ಕಾಸರಗೋಡಿನಲ್ಲಿ ಮೂವರು ಅಭ್ಯರ್ಥಿಗಳಿಗೂ ಗೆಲುವಿನ ನಿರೀಕ್ಷೆ

ಕಾಸರಗೋಡು: ಲೋಕಸಭಾ ಚುನಾವಣೆಯಲ್ಲಿ ದ್ವಿತೀಯ ಹಂತದ ಮತದಾನ ನಿನ್ನೆ ಪೂರ್ಣಗೊಂಡಿದೆ. ಐದು ಹಂತಗಳ ಮತದಾನ ಇನ್ನೂ ಬಾಕಿ ಉಳಿದುಕೊಂಡಿದೆ.

ತೃತೀಯ ಹಂತದ ಮತದಾನ ಮೇ 7, ಮೇ 8 ನಾಲ್ಕನೇ ಹಂತ, ಐದನೇ ಹಂತದ ಮತದಾನ ಮೇ 13, ಆರನೇ ಹಂತದ ಮತದಾನ ಮೇ ೨೫ ಮತ್ತು ಏಳನೇ ಹಂತದ ಮತದಾನ ಜೂನ್ 1ರಂದು ನಡೆಯಲಿದೆ. ಹೀಗೆ ಒಟ್ಟಾರೆಯಾಗಿ 543 ಲೋಕಸಭಾ ಕ್ಷೇತ್ರಗಳಿಗೆ ಈ ಏಳು ಹಂತಗಳಲ್ಲಾಗಿ ಮತದಾನ ನಡೆಯಲಿದೆ.  ಇದೆಲ್ಲಾ ಕಳೆದ ಬಳಿಕ ಜೂನ್ 7ರಂದು ಮತ ಎಣಿಕೆ ನಡೆಯಲಿದೆ. ಆದ್ದರಿಂದ ಕೇರಳದಲ್ಲಿ ನಿನ್ನೆ ಚುನಾವಣೆ ನಡೆದರೂ ಮತ ಎಣಿಕೆಗಾಗಿ ಇನ್ನೂ 38 ದಿನಗಳು ಕಾಯಬೇಕಾಗಿದೆ.

ರಾಜ್ಯದಲ್ಲಿ ಮತ ಎಣಿಕೆ ಶೇಕಡಾವಾರು ಕುಸಿದರೂ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಯುಡಿಎಫ್, ಎಲ್‌ಡಿಎಫ್ ಮತ್ತು ಎನ್‌ಡಿಎ ಉಮೇದ್ವಾರರು ಗೆಲುವಿನ ತುಂಬು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಈ ಚುನಾವಣೆಯಲ್ಲಿ ನಾನು ಒಂದು ಲಕ್ಷಕ್ಕಿಂತಲೂ ಹೆಚ್ಚು ಮತಗಳ ಅಂತರದಲ್ಲಿ  ಗೆಲ್ಲುವ ತುಂಬು ನಿರೀಕ್ಷೆ ಹೊಂದಿರುವುದಾಗಿ ಯುಡಿಎಫ್ ಉಮೇದ್ವಾರ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಹೇಳಿದ್ದಾರೆ.

ಈ ಕ್ಷೇತ್ರದಲ್ಲಿ ಕನಿಷ್ಠ 70,000 ರಷ್ಟು ಮತಗಳ ಅಂತರದಲ್ಲಿ ನಾನು ಗೆಲ್ಲುವ ನಿರೀಕ್ಷೆ ಹೊಂದಿದ್ದೇನೆಂದು ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಹೇಳಿದ್ದಾರೆ. ಈ ಚುನಾವಣೆಯಲ್ಲಿ ನಾನು ಖಂಡಿತವಾಗಿಯೂ ಗೆಲುವು ಸಾಧಿಸಲಿದ್ದೇನೆ ಎಂದು ಎನ್‌ಡಿಎ ಉಮೇದ್ವಾರೆ ಎಂ.ಎಲ್. ಅಶ್ವಿನಿ ಹೇಳಿದ್ದಾರೆ. ಗೆಲುವಿನ ಬಗ್ಗೆ ನಾನು ತುಂಬು ನಿರೀಕ್ಷೆ ಹೊಂದಿದ್ದಾನೆಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page