ಅಡಿಕೆ ಕೃಷಿಕರ ಸಮಸ್ಯೆ: ಸಚಿವರಿಗೆ ಕಿಸಾನ್ ಸೇನೆ ಮನವಿ

ಕಾಸರಗೋಡು: ಅಡಿಕೆ ಕೃಷಿಕರು ಎದುರಿಸುತ್ತಿರುವ ಎಲೆಚುಕ್ಕೆ ರೋಗ ಸಹಿತ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಕಿಸಾನ್ ಸೇನೆ ಪ್ರತಿನಿಧಿ ಮಂಡಳಿ ಶಾಸಕ ಎನ್.ಎ. ನೆಲ್ಲಿಕುನ್ನು ರವರ ಮುಖಾಂತರ ಕೃಷಿ ಸಚಿವರನ್ನು ಭೇಟಿಯಾಗಿ ಮನವಿ ನೀಡಲಾಯಿತು. ಅಡಿಕೆ ಕೃಷಿಕರ ಸಂಕಷ್ಟ, ಉಚಿತ ವಿದ್ಯುತ್ ಸರಬರಾಜು ಬಗ್ಗೆ ಸಚಿವರಿಗೆ ತಿಳಿಸಲಾಯಿತು. ತಂಡ ದಲ್ಲಿ ಕಿಸಾನ್ ಸೇನೆ ಜಿಲ್ಲಾ ಅಧ್ಯಕ್ಷ ಗೋವಿಂದ ಭಟ್ ಕೊಟ್ಟಂಗುಳಿ, ಕಾರ್ಯದರ್ಶಿ ಸಚಿನ್ ಕುಮಾರ್ ಎಂ.ಪಿ, ಕಲ್ಲಗ ಚಂದ್ರಶೇಖರ ರಾವ್,ಕೋಶಾಧಿಕಾರಿ  ರಾಜೇಂದ್ರ ಪ್ರಸಾದ್ ಬಿ, ನ್ಯಾಯವಾದಿ ಬಿಜು …

ಶಬರಿಮಲೆ ಚಿನ್ನ ಕಳವು ಪ್ರಕರಣ: ದೇವಸ್ವಂ ಸಚಿವರ ರಾಜೀನಾಮೆ ಆಗ್ರಹಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ

ಮಧೂರು: ಮಧೂರು ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಶಬರಿಮಲೆ ಚಿನ್ನ ಕಳ್ಳತನ ವಿಷಯಕ್ಕೆ ಸಂಬಂಧಿಸಿ ಪಂಜಿನ ಮೆರವಣಿಗೆ ಪ್ರತಿಭಟನೆ ನಡೆಸಲಾಯಿತು. ವಿಶ್ವದಾದ್ಯಂತವಿರುವ ಅಯ್ಯಪ್ಪ ಭಕ್ತರನ್ನು ಹಾಗೂ ಶಬರಿಮಲೆ ಕ್ಷೇತ್ರವನ್ನು ಅವಹೇಳನಗೈಯ್ಯುವ ರೀತಿಯಲ್ಲೇ ಸರಕಾರ, ದೇವಸ್ವಂ ಇಲಾಖೆಯ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಈ ವಿಷಯದಲ್ಲಿ ಮುಜರಾಯಿ ಸಚಿವ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಡೆಸಿದ ಪ್ರತಿಭಟನೆಯನ್ನು ಮತ್ಸ್ಯ ಕಾರ್ಮಿಕ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಂಗಾಧರನ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಮುಹಮ್ಮದ್ ವಟ್ಟಯಕ್ಕಾಡ್ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಕಾಂಗ್ರೆಸ್ …

ಸೀತಾಂಗೋಳಿಯಲ್ಲಿ ಯುವಕನನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ

ಕುಂಬಳೆ: ಅಕ್ಟೋಬರ್ 5ರಂದು ರಾತ್ರಿ ಸೀತಾಂಗೋಳಿ ಬಳಿ ಬದಿಯಡ್ಕ ನಿವಾಸಿ ಹಾಗೂ ಮೀನು ಮಾರಾಟಗಾರ ಅನಿಲ್ ಕುಮಾರ್ (40) ಎಂಬವರನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ನಾಲ್ವರು ಆರೋಪಿಗಳು ನಿನ್ನೆ ಕುಂಬಳೆ ಪೊಲೀಸ್ ಠಾಣೆಯಲ್ಲಿ  ನೇರವಾಗಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಬದಿಯಡ್ಕ ಕುದ್ರೆಪ್ಪಾಡಿ ನಿವಾಸಿಗಳಾದ ಮಹೇಶ್, ರಜೀಶ್ ಅಲಿಯಾಸ್ ಮೋಣು, ಅಜಿತ್ ಕುಮಾರ್ ಮತ್ತು ಹರಿಕೃಷ್ಣನ್‌ಎಂಬವರು ಬಂಧಿತರಾದ ಆರೋಪಿಗಳು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಸರಗೋಡು …

ಅಧ್ಯಾಪಿಕೆ, ಪತಿ ವಿಷ ಸೇವಿಸಿ ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ : ಸ್ಕೂಟರ್‌ನಲ್ಲಿ ತಲುಪಿ ಅಧ್ಯಾಪಿಕೆಗೆ ಹಲ್ಲೆಗೈದ ಮಹಿಳೆಯರಿಗಾಗಿ ಶೋಧ

ಮಂಜೇಶ್ವರ: ಕಡಂಬಾರ್‌ನಲ್ಲಿ ಯುವ ಅಧ್ಯಾಪಿಕೆ ಹಾಗೂ ಪತಿ ವಿಷ ಸೇವಿಸಿ ಸಾವಿಗೀಡಾದ ಘಟನೆಯಲ್ಲಿ ನಿಗೂಢತೆ ಹುಟ್ಟಿಕೊಂಡಿದೆ. ಸ್ಕೂಟರ್‌ನಲ್ಲಿ ತಲುಪಿದ ಇಬ್ಬರು ಮಹಿಳೆಯರು ಅಧ್ಯಾಪಿಕೆಗೆ ಹಲ್ಲೆಗೈಯ್ಯುವ ಸಿಸಿ ಟಿವಿ ಕ್ಯಾಮರಾ ದೃಶ್ಯಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ದಂಪತಿಯ ಸಾವಿನಲ್ಲಿ ನಿಗೂಢತೆ ತೀವ್ರಗೊಂಡಿದೆ. ಕಡಂಬಾರ್ ಚೆಂಬುಪದವು ನಿವಾಸಿ ಅಜಿತ್ (35), ಪತ್ನಿಯೂ ಖಾಸಗಿ ಶಾಲೆಯ ಅಧ್ಯಾಪಿಕೆಯಾದ ಶ್ವೇತ (28) ಎಂಬಿವರು ಈ ತಿಂಗಳ ೬ರಂದು ಮನೆಯಲ್ಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೂರರ ಹರೆಯದ ಪುತ್ರನನ್ನು ಬಂದ್ಯೋಡ್‌ನಲ್ಲಿರುವ ಅಜಿತ್‌ರ ಸಹೋದರಿಯ …

ಗೃಹಿಣಿಯ ಕೊಲೆ ಶಂಕೆ: ಕುತ್ತಿಗೆ ಇರಿದ ಗಾಯ ಸಹಿತ ಮೃತದೇಹ ಪತ್ತೆ

ಕೋಟ್ಟಯಂ: ಮನೆಯೊಡತಿಯ ಮೃತದೇಹ ಕುತ್ತಿಗೆ ಇರಿದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಕೋಟ್ಟಯಂ ತೆಲ್ಲಕಗತ್ ಎಂಬಲ್ಲಿ ಘಟನೆ ನಡೆದಿದೆ. ಇಲ್ಲಿನ ಜೋಸ್ ಚಾಕೋ ಎಂಬವರ ಪತ್ನಿ ಲೀನಾ ಜೋಸ್ (55) ಮೃತಪಟ್ಟವರು. ಇಂದು ಮುಂಜಾನೆ ವೇಳೆ ಮನೆಯ  ಹಿಂದುಗಡೆ ಅಡುಗೆ ಕೋಣೆ ಸಮೀಪ ಮೃತದೇಹ ಪತ್ತೆಯಾಗಿದೆ. ಲೀನಾರ ಪುತ್ರ ಜೆರಿನ್ ತೋಮಸ್ ಇಂದು ಮುಂಜಾನೆ ಒಂದು ಗಂಟೆ ವೇಳೆ ಕೆಲಸ ಮುಗಿಸಿ ಮನೆಗೆ ತಲುಪಿದ್ದರು. ತಾಯಿ ಕಾಣದಿದ್ದಾಗ ಹುಡುಕಾಟ ನಡೆಸಿದ್ದು, ಈ ವೇಳೆ ಮೃತದೇಹ ಪತ್ತೆಯಾಗಿದೆ. ಈ ಸಂದರ್ಭದಲ್ಲಿ …

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅರ್ಬುದ ರೋಗಿಗಳಿಗೆ ಇನ್ನು ಉಚಿತ ಪ್ರಯಾಣ: ವಿಧಾನಸಭೆಯಲ್ಲಿ ಸಾರಿಗೆ ಸಚಿವ ಘೋಷಣೆ

ತಿರುವನಂತಪುರ: ಅರ್ಬುದ ರೋಗಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ ಏರ್ಪಡಿಸುವ ಭಾರೀ ದೊಡ್ಡ ಘೋಷಣೆಯನ್ನು ಸಾರಿಗೆ ಸಚಿವ   ಕೆ.ಬಿ. ಗಣೇಶ್ ಕುಮಾರ್ ಇಂದು ಬೆಳಿಗ್ಗೆ ವಿಧಾನಸಭೆಯಲ್ಲಿ ಮೊಳಗಿಸಿದ್ದಾರೆ. ಸೂಪರ್ ಫಾಸ್ಟ್ ಶ್ರೇಣಿಗಿಂತ ಕೆಳಗಿನ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಕ್ಯಾನ್ಸರ್ ರೋಗಿಗಳಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಲಾಗುವುದೆಂದು ಸಚಿವರು ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕ್ಯಾನ್ಸರ್ ರೋಗಿಗಳಿಗೂ ಈ ಉಚಿತ ಪ್ರಯಾಣ ಸೌಕರ್ಯ ಲಭಿಸಲಿದೆ. ಈ ಘೋಷಣೆಯನ್ನು ಕೆಎಸ್‌ಆರ್‌ಟಿಸಿ ನಿರ್ದೇಶಕ ಮಂಡಳಿ ಇಂದು ವಿದ್ಯುಕ್ತವಾಗಿ ಹೊರಡಿಸಲಿದೆಯೆಂದು …

2018ರಲ್ಲಿ ನಡೆದ ಕಿರುಕುಳ ಪ್ರಕರಣ: ಯುವತಿ ಮಗುವಿಗೆ ಜನ್ಮ ನೀಡಿದ ಘಟನೆಯಲ್ಲಿ ಡಿಎನ್‌ಎ ತಪಾಸಣೆ ಫಲಿತಾಂಶ ನೆಗೆಟಿವ್ ; ಯುವತಿಯ ಹೇಳಿಕೆಯಂತೆ ಇನ್ನೋರ್ವ ಯುವಕನ ವಿರುದ್ಧ ಕೇಸು

ಕಾಸರಗೋಡು: 2018ರಲ್ಲಿ ಯುವತಿಗೆ ಕಿರುಕುಳ ನೀಡಿ ಗರ್ಭಿಣಿಯಾಗಿಸಲಾಯಿತೆಂಬ ಪ್ರಕರಣದಲ್ಲಿ ತನಿಖೆಯ ಅಂಗವಾಗಿ ನಡೆಸಿದ ಡಿಎನ್‌ಎ ಪರೀಕ್ಷಾ ಫಲಿತಾಂಶ ನೆಗೆಟಿವ್ ಆಗಿದೆ. ಈ ಹಿನ್ನೆಲೆಯಲ್ಲಿ ಯುವತಿಯ ಹೇಳಿಕೆ ದಾಖಲಿಸಿಕೊಂಡ ಮಂಜೇಶ್ವರ ಪೊಲೀಸರು ಇನ್ನೋರ್ವ ಯುವಕನ ವಿರುದ್ಧವೂ ಕೇಸು ದಾಖಲಿಸಿಕೊಂಡಿದ್ದಾರೆ. 2018ರಲ್ಲಿ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಅವಿವಾಹಿತಳಾದ ಓರ್ವ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಅಂದು ಯುವತಿ ನೀಡಿದ ದೂರಿನ ಪ್ರಕಾರ ಓರ್ವ ಯುವಕನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಯುವತಿ ಗರ್ಭಿಣಿಯಾಗಿರುವುದು ಅದೇ ಯುವಕನಿಂದಾಗಿದೆ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು …

ಹಿರಿಯ ಕಾಂಗ್ರೆಸ್ ನೇತಾರ ನಿಧನ

ಬದಿಯಡ್ಕ: ಹಿರಿಯ ಕಾಂಗ್ರೆಸ್ ನೇತಾರ, ಬದಿಯಡ್ಕ ಪಂಚಾಯತ್ ಪರಿಶಿಷ್ಟ ಜಾತಿ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಚೆನ್ನೆಗುಳಿ ನಿವಾಸಿ ಐತ್ತಪ್ಪ (76) ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಹಲವು ತಿಂಗಳುಗಳಿಂದ ಚಿಕಿತ್ಸೆಯಲ್ಲಿದ್ದರು. ಇತ್ತೀಚೆಗೆ ಅಸೌಖ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಕಾಸರಗೋಡು ಜನರಲ್ ಆಸ್ಪತ್ರೆ, ಬದಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ವಿವಿಧ ಆಸ್ಪತ್ರೆಗಳಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸಿದ್ದರು. ಸೇವೆಯಿಂದ ನಿವೃತ್ತಿಗೊಂಡ ಬಳಿಕ ರಾಜಕೀಯದಲ್ಲಿ …

ತಾಮರಶ್ಶೇರಿಯಲ್ಲಿ ಸರಕಾರಿ ವೈದ್ಯರ ಕೊಲೆಗೆ ಯತ್ನ: ವೈದ್ಯರುಗಳಿಂದ ಜನರಲ್ ಆಸ್ಪತ್ರೆಯಲ್ಲಿ ಪ್ರತಿಭಟನೆ

ಕಾಸರಗೋಡು: ತಾಮರಶ್ಶೇರಿ ಸರಕಾರಿ ತಾಲೂಕು ಆಸ್ಪತ್ರೆಯ ವೈದ್ಯ ಪಿ.ಟಿ. ವಿಪಿನ್ (35)ರ  ತಲೆಗೆ ಕಡಿದು ಅವರನ್ನುಕೊಲೆಗೈಯ್ಯಲೆತ್ನಿಸಿ ದುದನ್ನು ಪ್ರತಿಭಟಿಸಿ ಕೇರಳ ಗವರ್ಮೆಂಟ್ ಮೆಡಿಕಲ್ ಆಫೀಸರ್ಸ್ ಅಸೋಸಿಯೇಶನ್ (ಕೆಜಿಎಂಒಎ) ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ನೇತೃತ್ವದಲ್ಲಿ  ವೈದ್ಯರುಗಳು ಇಂದು ಬೆಳಿಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. ಕೆಜಿಎಂಒಎ ಜಿಲ್ಲಾಧ್ಯಕ್ಷೆ ಡಾ. ಶಮೀಮಾ ತನ್ವೀರ್, ಐಎಂಎ ಕಾಸರಗೋಡು ಶಾಖಾ ಅಧ್ಯಕ್ಷ ಡಾ| ಬಿ. ನಾರಾಯಣ ನಾಯ್ಕ್, ಡಾ| ಸಿ.ಎಚ್. ಜನಾರ್ದನ ನಾಯ್ಕ್, ಡಾ| ಜಮಾಲ್ ಅಹಮ್ಮದ್, …

ದಾಖಲೆಗಳನ್ನು ಮುರಿದು ಮುಂದೆ ಸಾಗಿದ ಚಿನ್ನದ ಬೆಲೆ

ಕಾಸರಗೋಡು: ಜಾಗತಿಕವಾಗಿ ಆರ್ಥಿಕ, ರಾಜಕೀಯ ಸಂದಿಗ್ಧತೆ ಮುಂದುವರಿಯುತ್ತಿರುವಾಗ ಚಿನ್ನದ ಬೆಲೆ ದಾಖಲೆಗಳನ್ನು ಮುರಿದು ಮುಂದುವರಿಯುತ್ತಿದೆ. ಇಂದು 1 ಪವನ್ ಚಿನ್ನದ ದರ 91.040 ರೂ.ಗಳಾಗಿದೆ. ನಿನ್ನೆಗಿಂತ 720 ರೂ.ಗಳ ಹೆಚ್ಚಳವಾಗಿದೆ. ಇಂದು 1 ಗ್ರಾಂ ಚಿನ್ನದ ಬೆಲೆ 11,380 ರೂ. ಆಗಿದೆ. ಇದೇ ಸ್ಥಿತಿ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಚಿನ್ನದ ಬೆಲೆ ಪವನ್‌ಗೆ 1 ಲಕ್ಷವನ್ನು ದಾಟಲಿದೆಯೇ ಎಂಬ ಆತಂಕ ಮೂಡಿಸಿದೆ. ಸುರಕ್ಷತೆಗಾಗಿ ಕೇಂದ್ರ ಬ್ಯಾಂಕ್‌ಗಳು ಹಾಗೂ ಜಾಗತಿಕ ಫಂಡ್‌ಗಳು ಭಾರೀ ಪ್ರಮಾಣದಲ್ಲಿ ಚಿನ್ನ ಸಂಗ್ರಹಿಸುತ್ತಿರುವುದರೊಂದಿಗೆ …