ಎಂಡಿಎಂಎ ಪತ್ತೆ: ಸ್ಕೂಟರ್ ಸಹಿತ ಇಬ್ಬರ ಸೆರೆ

ಕಾಸರಗೋಡು: ಮಧೂರಿಗೆ ಸಮೀಪದ ಹಿದಾ ಯತ್ ನಗರದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಎಸ್‌ಐಗಳಾದ ವಿ.ವಿ. ಶ್ರೀಜೇಶ್ ಮತ್ತು ಇ. ಉಮೇಶ್ ನೇತೃತ್ವದ ಪೊಲೀಸರು ನಿನ್ನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಮಾದಕದ್ರವ್ಯವಾದ ಎಂಟು ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮಧೂರು ಹಿದಾಯತ್ ನಗರದ ಅಡ್ಕತ್ತ್ ಹೌಸ್‌ನ ಉಮ್ಮರ್ (೪೬), ಇಸ್ಸತ್ ನಗರದ ಮೊಹ ಮ್ಮದ್ ಅಜ್ಮಲ್ (೩೭) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರು ಸಂಚರಿಸುತ್ತಿದ್ದ ಸ್ಕೂಟರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಾದಕದ್ರವ್ಯ ಸಾಗಾಟದ ಬಗ್ಗೆ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿಜೋರಿಗೆ  ಗುಪ್ತ ಮಾಹಿತಿ ಲಭಿಸಿತ್ತು. ಅದರಂತೆ ಅವರು ನೀಡಿದ ನಿರ್ದೇಶ ಪ್ರಕಾರ ವಿದ್ಯಾನಗರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಆಫ್ರ್ರಿಕಾ ಪ್ರಜೆ ಯಾದ ಯುವಕನೋರ್ವ ತಮಗೆ ಈ ಮಾಲನ್ನು ನೀಡಿದ್ದನೆಂಬ ಹೇಳಿಕೆಯ ನ್ನು ಬಂಧಿತರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page