ನೀರ್ಚಾಲು: ಬೇಳ ನಿವಾಸಿ ರಾಘವ (58) ನಿಧನ ಹೊಂದಿದರು. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಸುಜಾತ, ಮಕ್ಕಳಾದ ಹರೀಶ್, ರೋಹಿತ್ (ಇಬ್ಬರೂ ಕೊಲ್ಲಿಯಲ್ಲಿ), ಚೈತ್ರ, ಸಹೋದರರಾದ ಕೃಷ್ಣ ಪಳ್ಳತ್ತಡ್ಕ, ರಾಮಚಂದ್ರ ಪಳ್ಳತ್ತಡ್ಕ, ಸಹೋದರಿಯರಾದ ದೇವಕಿ, ಸುಶೀಲ, ಬೇಬಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.






