ಆರೋಗ್ಯ ಸಚಿವೆ ವೀಣಾ ಜೋರ್ಜ್ ಇಂದು ಜಿಲ್ಲೆಯಲ್ಲಿ: ಉಕ್ಕಿನಡ್ಕದಲ್ಲಿ ಮೆಡಿಕಲ್ ಕಾಲೇಜು ಪ್ರವೇಶೋತ್ಸವ ಉದ್ಘಾಟನೆ

ಕಾಸರಗೋಡು:  ಕಾಸರಗೋಡು ಮೆಡಿಕಲ್ ಕಾಲೇಜು ನಿರ್ಮಾಣ ಪೂರ್ತಿಗೊಳಿಸಲು ಸರಕಾರ ೫೬ ಕೋಟಿ ರೂಪಾಯಿ ಮಂಜೂರು ಮಾಡಿರುವು ದಾಗಿ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್  ತಿಳಿಸಿದ್ದಾರೆ.  ಇಂದು ಬೆಳಿಗ್ಗೆ ಉಕ್ಕಿನಡ್ಕದಲ್ಲಿ ಕಾಸರ ಗೋಡು ಮೆಡಿಕಲ್ ಕಾಲೇಜಿನ ಪ್ರವೇಶೋತ್ಸವ ವನ್ನು   ಉದ್ಘಾಟಿಸಿ  ಸಚಿವೆ ಮಾತನಾಡಿದರು.  ಮೆಡಿಕಲ್ ಕಾಲೇಜಿಗೆ ಅಗತ್ಯವುಳ್ಳ ಕಟ್ಟಡಗಳ ನಿರ್ಮಾಣ ಕಾಮಗಾರಿ ನಾಲ್ಕು ತಿಂಗಳೊಳಗೆ ಪೂರ್ತಿಗೊಳಿಸಲಾಗುವುದು. ಇಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣ ಪೂರ್ತಿಗೊಂಡ ತಕ್ಷಣ ಚೆರ್ಕಳದಲ್ಲಿ ರುವ ಹಾಸ್ಟೆಲ್ ಇಲ್ಲಿಗೆ ಸ್ಥಳಾಂತರಿಸುವುದಾಗಿಯೂ ಸಚಿವೆ ತಿಳಿಸಿದ್ದಾರೆ.  ಕಾರ್ಯಕ್ರಮದಲ್ಲಿ  ಶಾಸಕ …

ಶಬರಿಮಲೆ ದೇಗುಲದ ಚಿನ್ನ ನಾಪತ್ತೆಯ ಹಿಂದೆ ಭಾರೀ ನಿಗೂಢತೆ

. ಸಮಗ್ರ ವಿಜಿಲೆನ್ಸ್ ತನಿಖೆ ಆರಂಭ . 26 ವರ್ಷಗಳ ವ್ಯವಹಾರಗಳ ಬಗ್ಗೆಯೂ ತನಿಖೆ . ಪ್ರಾಯೋಜಕರು ತನಿಖಾ ವ್ಯಾಪ್ತಿಯಲ್ಲಿ ಶಬರಿಮಲೆ: ಶಬರಿಮಲೆ ದೇವ ಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿದ್ದ ಚಿನ್ನ ನಾಪತ್ತೆಯಾಗಿರುವುದು ಭಾರೀ ನಿಗೂಢತೆಗಳಿಗೆ ದಾರಿಮಾಡಿಕೊಡು ತ್ತಿದೆ.  ಆ ಬಗ್ಗೆ ಕೇರಳ ಹೈಕೋರ್ಟ್ ನೀಡಿದ ನಿರ್ದೇಶ ಪ್ರಕಾರ ವಿಜಿಲೆನ್ಸ್ ವಿಭಾಗ ಸಮಗ್ರ ತನಿಖೆ  ಆರಂಭಿಸಿದೆ. ಇದೇ ಸಂದರ್ಭದಲ್ಲಿ ಶಬರಿಮಲೆ ದೇವಸ್ಥಾನದಲ್ಲಿ 1999ರಿಂದ 2025ರ ತನಕದ ಅವಧಿಯಲ್ಲಿ ನಡೆದ ಎಲ್ಲಾ ಚಿನ್ನದ ವ್ಯವಹಾರದ …

ಇಂಜಿನಿಯರ್ ನಾಪತ್ತೆ : ಮೊಬೈಲ್ ಫೋನ್, ಚಪ್ಪಲಿ ಬೇಕಲ ಕೋಟೆ ಸಮೀಪ ಪತ್ತೆ

ಕಾಸರಗೋಡು: ಕಾಞಂಗಾಡ್  ನಿವಾಸಿಯಾದ ಯುವ ಇಂಜಿನಿಯರ್ ನಾಪತ್ತೆಯಾದ ಬಗ್ಗೆ  ದೂರಲಾಗಿದೆ. ಕಾಞಂಗಾಡ್ ಸೌತ್ ಮಾತೋಪ್ ಕ್ಷೇತ್ರದ ಬಳಿಯ ನಿವಾಸಿ ಯು.ಕೆ. ಜಯಪ್ರಕಾಶ್‌ರ ಪುತ್ರ ಪ್ರಣವ್ (33) ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ತಂದೆ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಮಧ್ಯೆ ಪ್ರಣವ್‌ರ ಮೊಬೈಲ್ ಫೋನ್, ಚಪ್ಪಲಿ ಹಾಗೂ ಸಣ್ಣ ಪತ್ರ ವೊಂದು ಬೇಕಲಕೋಟೆ ಸಮೀಪದ ಕಡಪ್ಪುರದಿಂದ ಸ್ಥಳೀಯನಾದ ಓರ್ವ ಪತ್ತೆ ಮಾಡಿದ್ದಾರೆ. ಫೋನ್‌ಗೆ ಬಂದ ಕರೆಯನ್ನು ಸ್ವೀಕರಿಸಿದಾಗ ಈ ಮೊಬೈಲ್ ಪ್ರಣವ್‌ನದ್ದೆಂದು …

ತರವಾಡು ಮನೆಯಿಂದ 10 ಪವನ್ ಚಿನ್ನ ನಾಪತ್ತೆ: ಹೋಂನರ್ಸ್ ಮೇಲೆ ಶಂಕೆ

ಕಾಸರಗೋಡು: ನಗರದ ಅಣಂಗೂರು ಪಚ್ಚೆಕ್ಕಾಡ್ ನೂರ್ ಮಂಜಿಲ್ ಟಿ.ಎ. ಶಾಹಿನ ಎಂಬವರ ಮನೆಯಿಂದ 10 ಪವನ್ ಚಿನ್ನ ನಾಪತ್ತೆಯಾದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಗೋಸ್ತ್ 14 ಮತ್ತು ಸೆಪ್ಟಂಬರ್ 6ರ ನಡುವಿನ ಯಾವುದೋ ಸಮಯದಲ್ಲಿ ಕಳವು ನಡೆದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಶಾಹಿನಾ ತಿಳಿಸಿದ್ದಾರೆ. ಶಾಹಿನಾಳ ತಾಯಿಯ ತರವಾಡು ಮನೆಯಿಂದ ಈ ಚಿನ್ನ ಕಳವುಹೋಗಿದೆ. ಈ ಮನೆಯ ಹೋಂ ನರ್ಸ್ ಮೇಲೆ ದೂರಿನಲ್ಲಿ ಶಂಕೆ ವ್ಯಕ್ತಪಡಿಸಲಾಗಿದೆ. …

ರೈಲಿನಲ್ಲಿ ಯುವತಿಯ 30ಗ್ರಾಂ ಚಿನ್ನಾಭರಣ, ಹಣ ಕಳವುಗೈದ ಆರೋಪಿ ಬಂಧನ

ಕಾಸರಗೋಡು: ಹೈದರಾಬಾದ್ ನಿವಾಸಿಯಾದ ಯುವತಿಯ 30 ಗ್ರಾಂ ತೂಕದ ಚಿನ್ನದ ಸರ, 12 ಗ್ರಾಂ ತೂಕದ ಚಿನ್ನದ ಬಳೆ, ಫಾಸ್ಟ್‌ಟ್ರಾಕ್ ವಾಚ್, ಐಫೋನ್ ಚಾರ್ಜರ್, 1050 ರೂ. ಒಳಗೊಂಡ ಹ್ಯಾಂಡ್‌ಬ್ಯಾಗ್ ಕಳವುಗೈದ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ತಿರುವನಂತಪುರ ನೆಡುಮಂಗಾಡ್ ಆನಾಡ್ ನಿವಾಸಿ ಅಶ್ವಿನ್ (24) ಎಂಬಾತನನ್ನು ಕಾಸರ ಗೋಡು ರೈಲ್ವೇ ಪೊಲೀಸರು ಬಂಧಿಸಿ ದ್ದಾರೆ. ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ತಿರುನಲ್‌ವೇಲಿ ರೈಲ್ವೇ ಪೊಲೀಸರು ಇಡುಕ್ಕಿಯಿಂದ ಈತನನ್ನು ಸೆರೆಹಿಡಿದಿದ್ದರು. ಈ ವಿಷಯ ತಿಳಿದ ಕಾಸರಗೋಡು ರೈಲ್ವೇ ಪೊಲೀಸರು …

ಎಂಬಿಬಿಎಸ್: ಜಿಲ್ಲೆಯಿಂದ ಪ್ರವೇಶ ಲಭಿಸಿದ್ದು ಏಕ ವಿದ್ಯಾರ್ಥಿನಿಗೆ ಮಾತ್ರ

ಉಕ್ಕಿನಡ್ಕ: ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷ ಎಂಬಿಬಿಎಸ್ ಕೋರ್ಸ್‌ನ ಉದ್ಘಾಟನೆಯನ್ನು ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ಇಂದು ಬೆಳಿಗ್ಗೆ ನೆರವೇರಿಸಿದ್ದಾರೆ. ವಿಶೇಷವೇನೆಂದರೆ ಈ ಪ್ರಥಮ ವರ್ಷದ ಕೋರ್ಸ್‌ಗೆ ಕಾಸರಗೋಡು ಜಿಲ್ಲೆಯಿಂದ ಪಾಣತ್ತೂರು ಸಮೀಪದ ಮೈಲಾಟಿಯ ಎ.ಆರ್. ಆಶಿಕಾರಾಜ್‌ಗೆ ಮಾತ್ರವೇ ಪ್ರವೇಶ ಲಭಿಸಿದೆ. ಈಕೆ ಮೈಲಾಟಿಯ ಕೆ. ರಾಜೇಂದ್ರನ್-ಕಳ್ಳಾರು ಗ್ರಾಮ ಪಂಚಾಯತ್ ಓವರ್‌ಸೀಯರ್ ಇ. ರಾಧಾಮಣಿ ದಂಪತಿಯ ಪುತ್ರಿಯಾಗಿದ್ದಾಳ. ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂಸಿ) ಒಟ್ಟು …

ಪೇರಾಲ್ ಕಣ್ಣೂರು ದರ್ಸ್‌ನಿಂದ ವಿದ್ಯಾರ್ಥಿ ನಾಪತ್ತೆ

ಕುಂಬಳೆ: ಪೇರಾಲ್ ಕಣ್ಣೂರು ಜುಮಾ ಮಸೀದಿ ಅಧೀನದಲ್ಲಿರುವ ಸೀದಿ ವಲಿಯುಲ್ಲಾಹಿ ದರ್ಗಾ ಶರೀಫ್ ದರ್ಸ್‌ನಿಂದ ವಿದ್ಯಾರ್ಥಿ ಯೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಬಳೆ ಕೋಟೆಕಾರ್‌ನ ಮೂಸಾ ಎಂಬವರ ಪುತ್ರ ಹಸನ್ (12) ಎಂಬಾತ ನಿನ್ನೆ ರಾತ್ರಿ 8 ಗಂಟೆ ಬಳಿಕ ದರ್ಸ್‌ನಿಂದ ನಾಪತ್ತೆಯಾಗಿದ್ದಾನೆ. ಈ ಕುರಿತು ತಂದೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಾಪತ್ತೆ ವೇಳೆ ಬಾಲಕನ ಕೈಯಲ್ಲಿ ಹಳದಿ ಬಣ್ಣದ ಬ್ಯಾಗ್ ಇದ್ದಿರುವುದಾಗಿಯೂ ನಸುಕಂದು ಬಣ್ಣದ ಜುಬ್ಬಾ ಧರಿಸಿದ್ದನೆಂದು ದೂರಿನಲ್ಲಿ …

ಬೋವಿಕ್ಕಾನ ಬಳಿ ಮನೆಯಿಂದ ಕಳವು: ತನಿಖೆ ಆರಂಭ

ಮುಳ್ಳೇರಿಯ: ಬೋವಿಕ್ಕಾನ ಮೂಲಡ್ಕದಲ್ಲಿ ಗಲ್ಫ್ ಉದ್ಯೋಗಿ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಆದೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೂಲಡ್ಕ ಬಳಿಯ ಕಾವುಪಡಿ ಎಂಬಲ್ಲಿನ ಅಬ್ದುಲ್ ಖಾದರ್‌ರ ಮನೆಯಲ್ಲಿ ಕಳವು ನಡೆದಿದೆ. ಅಬ್ದುಲ್ ಖಾದರ್‌ರ ಪತ್ನಿ ಹಾಗೂ ಮಕ್ಕಳು ಚೌಕಿಯ ಸಂಬಂಧಿಕರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಕಪಾಟುಗಳಲ್ಲಿದ್ದ ಹಣ ಕಳವು ನಡೆಸಿದ್ದಾರೆ. ಮೊನ್ನೆ ರಾತ್ರಿ ಮನೆಯ ಬಾಗಿಲು ಮುರಿದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸಮೀಪದ ಸಂಬಂಧಿಕರು ಮನೆ ಮಂದಿಗೆ ಮಾಹಿತಿ ನೀಡಿದ್ದರು.

ಉಪ್ಪಳ ಪೇಟೆಯಲ್ಲಿ ಯುವಕ ಕುಸಿದು ಬಿದ್ದು ಮೃತ್ಯು

ಉಪ್ಪಳ: ಉಪ್ಪಳ ಪೇಟೆಯಲ್ಲಿ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಉಪ್ಪಳ ಹಿದಾಯತ್ ಬಜಾರ್ ಬಿ.ಎಂ. ಮಾಹಿನ್ ಹಾಜಿ ರಸ್ತೆಯ ದಿ| ಅಬ್ದುಲ್ಲರ ಪುತ್ರ ಅಶ್ಪಾಕ್ (45) ಮೃತಪಟ್ಟ ವ್ಯಕ್ತಿ.  ಕೂಲಿ ಕಾರ್ಮಿಕನಾದ ಅಶ್ಪಾಕ್‌ಗೆ ನಿನ್ನೆ ಮಧ್ಯಾಹ್ನ ಎದೆ ನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದರಿಂದ ಉಪ್ಪಳ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಬಳಿಕ ಮನೆಗೆ ತಲುಪಿ ವಿಶ್ರಾಂತಿ ಪಡೆದು ಸಂಜೆ ವೇಳೆ ಉಪ್ಪಳ ಪೇಟೆಗೆ ತೆರಳಿದ್ದರು. ಈ ವೇಳೆ ಅಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ …

ಮನೆಯಿಂದ ಹಣ, ಚಿನ್ನಾಭರಣ ಸಹಿತ ತೆರಳಿದ ಯುವತಿ ಕೊಲೆಗೀಡಾದ ಪ್ರಕರಣ: ಪ್ರೇತಬಾಧೆ ಹೋಗಲಾಡಿಸುವುದಾಗಿ ತಿಳಿಸಿ 30 ಪವನ್ ಚಿನ್ನ ಲಪಟಾಯಿಸಿದ ಮಂತ್ರವಾದಿ ಬಂಧನ

ಕಣ್ಣೂರು: ಇರಿಕ್ಕೂರು ಕಲ್ಯಾಟ್ ಎಂಬಲ್ಲಿರುವ ಪತಿ ಮನೆಯಿಂದ ಕರ್ನಾ ಟಕದ ಹುಣಸೂರು ನಿವಾಸಿಯಾದ ದರ್ಶಿತ ಎಂಬಾಕೆ ಕಳವು ನಡೆಸಿದ 30 ಪವನ್ ಚಿನ್ನಾಭರಣಗಳನ್ನು ಲಪಟಾ ಯಿಸಿರುವುದು ಮಂತ್ರವಾದಿಯಾಗಿದ್ದಾನೆಂದು ಸಾಬೀತುಗೊಂಡಿದೆ. ಈ ಹಿನ್ನೆಲೆಯಲ್ಲಿ ಮಂತ್ರವಾದಿಯಾದ ಹಾಸನ ತಟ್ಟೇಕರ ಸಿಂಗಪಟ್ಟಣದ ಮಂಜುನಾಥ (39) ಎಂಬಾತನನ್ನು ಇರಿಕ್ಕೂರು ಪೊಲೀಸರು ಬಂಧಿಸಿದ್ದಾರೆ. ಪ್ರೇತಬಾಧೆ ಹೋಗಲಾಡಿಸುವುದಾಗಿ ತಿಳಿಸಿ ದರ್ಶಿತಳ ಕೈಯಿಂದ 2ಲಕ್ಷ ರೂ. ಹಾಗೂ 30 ಪವನ್ ಚಿನ್ನಾಭರಣಗ ಳನ್ನು ಮಂತ್ರವಾದಿ ಪಡೆದುಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 22ರಂದು ಇರಿಕ್ಕೂರು ಕಲ್ಯಾಟ್‌ನ ಸುಭಾಷ್‌ರ …