿಸಿದ (೬ ಲೀಟರ್) ಆರೋಪದಂತೆ  ಪಾಡಿ  ಚಾಲಕ್ಕರ ನಿವಾಸಿ ನಾರಾಯಣನ್ ಸಿ.ಎಚ್ (೪೦) ಎಂಬಾತನನ್ನು ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಎ.ವಿ. ರಂಜಿತ್ ನೇತೃತ್ವದ ತಂಡ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ. ಬಳಿಕ ಆತನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ರಂಜಿತ್ ಕೆ.ವಿ, ಸಿ.ಇ.ಒಗಳಾದ ಶ್ಯಾಮ್‌ಜಿತ್, ಮುರಳಿ ಎಂಬವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page