ಇರಿಯಣ್ಣಿಯಲ್ಲಿ ಮತ್ತೆ ನಾಯಿ ಮೇಲೆ ದಾಳಿ ನಡೆಸಿದ ಚಿರತೆ

ಬೋವಿಕ್ಕಾನ: ಅಲ್ಪ ಬಿಡುವಿನ ಬಳಿಕ ಇರಿಯಣ್ಣಿಯಲ್ಲಿ ಚಿರತೆಯ ಭೀತಿ ಹುಟ್ಟಿಕೊಂಡಿದೆ. ಶನಿವಾರ ರಾತ್ರಿ ಇರಿಯಣ್ಣಿ ಕುಣಿಯೇರಿ ಎಂಬಲ್ಲಿ ಸಾಕು ನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ದಿರುವುದಾಗಿ ದೂರಲಾಗಿದೆ. ವೆಳ್ಳಾಟ್‌ನ  ನಾರಾಯಣನ್ ಎಂಬವರ ಮನೆಯ ಸಾಕು ನಾಯಿಯನ್ನು ಚಿರತೆ ಕೊಂಡೊ ಯ್ದಿದ್ದು, ನಾಯಿಯ ಮೇಲೆ ಚಿರತೆ ದಾಳಿ ನಡೆಸುವ ದೃಶ್ಯ ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.  ಸಮೀಪದ ಕಾಡಿನತ್ತ ನಾಯಿಯನ್ನು ಚಿರತೆ ಕೊಂಡೊ ಯ್ದಿದೆ ಎಂದು ತಿಳಿದುಬಂ ದಿದೆ. ಇತ್ತೀಚೆಗೆ ಮುಳಿಯಾರು ಪಂಚಾ ಯತ್‌ನ ಇರಿಯಣ್ಣಿ ಯಲ್ಲಿ ಹಲವು ನಾಯಿಗಳನ್ನು …

ಅಂತಾರಾಷ್ಟ್ರೀಯ ಸೈಬರ್ ವಂಚನಾ ಜಾಲದ ಏಜೆಂಟರು ಜಿಲ್ಲೆಯಲ್ಲಿರುವ ಬಗ್ಗೆ ಮಾಹಿತಿ: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಬೆದರಿಸಿ ವೈದ್ಯರ 1.10 ಕೋಟಿ ರೂ.ಕಬಳಿಕೆ

ಕಾಸರಗೋಡು: ಡಿಜಿಟಲ್ ಅರೆಸ್ಟ್‌ನ ಹೆಸರಲ್ಲಿ ವೈದ್ಯರೋರ್ವರಿಗೆ ಬೆದರಿಕೆಯೊಡ್ಡಿ ಅವರಿಂದ ಸೈಬರ್ ವಂಚಕರು 1.10 ಕೋಟಿ ರೂ. ಕಬಳಿಸಿದ ಬಗ್ಗೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ನೀಲೇಶ್ವರದ ವೈದ್ಯರು ಈ ಬಗ್ಗೆ ದೂರು ನೀಡಿದ್ದು ಅದರಂತೆ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಡಿಜಿಟಲ್ ಅರೆಸ್ಟ್‌ನ ಹೆಸರಲ್ಲಿ ಈ ತಿಂಗಳ 4ರಿಂದ 15ರ ಅವಧಿಯಲ್ಲಿ ಮೂರು ಬಾರಿಯಾಗಿ ವೈದ್ಯರ ಬ್ಯಾಂಕ್ ಖಾತೆಯಿಂದ ಸೈಬರ್   ವಂಚಕರು ಹಣ ಎಗರಿಸಿದ್ದಾರೆ. ಪೊಲೀಸರೆಂಬ ನಕಲಿ ಹೆಸರಲ್ಲಿ ಸೈಬರ್ ವಂಚಕರು ಈ ವೈದ್ಯರನ್ನು …

ರೈಲ್ವೇ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಪತ್ತೆ ಪ್ರಕರಣ: ತನಿಖೆ ತೀವ್ರ

ಕಾಸರಗೋಡು: ಪಾಲಕುನ್ನು ರೈಲ್ವೇ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಇರಿಸಿ ಅಪಾಯ ಸೃಷ್ಟಿಸಲೆತ್ನಿಸಿದ  ಪ್ರಕರಣದಲ್ಲಿ ಬೇಕಲ ಪೊಲೀಸರು ಹಾಗೂ ಆರ್‌ಪಿಎಫ್ ತನಿಖೆ ತೀವ್ರಗೊಳಿಸಿದೆ.  ಶನಿವಾರ ರಾತ್ರಿ 8.30ರ ವೇಳೆ ಕೋಟಿಕುಳಂ ರೈಲ್ವೇ ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್‌ನ ದಕ್ಷಿಣ ಭಾಗದಲ್ಲಿರುವ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಪತ್ತೆಯಾಗಿದೆ. ರೈಲ್ವೇಯ ಅಗತ್ಯಕ್ಕಾಗಿ ಹಳಿಯ ಸಮೀಪ ಇರಿಸಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್‌ನ್ನು ಹಳಿಯ ಮೇಲಿರಿಸಿರುವುದು ಕಂಡುಬಂದಿದೆ.  ರೈಲ್ವೇ ನಿಲ್ದಾಣ ಸಮೀಪ ಕ್ವಾರ್ಟರ್ಸ್‌ನಲ್ಲಿ ವಾಸಿಸುವವರ  ಗಮನಕ್ಕೆ ಇದು  ಬಂದ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ …

ಕುಂಬಳೆಯಲ್ಲಿ ಬಹುಮತ ಗಳಿಸಿದ ಮುಸ್ಲಿಂ ಲೀಗ್: ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಗೊಂದಲ ಸೃಷ್ಟಿ

ಕುಂಬಳೆ:  ಪಂಚಾಯತ್ ಚುನಾ ವಣೆಯಲ್ಲಿ ಕುಂಬಳೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ  ಮುಸ್ಲಿಂ ಲೀಗ್ ಪಂಚಾಯತ್ ಅಧ್ಯಕ್ಷರಾಗಿ ಯಾರನ್ನು ಆರಿಸಬೇಕೆಂಬ ವಿಷಯ ಗೊಂದಲಕ್ಕೀ ಡಾಗಿದೆ. ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿಯೂ, ಎರಡುಬಾರಿ ಪಂಚಾಯತ್ ಸದಸ್ಯ, ಒಂದು ಬಾರಿ ಬ್ಲೋಕ್ ಪಂಚಾಯತ್ ಸದಸ್ಯನಾಗಿದ್ದ ಎ.ಕೆ. ಆರಿಫ್ ಈ ಬಾರಿಯೂ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಮುಸ್ಲಿಂ ಲೀಗ್ ರಾಜ್ಯ ಕೌನ್ಸಿಲರ್, ಜಿಲ್ಲಾ ಸಮಿತಿ ಸದಸ್ಯ ಎಂಬೀ ನೆಲೆಗಳಲ್ಲಿ ಕಾರ್ಯಾಚರಿಸುವ ವಿ.ಪಿ. ಅಬ್ದುಲ್ ಖಾದರ್ ಹಾಜಿ  ಎರಡು ಬಾರಿ ಪಂಚಾಯತ್ …

ಹಿರಿಯ ಕೃಷಿಕ ನಿಧನ

ಮಂಜೇಶ್ವರ: ಬೆಜ್ಜ ಕೊಳಂಜ ನಿವಾಸಿ ಅರಿಯಾಳ ಮಲರಾಯ ಬಂಟ ತರವಾಡಿನ ಗುರಿಕಾರ ಹಿರಿಯ ಕೃಷಿಕ ಬಂಟಪ್ಪ ಪೂಜಾರಿ (70) ನಿಧನ ಹೊಂ ದಿದರು. ನಿನ್ನೆ ಮುಂಜಾನೆ ಹೃದಯಾ ಘಾತ ಉಂಟಾಗಿದ್ದು, ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಸಂಭವಿಸಿದೆ. ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ಚರಣ್‌ರಾಜ್, ಶರತ್, ಹರ್ಷಿತ, ಭರತ್, ಅಳಿಯ ವಿನಯ ಕುಮಾರ್, ಸೊಸೆಯಂದಿರಾದ ಜಯಶ್ರೀ, ಸುಪ್ರೀತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜಿಲ್ಲಾ ಪಂಚಾಯತ್: ತುಳು, ಕನ್ನಡ, ಮಲಯಾಳ, ಇಂಗ್ಲೀಷ್ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಿದ ಸದಸ್ಯರು

ಕಾಸರಗೋಡು: ಸಪ್ತಭಾಷಾ ಸಂಗಮ ಭೂಮಿಯಾದ ಕಾಸರಗೋಡಿನಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಸದಸ್ಯರು ಕಲೆಕ್ಟ್ರೇಟ್‌ನ ಕಾನ್ಫರೆನ್ಸ್ ಹಾಲ್‌ನಲ್ಲಿ ನಿನ್ನೆ ನಡೆದ ಕಾರ್ಯಕ್ರಮ ಭಾಷಾ ವೈವಿಧ್ಯಮಯ ಕಂಪು ಮೆರೆಯಿತು. ಜಿಲ್ಲಾ ಪಂಚಾಯತ್‌ಗೆ ಆರಿಸಲ್ಪಟ್ಟ ಸದಸ್ಯರು ತಮ್ಮ ಮಾತೃಭಾಷೆಯಲ್ಲೇ ಪ್ರಮಾಣವಚನ  ಸ್ವೀಕರಿಸಿದರೆ, ಕೆಲವರು ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೆಲವರು ಕನ್ನಡ, ತುಳು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕಾಸರಗೋಡಿನ ಸಪ್ತಭಾಷಾ ಸಂಗಮ ಭೂಮಿಯ ವೈವಿದ್ಯತೆಯನ್ನು ಸಾರಿದರು. ಜಿಲ್ಲಾ ಪಂಚಾಯತ್‌ನ ಬದಿಯಡ್ಕ ಡಿವಿಷನ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ …

ಕಾರಡ್ಕ ಫೌಂಡೇಶನ್ ಟ್ರಸ್ಟ್‌ನ ಕಾರಡ್ಕ ಸಂಭ್ರಮ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇಧದಲ್ಲಿ ಸೇರ್ಪಡೆಗೆ ಯತ್ನಿಸುವೆ- ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್

ಮುಳ್ಳೇರಿಯ: ತುಳು ಭಾಷಿಗರ ಹಲವು ಕಾಲದ ಬೇಡಿಕೆಯಾದ ಸಂವಿಧಾನದ ೮ನೇ ಪರಿಚ್ಛೇಧದ ಸೇರ್ಪಡೆಗೆ ಪಾರ್ಲಿಮೆಂಟ್‌ನಲ್ಲಿ ಪ್ರಸ್ತಾಪ ನಡೆಸಿದ್ದು, ಮುಂದೆಯೂ ಅದಕ್ಕಾಗಿ ತೀವ್ರ ಯತ್ನ ನಡೆಸುವೆನೆಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನುಡಿದರು. ಅವರು ಮುಂಡೋಳು ಕ್ಷೇತ್ರದ ಸಭಾ ಭವನದಲ್ಲಿ ನಡೆದ ಕಾರಡ್ಕ ಫೌಂಡೇಶನ್ ಟ್ರಸ್ಟ್‌ನ ಕಾರಡ್ಕ ಸಂಭ್ರಮ, ಸಾಧಕರಿಗೆ ಪ್ರಶಸ್ತಿ ಪ್ರಧಾನ, ಶಿಷ್ಯರ ರಂಗಪ್ರವೇಶ, ಗುರುವಂದನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಪುರಾಣ ಕತೆಗಳ ಮೂಲಕ ಭಕ್ತಿ ಪ್ರಧಾನ ಸಂಸ್ಕೃತಿ ಬೆಳೆಸುವ ಯಕ್ಷಗಾನ ಕಲೆಯನ್ನು ತಲೆಮಾರುಗಳಿಗೆ ಹಸ್ತಾಂತರಿಸಲು ಕಾರಡ್ಕ …

ವಿಸ್ಮಯ ಪಾರ್ಕ್‌ನಲ್ಲಿ ಇಟಾಲಿಯನ್ ರೈಡ್ ಸಿದ್ಧ

ಕಣ್ಣೂರು: ಪರಶ್ಶಿನಿಕಡವಿನ ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಹೊಸ ಇಟಾಲಿಯನ್ ರೈಡ್ ರೋಡಿಕ್ಸ್ ಸಿದ್ಧಗೊಂಡಿದೆ. ೧೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಪೂರ್ತಿಗೊಳಿಸಲಾಗಿದೆ. ಅಡ್ವೆಂಚರ್ ರೈಡ್ ರೋಡಿಕ್ಸ್ ಇದನ್ನು ಸ್ಪೀಕರ್ ಎ.ಎನ್. ಶಂಸೀರ್ ನಾಳೆ ಬೆಳಿಗ್ಗೆ ಉದ್ಘಾಟಿಸುವರು. ಒಂದು ಬಾರಿ 24 ಮಂದಿಗೆ ರೈಡ್ ನಡೆಸಬಹುದಾದ 22 ಮೀಟರ್ ಎತ್ತರದಲ್ಲಿ ತಿರುಗುವ ಇದು 360 ಡಿಗ್ರಿಯಲ್ಲಿ ತಿರುಗುತ್ತದೆ. ಸಾಹಸಿಕತೆಯನ್ನು ಇಷ್ಟಪಡುವ ಯುವಕರು ಹಾಗೂ ಕುಟುಂಬ ಇದರಲ್ಲಿ ಭಾಗವಹಿಸಬಹುದೆಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಮ್ಮಡಿ ಸೇಫ್ಟಿ ಸಿಸ್ಟಂ ರೈಡ್‌ನಲ್ಲಿ ಒಳಪಡಿಸಲಾಗಿದೆ …

ಬಿದ್ದು ಸಿಕ್ಕಿದ ಚಿನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಟ್ಟು ಮೂಲ್ಯ

ಬಾಯಾರು: ದಾರಿಯಲ್ಲಿ ಬಿದ್ದು ಸಿಕ್ಕಿದ ೨ ಪವನ್‌ನ ಚಿನ್ನದ ಕಾಲ್ಗೆಜ್ಜೆಯನ್ನು ವಾರಸುದಾರಳಿಗೆ ಹಿಂತಿರುಗಿಸಿ ಕೂವೆತ್ತೋಡಿ ನಿವಾಸಿ ಬಟ್ಟು ಮೂಲ್ಯ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರು ನಡೆದು ಹೋಗುತ್ತಿದ್ದಾಗ ದಾರಿಯಲ್ಲಿ ಬಿದ್ದು ಸಿಕ್ಕಿದ ಚಿನ್ನವನ್ನು ಅದರ ವಾರಿಸು ದಾರರನ್ನು ಪತ್ತೆಹಚ್ಚಿ ಹಿಂತಿರುಗಿಸಿದ ಇವರ ಪ್ರಾಮಾಣಿಕತೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕನಿಯಾಲ ಪಳ್ಳಿತ್ತಡ್ಕ ನಿವಾಸಿಯಾದ ಮಹಿಳೆಯೋರ್ವರ ಆಭರಣ ಇದಾಗಿತ್ತೆಂದು ಅವರು ತಿಳಿಸಿದ್ದಾರೆ.

ಮಹಿಳೆಯರಿಗೆ ತಿಂಗಳಿಗೆ 1000 ರೂ. ನೀಡುವ ಸ್ತ್ರೀ ಸುರಕ್ಷಾ ಯೋಜನೆ: ಇಂದಿನಿಂದ ಅರ್ಜಿ ಸ್ವೀಕಾರ

ತಿರುವನಂತಪುರ: ರಾಜ್ಯದ ಮಹಿಳೆಯರ ಕ್ಷೇಮ ಖಚಿತಪಡಿಸಲು ರಾಜ್ಯ ಸರಕಾರ ಘೋಷಿಸಿದ ಸ್ತ್ರೀ ಸುರಕ್ಷಾ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಇಂದಿನಿಂದ ಸ್ಥಳೀಯಾಡಳಿತ ಸಂಸ್ಥೆ ಇಲಾಖೆಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ksmart.lsgkerala.gov.in ಎಂಬ ವೆಬ್‌ಸೈಟ್ ಮೂಲಕ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಬೇಕಾಗಿದೆ. ಪ್ರಸ್ತುತ ರಾಜ್ಯದ ಯಾವುದೇ ಇತರ ಪಿಂಚಣಿಗಳನ್ನು ಪಡೆಯದ ಮಹಿಳೆಯರು ತಿಂಗಳಿಗೆ 1000 ರೂ.ನಂತೆ ಧನಸಹಾಯ ಅರ್ಹರಾಗಿದ್ದಾರೆ ಎಂದು ಸ್ಥಳೀಯಾಡಳಿತ ಇಲಾಖೆ ಪ್ರಿನ್ಸಿಪಲ್ ಡೈರೆಕ್ಟರ್ ತಿಳಿಸಿದ್ದಾರೆ. ಕೇರಳದಲ್ಲಿ ಖಾಯಂ ವಾಸವಾಗಿರುವ ೩೫ರಿಂದ 60ರ ಮಧ್ಯೆ ಪ್ರಾಯದ ಮಹಿಳೆಯರು, ಟ್ರಾನ್ಸ್ …