ಕಾರಿನಲ್ಲಿ ಸಾಗಿಸುತ್ತಿದ್ದ 25,236 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ವಶ: ಓರ್ವ ಸೆರೆ

ಕಾಸರಗೋಡು: ಮೊಗ್ರಾಲ್ ಪುತ್ತೂರು ಕುನ್ನಿಲ್ ನೀರ್ಚಾಲ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 25,236 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಕಾಸರಗೋಡು ಪೊಲೀ ಸರು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಮಧೂರು ಹಿದಾಯತ್‌ನಗರ ಮುಟ್ಟತ್ತೋಡಿ ನಿವಾಸಿ ಅಬೂಬಕ್ಕರ್ ಸಿದ್ದಿಕ್ (34) ಎಂಬಾತನನ್ನು ಬಂಧಿಸಲಾಗಿದೆ. ಮಾಲು ಸಾಗಿಸುತ್ತಿದ್ದ ಕಾರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು ಎಎಸ್‌ಪಿ ಡಾ. ನಂದಗೋಪಾಲ್ ಎಂ.ರ ಮೇಲ್ನೋಟದಲ್ಲಿ ಅನ್ಸಾರ್ ಎನ್.ರ ನೇತೃತ್ವದಲ್ಲಿ ಇತರ …

ಸಾಯಿರಾಂ ಕೃಷ್ಣಭಟ್‌ರನ್ನು ಭೇಟಿಯಾದ ಸಿ.ಕೆ. ಪದ್ಮನಾಭನ್

ಬದಿಯಡ್ಕ: ಶಬರಿಮಲೆಯ ಚಿನ್ನ ಕಳವು ವಿಚಾರದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರಕಾರದ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ನಡೆಸುತ್ತಿರುವ ಮನೆ ಮನೆ ಸಂಪರ್ಕ ಅಭಿಯಾನದಂಗವಾಗಿ ಬದಿಯಡ್ಕ ಪಂಚಾಯತ್ ಮಾಜಿ ಅಧ್ಯಕ್ಷ  ಸಾಯಿರಾಂ ಕೃಷ್ಣ ಭಟ್‌ರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಭೇಟಿಯಾದರು. ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್, ಸುನಿಲ್, ಜಿಲ್ಲಾ ಉಪಾಧ್ಯಕ್ಷ ಡಿ.ಶೇಖರ, ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಬದಿಯಡ್ಕ ಪಶ್ಚಿಮ ವಲಯ ಅಧ್ಯಕ್ಷ ಮಹೇಶ್ …

ದೇವಸ್ವಂ ಆಡಳಿತವನ್ನು ಭಕ್ತರಿಗೆ ನೀಡಬೇಕೆಂಬ ಬಿಜೆಪಿ ಬೇಡಿಕೆ ನ್ಯಾಯಯುತ- ಸಿ.ಕೆ. ಪದ್ಮನಾಭನ್

ಕುಂಬ್ಡಾಜೆ: ಶಬರಿಮಲೆಯಿಂದ ಕೇಳಿ ಬರುತ್ತಿರುವ ಕೊಳ್ಳೆ ಹಾಗೂ ಅವ್ಯವಹಾರಗಳ ಬಗೆಗಿನ ಸುದ್ಧಿಗಳ ಹಿನ್ನೆಲೆಯಲ್ಲಿ ದೇವಸ್ವಂಬೋರ್ಡನ್ನು ಬರ್ಖಾಸ್ತುಗೊಳಿಸಿ ದೇವಸ್ಥಾನದ ಆಡಳಿತವನ್ನು ಭಕ್ತರಿಗೆ ವಹಿಸಿಕೊಡಬೇ ಕೆಂಬ ಬಿಜೆಪಿಯ ಬೇಡಿಕೆ ನ್ಯಾಯ ಯುತವಾಗಿದೆ ಎಂಬುದಕ್ಕೆ ಪುರಾವೆ ಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ನುಡಿದರು. ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಆಯೋಜಿಸಿದ ಕಾರ್ಯಕರ್ತರ ಸಂಗಮ ಹಾಗೂ ಜನ ಪ್ರತಿನಿಧಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಶಬರಿಮಲೆಯ ದ್ವಾರಪಾಲಕ ಶಿಲ್ಪಗಳ ಚಿನ್ನದ ಕವಚಗಳು ಕಳವು ಹೋಗಿರುವುದು …

ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಎಸ್‌ಐಗಳಿಗೆ ವರ್ಗಾವಣೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗೆ ನಡೆಯಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳ ಎಸ್‌ಐಗಳನ್ನು   ವರ್ಗಾಯಿಸಲಾಗಿದೆ. ಇದರಂತೆ ಹೊಸದುರ್ಗ ಪೊಲೀಸ್  ಠಾಣೆಯ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ರನ್ನು ಮಂಜೇಶ್ವರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಅಂಬಲತ್ತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ. ಶೈನ್‌ರನ್ನು ವಿದ್ಯಾನಗರಕ್ಕೆ ವರ್ಗಾಯಿಸ ಲಾಗಿದೆ. ಎನ್.ಪಿ. ರಾಘವನ್‌ರನ್ನು ಮೇಲ್ಪರಂಬಕ್ಕೂ, ಚಿತ್ತಾರಿಕಲ್ ಇನ್ಸ್‌ಪೆಕ್ಟರ್ ರಂಜಿತ್ ರವೀಂದ್ರನ್‌ರನ್ನು ಅಂಬಲತ್ತರಕ್ಕೆ ವರ್ಗಾಯಿಸಲಾಗಿದೆ. ವಿದ್ಯಾನಗರ ಪೊಲೀಸ್ ಇನ್ಸ್‌ಪೆಕ್ಟರ್ ವಿಪಿನ್ ವಿ.ಪಿ.ರನ್ನು ಬೇಕಲಕ್ಕೆ ವರ್ಗಾ ಯಿಸಲಾಗಿದೆ. ಮಂಜೇಶ್ವರ ಇನ್ಸ್‌ಪೆಕ್ಟರ್ ಇ. ಅನೂಪ್‌ರನ್ನು …

ರಮೇಶ್ ಚೆನ್ನಿತ್ತಲರಿಗೆ ಮಾತೃವಿಯೋಗ

ತಿರುವನಂತಪುರ: ಮಾಜಿ ವಿಪಕ್ಷ ಮುಖಂಡ, ಕಾಂಗ್ರೆಸ್‌ನ ಹಿರಿಯ ನೇತಾರ ರಮೇಶ್ ಚೆನ್ನಿತ್ತಲರ ತಾಯಿ ಎನ್. ದೇವಕಿ ಅಮ್ಮ (91) ನಿಧನ ಹೊಂದಿದರು.  ತೃಪರುಂದರ ಕೋಟೂರು ನಿವಾಸಿ ದಿ| ವಿ. ರಾಮಕೃಷ್ಣನ್ ನಾಯರ್‌ರ ಪತ್ನಿಯಾಗಿದ್ದಾರೆ. ಮೃತರು ಇತರ ಮಕ್ಕಳಾದ ಕೆ.ಆರ್. ರಾಜನ್, ಕೆ.ಆರ್. ವಿಜಯಲಕ್ಷ್ಮಿ, ಕೆ.ಆರ್. ಪ್ರಸಾದ್, ಸೊಸೆಯಂದಿರಾದ ಅನಿತಾ ರಮೇಶ್, ಅಂಬಿಳಿ ಎಸ್. ಪ್ರಸಾದ್, ಶ್ರೀಜಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಸಿ.ಕೆ. ರಾಧಾಕೃಷ್ಣನ್ ಈ ಹಿಂದೆ ನಿಧನ ಹೊಂದಿದ್ದಾರೆ.

ಬಿಎಂಎಸ್ ಮೀಂಜ ಪಂಚಾಯತ್ ಸಮಿತಿ ಜಾಥಾ

ಮಂಜೇಶ್ವರ: ಬಿ.ಎಂ.ಎಸ್ ಮಿಂಜ ಪಂಚಾಯತ್ ಸಮಿತಿ ಆಶ್ರಯದಲ್ಲಿ  ಕೇರಳ ಸರಕಾರದ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗೆದುರಾಗಿ  ಕಾಲ್ನಡೆ ಜಾಥಾ  ಹಮ್ಮಿಕೊಳ್ಳಲಾಯಿತು. ಮೊರತ್ತಣೆ ಯಿಂದ ಆರಂಭಗೊAಡ ಜಾಥಾ ವನ್ನು  ಬಿ.ಎಂ.ಎಸ್ ಜಿಲ್ಲಾ  ಕಾರ್ಯದರ್ಶಿ ಬಾಬು ಕೆ.ವಿ. ಉದ್ಘಾ ಟಿಸಿದರು. ಮೀಯಪದವುನಲ್ಲಿ ನಡೆದ ಸಮಾರೋಪ ಸಮಾರಂಭ ವನ್ನು  ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಉದ್ಘಾಟಿಸಿದರು. ಜಾಥಾ ಕ್ಯಾಪ್ಟನ್ ರಾಮಚಂದ್ರ ಬಟ್ಟಿಪದವು ನೇತೃತ್ವದಲ್ಲಿ ನಡೆದ ಕಾಲ್ನಡೆ ಜಾಥಾ ದಲ್ಲಿ   ಜಿಲ್ಲಾ ಜೊತೆಕಾರ್ಯದರ್ಶಿ ಯಶವಂತಿ ಬೆಜ್ಜ, ವಲಯ ಪದಾಧಿಕಾರಿಗಳಾದ ರವಿ …

ಬ್ಲೋಕ್ ಪಂಚಾಯತ್ ಮೀಸಲಾತಿ ವಾರ್ಡ್

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗೆ ಸಂಬAಧಿಸಿ ಜಿಲ್ಲೆಯ ಬ್ಲೋಕ್ಗಳ ಮೀಸಲಾತಿ ಕ್ರಮ ಪೂರ್ಣ ಗೊಳಿಸಲಾಗಿದೆ. ಇದರಂತೆ ಕಾರಡ್ಕ ಬ್ಲೋಕ್ ಪಂಚಾಯತ್ನ 10ನೇ ವಾರ್ಡ್ ಕುಂಡAಗಳಿಯನ್ನು ಪರಿಶಿಷ್ಟ ಜಾತಿ ಮೀಸಲು ವಾರ್ಡ್ನ್ನಾಗಿ ಆರಿಸಲಾಗಿದೆ. ದೇಲಂಪಾಡಿ (ವಾರ್ಡ್ 5)ನ್ನು ಪರಿಶಿಷ್ಟ ಪಂಗಡ ವಿಭಾಗಕ್ಕಾಗಿ ಮೀಸಲಿರಿಸಲಾ ಗಿದೆ. ಉಳಿದಂತೆ ಬೆಳ್ಳೂರು (3), ಆದೂರು (4), ಅಡೂರು (6), ಕೊಳತ್ತೂರು (11), ಪೊವ್ವಲ್ (12), ಮುಳಿಯಾರು (13) ಮತ್ತು ಕಾರಡ್ಕ (14)ನ್ನು ಮಹಿಳಾ ಮೀಸಲಾತಿ ವಾರ್ಡ್ಗಳನಾನಾಗಿ ಆರಿಸಲಾಗಿದೆ.ಮಂಜೇಶ್ವರ ಬ್ಲೋಕ್ ಪಂಚಾ ಯತ್ನ 16ನೇ ವಾರ್ಡ್ …

ಸಿಡಿಲು ಬಡಿದು ಮನೆ ಬಿರುಕು: ವಯರಿಂಗ್ ನಾಶ

ಉಪ್ಪಳ: ಸಿಡಿಲಿನ ಆಘಾತಕ್ಕೆ ಮನೆ ಬಿರುಕು ಬಿಟ್ಟು ವಯರಿಂಗ್ ಪೂರ್ತಿ ಉರಿದು ಹೋದ ಘಟನೆ ನಡೆದಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡು ಪರಿಶಿಷ್ಟ ಪಂಗಡದವರ ಕೇಂದ್ರ ನಿವಾಸಿ ಕೂಲಿ ಕಾರ್ಮಿಕ ಉಮೇಶ ಎಂಬವರ ಮನೆಗೆ ಶನಿವಾರ ಸಂಜೆ ಸಿಡಿಲು ಬಡಿದಿದೆ. ಈ ವೇಳೆ ಮನೆಯ ಗೋಡೆ ಬಿರುಕು ಬಿಟ್ಟು ವಯರಿಂಗ್ ಪೂರ್ತಿ ಉರಿದು ಹೋಗಿದ್ದು, ವಿದ್ಯುತ್ ಉಪಕರಣಗಳು ಹಾನಿಗೊಂಡಿದೆ.ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಂಗಲ್ಪಾಡಿ ವಿಲೇಜ್ ಅಧಿಕಾರಿಗಳು, ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್, ಬಾಬು ಬಂದ್ಯೋಡು …

ವೆಳ್ಳರಿಕುಂಡ್ ಬಳಿ ಮಾವೋಯಿಸ್ಟ್ ಪೋಸ್ಟರ್ ಪತ್ತೆ: ಜಾಗ್ರತಾ ನಿರ್ದೇಶ; ತನಿಖೆ ಆರಂಭ

ಕಾಸರಗೋಡು: ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ಲಾತಡ ಎಂಬಲ್ಲಿ ಮಾವೋಯಿಸ್ಟ್ ಪೋಸ್ಟರ್ ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಜಾಗ್ರತಾ ನಿರ್ದೇಶ ಹೊರಡಿಸಲಾಗಿದೆ. ವೆಳ್ಳರಿಕುಂಡ್ ಪೊಲೀಸರು ಹಾಗೂ ವಿವಿಧ ಗುಪ್ತಚರ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ಪ್ಲಾತಡ ಬಸ್ ವೈಟಿಂಗ್ ಶೆಡ್‌ನಲ್ಲಿ ಮೂರು ಪೋಸ್ಟರ್‌ಗಳನ್ನು ಅಂಟಿಸಿರುವುದು ನಿನ್ನೆ ಪತ್ತೆಯಾಗಿದೆ. ವಿಷಯ ತಿಳಿದು ತಲುಪಿದ ಪೊಲೀಸರು ಪರಿಶೀಲಿಸಿ ದಾಗ ಸಮೀಪದ ಗೋಡೆಗಳಲ್ಲೂ ಪೋಸ್ಟರ್‌ಗಳನ್ನು ಅಂಟಿಸಿರುವುದು ಕಂಡು ಬಂದಿದೆ. ಕೂಡಲೇ ಆ ಪೋಸ್ಟರ್‌ಗಳನ್ನು ಪೊಲೀಸರು ತೆರವುಗೊಳಿಸಿದರು. ‘ಜನಕೀಯ ವಿಮೋಚನ ಮುನ್ನಣಿ …

ಕೆಲಸಕ್ಕೆಂದು ತೆರಳಿದ ಯುವಕ ನಿರ್ಜನ ಪ್ರದೇಶದಲ್ಲಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಮಿಂಜ: ಮನೆಯಿಂದ ಕೆಲಸ ಕ್ಕೆಂದು ತೆರಳಿದ ಯುವಕನೋರ್ವ ಮನೆ ಸಮೀಪದ ನಿರ್ಜನ ಪ್ರದೇಶದಲ್ಲಿ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಮೀಂಜ ಪಂಚಾಯತ್ ವ್ಯಾಪ್ತಿಯ ಕುಳೂರು ನಿವಾಸಿ ದಿ| ಸಂಜೀವರ ಪುತ್ರ ಹರೀಶ (40) ಮೃತಪಟ್ಟ ಯುವಕ. ಕೂಲಿ ಕಾರ್ಮಿಕರಾಗಿದ್ದ ಇವರು ನಿನ್ನೆ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ತೆರಳಿದ್ದರು. ಸುಮಾರು 8.30ರ ವೇಳೆ ಮನೆ ಸಮೀಪದ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ …