ಕಲ್ಲಕಟ್ಟದಲ್ಲಿ ಅಬಕಾರಿ ಕಾರ್ಯಾಚರಣೆ: ೭೫೦ ಬಾಟಲಿ ಗೋವಾ ಮದ್ಯ ವಶ
ಕಾಸರಗೋಡು: ಮಧೂರು ಕಲ್ಲಕಟ್ಟದಲ್ಲಿ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೧೮೦ ಎಂಎಲ್ನ ೭೫೦ ಬಾಟಲಿ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ಕಲ್ಲಕಟ್ಟೆಯ ಗೋವಿಂದನ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಕಮಿಷನರ್ ನೂರುದ್ದೀನ್ ಎಚ್.ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಕಾಸರಗೋಡು ಎಕ್ಸೈಸ್ ರೇಂಜ್ನ ಇನ್ಸ್ಪೆಕ್ಟರ್ (ಗ್ರೇಡ್) ಜೋಸೆಫ್ ಜೆ. ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಪಿ.ಒ. ಉಣ್ಣಿಕೃಷ್ಣನ್, ರಾಮ, ಸಿಇಒಗಳಾದ ಶರತ್, ಕಣ್ಣನ್ ಕುಂಞಿ, ಫಸೀಲ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು. ಗೋವಾದಲ್ಲಿ ೩೦ ರೂ. ಬೆಲೆ ಇರುವ ೧೮೦ ಎಂಎಲ್ನ ಈ ಮದ್ಯವನ್ನು ಇಲ್ಲಿ ೧೦೦ ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದೂ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.