ಕುಂಬಳೆಯಲ್ಲಿ ನ್ಯಾಯವಾದಿಯ ಆತ್ಮಹತ್ಯೆ: ಆರೋಪಿ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ನ್ಯಾಯವಾದಿಯನ್ನು ಸಿಪಿಎಂ ವಕೀಲರ ಸಂಘಟನೆಯಿಂದ ಅಮಾನತು
ಕುಂಬಳೆ: ಕುಂಬಳೆಯಲ್ಲಿ ಯುವ ನ್ಯಾಯವಾದಿಯ ಆತ್ಮಹತ್ಯೆಗೈಯ್ಯಲು ನ್ಯಾಯವಾದಿಗಳ ಮಧ್ಯೆಗಿನ ಉದ್ಯೋಗ ಸ್ಪರ್ಧೆಯೂ ಕಾರಣವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೇ ವೇಳೆ ಈ ಘಟನೆ ಸಿಪಿಎಂ- ಸಿಪಿಐ ಮಧ್ಯೆ ಸೌಹಾರ್ದ ತಿಕ್ಕಾಟ ಕಾರಣವಾಗಿದೆ ಎಂಬ ಸೂಚನೆಯಿದೆ. ಸಾಮಾಜಿಕ, ರಾಜಕೀಯ, ನ್ಯಾಯವಾದಿ ರಂಗಗಳಲ್ಲಿ ರಂಜಿತ ಬಹಳ ಬೇಗನೆ ಗಮನ ಸೆಳೆಯಲ್ಪಟ್ಟಿ ದ್ದರು. ಸಿಪಿಎಂ ಹಾಗೂ ಪಕ್ಷದ ವಿವಿಧ ಪೋಷಕ ಸಂಘಟನೆಗಳಲ್ಲೂ ಪ್ರಧಾನ ಹೊಣೆಗಾರಿಕೆ ವಹಿಸುತ್ತಿದ್ದರು. ಸಿಪಿಎಂ ನ್ಯಾಯವಾದಿಗಳ ಸಂಘಟನೆಯ ಜಿಲ್ಲಾ ಕೋಶಾಧಿಕಾರಿಯಾಗಿದ್ದರು. ಸಿಪಿಐ ಬೆಂಬಲಿಗನೂ, ನ್ಯಾಯವಾದಿಯೂ ಆಗಿರುವ ಅನಿಲ್ …