ಇಲೆಕ್ಟ್ರಿಕ್ ಸೈಕಲ್ ಅಪಘಾತ: ಗಾಯಗೊಂಡ ವ್ಯಕ್ತಿ ಮೃತ್ಯು

ಉಪ್ಪಳ:    ಬಾಯಾರು ಕೊಜಪ್ಪೆ  ಜಂಕ್ಷನ್ ಸಮೀಪ  ಇಲೆಕ್ಟ್ರಿಕ್ ಸೈಕಲ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ವ್ಯಕ್ತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಬಾಯಾರು ಕೊಜಪ್ಪೆ ನಿವಾಸಿ ಇಬ್ರಾಹಿಂ (66) ಮೃತಪಟ್ಟ ದುರ್ದೈವಿ. ನಿನ್ನೆ ಬೆಳಿಗ್ಗೆ 9.30ರ ವೇಳೆ ಅಪಘಾತ ಉಂಟಾಗಿದೆ. ಅಳಿಯ ಚಲಾಯಿಸುತ್ತಿದ್ದ ಇಲೆಕ್ಟ್ರಿಕ್ ಸೈಕಲ್‌ನ ಹಿಂಬದಿ ಕುಳಿದು ಇಬ್ರಾಹಿಂ ಪ್ರಯಾಣಿಸುತ್ತಿದ್ದರು. ಕೊಜಪ್ಪೆ ಜಂಕ್ಷನ್ ಸಮೀಪ   ಸೈಕಲ್  ನಿಯಂತ್ರಣ  ಮಗುಚಿ ಬಿದ್ದು ಅಪಘಾತ ವುಂಟಾಗಿರುವುದಾಗಿ  ಹೇಳಲಾಗುತ್ತಿದೆ.  ಗಂಭೀರ ಗಾಯಗೊಂಡ ಇಬ್ರಾಹಿಂರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲ …

ಮಂಗಲ್ಪಾಡಿ ಪಂ.ನಲ್ಲಿ ಲೀಗ್ ಅಭ್ಯರ್ಥಿ ಅವಿರೋಧ ಆಯ್ಕೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿಯೊಬ್ಬರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಪಂಚಾಯತ್‌ನ 24ನೇ ವಾರ್ಡ್ ಮಣಿಮುಂಡ ದಲ್ಲಿ ಲೀಗ್ ಅಭ್ಯರ್ಥಿಯಾಗಿ ನಾಮಪತ್ರಿಕೆ ಸಲ್ಲಿಸಿದ ಸಮೀನ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ. ಈ ವಾರ್ಡ್‌ನಲ್ಲಿ  ಅವರಿಗೆ ಪ್ರತಿಸ್ಪರ್ಧಿಗಳು ಯಾರೂ ಇಲ್ಲದುದರಿಂದ ಸಮೀನರನ್ನು  ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಪರಾಭವಗೊಂಡಿದ್ದ ಈ ವಾರ್ಡ್‌ನಲ್ಲಿ ಬಿಜೆಪಿ ಹಾಗೂ ಸಿಪಿಎಂ ಸಮಾನ ಶಕ್ತಿ ಹೊಂ ದಿರುವುದಾಗಿ ಹೇಳಲಾಗುತ್ತಿದೆ. ಸಮೀನ ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆಯಾಗಿದ್ದರು. ನಾಮಪತ್ರಿಕೆ ಸಲ್ಲಿಸಬೇಕಾದ …

ನಾಪತ್ತೆಯಾಗಿದ್ದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ

ಉಪ್ಪಳ: ನಾಪತ್ತೆಯಾಗಿದ್ದ ಯುವಕ  ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ವರ್ಕಾಡಿ ಬಟ್ಯಡ್ಕ ನಿವಾಸಿ ದಿ| ಪೂವಪ್ಪ ಬೆಳ್ಚಾಡರ ಪುತ್ರ ಗಣೇಶ್ ಬಿ (35) ಮೃತಪಟ್ಟ ವ್ಯಕ್ತಿ.  ಸೆಂಟ್ರಿಂಗ್ ಕಾರ್ಮಿಕನಾಗಿದ್ದ ಇವರು ನವಂಬರ್ 20ರಂದು ಮುಂಜಾ ನೆಯಿಂದ   ನಾಪತ್ತೆಯಾಗಿದ್ದರು. ನಿನ್ನೆ ಕೂಡಾ ಇವರು ಮನೆಗೆ ತಲುಪದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ಆರಂಭಿಸಿದ್ದರು. ಈ ಮಧ್ಯೆ  ನೆರೆಮನೆಯ ಬಾವಿ ಸಮೀಪ ಗಣೇಶರ ಚಪ್ಪಲಿ ಪತ್ತೆಯಾಗಿತ್ತು. ಇದರಿಂದ ಬಾವಿಯಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಊರವರು ಮೇಲೆತ್ತಿ ಮಂಗಲ್ಪಾಡಿ ಆಸ್ಪತ್ರೆಗೆ …

ಶಬರಿಮಲೆ ಗರ್ಭಗುಡಿ ಬಾಗಿಲು, ದ್ವಾರಪಾಲಕ ಮೂರ್ತಿಗಳು ತಾಮ್ರದ್ದಾಗಿದೆಯೆಂದು ತಿದ್ದಿ ಬರೆದದ್ದು ಎ. ಪದ್ಮಕುಮಾರ್

ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ಮೂರ್ತಿಗಳು ತಾಮ್ರದ್ದಾಗಿದೆಯೆಂದು  ಮುಜರಾಯಿ ಮಂಡಳಿಯ ಕಾರ್ಯಸೂಚಿಯಲ್ಲಿ ತಿದ್ದಿ ಬರೆದದ್ದು ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಆಗಿದ್ದಾರೆಂದು ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದ  ರಿಮಾಂಡ್ ವರದಿಯಲ್ಲಿ  ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ  ಬಂಧಿತರಾಗಿರುವ  ಪದ್ಮಕುಮಾರ್ ನ್ಯಾಯಾಂಗ ಬಂಧನದಲ್ಲಿದ್ದಾರೆ.  ಶಬರಿಮಲೆಯಲ್ಲಿ ನಡೆದ ವಂಚನೆಗೆ ಪದ್ಮಕುಮಾರ್ ಮತ್ತು ಇತರ ಆರೋಪಿಗಳು ಭಾರೀ ಒಳಸಂಚು ಹೂಡಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ. ಇದೇ ವೇಳೆ ಶಬರಿಮಲೆ ಕ್ಷೇತ್ರದ ಚಿನ್ನ …

ಶಬರಿಮಲೆಯ ಭದ್ರತೆ  ವಹಿಸಿಕೊಂಡ ಕೇಂದ್ರ ಪಡೆ : ಸಚಿವರ ಅಧ್ಯಕ್ಷತೆಯಲ್ಲಿ ಅವಲೋಕನಾ ಸಭೆ ಆರಂಭ

ಪತ್ತನಂತಿಟ್ಟ: ಶಬರಿಮಲೆ ದೇಗುಲ ಮತ್ತು ಪರಿಸರ ಪ್ರದೇಶಗಳ ಭದ್ರತೆಯನ್ನು ಕೇಂದ್ರ ಪಡೆಗೆ ವಹಿಸಿಕೊಡಲಾಗಿದೆ. ಆರ್‌ಪಿಎಫ್‌ನ 140 ಮಂದಿ ಒಳಗೊಂಡ ತಂಡ ಇಂದು ಬೆಳಿಗ್ಗೆ ಶಬರಿಮಲೆಗೆ ತಲುಪಿ ಭದ್ರತೆಯ ಹೊಣೆಗಾರಿಕೆ ವಹಿಸಿಕೊಂಡಿದೆ.    ಇದು ಕೊಯಂಬತ್ತೂರಿನ ೧೦೫ನೇ ಬೆಟಾಲಿಯನ್ ತಂಡವಾಗಿದೆ. ಸನ್ನಿಧಾನ, ಭಸ್ಮಕೆರೆ,  ಕ್ಷೇತ್ರದ ಗರ್ಭಗುಡಿಯ ಪರಿಸರ, ಅಪ್ಪ-ಅರವಣ ಪಾಯಸ ಪ್ರಸಾದ ವಿತರಣಾ ಕೌಂಟರ್‌ಗಳ ಭದ್ರತಾ ಹೊಣೆಗಾರಿಕೆ  ಆರ್‌ಪಿಎಫ್‌ಗಾಗಿ ರುವುದು.  ಸಿಆರ್‌ಪಿಎಫ್‌ನ  ಡೆಪ್ಯುಟಿ ಕಮಾಂಡರ್ ಬಿಜುರಿಗೆ ಭದ್ರತೆಯ ಹೊಣೆಗಾರಿಕೆ ವಹಿಸಿಕೊಡಲಾಗಿದೆ. ಇದರ ಹೊರತಾಗಿ ಕೇರಳ ಪೊಲೀಸರ ಭದ್ರತಾ ಕ್ರಮಗಳು ಈ …

ವ್ಯಾಪಾರಿ ಕುಸಿದು ಬಿದ್ದು ಮೃತ್ಯು

ನೀರ್ಚಾಲು: ನೀರ್ಚಾಲು ಪೇಟೆಯಲ್ಲಿ ವ್ಯಾಪಾರಿಯಾಗಿರುವ ಅರುಣ್ ಕುಮಾರ್ ಬಿ (47) ಕುಸಿದುಬಿದ್ದು ಮೃತಪಟ್ಟರು. ಮುಂಡಿತ್ತಡ್ಕ ನಿವಾಸಿಯಾದ ಇವರು ನೀರ್ಚಾಲು ಬಳಿಯ ಬುರುಡಡ್ಕ ದಲ್ಲಿ ವಾಸವಾಗಿದ್ದರು. ನೀರ್ಚಾಲು ಕೆಳಗಿನ ಪೇಟೆಯಲ್ಲಿರುವ ಲಕ್ಷ್ಮಿ ಸ್ಟೋರ್‌ನ ಮಾಲಕನಾಗಿದ್ದಾರೆ. ನಿನ್ನೆ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ದಿ|ಐತ್ತಪ್ಪ ನಾಯ್ಕ್ ಎಂಬವರ ಪುತ್ರನಾದ ಮೃತರು ತಾಯಿ ಸಾವಿತ್ರಿ, ಪತ್ನಿ ರಾಜೇಶ್ವರಿ,ಮಕ್ಕಳಾದ ಅಮೃತ್, ಅಶ್ವಿನಿ, ಸಹೋದರರಾದ ಜಗದೀಶ್, ದಾಮೋದರ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

ರಿಕ್ಷಾ ಚಾಲಕ ಕಾರ್‌ಶೆಡ್‌ನಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮಾಜಿ ಗಲ್ಫ್ ಉದ್ಯೋಗಿ ಹಾಗೂ ಆಟೋರಿಕ್ಷಾ ಚಾಲಕನಾಗಿದ್ದ ವ್ಯಕ್ತಿ ಮನೆಯ ಕಾರ್‌ಶೆಡ್‌ನೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾದ ಘಟನೆ ನಡೆದಿದೆ. ಮೂಲತಃ ಬೇಕಲ ಮಾಲಾಂಕುನ್ನು ನಿವಾಸಿಯೂ ಈಗ ಕೇಳುಗುಡ್ಡೆ ರಸ್ತೆಯ ಹಳೆ ಚೂರಿಯ ರೇಷ್ಮಾ ಮಂಜಿಲ್  ನಿವಾಸಿ ಎನ್. ನಸೀರ್ ಅಹಮ್ಮದ್ (59) ಸಾವನ್ನಪ್ಪಿದ ವ್ಯಕ್ತಿ. ಇವರು ಈ ಹಿಂದೆ ಗಲ್ಫ್‌ನಲ್ಲಿದ್ದರು. ನಂತರ ಊರಿಗೆ ಬಂದ ರಿಕ್ಷಾ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಮಧ್ಯೆ ಅವರಿಗೆ ಅಸೌಖ್ಯ ತಗಲಿದ್ದು, ಅದರಿಂದ ಅವರು …

ಉಳಿಯತ್ತಡ್ಕದಲ್ಲಿ ಗಲಭೆಗೆ ಯತ್ನ: 50ಮಂದಿ ವಿರುದ್ಧ ಕೇಸು

ಕಾಸರಗೋಡು: ಉಳಿಯತ್ತಡ್ಕದಲ್ಲಿ ಮಧೂರು ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗ ಗಲಭೆ ಸೃಷ್ಟಿಸಲೆತ್ನಿಸಿದ ಆರೋಪದಂತೆ   ಕಂಡರೆ ಗುರುತುಪತ್ತೆ ಹಚ್ಚಲಾಗುವ 50ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಸ್ವಯಂ ಪ್ರೇರಿತ  ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಂತೆ ಕೋಮು ಘರ್ಷಣೆಗೆ ಯತ್ನಿಸಿದ ಸೆಕ್ಷನ್ ಪ್ರಕಾರ ಕೇಸು ದಾಖಲಿಸಲಾಗಿದೆ.  ಮಧೂರು ಪಂಚಾಯತ್ ಕಚೇರಿ ಪರಿಸರದಲ್ಲಿ ನಿನ್ನೆ ಮಧ್ಯಾಹ್ನ ಶುಚಿತ್ವ ಮಿಶನ್ ಅಭಿಯಾನ  ನಡೆಸಲಾಗಿತ್ತು. ಅದರಲ್ಲಿ ಧ್ವನಿವರ್ಧಕ ಬಳಸಿ ಶುಚಿತ್ವ ಕಾಪಾಡುವ ಬಗ್ಗೆ ಸೂಚನೆಗಳನ್ನು ನೀಡಲಾಗುತ್ತಿತ್ತು. ಈ  ವೇಳೆ ಒಂದು ತಂಡ ಅಲ್ಲಿಗೆ ಆಗಮಿಸಿ ಇದು ಬಿಜೆಪಿ  …

ಗೋಣಿಚೀಲದಲ್ಲಿ ಕಟ್ಟಿಟ್ಟ ಸ್ಥಿತಿಯಲ್ಲಿ ಮಹಿಳೆಯ ಅರೆ ನಗ್ನ ಮೃತದೇಹ ಪತ್ತೆ ಸಮೀಪ ಮದ್ಯದಮಲಿನಲ್ಲಿದ್ದ ವ್ಯಕ್ತಿಯನ್ನು ಕಸ್ಟಡಿಗೆ ಪಡೆದ ಪೊಲೀಸರು

ಕೊಚ್ಚಿ: ಕೋಂದುರತ್ತಿಯಲ್ಲಿ ಮನೆಗಿರುವ ದಾರಿಯಲ್ಲಿ ಗೋಣಿಚೀಲದಲ್ಲಿ ಕಟ್ಟಿಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಜೋರ್ಜ್ ವಾಸಿಸುವ ಮನೆಯ ಮುಂಭಾಗದಲ್ಲಿ ಅರ್ಧ ನಗ್ನವಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸಮೀಪದಲ್ಲಿಯೇ ಜೋರ್ಜ್ ಮದ್ಯದಮಲಿನಲ್ಲಿ ಗೋಡೆಗೆ ಒರಗಿ ಕುಳಿತ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಈತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಮೃತಪಟ್ಟ ಮಹಿಳೆಯ  ಗುರುತು ಇದುವರೆಗೆ  ಪತ್ತೆಹಚ್ಚಲಾಗಲಿಲ್ಲ. ಇಂದು ಬೆಳಿಗ್ಗೆ ೬.೩೦ರ ವೇಳೆ ನಾಡನ್ನು ಬೆಚ್ಚಿಸಿದ ಘಟನೆ ನಡೆದಿದೆ. ಬೆಳಿಗ್ಗೆ ಜೋರ್ಜ್ ಗೋಣಿ ಇದೆಯಾ ಎಂದು ಕೇಳಿಕೊಂಡು ತಲುಪಿರುವುದಾಗಿ …

ಸ್ಥಳೀಯಾಡಳಿತ ಚುನಾವಣೆ: ರಾಜ್ಯದಲ್ಲಿ 1,08,580 ನಾಮಪತ್ರ, ಜಿಲ್ಲೆಯಲ್ಲಿ 5475

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸಲ್ಲಿಸಿದ ನಾಮಪತ್ರಗಳ ಸೂಕ್ಷ್ಮ ತಪಾಸಣೆ ಇಂದು ನಡೆಯಲಿದೆ. 14 ಜಿಲ್ಲೆಗಳಲ್ಲಾಗಿ 1,08,580 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರಗಳನ್ನು ಹಿಂತೆಗೆಯಲಿರುವ ಕೊನೆಯ ದಿನಾಂಕ ಈ ತಿಂಗಳ 24 ಆಗಿದೆ. ಸೂಕ್ಷ್ಮ ತಪಾಸಣೆ ಬಳಿಕ ಉಳಿದಿರುವ ನಾಮಪತ್ರಗಳನ್ನು ಹಿಂತೆಗೆದರೆ ಆ ಬಳಿಕ ಉಳಿದಿರುವ ನಾಮಪತ್ರಗಳು ನಿಜವಾದ ಸ್ಪರ್ಧಾ ಳುಗಳ ಸಂಖ್ಯೆಯಾಗಿದೆ. ಸಂಬAಧಪಟ್ಟ ಚುನಾವಣಾಧಿಕಾರಿಗಳು ನಾಮಪತ್ರಗಳ ಸೂಕ್ಷ್ಮ ತಪಾಸಣೆ ನಡೆಸುವರು. ಈ ವೇಳೆ ಅಭ್ಯರ್ಥಿಯ ಜೊತೆಯಲ್ಲಿ ಚುನಾವಣೆ ಏಜೆಂಟ್, ನಿರ್ದೇಶಕರು ಎಂಬಿವರ ಹೊರತು ಅಭ್ಯರ್ಥಿ ಬರೆದು ನೀಡುವ …