ವಿಶ್ವಹಿಂದೂ ಪರಿಷತ್ ಆಶ್ರಯದಲ್ಲಿ ಉಚಿತ ಶ್ರವಣ ತಪಾಸಣೆ

ಉಪ್ಪಳ: ವಿಶ್ವ ಹಿಂದೂ ಪರಿಷತ್ ಕೋಡಿಬೈಲ್ ಉಪಖಂಡ ಸಮಿತಿ ಹಾಗೂ ಓಂ ಶಕ್ತಿ ಫ್ರೆಂಡ್ಸ್ ಕ್ಲಬ್ ಕೋಡಿಬೈಲ್ ಆಶ್ರಯದಲ್ಲಿ, ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಜರಗಿತು. ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಮಾತೃ ಶಕ್ತಿ ಪ್ರಮುಖ್ ಮೀರಾ ಆಳ್ವ ಉದ್ಘಾಟಿಸಿದರು, ಕೋಡಿಬೈಲ್ ಗ್ರಾಮ ಸಮಿತಿಯ ಅಧ್ಯಕ್ಷರು ನಾರಾಯಣ ತೊಟ್ಟಿ, ಹಾಗೂ ಮಂಜೇಶ್ವರ ಪ್ರಖಂಡ ಅಧ್ಯಕ್ಷೆ ಕುಸುಮ ಸದಾನಂದ, ಮಂಗಲ್ಪಾಡಿ ಖಂಡ ಸಮಿತಿಯ ಅಧ್ಯಕ್ಷ ಹರಿನಾಥ ಭಂಡಾರಿ, ಓಂ ಶಕ್ತಿ ಫ್ರೆಂಡ್ಸ್ ಕ್ಲಬ್ಬಿನ ಗೌರವ ಅಧ್ಯಕ್ಷ ರಾಜೇಶ್ ಕೋಡಿಬೈಲ್, ಶ್ರವಣ ತಜ್ಞ ಡಾ. ಮೋಹಿತ್, ಮತ್ತು ಈಶ್ವರ ಮಲ್ಪೆ ಟೀಮ್ ಸಂಚಾಲಕ ಲವ ಬಂಗೇರ ಉಪಸ್ಥಿತರಿದ್ದರು. ಮಂಜೇಶ್ವರ ಪ್ರಖಂಡ ಕಾರ್ಯದರ್ಶಿ ರಂಜಿತ್ ಕೋಡಿಬೈಲ್ ನೇತೃತ್ವವಹಿಸಿದರು, ಶಾಂತಿ ಕುಮಾರಿ ವಂದಿಸಿದರು.

You cannot copy contents of this page