ಪ್ರಧಾನಮಂತ್ರಿ ಹುಟ್ಟುಹಬ್ಬ: ಬಿಜೆಪಿಯಿಂದ  ಗೋಸಾಡ ಕ್ಷೇತ್ರದಲ್ಲಿ ವಿಶೇಷ ಪೂಜೆ

ಬದಿಯಡ್ಕ: ಪ್ರಧಾನಮಂತ್ರಿ ನರೇಂದ್ರಮೋದಿಯವರ ೭೬ನೇ ಜನ್ಮ ದಿನಾಚರಣೆಯಂಗವಾಗಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಗೋಸಾಡ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ವಿಶೇಷ ಹೂವಿನ ಪೂಜೆ ನಡೆಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾ ಯಿತು.  ಬಿಜೆಪಿ ಕಲ್ಲಿಕೋಟೆ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ ನಾರಂಪಾಡಿ, ಬದಿಯಡ್ಕ ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಪ್ರಧಾನ ಕಾರ್ಯದರ್ಶಿ ಪ್ರಮೋದ್ …

ಬಿ ಸಿ ರೋಡ್ ಕಾಲುದಾರಿಯಲ್ಲಿ ಕೇಬಲ್ ವಯರ್ ತುಂಬಿಕೊಂಡು ಪಾದಚಾರಿಗಳಿಗೆ ಅಪಾಯ ಭೀತಿ

ಕಾಸರಗೋಡು: ಎಷ್ಟೇ ಅನುಭವ ಉಂಟಾದರೂ ಅಧಿಕಾರಿ ವರ್ಗ ಕಲಿಯದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ ಕಾಲುದಾರಿಯಲ್ಲಿ ಬೇಕಾಬಿಟ್ಟಿ ತುಂಬಿಕೊಂಡಿರುವ ಕೇಬಲ್ ವಯರ್‌ಗಳು. ಇದು ಬೇರೆಲ್ಲೋ ಅಧಿಕಾರಿ ವರ್ಗಗಳ ಕಣ್ಣಿಗೆ ಕಾಣದ ಸ್ಥಳವಲ್ಲ. ವಿದ್ಯಾನಗರದಿಂದ ಬಿ ಸಿ ರೋಡ್‌ನತ್ತ ಸಾಗುವ ಸರ್ವೀಸ್ ರಸ್ತೆಯ ಬದಿಯ ಕಾಲುದಾರಿಯಲ್ಲಿ ಕೇಬಲ್ ವಯರ್ ಎಲ್ಲೆಂದರಲ್ಲಿ ಬಿದ್ದುಕೊಂಡು, ಜೋತಾಡಿಕೊಂಡು ಕಂಬಗಳಲ್ಲಿ ಸುತ್ತಿ ಇಟ್ಟ ಸ್ಥಿತಿಯಲ್ಲಿ ಕಂಡು ಬರುತ್ತಿದೆ. ಕಾಲುದಾರಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವವರು ಹೆಚ್ಚುತ್ತಿದ್ದು, ಇದರ ಮಧ್ಯೆ ನುಸುಳಿ ತೆರಳುವ ವೇಳೆ ಕೇಬಲ್ ವಯರ್‌ಗಳು ಸಿಲುಕಿಕೊಳ್ಳುತ್ತಿದ್ದು, ಜನರಿಗೆ …

ಇ.ಎಂ. ಇಬ್ರಾಹಿಂ ನಿಧನ

ಕಾಸರಗೋಡು: ತಳಂಗರೆ ಖಾಸಿಲೈನ್ ನಿವಾಸಿ ಹಾಗೂ ಹೊನ್ನೆಮೂಲೆಯಲ್ಲಿ ವಾಸಿಸುತ್ತಿದ್ದ ಇ.ಎಂ. ಇಬ್ರಾಹಿಂ (64) ನಿಧನ ಹೊಂದಿದರು. ಈ ಹಿಂದೆ ಕೊಲ್ಲಿಯಲ್ಲಿದ್ದರು. ಮುಸ್ಲಿಂಲೀಗ್‌ನ ಸಕ್ರಿಯ ಕಾರ್ಯಕರ್ತನಾಗಿದ್ದರು. ಮೃತರು ಪತ್ನಿ ಖದೀಜ, ಪುತ್ರಿ ಫೌಸಿಯಾ, ಅಳಿಯ ಸಮೀರ್ ಬಂಗಾರಗುಡ್ಡೆ, ಸಹೋದರರಾದ ಹನೀಫ್, ರಜಾಕ್, ಅಬ್ದುಲ್ ರಹ್ಮಾನ್, ಸಹೋದರಿಯರಾದ ಆಮಿನ, ಸಫಿಯಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಪಾಕತಜ್ಞ ಧರ್ಮತ್ತಡ್ಕ ನಿವಾಸಿ ನಿಧನ

ಪೆರ್ಮುದೆ: ಈ ಹಿಂದೆ ಧರ್ಮತ್ತಡ್ಕದಲ್ಲಿ ಹೋಟೆಲ್ ನಡೆಸುತ್ತಿದ್ದ ಧರ್ಮತ್ತಡ್ಕ ನಿವಾಸಿ, ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ಕರ್ವಜೆ ವಂಕಟರಮಣ ಭಟ್ (73) ನಿನ್ನೆ ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಹೋಟೆಲ್ ವೆಂಕಟ್ರಮಣ ಭಟ್ರು ಎಂದೆ ಪ್ರಚಾರದಲ್ಲಿದ್ದ ಇವರು ಪಾಕ ತಜ್ಞರಾಗಿದ್ದರು. ರುಚಿಕರ ಹೋಳಿಗೆ ತಯಾರಿಯಲ್ಲಿ ಸಿದ್ಧಹಸ್ತರಾಗಿದ್ದರು. ಮೃತರು ಪತ್ನಿ ದೇವಕಿ, ಪುತ್ರ ಗಣೇಶ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಯುವಕ ಸಂಘ ಧರ್ಮತ್ತಡ್ಕ ಸಂತಾಪ ಸೂಚಿಸಿದೆ.

ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ವಿಷಯದಲ್ಲಿ ಸರಕಾರದ ನಿಲುವಿಗೆ ಹೊಂದಿಕೊಂಡು ಕ್ರಮ-ನೂತನ ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್  

ಕಾಸರಗೋಡು:  ಕಾಸರಗೋಡು  ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ವಿಷಯ ದಲ್ಲಿ  ಸರಕಾರದ ನಿಲುವಿಗೆ ಹೊಂದಿ ಕೊಂಡು ಮುಂದಿನ ಕ್ರಮ ಕೈಗೊಳ್ಳುವು ದಾಗಿ  ನೂತನ ಜಿಲ್ಲಾಧಿಕಾರಿಯಾಗಿ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ ಶ್ರೀಧನ್ಯಾಸುರೇಶ್ ಹೇಳಿದ್ದಾರೆ. ಸಪ್ತಭಾಷಾ ಸಂಗಮ ಭೂಮಿ ಹಾಗೂ  ಕರ್ನಾಟಕ ಗಡಿಪ್ರದೇಶವನ್ನು ಹೊಂದಿರುವ ಕಾಸರಗೋಡು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸೇರಿದಂತೆ ಹಲವು ವಲಯಗಳಲ್ಲಿ ಭಾರೀ ಅಭಿವೃದ್ಧಿ ಯೋಜನೆಗಳ ಸಾಧ್ಯತೆ ಇದೆ. ಅದನ್ನೆಲ್ಲಾ ಕೂಲಂಕುಷವಾಗಿ ಪರಿಶೀಲಿಸಿ ಅಗತ್ಯದ ಅಭಿವೃದ್ಧಿ ಯೋಜನೆಗೆ ರೂಪು ನೀಡಲು ಪ್ರಯತ್ನಿಸಲಾಗು ವುದು.  ಇದಕ್ಕಾಗಿ ಕಾಸರಗೋಡಿನ  ಎಲ್ಲಾ ವಿಭಾಗದವರ …

ಒಂದೇ ನಂಬ್ರಪ್ಲೇಟ್ ಅಳವಡಿಸಿದ ಎರಡು ವಾಹನಗಳ ವಶ : ತನಿಖೆ ಆರಂಭಿಸಿದ ಪೊಲೀಸ್

ಉಪ್ಪಳ: ಒಂದೇ ರಿಜಿಸ್ಟರ್ ನಂಬ್ರ ಹೊಂದಿರುವ ಎರಡು ಥಾರ್ ಜೀಪುಗಳನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ಕೆ.ಎಲ್. 14ಎಜೆ3008 ನಂಬ್ರದ ಎರಡು ಥಾರ್ ಜೀಪುಗಳು ಉಪ್ಪಳ ಕೈಕಂಬದಲ್ಲಿ ಕಂಡುಬಂದಿದ್ದು, ಈ ಮಾಹಿತಿಯನ್ನು ಸ್ಥಳೀಯರು  ಪೊಲೀಸರಿಗೆ ತಿಳಿಸಿದ್ದರು. ಕೂಡಲೇ ಸ್ಟೇಶನ್ ಹೌಸ್ ಆಫೀಸರ್  ವಿಷ್ಣು, ಎಸ್‌ಐ ಶಬರಿಕೃಷ್ಣ ಎಂಬಿವರು ಅಲ್ಲಿಗೆ ತಲುಪಿ ವಾಹನಗಳನ್ನು ಕಸ್ಟಡಿಗೆ ತೆಗೆದಿದ್ದಾರೆ. ಬಳಿಕ ನಡೆಸಿದ ತನಿಖೆಯಲ್ಲಿ ಯಥಾರ್ಥ ನಂಬ್ರ ಹೊಂದಿರುವ ವಾಹನದ ಮಾಲಕ ನೆಲ್ಲಿಕುಂಜೆ ನಿವಾಸಿಯೆಂದು ತಿಳಿದುಬಂದಿದೆ. ಇವರನ್ನು  ಪೊಲೀಸರು ಠಾಣೆಗೆ …

ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ: ಇಬ್ಬರ ವಿರುದ್ಧ ಕೇಸು

ಮಂಜೇಶ್ವರ: ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಪೊಲೀಸರ ಆದೇಶ ಉಲ್ಲಂ ಘಿಸಿ ಮುಂದಕ್ಕೆ ಸಾಗಿದ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ತಿರುವನಂತ ಪುರ ಕುಂಜೀರಂಕುಳಂ ಕಲ್ಲುವಿಳ ಪುತ್ತನ್ ವೀಡ್‌ನ ಅನೀಶ್ ಕುಮಾರ್ ಕೆ.ಎ. (36), ತಾಯನ್ನೂರು ಶಾಸ್ತಾಂಪಾರದ ರವೀಂದ್ರನ್ ಎ. (50) ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಸಂಜೆ ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜೇಶ್ವರ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಹೆಲ್ಮೆಟ್ ಧರಿಸದೆ ಇಬ್ಬರು …

ಹಿರಿಯ ಯಕ್ಷಗಾನ ಕಲಾವಿದ ಎಂ.ಟಿ. ಸುಂದರ ಕುಲಾಲ್ ನಿಧನ

ಪೈವಳಿಕೆ: ಕಟೀಲು, ಧರ್ಮಸ್ಥಳ ಸಹಿತ ವಿವಿಧ ಯಕ್ಷಗಾನ ಮೇಳಗಳಲ್ಲಿ ಆರು ದಶಕಗಳ ಕಾಲ ಕಲಾವಿಧರಾಗಿ ತಿರುಗಾಟ ನಡೆಸಿದ್ದ ಮುಳಿಗದ್ದೆ ತಾಳ್ತಜೆ ನಿವಾಸಿ ಸುಂದರ ಕುಲಾಲ್ (79) ನಿಧನ ಹೊಂದಿದರು. ಬೇಡಗುಡ್ಡೆಯ ಲ್ಲಿರುವ ಸ್ವ-ಗೃಹದಲ್ಲಿ ನಿನ್ನೆ ನಿಧನ ಸಂಭವಿಸಿದೆ. ಇವರು ಯಕ್ಷಗಾನ ಮಾತ್ರ ವಲ್ಲದೆ, ಕೋಟಿಚೆನ್ನಯ, ಸಾವಿರೊ ಡೊರ್ತಿ ಸಾವಿತ್ರಿ ಸೇರಿದಂತೆ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ತಮ್ಮ ಮಾವನವರಿಂದ ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಸಿಸಿ ಧರ್ಮಸ್ಥಳ ಮೇಳ ಸೇರಿಕೊಂಡು ಕೋಡಂಗಿ ವೇಷದಿಂದ ಯಕ್ಷವೃತ್ತಿ ಆರಂಭಿಸಿದ್ದಾರೆ. ಬಾಲಗೋಪಾಲ, ಮುಖ್ಯ ಸ್ತ್ರೀವೇಷಗಳನ್ನು ಮಾಡಿದ …

ಕಟ್ಟಿ ಹಾಕಿದ್ದ ಕೋಳಿಯನ್ನು ಹಗ್ಗ ಸಹಿತ ನುಂಗಿದ ಹೆಬ್ಬಾವು

ಕಾಸರಗೋಡು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ  ಕೋಳಿಯನ್ನು  ಹೆಬ್ಬಾವು ಹಗ್ಗ ಸಹಿತ  ನುಂಗಿದ ಘಟನೆ ನಡೆದಿದೆ.  ಪೆರಿಯ ಆಯಂಬಾರ  ಕಾನತ್ತಿಲ್‌ನ ಮಾಲತಿ ಎಂಬವರ ಮನೆಯ ಹುಂಜಮನ್ನು ಹೆಬ್ಬಾವು  ನುಂಗಿದೆ.  ಎಂದಿನಂತೆ ಇಂದು ಬೆಳಿಗ್ಗೆ ಕೋಳಿಗೆ ಆಹಾರ ಕೊಡಲು ಮಾಲತಿ ಹೋದಾಗ ಕೋಳಿ  ಅಲ್ಲಿರಲಿಲ್ಲ. ಬಳಿಕ ಹುಡುಕಾಡಿದಾಗ  ಕೊಟ್ಟಿಗೆಯ  ಒಂದು ಮೂಲೆಯಲ್ಲಿ ಹೆಬ್ಬಾವು  ಕಂಡುಬಂದಿದೆ.  ಅದನ್ನು ಕಂಡ ಮಾಲತಿ ಬೊಬ್ಬೆ ಹಾಕಿದ್ದು,  ಕೂಡಲೇ ಇತರರು ತಲುಪಿ ನೋಡಿದಾಗ ಹೆಬ್ಬಾವು  ಕೋಳಿಯನ್ನು ಹಗ್ಗ ಸಹಿತ ನುಂಗಿರುವುದು ತಿಳಿದುಬಂದಿದೆ.  ಇದೇ ವೇಳೆ ಹಗ್ಗ …

ಅನಧಿಕೃತ ಮೀನುಗಾರಿಕೆ: ಕರ್ನಾಟಕ ಬೋಟ್ ವಶಕ್ಕೆ; 2 ಲಕ್ಷ ರೂ. ದಂಡ ವಸೂಲಿ

ಕಾಸರಗೋಡು: ಕೇರಳದ ವ್ಯಾಪ್ತಿಗೊಳಪಟ್ಟ ಸಮುದ್ರ ಪ್ರದೇಶದಲ್ಲಿ ಅನಧಿಕೃತವಾಗಿ ಮೀನುಗಾರಿಕೆಯಲ್ಲಿ ತೊಡಗಿದ್ದ ಕರ್ನಾಟಕ ರಾಜ್ಯದ ನೋಂದಾವಣೆ ಹೊಂದಿರುವ ನೂರ್ ಇ ಬಹಾರ್ ಎಂಬ ಹೆಸರಿನ ಯಾಂತ್ರೀಕೃತ ಬೋಟನ್ನು ಮೀನುಗಾರಿಕಾ ಇಲಾಖೆಯ ಕಾಸರಗೋಡು ಸಹ ನಿರ್ದೇಶಕ ಕೆ. ಶ್ರೀಜೇಶ್‌ರ ನೇತೃತ್ವದ ತಂಡ ವಶಕ್ಕೆ ತೆಗೆದುಕೊಂಡಿದೆ. ಚೆರುವತ್ತೂರಿನ ಮಡಕ್ಕರ ಸಮುದ್ರ ಕಿನಾರೆಯಿಂದ ಸುಮಾರು ಒಂಭತ್ತು ನೋಟಿಕ್ಕಲ್ ಮೈಲು ದೂರದ ಸಮುದ್ರದಿಂದ ನಿನ್ನೆ ಬೋಟ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಹ ನಿರ್ದೇಶನ ನೇತೃತ್ವದಲ್ಲಿ ಮೀನುಗಾರಿಕಾ ಇಲಾಖೆಯ ಸಿವಿಲ್ ಆಫೀಸರ್ ಅರ್ಜುನ್ ಬಿ. ಪೊದುವಾಳ್, ಸಮುದ್ರ …