‘ಪೋತ್ತಿಯೆ ಕೇಟ್ಟಿಯೆ’ಹಾಡಿನ ವಿರುದ್ಧ ದೂರು ಪ್ರಾಥಮಿಕ ತನಿಖೆ ಆರಂಭ

ತಿರುವನಂತಪುರ: ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ‘ಪೋತ್ತಿಯೆ ಕೇಟ್ಟಿಯೆ’ ಎಂಬ ಅನುಕರಣೆ ಹಾಡಿನ ವಿರುದ್ಧ ಡಿಜಿಪಿಗೆ ಸಲ್ಲಿಸಲಾದ ದೂರಿನಲ್ಲಿ ಪ್ರಾಥಮಿಕ ತನಿಖೆ ಆರಂಭಗೊಂಡಿದೆ. ದೂರನ್ನು ಡಿಜಿಪಿ ಎಡಿಜಿಪಿಗೆ ಹಸ್ತಾಂತರಿಸಿದ್ದಾರೆ.  ಹಾಡಿನಲ್ಲಿ ವಿಶ್ವಾಸಕ್ಕೆ ಧಕ್ಕೆ  ಉಂಟುಮಾಡುವ ಭಾಗಗಳಿವೆಯೇ ಎಂದು ಪರಿಶೀಲಿಸಲಾಗುವುದು.  ಈ ಬಗ್ಗೆ ಕಾನೂನು ಸಲಹೆ ಪಡೆದ ಬಳಿಕ ಮಾತ್ರವೇ ಕೇಸು ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಅಯ್ಯಪ್ಪ ಭಕ್ತರನ್ನು ಅವಹೇಳನಗೈಯ್ಯುವ ರೀತಿಯ ಹಾಡನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ  ತಿರುವಾಭರಣ  ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸಾದ್ …

ಎಲ್‌ಡಿಎಫ್ ಅಭ್ಯರ್ಥಿಗೆ ಸಹಾಯವೊದಗಿಸಿದ ದ್ವೇಷ: ಯುವಕನಿಗೆ ಕೊಲೆ ಬೆದರಿಕೆ; ಕೇಸು ದಾಖಲು

ಬದಿಯಡ್ಕ: ಸ್ಥಳೀಯಾಡಳಿತ ಚುನಾವಣೆಯಲ್ಲಿ ಎಡರಂಗ ಅಭ್ಯರ್ಥಿಗೆ ಸಹಾಯವೊದಗಿಸಿದ ದ್ವೇಷದಿಂದ  ಕಾರು ತಡೆದು ನಿಲ್ಲಿಸಿ  ಯುವಕನ ಮುಖಕ್ಕೆ ಉಗುಳಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ದೂರ ಲಾಗಿದೆ. ಕುಂಬ್ಡಾಜೆಯ ಫಾರೂಕ್ (43) ನೀಡಿದ ದೂರಿನಂತೆ  ಮುಹಮ್ಮದ್ ಸಿಯಾಬುದ್ದೀನ್ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.  ಆದಿತ್ಯವಾರ ರಾತ್ರಿ 7.30ರ ವೇಳೆ ಕುಂಬ್ಡಾಜೆ ಸಿ.ಎಚ್ ನಗರದಲ್ಲಿ ಘಟನೆ ನಡೆದಿರುವುದಾಗಿ ದೂರ ಲಾಗಿದೆ.  ಸ್ಥಳೀಯಾಡಳಿತ ಚುನಾ ವಣೆಯಲ್ಲಿ ಎಲ್‌ಡಿಎಫ್ ಅಭ್ಯ ರ್ಥಿಯಾಗಿ ಸ್ಪರ್ಧಿಸಿದ ಕಂಡಕ್ಟರ್ ಮೊಯ್ದೀನ್ ಎಂಬವರಿಗೆ  ಫಾರೂಕ್ ಸಹಾಯ ಒದಗಿಸಿದ ದ್ವೇಷದಿಂದ  …

ಕಾಂಕ್ರೀಟ್ ತುಂಡು ಎಸೆದು ಯುವಕ ಗಾಯಗೊಂಡ ಪ್ರಕರಣ: 5ಮಂದಿ ವಿರುದ್ಧ ಕೇಸು

ಉಪ್ಪಳ: ಉಪ್ಪಳ ಪಚ್ಲಂಪಾರೆಯಲ್ಲಿ  ಉಪ್ಪಳ ಗೇಟ್ ಪಳ್ಳಂ ರೋಡ್ ನ್ಯೂ ಫಾತಿಮಾ ಮಂಜಿಲ್‌ನ ಮಶ್ಕೂರ್ (27) ಎಂಬಾತನಿಗೆ ಸಿಮೆಂಟ್ ತುಂಡು ಎಸೆದು ತಲೆಗೆ ಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ದೂರಿನಂತೆ  5 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಚ್ಲಂಪಾರೆ ನಿವಾಸಿಗಳಾದ ಸೈಲ(23), ಅಮೀರ (27),ಉಸ್ನ (20),ಆಮಿನ (45)ಮತ್ತು ಅವ್ವ (45)ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಚುನಾವಣಾ ದಿನದಂದು ಬೂತ್‌ನಲ್ಲಿ ದೂರುದಾರ ಮತ್ತು ಈ ಪ್ರಕರಣದ 1 ಮತ್ತು 2ನೇ ಆರೋಪಿಗಳ  ತಂದೆಯೊಂದಿಗೆ    ಮತದಾನದ ವಿಷಯದಲ್ಲಿ …

ದೇಲಂಪಾಡಿಯಲ್ಲಿ ಸ್ವತಂತ್ರರ ಜಯ: ಮುಸ್ತಫ ಹಾಜಿ ಅಧ್ಯಕ್ಷರಾಗುವ ಸಾಧ್ಯತೆ

ದೇಲಂಪಾಡಿ: ಸಿಪಿಎಂನ ಲೆಕ್ಕಾ ಚಾರಗಳನ್ನು ತಪ್ಪಿಸಿ ದೇಲಂಪಾಡಿಯಲ್ಲಿ ಬಂಡಾಯ ಅಭ್ಯರ್ಥಿಗಳು ಗಳಿಸಿದ ಜಯವನ್ನು ಐಕ್ಯರಂಗ ಸದುಪ ಯೋಗಪಡಿಸಿಕೊಳ್ಳುತ್ತಿದೆ. ಸಿಪಿಎಂ ಬಂಡಾಯ ಅಭ್ಯರ್ಥಿಗಳನ್ನು ಜೊತೆಗೆ ಸೇರಿಸಿಕೊಂಡು ಸ್ಪರ್ಧೆಗೆ ಇಳಿದ ಯುಡಿಎಫ್ ಒಟ್ಟು 17 ಸೀಟುಗಳಲ್ಲಿ 7 ಸೀಟುಗಳನ್ನು ಮಾತ್ರವೇ ಗಳಿಸಿದೆಯಾದರೂ ಅತ್ಯಂತ ದೊಡ್ಡ ಒಕ್ಕೂಟವಾಗಿ ಮೂಡಿಬಂದಿದೆ. 6 ಮಂದಿ ಸ್ವತಂತ್ರರನ್ನು ರಂಗಕ್ಕಿಳಿಸಿದಾಗ ಮೂರು ಮಂದಿಯನ್ನು ಮಾತ್ರವೇ ಜಯಗಳಿಸುವಂತೆ ಮಾಡಲು ಸಾಧ್ಯ ವಾಗಿದೆ. ಸಿಪಿಎಂ ಬಿಟ್ಟು ಐಕ್ಯರಂಗದ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಜಯಗಳಿಸಿದ ಇಬ್ಬರು ಮುಖಂಡರು ಭಾರೀ ಬಹುಮತದೊಂದಿಗೆ ಜಯ …

ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ 26, 27ರಂದು

ಕಾಸರಗೋಡು: ಈ ತಿಂಗಳ 21ರಂದು ಪ್ರಮಾಣವಚನ ಸ್ವೀಕರಿಸುವ ಸ್ಥಳೀಯಾಡಳಿತ ಸಂಸ್ಥೆಗಳ ಆಡಳಿತ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ 26, 27ರಂದು ನಡೆಯಲಿದೆ. ನಗರಸಭೆಯ ಚೆಯರ್ ಪರ್ಸನ್ ಆಯ್ಕೆ 26ರಂದು ಬೆಳಿಗ್ಗೆ 10.30ಕ್ಕೆ, ಉಪಾಧ್ಯಕ್ಷರ ಆಯ್ಕೆ ಅಪರಾಹ್ನ 2.30ಕ್ಕೆ ನಡೆಯಲಿದೆ. ಗ್ರಾಮ ಪಂಚಾಯತ್, ಬ್ಲೋಕ್ ಪಂ., ಜಿಲ್ಲಾ ಪಂ. ಎಂಬಿವುಗಳ ಅಧ್ಯಕ್ಷರ ಆಯ್ಕೆ 27ರಂದು ಬೆಳಿಗ್ಗೆ 10.30ಕ್ಕೆ, ಉಪಾಧ್ಯಕ್ಷರ ಆಯ್ಕೆ ಅಪರಾಹ್ನ 2.30ಕ್ಕೆ ನಡೆಯಲಿದೆ. ಜಿಲ್ಲಾ ಪಂಚಾಯತ್ ಚುನಾವಣಾಧಿಕಾರಿಯಾಗಿ ಜಿಲ್ಲಾಧಿಕಾರಿಗೆ ಹೊಣೆ ನೀಡಲಾಗಿದೆ. ಗ್ರಾಮ ಪಂಚಾಯತ್, ಬ್ಲೋಕ್ ಪಂ.ಗಳಲ್ಲಿ …

ಕಾಮಗಾರಿಗೆ ಆಮೆನಡಿಗೆ: ಪಾರೆಕಟ್ಟೆ ಐಲ ಬೀಚ್ ರಸ್ತೆ ಸಂಚಾರ ಸಮಸ್ಯೆಯಲ್ಲಿ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪಾರಕಟ್ಟೆ ಐಲ ಬೀಚ್ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಪಂಚಾಯತ್ ವತಿಯಿಂದ ಕಾಮಗಾರಿ ಅರಂಭಿಸಿದ್ದರೂ, ಆಮೆ ನಡಿಗೆ ಯಲ್ಲಿ ಸಾಗುತ್ತಿರುವುದು ಸಾರ್ವ ಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಈ ರಸ್ತೆಯ ಅಭಿವೃದ್ದಿ ಹಿನ್ನೆಲೆಯಲ್ಲಿ ರಸ್ತೆ ಬದಿ ಚರಂಡಿ ನಿರ್ಮಾಣ ಹಾಗೂ ರಸ್ತೆಗೆ ಕಾಂಕ್ರೀಟ್ ಹಾಕುವ ಯೋಜನೆಯನ್ನು ಕೈಗೊಂಡಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯೇ ಕಾಮಗಾರಿ ಆರಂಬಿsಸಿದ್ದರು. ಆರಂಭದಲ್ಲಿ ಚರಂಡಿ ನಿರ್ಮಾಣಗೊಳಿಸಿದ ಬಳಿಕ ರಸ್ತೆಗೆ ಕಾಂಕ್ರಿಟ್ ಹಾಕುವ ಮೊದಲು ರಸ್ತೆ ಉದ್ದಕ್ಕೂ ಜಲ್ಲಿ ಕಲ್ಲು …

ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಸಭೆ

ಬದಿಯಡ್ಕ : ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಇದರ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾರ್ಚ್ 1ರಿಂದ 9ರ ತನಕ ನಡೆಯಲಿದೆ. ಇದರ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಮಹಾ ಸಭೆ ಶ್ರೀ ಕ್ಷೇತ್ರದಲ್ಲಿ ಜರಗಿತು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ದೀಪ ಪ್ರಜ್ವಲಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಹರಿನಾರಾಯಣ ನಡುವಂತಿಲ್ಲಾಯ ಪ್ರಾಸ್ತಾಪಿಸಿದರು. ಧಾರ್ಮಿಕ ಮುಖಂಡರಾದ ಬಿ ವಸಂತ ಪೈ, ಶ್ಯಾಮ್ ಭಟ್ ಏತಡ್ಕ, ಕೃಷ್ಣ ಭಟ್ ಅಜ್ಜಿಮೂಲೆ, ಹರಿನಾರಾ ಯಣ …

ತೆಂಗಿನಕಾಯಿ ತೆಗೆಯಲೆಂದು ಬಾವಿಗಿಳಿದು ಸಿಲುಕಿಕೊಂಡ ವ್ಯಕ್ತಿಗೆ ಅಗ್ನಿಶಾಮಕ ದಳದಿಂದ ರಕ್ಷಣೆ

ಕಾಸರಗೋಡು: ಬಾವಿಗೆ ಬಿದ್ದ ತೆಂಗಿನಕಾಯಿಗಳನ್ನು ತೆಗೆಯಲೆಂದು ಬಾವಿಗಿಳಿದು ಸಿಲುಕಿಕೊಂಡ ವ್ಯಕ್ತಿಯನ್ನು ಕಾಸರಗೋಡು ಅಗ್ನಿಶಾಮಕದಳ ರಕ್ಷಿಸಿದೆ. ತೆಂಗಿನಕಾಯಿಗಳನ್ನು ಸಂಗ್ರಹಿಸಿದ ಬಳಿಕ ಮೇಲೆ ಹತ್ತಲು ಯತ್ನಿಸುತ್ತಿದ್ದ ಮಧ್ಯೆ ಪ್ಲಾಸ್ಟಿಕ್ ಹಗ್ಗ ಜಾರಿ ಕೈತಪ್ಪಿ ಬಾವಿಗೆ ಬಿದ್ದ ಕಲ್ಲಿಕೋಟೆ ನರಿಕೂನಿ ನಿವಾಸಿ ಹಾಗೂ ಕುಂಬಳೆಯಲ್ಲಿ ವಾಸವಾಗಿರುವ ಶಬೀರ್ (39)ನನ್ನು ಅಗ್ನಿಶಾಮಕದಳ ಮೇಲೆತ್ತಿ ಪಾರು ಮಾಡಿದೆ. ನುಳ್ಳಿಪ್ಪಾಡಿಯ ರಾಜೇಂದ್ರ ಎಂಬವರ ಮನೆ ಹಿತ್ತಿಲಿನ ವಾಲಿಕೊಂಡಿದ್ದ ತೆಂಗನ್ನು ತಂತಿ ಉಪಯೋಗಿಸಿ ಎಳೆದು ಕಟ್ಟಲು ಇವರು ತಲುಪಿದ್ದರು. ಕೆಲಸದ ಮಧ್ಯೆ ಬಾವಿಗೆ ಬಿದ್ದ ತೆಂಗಿನಕಾಯಿಗಳನ್ನು ತೆಗೆಯಲೆಂದು …

ಬಿದ್ದು ಸಿಕ್ಕಿದ ಚಿನ್ನಾಭರಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಲ್ಯಾಬ್ ಟೆಕ್ನೀಷನ್

ಮೊಗ್ರಾಲ್: ಉಪ್ಪಳದಿಂದ ಮೊಗ್ರಾಲ್ ಪುತ್ತೂರಿಗಿರುವ ಬಸ್ ಪ್ರಯಾಣದ ಮಧ್ಯೆ ಕಳೆದುಹೋಗಿದ್ದ  ಅರ್ಧ ಪವನ್ ತೂಕದ ಚಿನ್ನಾಭರಣ ವನ್ನು ಮಾಲಕನಿಗೆ ಹಿಂತಿರುಗಿಸಿ ಮೊಗ್ರಾಲ್ ಸರಕಾರಿ ಯುನಾನಿ ಆಸ್ಪ ತ್ರೆಯ ಲ್ಯಾಬ್ ಟೆಕ್ನೀಷನ್ ಫಾತಿಮತ್ ಮುಮ್ತಾಸ್ ಪ್ರಾಮಾಣಿಕತೆ ಮೆರೆದಿದ್ದಾರೆ. ಮೊಗ್ರಾಲ್‌ನಿಂದ ಕಾಸರಗೋಡಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮುಮ್ತಾಸ್‌ಗೆ ಬಸ್‌ನ ಸೀಟಿನಿಂದ ಚಿನ್ನದ ಬ್ರೇಸ್‌ಲೆಟ್ ಬಿದ್ದು ಸಿಕ್ಕಿತ್ತು. ಮೊಗ್ರಾಲ್ ದೇಶೀಯವೇದಿ ಕಾರ್ಯಕರ್ತರನ್ನು ಸಂಪರ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂದೇಶ ನೀಡಿದಾಗ ಅದರ ಮಾಲಕನಿಗೆ ಮಾಹಿತಿ ಲಭಿಸಿದ್ದು, ಕೂಡಲೇ ಅವರು ಮುಮ್ತಾಸ್‌ರನ್ನು …

ಉಪ್ಪಳ ದೇವಿಪ್ರಸಾದ್ ಮಾವೆ ಆಸ್ಪತ್ರೆಯಲ್ಲಿ ಯಶಸ್ವಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯ ದೇವಿಪ್ರಸಾದ್ ಮಾವೆ ಆಸ್ಪತ್ರೆಯಲ್ಲಿ ಲಾಪ್ರೋಸ್ಕೋಪಿಕ್ ಮುಖಾಂತರ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು. ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ನಡೆಸಲಾದ ಈ ಶಸ್ತç ಚಿಕಿತ್ಸೆ ಮಂಜೇಶ್ವರ ತಾಲೂಕಿನಲ್ಲಿ ಪ್ರಥಮ ಎಂದು ಆಸ್ಪತ್ರೆಯ ಮಾಲಕ ಡಾ| ಶ್ರೀಧರ ಭಟ್ ತಿಳಿಸಿದ್ದಾರೆ. ಡಾ| ಲಿಖಿತ್ ರೈ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.