ಕುಂಬಳೆ: ಕುಂಬಳೆ ಪೇಟೆಯಲ್ಲಿ ಬದಿಯಡ್ಕ ಭಾಗಕ್ಕೆ ತೆರಳುವ ಕೆಎಸ್ಟಿಪಿ ರಸ್ತೆ ಬದಿಯ ಚರಂಡಿಗೆ ನಿರ್ಮಿಸಿದ ಸ್ಲ್ಯಾಬ್ ಕುಸಿದು ಲಾರಿಯೊಂದು ಸಿಲುಕಿಕೊಂಡಿದೆ. ನಿನ್ನೆ ಮಧ್ಯಾಹ್ನ ಸರಕು ಹೇರಿ ಬಂದ ಲಾರಿ ಸ್ಲ್ಯಾಬ್ನ ಮೇಲೆ ಹತ್ತುತ್ತಿದ್ದಂತೆ ಸ್ಲ್ಯಾಬ್ ಕುಸಿದು ಲಾರಿಯ ಟಯರ್ ಹೂತುಹೋಗಿದೆ. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾ ಯಿತು. ಚರಂಡಿ ನಿರ್ಮಿಸಿದ ಬಳಿಕ ಇದು ಮೂರನೇ ಬಾರಿ ಲಾರಿ ಸ್ಲ್ಯಾಬ್ ಕುಸಿದು ಹಾನಿಗೀಡಾದ ಘಟನೆ ನಡೆದಿದೆ. ಸ್ಲ್ಯಾಬ್ ನಿರ್ಮಿಸಿ ರುವುದರಲ್ಲಿ ಲೋಪವುಂಟಾ ಗಿದೆಯೆಂದು ಈಮೊದಲೇ ನಾಗರಿಕರು ಆರೋಪಿಸಿದ್ದರು.






