ದೈವ ನೇಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಅಪಘಾತ  ಸ್ಕೂಟರ್ ಮಗುಚಿ ಯುವತಿಯರಿಬ್ಬರಿಗೆ ಗಾಯ

ಕಾಸರಗೋಡು: ದೈವನೇಮ ಕಂಡು ಹಿಂತಿರುಗುತ್ತಿದ್ದ ಯುವತಿಯರು ಸಂಚರಿಸಿದ ಸ್ಕೂಟರ್ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಇಬ್ಬರು ಗಾಯಗೊಂಡರು.  ಪೆರುಂಬಳ ಚಿರವಾದುಕ್ಕಲ್ ನಿವಾಸಿ ಪ್ರಮೀಳ (45), ಸಂಬಂಧಿಕೆ ಶ್ರೀಕೃಷ್ಣ (25) ಗಾಯಗೊಂಡವರು. ಇವರನ್ನು ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮುಂಜಾನೆ 5 ಗಂಟೆವೇಳೆ ಪೆರುಂಬಳ, ಚೆಲ್ಲುಞಿಯಲ್ಲಿ ಅಪಘಾತ ಸಂಭವಿಸಿದೆ. ಅಣಿಞ ತುಳಿಚ್ಚೇರಿ ತರವಾಡಿನಲ್ಲಿ ದೈವಕೋಲದಲ್ಲಿ ಭಾಗವಹಿಸಿ ಇವರಿಬ್ಬರು ಸ್ಕೂಟರ್‌ನಲ್ಲಿ ಹಿಂತಿರುಗುತ್ತಿದ್ದರು. ಚೆಲ್ಲುಞಿ ಇಳಿಜಾರಿಗೆ ತಲುಪಿದಾಗ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಬಿದ್ದಿದೆ. ಇನ್ನೊಂದು …

ಕಾಸರಗೋಡಿನ ಅಭಿವೃದ್ಧಿಗೆ ಎನ್‌ಡಿಎ ಗೆಲುವು ಅನಿವಾರ್ಯ-ಲಕ್ಷ್ಮಿಪ್ರಿಯ

ಕಾಸರಗೋಡು: ಅಭಿವೃದ್ಧಿಗೆ ಎಲ್ಲಾ ಸಾಧ್ಯತೆಗಳಿದ್ದರೂ ಕಾಸರಗೋಡು ಜಿಲ್ಲೆ ಅಭಿವೃದ್ಧಿಯಲ್ಲಿ ಭಾರೀ   ಹಿಂದುಳಿದಿದೆ. ಬಾಲ್ಯವನ್ನು ಇಲ್ಲಿ ಕಳೆದ ತನಗೆ ಈಗ ಇಲ್ಲಿನ ಪರಿಸ್ಥಿತಿ ಭಾರೀ ನೋವುಂಟು ಮಾಡಿದೆ ಯೆಂದು ಸಿನಿಮಾ, ಸೀರಿಯಲ್ ನಟಿ  ಲಕ್ಷ್ಮಿ ಪ್ರಿಯ ತಿಳಿಸಿದ್ದಾರೆ. ಮಾನ್ಯದಲ್ಲಿ ಇಂದು ಬೆಳಿಗ್ಗೆ ನಡೆದ  ಎನ್‌ಡಿಎ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾ ಡುತ್ತಿದ್ದರು. ಎಂಡೋಸಲ್ಫಾನ್ ಸಂತ್ರಸ್ತರು ಸಹಿತ ಹಲವು ಮಂದಿ ಉತ್ತಮ ಚಿಕಿತ್ಸೆ, ಉದ್ಯೋಗ, ಶಿಕ್ಷಣ ಲಭಿಸದೆ  ಭಾರೀ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಿರುವಾಗ ಇಲ್ಲಿನ ಅಭಿವೃದ್ಧಿಗಾಗಿ ಈ ಬಾರಿ …

ಬಿಜೆಪಿ ಅಭ್ಯರ್ಥಿಯ ಮೂರನೇ ಹಂತದ ಮನೆ ಸಂಪರ್ಕ ಪೂರ್ಣ

ಉಪ್ಪಳ:  ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ರ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿದ್ದು, ಮಂಜೇಶ್ವರ ಮಂಡಲದಲ್ಲಿ ನಿನ್ನೆ ೩ನೇ ಹಂತದ ಮನೆ ಸಂಪರ್ಕ ಪೂರ್ಣಗೊಂ ಡಿದೆ.  ಪುತ್ತಿಗೆ ಪಂಚಾಯತ್‌ನ ವಿವಿಧ ಪ್ರದೇಶಗಳಲ್ಲಿ ನಿನ್ನೆ ಕೆ. ಸುರೇಂದ್ರನ್ ಪ್ರಚಾರ ನಡೆಸಿದರು. ಅಲ್ಲದೆ ವಿವಿಧ ಕಾಲನಿ, ದೈವಸ್ಥಾನ, ದೇವಸ್ಥಾನಗಳಿಗೆ ಭೇಟಿ ನೀಡಿದರು. ಐಲ ಶ್ರೀ ದುರ್ಗಾಪರಮೇಶ್ವರಿ ಕಲಾ ಭವನದಲ್ಲಿ ನಡೆದ ಕೂಟ ಮಹಾಜಗತ್ತು  ಮಂಗಲ್ಪಾಡಿ ಅಂಗಸ್ಥೆಯ ಕೂಟ ಯುವಶಕ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ಕೆ. ಸುರೇಂದ್ರನ್ ಭಾಗವಹಿಸಿದರು.

ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಕಾಸರಗೋಡು ಮೆಡಿಕಲ್ ಕಾಲೇಜು ಪೂರ್ಣ ಸಜ್ಜು-ವಿ.ಡಿ. ಸತೀಶನ್

ಬದಿಯಡ್ಕ:  ಐಕ್ಯರಂಗ ಸರಕಾರ  ಅಧಿಕಾರಕ್ಕೆ ತಲುಪಿದ ಆರು ತಿಂಗಳೊಳಗೆ ಕಾಸರಗೋಡು ಮೆಡಿಕಲ್ ಕಾಲೇಜು ಪೂರ್ಣ ಸಜ್ಜುಗೊಳಿಸಲಾಗುವುದೆಂದು ವಿಪಕ್ಷ ಮುಖಂಡ ವಿ.ಡಿ. ಸತೀಶನ್ ನುಡಿದರು. ಎಂಡೋಸಲ್ಫಾನ್ ಸಂತ್ರಸ್ತರ ವಿರುದ್ಧ ಮುಖಮಾಡಿದ ಆಡಳಿತ ಕೂಟ ಕಳೆದ ಹತ್ತು ವರ್ಷದಿಂದ ರಾಜ್ಯ ಆಡಳಿತ ನಡೆಸುತ್ತಿದೆ. ಆದರೆ ಮುಂದೆ ಎಂಡೋಸಲ್ಫಾನ್ ಸಂತ್ರಸ್ತರನ್ನು ಪರಿಗಣಿಸುವ ಸರಕಾರ ಅಧಿಕಾರಕ್ಕೆ ಬರಲಿದೆಯೆಂದು ಅವರು ನುಡಿದರು. ಕಾಸರಗೋಡು ಮಂಡಲ ಐಕ್ಯಪ್ರಜಾಪ್ರಭುತ್ವ ಒಕ್ಕೂಟ ಅಭ್ಯರ್ಥಿ ಕಲ್ಲಟ್ರ ಮಾಹಿನ್‌ರವರ ಪ್ರಚಾರ ಮಹಾಸಭೆ ಬದಿಯಡ್ಕದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.  ಮಂಡಲ ಚುನಾವಣಾ ಸಮಿತಿ …

ಎಡರಂಗದ ಪ್ರಚಾರ ಸಭೆಯಲ್ಲಿ ಸುಭಾಷಿಣಿ ಅಲಿ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದರ ಪರವಾಗಿ ಪೈವಳಿಕೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯೆ ಸುಭಾಷಿಣಿ ಅಲಿ ಉದ್ಘಾಟಿಸಿದರು. ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ವಿ. ಜಯರಾಜನ್, ಶಾಸಕ ಇ. ಚಂದ್ರಶೇಖರನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ರಾಜ ಗೋಪಾಲನ್ ಸಹಿತ ಹಲವಾರು ಮುಖಂಡರು ಭಾಗವಹಿಸಿದರು. ಸಿಜಿ ಮ್ಯಾಥ್ಯು ಸ್ವಾಗತಿಸಿ, ಅಜಿತ್ ಎಂ.ಸಿ.ಲಾಲ್‌ಬಾಗ್ ವಂದಿಸಿದರು. ಬಾಯಾರುಪದವಿನಿಂದ ರೋಡ್ ಶೋ ನಡೆಸಲಾಯಿತು.

ಪೆರ್ಲ ಪೇಟೆಯಲ್ಲಿ ನಾಳೆ ಅಣ್ಣಾಮಲೈ ರೋಡ್ ಶೋ

ಪೆರ್ಲ: ನಾಳೆ ಪೆರ್ಲ ಪೇಟೆಯಲ್ಲಿ ನಡೆಯುವ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಪರ ಪ್ರಚಾರಾರ್ಥ ನಡೆಯುವ ರೋಡ್ ಶೋ ಕಾರ್ಯಕ್ರಮದಲ್ಲಿ ತಮಿಳುನಾಡು ಬಿಜೆಪಿ  ಮಾಜಿ ಅಧ್ಯಕ್ಷ ಅಣ್ಣಾಮಲೈ ಭಾಗವಹಿಸುವರು ನಾಳೆ ಬೆಳಿಗ್ಗೆ 10 ಗಂಟೆಗೆ ಪೆರ್ಲ ಪೇಟೆಯಲ್ಲಿ ರೋಡ್ ಶೋ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಐಕ್ಯರಂಗದ ಚುನಾವಣಾ ಪ್ರಚಾರ ಸಭೆ ಮಜೀರ್ಪಳ್ಳದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ

ವರ್ಕಾಡಿ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್‌ರ ಚುನಾವಣಾ ಪ್ರಚಾರಸಭೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿ ಮಾತನಾಡಿದರು.ನಿನ್ನೆ ಸಂಜೆ ಮಜೀರ್ಪಳ್ಳದಲ್ಲಿ ಸಭೆ ನಡೆಯಿತು. ಚುನಾವಣಾ ಸಮಿತಿ ಅಧ್ಯಕ್ಷ ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಸಚಿವ ಬೋಸ್ ರಾಜ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಅಭ್ಯರ್ಥಿ ಎಕೆಎಂ ಅಶ್ರಫ್, ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಹಕೀಂ ಕುನ್ನಿಲ್, ಸುಬ್ಬಯ್ಯ ರೈ, ಸೋಮಶೇಖರ ಜೆ.ಎಸ್, ಬಾಲಕೃಷ್ಣ ಪೆರಿಯ, ಎಂ. ಅಬ್ಬಾಸ್, ವಿನಯಕುಮಾರ್ ಸೊರಕೆ, ಪುತ್ತೂರು ಶಾಸಕ ಅಶೋಕ್ ರೈ, …

ಮತದಾನಕ್ಕೆ ಇನ್ನು  ಮೂರು ದಿನಗಳು ಮಾತ್ರ ಬಾಕಿ ಅಬ್ಬರದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ

. ಅಮಿತ್ ಷಾ, ಶಿವರಾಜ್ ಸಿಂಗ್ ಚೌಹಾಣ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಹಿತ ಪ್ರಮುಖ ನೇತಾರರಿಂದ ಇಂದು ಪ್ರಚಾರ ತಿರುವನಂತಪುರ:  ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಮೂರು  ದಿನಗಳು ಮಾತ್ರವೇ ಬಾಕಿ ಉಳಿದಿದ್ದು ಅಬ್ಬರದ ಬಹಿರಂಗ ಚುನಾವಣಾ ಪ್ರಚಾರಕ್ಕೆ ನಾಳೆ ತೆರೆಬೀಳಲಿದೆ. ಇದೇ ವೇಳೆ ಎಡರಂಗ, ಐಕ್ಯರಂಗ, ಎನ್‌ಡಿಎ ಪರ ಚುನಾವಣಾ ಪ್ರಚಾರಕ್ಕಾಗಿ ಈ ಒಕ್ಕೂಟಗಳ ಹಲವು ಘನಾನುಘಟಿ ನಾಯಕರು ಇಂದು ರಾಜ್ಯಕ್ಕೆ ಆಗಮಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ನಿನ್ನೆಯೇ ಕೇರಳಕ್ಕೆ ಆಗಮಿಸಿದ್ದಾರೆ.  …

ತಲಪಾಡಿಯಲ್ಲಿ ಕಾರು-ಸ್ಕೂಟರ್ ಅಪಘಾತ: ಪೊಡಿಪ್ಪಳ್ಳ ನಿವಾಸಿ ಮೃತ್ಯು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ತಲಪಾಡಿಯಲ್ಲಿ ಶನಿವಾರ ರಾತ್ರಿ ಸ್ಕೂಟರ್- ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಅತಿಥಿಗೃಹದ ನೌಕರ ಮೃತಪಟ್ಟ ಘಟನೆ ನಡೆದಿದೆ. ಕುಂಬ್ಡಾಜೆ ಪೊಡಿಪಳ್ಳಂ ನಿವಾಸಿ ಸತೀಶ್ ಕೆ. (46) ಮೃತಪಟ್ಟವರು. ಇವರು ಉಪ್ಪಳ ಬಳಿಯ ಮಣ್ಣಂಗುಳಿಯಲ್ಲಿರುವ ಪಿಡಬ್ಲ್ಯುಡಿ ಅತಿಥಿಗೃಹದಲ್ಲಿ ಕಳೆದ 7 ವರ್ಷಗಳಿಂದ ನೌಕರನಾಗಿದ್ದಾರೆ. ಶನಿವಾರ ರಾತ್ರಿ ಸ್ನೇಹಿತನ ಸ್ಕೂಟರ್‌ನಲ್ಲಿ ಸಹ ಸವಾರನಾಗಿದ್ದರು. ಗಂಭೀರ ಗಾಯಗೊಂಡ ಸತೀಶ್‌ರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಸ್ಕೂಟರ್ ಚಲಾಯಿಸಿದ ಮಂಗಲ್ಪಾಡಿ …

2.8 ಕಿಲೋ ಎಂಡಿಎಂಎ ವಶ: ಯುವತಿ ಸಹಿತ ಇಬ್ಬರ ಬಂಧನ

ಕಾಸರಗೋಡು: ಕಾಸರಗೋಡು ಜಿಲ್ಲಾ ಕ್ರೈಂ ಬ್ರಾಂಚ್ ಡಿವೈಎಸ್ಪಿಯಾ ಗಿದ್ದ ಟಿ. ಉತ್ತಮ್ ದಾಸ್‌ರ ನೇತೃತ್ವದಲ್ಲಿ  ನಡೆದ ಕಾರ್ಯಾ ಚರಣೆಯಲ್ಲಿ ಭಾರೀ  ಪ್ರಮಾಣದ ಮಾದಕವಸ್ತು ವಶಪಡಿಸಲಾಗಿದೆ.  ಈ ಸಂಬಂಧ ಯುವತಿ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಮುಕ್ಕಂ ಪುಳಪೊ ಯಿಲ್ ಪುಲ್ಲಂಬಾಡಿ ಪರಂಬಿಲ್ ಪಿ. ಮುಹಮ್ಮದ್ ಹನೀಫ (36), ಕಲ್ಲಿಕೋಟೆ ಬೇಪೂರಿನ ರೈಹಾನತ್ (45) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರ ಕೈಯಿಂದ 2.8 ಕಿಲೋ ಎಂಡಿಎಂಎ ವಶಪಡಿಸಲಾಗಿದೆ. ಕಲ್ಲಿಕೋಟೆ ರೂರಲ್ ಎಸ್ಪಿಗೆ ಲಭಿಸಿದ ಮಾಹಿತಿ ಯ ಆಧಾರದಲ್ಲಿ ನಾರ್ಕೋಟಿಕ್ ಸೆಲ್ …