ಕಯ್ಯಾರ ಕಿಂಞಣ್ಣರೈಯವರ 111ನೇ ಹುಟ್ಟು ಹಬ್ಬ ಆಚರಣೆ

ಬದಿಯಡ್ಕ: ನಾಡೋಜ ಕಯ್ಯಾರ ಕಿಂಞಣ್ಣ ರೈಯವರ 111ನೇ ಹುಟ್ಟುಹಬ್ಬವನ್ನು ಕವಿತಾ ಕುಟೀರದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ನೇತೃತ್ವದಲ್ಲಿ ಆಚರಿಸಲಾಯಿತು. ಶಾಸಕ ಮಾಹಿನ್ ಕಲ್ಲಟ್ರ ಪುಷ್ಪಾರ್ಚನೆ ನಡೆಸಿದರು. ಬದಿಯಡ್ಕ ಪಂ. ಅಧ್ಯಕ್ಷ ಶಂಕರ ಡಿ., ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಪಂಚಾಯತ್ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಅಖಿಲೇಶ್ ನಗುಮುಗಂ, ಚನಿಯಪ್ಪ ನಾಯ್ಕ್, ಮಹೇಶ್ ವಳಕುಂಜ, ಹರೀಶ್ ಗೋಸಾಡ, ನಿವೃತ್ತ ಪ್ರೊ. ಎ. ಶ್ರೀನಾಥ್, ಶಂಕರನಾರಾಯಣ ಭಟ್, ಗಂಗಾಧರ ತೆಕ್ಕೆಮೂಲೆ, ಆನಂದ ಮವ್ವಾರು, …

ಅಸೌಖ್ಯ: ಆರ್‌ಎಸ್‌ಎಸ್ ಕಾರ್ಯಕರ್ತ ನಿಧನ

ಉಪ್ಪಳ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಉಪ್ಪಳ ಹನುಮಾನ್‌ನಗರ ನಿವಾಸಿ, ಮೀನು ಕಾರ್ಮಿಕ ಚಂದ್ರಶೇಖರ ಆರ್.ಐಲ್ (63) ನಿಧನ ಹೊಂದಿದರು. ದಿ| ರಾಮ ಸಾಲ್ಯಾನ್-ದಿ| ಸರ್ವಾಣಿ ದಂಪತಿ ಪುತ್ರರಾಗಿದ್ದು, ಇವರು ಆರ್.ಎಸ್.ಎಸ್‌ನ ಹಿರಿಯ ಸ್ವಯಂ ಸೇವಕರಾಗಿದ್ದರು. ಉಪ್ಪಳ ಶ್ರೀ ಅಯ್ಯಪ್ಪ ಮಂದಿರ ಸೇವಾ ಸಮಿತಿಯ ಹಿರಿಯ ಸದಸ್ಯರು, ಅಲ್ಲದೆ ಅಯೋಧೆ್ಯ ಕರಸೇವಕರಾಗಿದ್ದರು. ಮೃತರು ಪತ್ನಿ ಪುಷ್ಪ, ಮಕ್ಕಳಾದ ನಿಶಿತ, ನಿಖಿತ, ಕಾವ್ಯ, ಅಳಿಯ ನಾಗಪ್ರಸಾದ್, ಸಹೋದರಿಯರಾದ ಜಾನಕಿ, ನಾಗಮ್ಮ, ವಾರಿಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ …

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಕಿರುಕುಳ ನೀಡಿದ ಆರೋಪಿ ಬಂಧನ

ಉಪ್ಪಳ: ಬಸ್‌ನಲ್ಲಿ ಪ್ರಯಾಣಿಸು ತ್ತಿದ್ದ ಯುವತಿಯ ದೇಹ ಸ್ಪರ್ಶಿಸಿ ಕಿರುಕುಳ ನೀಡಿದ ಯುವಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಅಂಜರಕಂಡಿ ವೆಣ್ ಮಣಲ್ ಹಾಜರ ಮಂಜಿಲ್‌ನ ಇಬ್ರಾಹಿಂ ಕಂಡೋತ್ (43) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಆರೋಪಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಮೊನ್ನೆ ಸಂಜೆ ಕಾಸರಗೋಡಿನಿಂದ ತಲಪಾಡಿಗೆ ತೆರಳುತ್ತಿದ್ದ ಬಸ್‌ನಲ್ಲಿ 19ರ ಹರೆಯದ ಯುವತಿಗೆ ಕಿರುಕುಳ ನೀಡಿದ ಆರೋಪದಂತೆ ಇಬ್ರಾಹಿಂ ಕಂಡೋ ತ್‌ನನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿದ್ದಾರೆ. ಬಸ್ ಕಾಸರಗೋ ಡಿನಿಂದ ಪ್ರಯಾಣ …

ಕುಸಿದು ಬಿದ್ದ ಮನೆ: ಅಸಹಾಯಕ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಶೌರ್ಯ ಘಟಕದಿಂದ ನೆರವು

ಮವ್ವಾರು: ಮನೆಯೊಂದು ಕುಸಿದು ಬಿದ್ದು ಕುಟುಂಬ ಅತಂತ್ರ ಸ್ಥಿತಿಗೆ ತಲು ಪಿದಾಗ ಮವ್ವಾರು ಶೌರ್ಯ ಘಟಕ ಕಾರ್ಯಕರ್ತರ ಸಹಾಯ ದಿಂದ ದುರಸ್ತಿ ನಡೆಸಲಾಗಿದೆ. ನಿನ್ನೆ ಬೆಳಿಗ್ಗೆ ಕುಂಬ್ಡಾಜೆ ಪಂಚಾಯತ್‌ನ ೯ನೇ ವಾರ್ಡ್ ಮವ್ವಾರು ಎಸ್‌ಸಿ ನಗರ ನಿವಾಸಿ ಬಾಬು (50) ಎಂಬವರ ಮನೆ ಕುಸಿದು ಬಿದ್ದಿದೆ. ಮನೆ ಜೀರ್ಣಗೊಂಡ ಹಿನ್ನೆಲೆಯಲ್ಲಿ ಇವರು ಒಂದು ಬದಿಗೆ ಪ್ಲಾಸ್ಟಿಕ್ ಟರ್ಪಾಲ್ ಕಟ್ಟಿ ಅದರಲ್ಲಿ ವಾಸ ಮಾಡುತ್ತಿದ್ದರು. ಇದರಿಂದ ಅಪಾಯದಿಂದ ಪಾರಾಗಿದ್ದಾರೆ. ಮನೆ ಬಿದ್ದ ಮಾಹಿತಿ ತಿಳಿದು ೮ನೇ ವಾರ್ಡ್ ಸದಸ್ಯ …

ಶೆಡ್‌ನ ಮೇಲೆ ಮರ ಬಿದ್ದು ನಿದ್ರಿಸುತ್ತಿದ್ದ ಯುವಕ ಮೃತ್ಯು

ತೃಶೂರು: ಶೆಡ್‌ನ ಮೇಲೆ ಮರ ಬಿದ್ದು ನಿದ್ರಿಸುತ್ತಿದ್ದ ಯುವಕ ಮೃತಪಟ್ಟರು. ಮಣಲೂರು ಕಂಬನಿಪಡಿ ನಿವಾಸಿ ದಿ| ಸುಬ್ರನ್‌ರ ಪುತ್ರ ವಿಷ್ಣು (28) ಮೃತಪಟ್ಟ ಯುವಕ. ಮನೆ ದುರಸ್ತಿ ನಡೆಸುತ್ತಿದ್ದ ಹಿನ್ನಲೆಯಲ್ಲಿ ಮಡಲಿನಿಂದ ಶೆಡ್ ತಯಾರಿಸಿ ಅದರಲ್ಲಿ ಮಲಗುತ್ತಿದ್ದರು. ಬಲವಾದ ಗಾಳಿಗೆ ಹಿತ್ತಿಲಲ್ಲಿದ್ದ ಮರ ಶೆಡ್‌ನ ಮೇಲೆ ಬಿದ್ದು ವಿಷ್ಣು ಅದರಡಿ ಸಿಲುಕಿ ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ನೆರೆಮನೆಯವರು ವಿಷ್ಣುವನ್ನು ಮರದಡಿಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಬಳಿಕ ಅಗ್ನಿಶಾಮಕದಳ ತಲುಪಿ ಮರ ಮುರಿದು ತೆಗೆದು ವಿಷ್ಣುವನ್ನು ಹೊರಕ್ಕೆ ತೆಗೆಯಲಾಗಿದೆ. …

ಮಳೆಗಾಲದ ಆರಂಭದಲ್ಲೇ ಕುಂಬಳೆ ಬಸ್ ನಿಲ್ದಾಣ ಜಲಾವೃತ: ಪ್ರಯಾಣಿಕರಿಗೆ ಸಮಸ್ಯೆ

ಕುಂಬಳೆ: ಮಳೆಗಾಲದ ಆರಂಭದಲ್ಲೇ ಕುಂಬಳೆ ಬಸ್ ನಿಲ್ದಾಣ ನೀರಿನಿಂದ ಮುಳುಗಿದೆ. ಮಳೆ ಸುರಿಯುವಾಗ ಪ್ರಯಾಣಿಕರು ಒದ್ದೆಯಾಗದಿರಲು ಬಸ್ ನಿಲ್ದಾಣದಲ್ಲಿ ನಿರ್ಮಿಸಿದ ವಿವಾದಿತ ಬಸ್ ವೈಟಿಂಗ್ ಶೆಡ್ ಇದ್ದು ಅದರ ಮುಂಭಾಗದಲ್ಲಿ ನೀರು ತುಂಬಿ ಕೊಂಡಿದೆ. ಇದರಿಂದ ಅದರ ಆಚೆ ಭಾಗದಲ್ಲಿ ಬಸ್‌ಗಳನ್ನು ನಿಲ್ಲಿಸಲಾಗು ತ್ತಿದೆ. ಅಲ್ಲಿಗೆ ತಲುಪಬೇಕಾದರೆ ತುಂಬಿಕೊಂಡಿರುವ ನೀರಿನಲ್ಲೇ ನಡೆದು ಹೋಗಬೇಕಾಗಿದೆ. ಭಾರೀ ಮೊತ್ತ ವ್ಯಯಿಸಿ ನಿರ್ಮಿಸಿದ ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದೆ. ಚರಂಡಿಗಿಂತ ತಗ್ಗು ಪ್ರದೇಶದಲ್ಲಿದ್ದ ರಸ್ತೆಯಲ್ಲಿ ನವೀಕರಣ ವೇಳೆ ಚರಂಡಿಯ ಭಾಗದಿಂದ ಮಣ್ಣು …

ರೈಲು ಪ್ರಯಾಣ ವೇಳೆ ನಾಪತ್ತೆಯಾದ ಮೂಕಿ, ಕಿವುಡಿ ಯುವತಿ ಮಲಪ್ಪುರಂ ನಿವಾಸಿಯಾದ ಮೂಕ ಯುವಕನೊಂದಿಗೆ ದಾಂಪತ್ಯಕ್ಕೆ

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಾಪತ್ತೆಯಾದ ಮಾತುಬಾರದ, ಶ್ರವಣಶಕ್ತಿ ಕಳೆದುಕೊಂಡ ಯುವತಿ ಮಲಪ್ಪುರಂ ಕೊಂಡೋಟಿ ನಿವಾಸಿಯಾದ ಮಾತುಬಾರದ, ಶ್ರವಣಶಕ್ತಿ ಕಳೆದುಕೊಂಡ ಯುವಕನನ್ನು ಮದುವೆಯಾದ ಬಗ್ಗೆ ಮಾಹಿತಿ ಲಭಿಸಿದೆ. ಪರಪ್ಪ ಪನ್ನಿತ್ತಡ ಎಂಬಲ್ಲಿನ 20 ಹರೆಯದ ಯುವತಿ ಬುಧವಾರ ಸಂಜೆ ನಾಪತ್ತೆಯಾಗಿದ್ದಾಳೆ. ಮೂಗಿ ಹಾಗೂ ಕಿವುಡಿಯಾದ ಯುವತಿ ತಿರುವನಂತಪುರದ ಸಂಸ್ಥೆಯೊಂದರ ವಿದ್ಯಾರ್ಥಿನಿಯಾಗಿದ್ದಾಳೆ. ಶಿಕ್ಷಣ ಕೇಂದ್ರಕ್ಕೆಂದು ತಿಳಿಸಿ ಯುವತಿ ಮನೆಯಿಂದ ತೆರಳಿದ್ದಳು. ತಂದೆ ತಾಯಿ ಜೊತೆ ನೀಲೇಶ್ವರಕ್ಕೆ ತಲುಪಿದ ಬಳಿಕ ಯುವತಿ ರೈಲಿನಲ್ಲಿ ಪ್ರಯಾಣಿಸಿದ್ದಳು. ಗಂಟೆಗಳು ಕಳೆದ ಬಳಿಕ ಕೊಂಡೋಟಿಯಿಂದ …

ಒಂದೇ ಮಳೆಗೆ ತ್ಯಾಜ್ಯ ಕೇಂದ್ರವಾಗಿ ಮಾರ್ಪಟ್ಟ ಕುಂಬಳೆ ಮೀನು ಮಾರುಕಟ್ಟೆ ರಸ್ತೆ

ಕುಂಬಳೆ: ಕುಂಬಳೆಯಲ್ಲಿ ಮಳೆಗಾಲಪೂರ್ವ ಶುಚೀಕರಣ ಚಟುವಟಿಕೆಗಳು ವಿಫಲಗೊಂಡಿರುವುದರಿಂದ ಒಂದೇ ಮಳೆಗೆ ಮೀನು ಮಾರುಕಟ್ಟೆ ರಸ್ತೆ ತ್ಯಾಜ್ಯ ಕೇಂದ್ರವಾಗಿ ಮಾರ್ಪಾಡುಗೊಂಡಿದೆ. ಇದು ಸಮೀಪದ ವ್ಯಾಪಾರಿಗಳಿಗೆ ಹಾಗೂ ಮೀನು ಕಾರ್ಮಿಕರಿಗೆ ಭಾರೀ ಸಮಸ್ಯೆಯಾಗಿ ಪರಿಣಮಿಸಿದೆ. ಮೀನು ಮಾರುಕಟ್ಟೆ ಸಮೀಪದ ತ್ಯಾಜ್ಯ ರಾಶಿ ಈ ಮೊದಲೇ ಭಾರೀ ಸುದ್ದಿಯಾಗಿತ್ತು.  ಕುಂಬಳೆ ಪಂಚಾಯತ್ ನಾಮಮಾತ್ರಕ್ಕಾಗಿ ನಡೆಸಿದ ಶುಚೀಕರಣ ಚಟುವಟಿಕೆಗಳ ವೇಳೆ ಮಾರುಕಟ್ಟೆ ರೋಡ್‌ನತ್ತ ಕಣ್ಣು ಹಾಯಿಸಿಲ್ಲವೆಂಬ ಆರೋಪ ಈ ಹಿಂದೆಯೇ ಕೇಳಿ ಬಂದಿತ್ತು. ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿರುವುದರಿಂದ ಮಳೆ ನೀರು, ಪ್ಲಾಸ್ಟಿಕ್ …

ಕಾನೂನು ಕಠಿಣಗೊಳಿಸಿದ ಕೇಂದ್ರ: ಜಿಲ್ಲೆಯ 40ರಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳು ಗುಜರಿ ಸೇರುವ ಸಾಧ್ಯತೆ

ಕಾಸರಗೋಡು: ಹದಿನೈದು ವರ್ಷಕ್ಕಿಂತ  ಹಳೆಯದಾದ  ಸರಕಾರಿ ವಾಹನಗಳು ಸಂಚಾರ ನಡೆಸಬಾರದೆಂಬ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವಾ ಅವಧಿಯನ್ನು  15ರಿಂದ 20ಕ್ಕೇರಿಸಿ ಕೇರಳ ಸರಕಾರ ತಂದಿದ್ದ ತಿದ್ದುಪಡಿ ಕಾನೂನಿಗೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ. ಇದರಿಂದಾಗಿ ಕಾಸರಗೋಡು ಜಿಲ್ಲೆಯಲ್ಲಿ ಈಗ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ 15 ವರ್ಷಕ್ಕಿಂತ  ಹೆಚ್ಚು ಹಳೆಯದಾದ ೪೦ರಷ್ಟು ಬಸ್‌ಗಳ ಸಂಚಾರ ನಿಲುಗಡೆಗೊಳಿಸಿ ಅವುಗಳನ್ನು ಗುಜರಿಗೆ ನೀಡಬೇಕಾಗಿ ಬರುವ ಸ್ಥಿತಿ ಈಗ ನಿರ್ಮಾಣವಾಗಿದೆ. 15 ವರ್ಷಕ್ಕಿಂತ …

ರತ್ನಾಕರ ಮಲ್ಲಮೂಲೆಗೆ ಕೇರಳ ಸರಕಾರದ ವನಮಿತ್ರ ಪ್ರಶಸ್ತಿ ಪ್ರದಾನ

ತಿರುವನಂತಪುರ: ಮಳೆಕೊಯ್ಲು, ಜಲಮರುಪೂರಣ ಹಾಗೂ ಸೌರಯೋಜನೆಯ ಮೂಲಕ ಬರಡು ನೆಲದಲ್ಲಿ ಹಸುರು ಕ್ರಾಂತಿಯನ್ನುAಟು ಮಾಡಿ ತನ್ನ ಯೋಜನೆಗಳೆಲ್ಲವನ್ನೂ ಸಾಮಾಜಿಕ ಜಾಗೃತಿಗೆ ಮೀಸಲಿಟ್ಟು ಗಮನ ಸೆಳೆದಿರುವ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆಗೆ ವನಮಿತ್ರ ಪ್ರಶಸ್ತಿಯನ್ನು ಕೇರಳ ಸರ್ಕಾರದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಸಚಿವ ಶಿಬು ಬೇಬಿ ಜೋನ್ ನೀಡಿ ಅಭಿನಂದಿಸಿದರು.ವಿಶ್ವ ಪರಿಸರದಿನದ ಭಾಗವಾಗಿ ಕೇರಳ ಸರಕಾರದ ಅರಣ್ಯ ಇಲಾಖೆಯವರು ತಿರುವನಂತಪುರದ ನಂದವನದಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಸಿ.ಪಿ ಜೋನ್ …