4 ತಿಂಗಳ ಹಿಂದೆ ಮದುವೆಯಾದ ನೃತ್ಯ ಅಧ್ಯಾಪಿಕೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ನಾಲ್ಕು ತಿಂಗಳ ಹಿಂದೆ ವಿವಾಹಿತೆಯಾದ ಯುವತಿ ಪತಿ ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಳಿಪರಂಬ ಕರಿಂಬತ್‌ನ ಆಕಾಶ್ ಮೋಹನ್‌ರ ಪತ್ನಿ ಸಾಂದ್ರತಾರ (22) ಸಾವಿಗೀಡಾದ ಯುವತಿ.  ಈಕೆ ನೃತ್ಯ ಅಧ್ಯಾಪಿಕೆಯಾಗಿದ್ದಳು. ನಿನ್ನೆ ಸಂಜೆ ಪತಿ ಮನೆಯ ಬೆಡ್‌ರೂಂನಲ್ಲಿ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಈಕೆ ಪತ್ತೆಯಾಗಿದ್ದಾಳೆ. ನಾಲ್ಕು ತಿಂಗಳ ಹಿಂದೆ ಸಾಂದ್ರತಾರ ಹಾಗೂ ಆಕಾಶ್‌ಮೋಹನ್‌ರ ಮದುವೆ ನಡೆದಿತ್ತು.  ಸಾಂದ್ರತಾರಳ ತಂದೆ ರಮೇಶ್, ತಾಯಿ ತಾರ ಕೊಲ್ಲಂ ನಿವಾಸಿಗಳಾಗಿದ್ದರು.  ಈ ಮೊದಲು ಪರಶ್ಶಿನಿ ತಳಿಯಿಲ್ ಎಂಬಲ್ಲಿ ವಾಸಿಸುತ್ತಿದ್ದ ಇವರು ಪ್ರಸ್ತುತ ಬಾವುಪರಂಬ್ ಎಂಬಲ್ಲಿ ವಾಸಿಸುತ್ತಿದ್ದಾರೆ. ಸೂರ್ಯಜಿತ್ ಸಹೋದರನಾಗಿದ್ದಾನೆ. ಸಾಂದ್ರತಾರ  ಆತ್ಮಹತ್ಯೆ ಗೈಯ್ಯಲು ಕಾರಣವೇನೆಂದು ತಿಳಿದು ಬಂದಿಲ್ಲ. ತಳಿಪರಂಬ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page