ವಿದ್ಯಾನಗರ ಕೈಗಾರಿಕಾ ಪ್ರಾಂಗಣದ ಶೋಚನೀಯಾವಸ್ಥೆ ಪರಿಹರಿಸಲು ಕೆಎಸ್‌ಎಸ್‌ಐಎಯಿಂದ ಸಚಿವರಿಗೆ ಮನವಿ

ಕಾಸರಗೋಡು: ಮೂಲಭೂತ ಸೌಕರ್ಯಗಳ ಕೊರತೆಯಿಂದ ಉಸಿರು ಕಟ್ಟುವಂತಹ ವಿದ್ಯಾನಗರ ಸಿಡ್ಕೋ ಕೈಗಾರಿಕಾ ಪ್ರಾಂಗಣದ ಶೋಚನೀಯಾವಸ್ಥೆಯನ್ನು ತುರ್ತಾಗಿ ಪರಿಹರಿಸಬೇಕೆಂದು ಆಗ್ರಹಿಸಿ ಕೆಎಸ್‌ಎಸ್‌ಐಎ ಕಾಸರಗೋಡು ಜಿಲ್ಲಾ ಸಮಿತಿ ಕೈಗಾರಿಕಾ-ಐಟಿ ಸಚಿವ ಪಿ.ಕೆ. ಕುಂಞಾಲಿಕುಟ್ಟಿ, ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಎಂಬಿವರಿಗೆ ಮನವಿ ಸಲ್ಲಿಸಿದೆ. ಸಿಡ್ಕೋ ಇಂಡಸ್ಟ್ರೀಯಲ್ ಎಸ್ಟೇಟ್ ಇಂಡಸ್ಟ್ರೀಯಲ್ ಫಾರಂ ಪದಾಧಿಕಾರಿ ಗಳು ಕಾಸರಗೋಡಿಗೆ ತಲುಪಿದ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಹೊಂಡಗಳೆದ್ದು ಶೋಚನೀ ಯಾವಸ್ಥೆಯಲ್ಲಿರುವ ರಸ್ತೆಗಳು, ವಿದ್ಯುತ್, ಇತರ ಮೂಲಭೂತ ಸೌಕರ್ಯ ಅಭಿವೃದ್ಧಿ, ಸೇಲ್ ಡೀಡ್ ನೀಡುವುದರಲ್ಲಿನ ತಾಂತ್ರಿಕ ತೊಂದರೆ ಮೊದಲಾದ ವಿಷಯಗಳನ್ನು ಸಚಿವರಿಗೆ ಮನದಟ್ಟು ಮಾಡಿ ಕೊಡಲಾಗಿದೆ.  ಸಂಘಟನೆ ಜಿಲ್ಲಾಧ್ಯಕ್ಷ ಮುಜೀಬ್ ಅಹಮ್ಮದ್, ಕಾರ್ಯದರ್ಶಿ ಎಂ. ಪ್ರಸೀಶ್ ಕುಮಾರ್, ಕೋಶಾಧಿಕಾರಿ ಕೆ. ಅಹಮ್ಮದಾಲಿ ಸಚಿವ, ಶಾಸಕರನ್ನು ಭೇಟಿಯಾಗಿದ್ದರು.

RELATED NEWS

You cannot copy contents of this page