ಪರಿಸರ ಮಲಿನೀಕರಣಗೊಳಿಸಿದಲ್ಲಿ ೩೦,೦೦೦ ರೂ. ದಂಡ

ಕಾಸರಗೋಡು: ಪರಿಸರ ಮಲಿನೀಕರಣಗೊಳಿಸಿ ಆ ಮೂಲಕ ಸಾಂಕ್ರಾಮಿಕ ರೋಗ ಹರಡುವಂತೆ ಮಾಡಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟುವ ಗುರಿಯೊಂದಿಗೆ ರೂಪು ನೀಡಲಾದ ರಾಜ್ಯ ಸಾರ್ವಜನಿಕ ಆರೋಗ್ಯ ಕಾನೂನನ್ನು ರಾಜ್ಯದಲ್ಲಿ ವಿದ್ಯುಕ್ತವಾಗಿ ಜ್ಯಾರಿಗೊಳಿಸಲಾಗಿದೆ. ಈ ಬಗ್ಗೆ ಸರಕಾರ ಅಧಿಸೂಚನೆ ಯನ್ನೂ ಜ್ಯಾರಿಗೊಳಿಸಿದೆ. ಇದರಂತೆ ಸಾರ್ವಜನಿಕ ಪ್ರದೇಶಗಳು, ಜನನಿಬಿಡ ಪ್ರದೇಶಗಳು, ರಸ್ತೆ ಬದಿ ಮಾತ್ರವಲ್ಲ ಖಾಸಗಿ ಪ್ರದೇಶಗಳಲ್ಲೂ ತ್ಯಾಜ್ಯಗಳನ್ನು ತಂದೆಸೆಯುವವರು ಮತ್ತು ಮಲೀನ ಜಲ ಹರಿಯಬಿಡುವವರಿಗೆ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮೊದಲು ನೋಟೀಸು ಜ್ಯಾರಿಗೊಳಿಸಲಿದೆ. ಅದರಲ್ಲಿ ಸೂಚಿಸುವ …

ಮುಂದಿನ ವರ್ಷದ ರಾಜ್ಯ ಕಲೋತ್ಸವ ಕಾಸರಗೋಡಿನಲ್ಲಿ: ಶಾಸಕರ ಬೇಡಿಕೆಗೆ ಸ್ಪೀಕರ್‌ರವರ ಬೆಂಬಲ: ಜನರನ್ನು ಒಟ್ಟುಗೂಡಿಸುವುದು ಶಾಲಾ ಕಲೋತ್ಸವದ ಪ್ರತ್ಯೇಕತೆ-ಶಂಸೀರ್

ಮುಳ್ಳೇರಿಯ: ಕಾರಡ್ಕ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ವನ್ನು ನಿನ್ನೆ ಸಂಜೆ ವಿಧಾನಸಭೆಯ ಅಧ್ಯಕ್ಷ ಎ.ಎನ್. ಶಂಸೀರ್ ಉದ್ಘಾಟಿ ಸಿದರು. ದೀಪ ಬೆಳಗಿಸಿ ಉದ್ಘಾಟಿಸಿದ   ಬಳಿಕ ಮಾತನಾಡಿದ  ಅವರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದವರು ಕೂಡಾ ಕಲೆಗಾಗಿ ಒಂದುಗೂಡುತ್ತಾರೆ. ಶಾಲಾ ಕಲೋತ್ಸವದ ವೈಶಿಷ್ಟ್ಯವೆಂದರೆ ಇದೇ ಆಗಿದೆ ಎಂದರು. ಕಲೆ, ಸಾಹಿತ್ಯ, ಕ್ರೀಡೆಗಳೆಲ್ಲಾ ರಾಜಕೀಯಾ ತೀತವಾಗಿ ವಿಭಿನ್ನ ಅಭಿರುಚಿಗಳನ್ನು ಮರೆತು ಒಂದುಗೂಡಿಸುವ ವೇದಿಕೆಯಾಗಿದೆ.  ಕಲೋತ್ಸವ ಮುಗಿದಾಗ ಇಲ್ಲಿ ಯಾವುದೇ ತ್ಯಾಜ್ಯವನ್ನು ಉಳಿಸದೆ …

ಅಡಿಕೆ ಕೊಯ್ಯುವ ಕಾರ್ಮಿಕ  ಕಂಗಿನ ಮರದಿಂದ ಬಿದ್ದು ಮೃತ್ಯು

ಪೆರ್ಲ: ಅಡಿಕೆ ಕೊಯ್ಯಲೆಂದು ಕಂಗಿನ ಮರವೇರಿದ ವ್ಯಕ್ತಿ ಆಯತಪ್ಪಿ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಣಿಯಂಪಾರೆ ಪಳ್ಳಕಾನ ನಿವಾಸಿ ಸಯ್ಯದ್ ಅಲಿ (೪೫) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ನಿನ್ನೆ ಬೆಳಿಗ್ಗೆ ಮನೆ  ಸಮೀಪದ ವ್ಯಕ್ತಿಯೊಬ್ಬರ  ತೋಟದಲ್ಲಿ ಅಡಿಕೆ ಕೊಯ್ಯಲೆಂದು ಮರ ಹತ್ತಿದ ಇವರು ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಯಿ ತಾದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮನೆಗೆ ತಲುಪಿಸಿದ ಬಳಿಕ ಇಂದು ಬೆಳಿಗ್ಗೆ ಬೆದ್ರಂಪಳ್ಳ ಮಸೀದಿ …

ಸಿನಿಮಾ ನಿರ್ಮಾಪಕ ಕಸ್ಟಡಿಗೆ: ತೃಕ್ಕರಿಪುರದಲ್ಲಿ ಇ.ಡಿ. ದಾಳಿ

ಕೊಚ್ಚಿ/ಕಾಸರಗೋಡು: ದುಬಾ ಯ ಬ್ಯಾಂಕ್‌ನಿಂದ ಲಪಟಾಯಿಸಿದ ೩೦೦ ಕೋಟಿ ರೂಪಾಯಿಗಳನ್ನು ಹೇಗೆ ಖರ್ಚು ಮಾಡಲಾಯಿತೆಂಬ ಬಗ್ಗೆ ತಿಳಿಯಲು ಎನ್‌ಫೋರ್ಸ್ ಮೆಂಟ್ ಡೈರೆಕ್ಟರೇಟ್ (ಇ.ಡಿ) ತನಿಖೆ ಆರಂಭಿಸಿದೆ. ಇದರಂಗವಾಗಿ ವಂಚನೆ ಪ್ರಕರಣದ ಆರೋಪಿಯೂ, ಸಿನಿಮಾ ನಿರ್ಮಾ ಪಕನಾದ ತೃಕ್ಕರಿಪುರ ಉಡುಂಬುಂತಲ ನಿವಾಸಿ ಅಬ್ದುಲ್ ರಹ್ಮಾನ್ ಎಂಬಾ ತನನ್ನು ಕೊಚ್ಚಿಯಿಂದ ಕಸ್ಟಡಿಗೆ ತೆಗೆಯ ಲಾಗಿದೆ. ತನಿಖೆಗೊಳಪಡಿಸಿದ ಬಳಿಕ ನಿನ್ನೆ ಸಂಜೆ ಉಡುಂಬುಂತಲದ ಮನೆಯಲ್ಲಿ ಮಾಹಿತಿ ಸಂಗ್ರಹಿಸಲಾ ಯಿತು.  ಮಾಹಿತಿ ಸಂಗ್ರಹ ರಾತ್ರಿ ೧೦.೩೦ರ ವರೆಗೆ ಮುಂದುವರಿಯಿತು. ದುಬಾಯಿಯ ಬ್ಯಾಂಕೊಂದ ರಿಂದ …

ವರದಕ್ಷಿಣೆ ನೀಡಲಾಗದೆ ಯುವ ವೈದೆ ಆತ್ಮಹತ್ಯೆಗೈದ ಪ್ರಕರಣ: ವೈದ್ಯನಿಗೆ ಜೈಲು

ತಿರುವನಂತಪುರ: ಮದುವೆ ಯಾಗುವುದಾಗಿ ಭರವಸೆಯೊಡ್ಡಿ ಬಳಿಕ ಭಾರೀ ವರದಕ್ಷಿಣೆ ಬೇಡಿಕೆಯೊಡ್ಡಿದ ಪರಿಣಾಮ ಯುವ ವೈದ್ಯೆ ಆತ್ಮಹತ್ಯೆಗೈದ ಪ್ರಕರಣದಲ್ಲಿ ಯುವ ವೈದ್ಯ ಸೆರೆಗೀಡಾಗಿದ್ದಾನೆ. ಕೊಲ್ಲಂ ಶಕ್ತಿಕುಳಂಗರ ನಿವಾಸಿ ಡಾ| ರುವೈಸ್‌ನನ್ನು ವರದಕ್ಷಿಣೆ ನಿಯಮ ಪ್ರಕಾರ ತಿರುವನಂತಪುರ ಪೊಲೀಸರು ಬಂಧಿಸಿದ್ದಾರೆ.  ತಿರುವನಂತಪುರ ಮೆಡಿಕಲ್ ಕಾಲೇಜಿನ ಪಿ.ಜಿ ವಿದ್ಯಾರ್ಥಿನಿಯಾದ ಡಾ| ಶಹನರ ಆತ್ಮಹತ್ಯೆಗೆ ಸಂಬಂಧಿಸಿ  ರುವೈಸ್‌ನನ್ನು ಬಂಧಿಸಲಾಗಿದೆ. ಡಾ| ಶಹನರನ್ನು ಮದುವೆಯಾಗುವುದಾಗಿ ಡಾ| ರುವೈಸ್ ಭರವಸೆ ನೀಡಿದ್ದಾನೆನ್ನಲಾ ಗಿದೆ. ಬಳಿಕ ೧೫೦ ಪವನ್ ಚಿನ್ನಾಭರಣ, ಬಿಎಂಡಬ್ಲ್ಯು ಕಾರು, ಒಂದೂವರೆ ಕೋಟಿ ರೂಪಾಯಿ, …

ಕ್ರಿಸ್ಮಸ್, ಹೊಸ ವರ್ಷಾಚರಣೆ ಅಬಕಾರಿ ತಂಡದಿಂದ ವ್ಯಾಪಕ ದಾಳಿ: ಮದ್ಯ, ಗಾಂಜಾ, ಮಾದಕದ್ರವ್ಯ, ನಿಷೇಧಿತ ತಂಬಾಕು ಉತ್ಪನ್ನ ವಶ; ನಾಲ್ವರ ಸೆರೆ

ಕಾಸರಗೋಡು: ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷಾಚರಣೆಗೆ ಇನ್ನು ಕೆಲವು ದಿನಗಳು ಬಾಕಿ ಉಳಿದಿರುವಂತೆಯೇ ಈ ವೇಳೆ ಹೊರಗಿನಿಂದ ಜಿಲ್ಲೆಗೆ ಅಕ್ರಮ ಮದ್ಯ, ಮಾದಕ ದ್ರವ್ಯ ಇತ್ಯಾದಿಗಳು ಹರಿದು ಬರುವ ಸಾಧ್ಯತೆಯನ್ನು ಮನಗಂಡು ಅದನ್ನು ತಡೆಗಟ್ಟಲು ಅಬಕಾರಿ ತಂಡ ಜಿಲ್ಲೆಯಾದ್ಯಂತವಾಗಿ ನಿನ್ನೆಯಿಂದ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದೆ. ಇದರಂತೆ ವಿವಿಧೆಡೆಗಳಲ್ಲಾಗಿ ನಡೆಸಲಾದ ಕಾರ್ಯಾಚರಣೆಯಲ್ಲಿ ಮದ್ಯ, ಗಾಂಜಾ, ಮಾದಕದ್ರವ್ಯ, ನಿಷೇಧಿತ ತಂಬಾಕು ಉತ್ಪನ್ನಗಳನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿ ಅದಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ. ಮಾತ್ರವಲ್ಲ …

ಯುವಕನ ನಿಗೂಢ ಸಾವು: ಪೊಲೀಸರಿಂದ ತನಿಖೆ

ಉಪ್ಪಳ: ಮುಳಿಗದ್ದೆ ತಾಲ್ತಾಜೆ ಕೊರಗ ಕಾಲನಿಯ ಮತ್ತಾಡಿ ಎಂಬವರ ಪುತ್ರ ಗೋಪಾಲ (೨೮)ರ ಸಾವಿಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕವೇ ಸಾವಿಗೆ   ಕಾರಣವೇನೆಂದು ತಿಳಿಯಬ ಹುದೆಂದು  ಪೊಲೀಸರು ತಿಳಿಸಿದ್ದಾರೆ. ಕಳೆದ ಮಂಗಳವಾರದಿಂದ ಗೋಪಾಲ ನಾಪತ್ತೆಯಾಗಿದ್ದರು. ಹುಡುಕಾಟ ವೇಳೆ ಬುಧವಾರರಾತ್ರಿ ಪೆರುವೋಡಿ ಕುಡಾನ ಎಂಬಲ್ಲಿನ ಕಾಡು ಪೊದೆಗಳು ತುಂಬಿರುವ ಹಿತ್ತಿಲಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು …

ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ: ವಿ.ವಿ. ಪ್ರಾಧ್ಯಾಪಕನ ವಿರುದ್ಧ ಕೇಸು ದಾಖಲು

ಕಾಸರಗೋಡು: ವಿದ್ಯಾರ್ಥಿನಿ ಯೊಂದಿಗೆ ಅನುಚಿತವಾಗಿ ವರ್ತಿ ಸಿದ ಬಗ್ಗೆ ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದ ಅಧಿಕಾರಿಗಳು ನೀಡಿದ ದೂರಿನಂತೆ ಪ್ರಸ್ತುತ ವಿವಿಯ ಅಸಿಸ್ಟೆಂಟ್ ಪ್ರೊಫೆ ಸರ್ ಡಾ. ಇಫ್ತಿಕರ್ ಅಹಮ್ಮದ್‌ರ ವಿರುದ್ದ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪ್ರಾಧ್ಯಾ ಪಕನನ್ನು ವಿವಿಯ ಆಂತರಿಕ ದೂರು ಪರಿಹಾರ ಸೆಲ್   ಸೇವೆಯಿಂದ ಈ ಹಿಂದೆಯೇ ಅಮಾನತು ಗೊಳಿಸಿತ್ತು. ಕಳೆದ ನ. ೧೩ರಂದು ಆರೋಪಿ ವಿದ್ಯಾರ್ಥಿನಿಯೋರ್ವೆ ಜತೆ ಅನುಚಿತ ರೀತಿಯಲ್ಲಿ ವರ್ತಿಸಿರು ವುದಾಗಿ ಆಕೆ ವಿವಿಗೆ ದೂರು ನೀಡಿದ್ದಳು. ಅದನ್ನು …

ಗಾಂಜಾದೊಂದಿಗೆ ಕಾಸರಗೋಡಿನ ಇಬ್ಬರ ಸೆರೆ

ಕಾಸರಗೋಡು: ಸುಲ್ತಾನ್ ಬತ್ತೇರಿ ಮತ್ತಂಙದಲ್ಲಿ ಬತ್ತೇರಿ ಪೊಲೀಸ್ ಠಾಣೆಯ ಎಸ್.ಐ ಎನ್.ಎ. ರಾಧಾಕೃಷ್ಣನ್‌ರ ನೇತೃತ್ವದ  ಪೊಲೀಸರು ನಡೆಸಿದ ವಾಹನ ತಪಾಸಣೆಯಲ್ಲಿ ೨೨೮ ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಕಾಸರ ಗೋಡಿನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವೆಳ್ಳರಿಕುಂಡ್ ಪುದಿಯ ಪುರೆಯಿಲ್‌ನ ಪಿ.ಪಿ. ಸಿರಾಜ್ (೩೫) ಮತ್ತು ಪಳ್ಳಿಕ್ಕೆರೆ ಕುರುಚ್ಚಿಕನ್ನು ವೀಟಿಲ್‌ನ ಜೆ. ಮೊಹಮ್ಮದ್ ರಾಶೀದ್ (೩೦) ಬಂಧಿತ ಆರೋಪಿಗಳಾಗಿದ್ದಾರೆ.

ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದು ವಂಚಿಸಿದ ಪ್ರಕರಣ: ಆರೋಪಿ ವಿಮಾನ ನಿಲ್ದಾಣದಿಂದ ಸೆರೆ

ಕಾಸರಗೋಡು: ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದು ವಂಚನೆಗೈದ ಪ್ರಕರಣದ ಆರೋಪಿ ಗಲ್ಫ್ ನಿಂದ ಹಿಂತಿರುಗುತ್ತಿದ್ದ ವೇಳೆ ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ. ಉದುಮ ಬಾರಾ ಮಾಂಙಾಡ್ ತಾಮರಕುಳಿ ನಿವಾಸಿ ಮುಹಮ್ಮದ್ ಯಾಹ್ಯಾ ಯಾಕೂಬ್ (೩೮) ಎಂಬಾತ ಬಂಧಿತ ಆರೋಪಿ. ಕೇರಳ ಬ್ಯಾಂಕ್‌ನ ಮೇಲ್ಪರಂಬ ಶಾಖೆಯಲ್ಲಿ ನಕಲಿ ಚಿನ್ನ ಅಡವಿರಿಸಿ ೬,೯೦,೫೪೦ ರೂ. ಸಾಲ ಪಡೆದು ವಂಚನೆಗೈದ ಆರೋಪದಂತೆ ಪ್ರಸ್ತುತ ಬ್ಯಾಂಕ್‌ನ ಮೆನೇಜರ್ ಕಳೆದ ಮಾರ್ಚ್ ೭ರಂದು ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು …