‘ಪಿಟ್’ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಸೆರೆ

ಬದಿಯಡ್ಕ: ‘ಪಿಟ್’ ಎನ್‌ಡಿಪಿಎಸ್ ಆಕ್ಟ್ ಪ್ರಕಾರ ಜಿಲ್ಲೆಯಲ್ಲಿ ಇನ್ನೋರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ನೆಕ್ರಾಜೆ ನೆಲ್ಲಿಕಟ್ಟೆ ಸಾಲತ್ತಡ್ಕ ನಿವಾಸಿ ಇಕ್ಬಾಲ್ ಪಿ.ಎಂ. ಬಂಧಿತ ವ್ಯಕ್ತಿ. ಈತ ಬದಿಯಡ್ಕ, ಕಾಸರಗೋಡು ಮತ್ತು ಕರ್ನಾಟಕದಲ್ಲಿ ದಾಖಲಿಸಿಕೊಳ್ಳಲಾದ ಹಲವು ಮಾದಕ ದ್ರವ್ಯ ಸಾಗಾಟ ಪ್ರಕಣದ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 2019ರಂದು 41.140 ಕಿಲೋ ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡ ಪ್ರಕರಣದಲ್ಲಿ ಹಾಗೂ 2025 ರಲ್ಲಿ ಮಾದಕ ದ್ರವ್ಯವಾದ 26,100 ಗ್ರಾಂ …

ಹೆದ್ದಾರಿಯಲ್ಲಿ ಸಂಚರಿಸುವ  ವಾಹನಗಳ ನಿರೀಕ್ಷಿಸುವ ನಿಯಂತ್ರಣ ಕೊಠಡಿ ಸಜ್ಜು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಪ್ರಥಮ  ರೀಚ್ ತಲಪ್ಪಾಡಿಯಿಂದ ಚೆಂಗಳ ತನಕ ಪೂರ್ತಿಗೊಳ್ಳುವ ಹಂತದಲ್ಲಿದ್ದು,  ಈ ಮೂಲಕ ಸಾಗುವ ವಾಹನಗಳು ಜಾಗ್ರತೆ ವಹಿಸಬೇಕಾ ಗಿದೆ. ತಲಪ್ಪಾಡಿಯಿಂದ ಚೆಂಗಳದವ ರೆಗಿನ ಹೆದ್ದಾರಿಯಲ್ಲಿ ಸಂಪೂರ್ಣ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಇದರ ನಿಯಂತ್ರಣ ಕೊಠಡಿಗೆ ಮಂಜೇಶ್ವರ ದಲ್ಲಿ ಚಾಲನೆ ನೀಡಲಾಗಿದೆ. ಮಂಜೇಶ್ವರ ರೈಲು ನಿಲ್ದಾಣ ಸಮೀಪದ ಸರ್ವೀಸ್ ರಸ್ತೆ ಬಳಿಯಲ್ಲಿ ನಿಯಂತ್ರಣ ಕೊಠಡಿ ಸಿದ್ಧಗೊಂಡಿದೆ. ಅಲ್ಲದೆ ಇಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.  ಇಲ್ಲಿ ಸಿಸಿ ಕ್ಯಾಮರಾ ನಿಯಂತ್ರಣ ಕೊಠಡಿ, …

ಪುತ್ರಿಯನ್ನು 3 ಬಾರಿ ಮಾನಭಂಗ ಗೈದ ತಂದೆಗೆ 178 ವರ್ಷ ಕಠಿಣ ಸಜೆ, 10.75 ಲಕ್ಷ ರೂ. ದಂಡ ಶಿಕ್ಷೆ

ಮಂಜೇರಿ: 11 ವರ್ಷದ ಪುತ್ರಿಯನ್ನು ಮಾನಭಂಗಗೈದ ತಂದೆಗೆ ಮಂಜೇರಿ ಸ್ಪೆಷಲ್ ಪೋಕ್ಸೋ ನ್ಯಾಯಾಲಯ ವಿವಿಧ ಕಾಯ್ದೆಗಳಲ್ಲಾಗಿ 178 ವರ್ಷ 1 ತಿಂಗಳು ಕಠಿಣ ಸಜೆ, 10.75 ಲಕ್ಷ ರೂ. ದಂಡ ಶಿಕ್ಷೆ ವಿಧಿಸಿದೆ. ಅರಿಕೋಡ್ ನಿವಾಸಿಯಾದ ನ್ಯಾಯಾಧೀಶ ಎ.ಎಂ. ಅಶ್ರಫ್ ಈ ಶಿಕ್ಷೆ ಘೋಷಿಸಿದ್ದಾರೆ. ಪೋಕ್ಸೋ ಆಕ್ಟ್ನ ಮೂರು ವಿಭಾಗಗಳಲ್ಲಾಗಿ ಭಾರತೀಯ ಶಿಕ್ಷಾ ಕಾನೂನಿನ 376 ಕಾಯ್ದೆಯಲ್ಲಿ ತಲಾ 40 ವರ್ಷದಂತೆ ಕಠಿಣ ಸಜೆ ಹಾಗೂ 2 ಲಕ್ಷ ರೂ. ದಂಡ ಪಾವತಿಸಬೇಕಾಗಿದೆ. ದಂಡ ಪಾವತಿಸದಿದ್ದರೆ ಪ್ರತಿ …

ಉಪಯೋಗಶೂನ್ಯಗೊಂಡ ಕೊಳವೆ ಬಾವಿಯಿಂದ ಅಪಾಯ ಆಹ್ವಾನ

ಉಪ್ಪಳ: ಕೊಳವೆ ಬಾವಿ ಯೊಂದು ಉಪಯೋಗ ಶೂನ್ಯ ಗೊಂಡು ತುಕ್ಕುಹಿಡಿದು ಅಪಾಯ ಆಹ್ವಾನಿಸುತ್ತಿದೆ.  ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರ-ಪುಳಿಕುತ್ತಿ ರಸ್ತೆಯಲ್ಲಿ ಸುಮಾರು 15 ವರ್ಷಗಳಿಂದ ಉಪಯೋಗ ಶೂನ್ಯಗೊಂಡಿರುವ ಕೊಳವೆಬಾವಿ ಈಗ ಅಪಾಯಕ್ಕೆ ಕಾರಣವಾಗಿದೆ. ಇದರ  ಹ್ಯಾಂಡಲ್ ಸಹಿತದ ಭಾಗಗಳು ಜೀರ್ಣಗೊಂಡು ಮುರಿದುಬಿದ್ದಿದ್ದು, ಹೊಂಡ ಬಾಯ್ದೆರದ ಸ್ಥಿತಿಯಲ್ಲಿದೆ. ರಸ್ತೆ ಬದಿಯಲ್ಲೇ ಇರುವ ಈ ಕೊಳವೆ ಬಾವಿಯ ಹ್ಯಾಂಡಲ್ ಮಗುಚಿ ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರಕ್ಕೂ ಸಮಸ್ಯೆಯಾಗಿದೆ. ಅಲ್ಲದೆ ಮಕ್ಕಳು ಸಹಿತ ರಸ್ತೆಯಲ್ಲಿ ಸಂಚರಿಸುವವರಿಗೆ ಬಾಯ್ದೆರೆದಿರುವ ಕೊಳವೆ ಬಾವಿ ಭೀತಿ ಸೃಷ್ಟಿಸುತ್ತಿದೆ.  …

ಹೆಚ್ಚುತ್ತಿರುವ ಅಪ್ರಾಪ್ತರ ವಾಹನ ಸವಾರಿ : ಮಂಜೇಶ್ವರ ಪೊಲೀಸರಿಂದ ಬಿಗು ತಪಾಸಣೆ

ಮಂಜೇಶ್ವರ: ಅಪ್ರಾಪ್ತರು ಚಲಾಯಿಸಿದ ದ್ವಿಚಕ್ರ ವಾಹನಗಳು, ದಾಖಲೆಪತ್ರಗಳಿಲ್ಲದೆ ಚಲಾಯಿಸಿದ ವಾಹನ,ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿರುವುದು  ಮೊದಲಾದ ಪ್ರಕರಣಗಳಲ್ಲಿ ಪೊಲೀಸರು ವಾಹನಗಳನ್ನು ವಶಪಡಿಸುತ್ತಿದ್ದಾರೆ. ಈ ರೀತಿಯ ತಪಾಸಣೆಯನ್ನು ಮಂಜೇಶ್ವರ ಪೊಲೀಸರು ಬಿಗುಗೊಳಿಸಿದ್ದು, ಕಳೆದ ಒಂದು ವಾರದಲ್ಲಿ 15ರಷ್ಟು ಪ್ರಕರಣಗಳು ದಾಖಲಾಗಿವೆ. ಮೊನ್ನೆ ಸಂಜೆ ಮೀಯಪದವಿನಲ್ಲಿ ಎಸ್‌ಐ ಉಮೇಶ್ ಕೆ.ಆರ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಬಾಯಿಕಟ್ಟೆ ಭಾಗದಿಂದ ಮೀಯಪದವು ಕಡೆಗೆ ಅಪ್ರಾಪ್ತ ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಇಂದು ಮುಂಜಾನೆ ಕಣ್ವತೀರ್ಥದಿಂದ ಮದ್ಯ ದಮಲಿನಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದಾಗ ವಾಹನವನ್ನು ವಶಪಡಿಸಿ …

ಜಿಲ್ಲಾ ಪಂಚಾಯತ್, ಬ್ಲೋಕ್ ಪಂಚಾಯತ್ ಡಿವಿಶನ್‌ಗಳಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳು

ಕಾಸರಗೋಡು: ಜಿಲ್ಲಾ ಪಂಚಾ ಯತ್‌ಗೆ,  ವಿವಿಧ ಬ್ಲೋಕ್ ಪಂಚಾ ಯತ್‌ಗಳಿಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಯಾದಿಯನ್ನು ಅಂತಿಮ ಗೊಳಿಸಲಾಗಿದೆ.  ಜಿಲ್ಲಾ ಪಂಚಾಯ ತ್‌ನ ಮಂಜೇಶ್ವರ ಡಿವಿಶನ್‌ನಿಂದ ಜಯಂತಿ ಶೆಟ್ಟಿ ಸ್ಪರ್ಧಿಸಲಿದ್ದು, ಕುಂಬಳೆಯಲ್ಲಿ ಸುನಿಲ್ ಅನಂತಪುರ, ಚೆಂಗಳದಿಂದ ನಳಿನಿಕೃಷ್ಣ, ಬೇಕಲದಿಂದ ಮಾಲತಿ ಪಿ, ಪೆರಿಯಾದಿಂದ  ಹೇಮ ಮಣಿಕಂಠನ್, ಚೆರ್ವತ್ತೂರಿನಿಂದ ಪಿ.ವಿ.ಶೀಬಾ ಸ್ಪರ್ಧಿಸುವರು. ಕಾಸರಗೋಡು ಬ್ಲೋಕ್ ಪಂಚಾಯತ್‌ನ ಆರಿಕ್ಕಾಡಿ ಡಿವಿಶನ್‌ನಿಂದ ಪುಷ್ಪಲತಾ ಪಿ. ಶೆಟ್ಟಿ, ಉಳಿಯತ್ತಡ್ಕದಿಂದ ಸರಸ್ವತಿ ಚೇನಕ್ಕೋಡು, ಬೇಳದಿಂದ ಪ್ರಶಾಂತ್ ರೈ, ಪಾಡಿಯಿಂದ ಚಂದ್ರಾವತಿ, ಸಿವಿಲ್ ಸ್ಟೇಶನ್‌ನಿಂದ ಶಶಿಧರನ್ …

ಪಡಿತರ ಚೀಟಿಯಲ್ಲಿ ಕನ್ನಡವನ್ನುಮುದ್ರಿಸಲು ಸರಕಾರ ಆದೇಶ

ಕಾಸರಗೋಡು: ಕನ್ನಡದ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಪಡಿತರ ಚೀಟಿಯಲ್ಲಿ ಕನ್ನಡ ಭಾಷೆಯನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಕೇರಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಯವರು ಪ್ರಸ್ತುತ ಇಲಾಖೆಯ ಆಯುಕ್ತರಿಗೆ ನಿರ್ದೇಶ ನೀಡಿದ್ದಾರೆ. ರೇಶನ್ ಕಾರ್ಡ್‌ಗಳು ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಯಲ್ಲಿದ್ದು, ಕನ್ನಡ ಭಾಷಾ ಅಲ್ಪ ಸಂಖ್ಯಾತರ ಹಿತಾಸಕ್ತಿ ಪರಿಗಣಿಸಿ, ರೇಶನ್ ಕಾರ್ಡ್‌ಗಳಲ್ಲಿ ಕನ್ನಡ ಭಾಷೆಯನ್ನೂ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಕಾಸರಗೋಡು …

ಬಿಎಲ್‌ಒಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದಲ್ಲಿ 10 ವರ್ಷಗಳ ತನಕ ಸಜೆ

ಕಾಸರಗೋಡು; ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕ್ರಮದಂತೆ ಕರ್ತವ್ಯದಲ್ಲಿ ನಿರತರಾಗುವ ಬಿಎಲ್‌ಒ (ಬೂತ್ ಲೆವೆಲ್ ಆಫೀಸರ್)ಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾ ಗುವುದೆಂದು ಕೇಂದ್ರ ಚುನಾವಣಾ ಆಯೋಗದ ರಾಜ್ಯ ಆಯುಕ್ತ ರತನ್ ಯು. ಖೇಲ್ಕರ್ ತಿರುವನಂತಪುರ ದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಮುನ್ನೆಚ್ಚರಿಕೆ ನೀಡಿದ್ದಾರೆ. ಬಿಎಲ್‌ಒಗಳು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿರ್ವಹಿಸಲು ಚುನಾವಣಾ ಆಯೋಗ ನಿಯೋಜಿಸಿದ ಸಾರ್ವಜನಿಕ ಸೇವಕರಾಗಿದ್ದಾರೆ. ಆದ್ದರಿಂದ ಎಸ್‌ಐಆರ್ ನಡೆಸುವ ವೇಳೆ ಅವರಿಗೆ ಅಡಚಣೆ   ಉಂಟುಮಾಡಿದಲ್ಲಿ ಅದು ಹತ್ತು …

ಮಜಿಬೈಲು ತಿರುವಿನಲ್ಲಿ ತುಂಬಿಕೊಂಡ ಕಾಡು ಪೊದೆ: ಅಪಾಯಭೀತಿ

ಮೀಂಜ:  ಪಂಚಾಯತ್ ವ್ಯಾಪ್ತಿಯ ಮೀಯಪದವು ರಸ್ತೆಯ ಮಜಿಬೈಲ್ ಸೇತುವೆ ಸಮೀಪ ತಿರುವಿನಲ್ಲಿ ಕಾಡುಪೊದೆ ಆವರಿಸಿಕೊಂ ಡಿದ್ದು ವಾಹನ ಸವಾರರಲ್ಲಿ ಅಪಘಾತಭೀತಿ ಸೃಷ್ಟಿಯಾಗಿದೆ.  ರಸ್ತೆಯುದ್ದಕ್ಕೂ ಅಲ್ಲಲ್ಲಿ ತಿರುವುಗಳಿದ್ದು ಎರಡೂ ಕಡೆಗಳಲ್ಲಿ ಕಾಡುಪೊದೆಗಳು ತುಂಬಿಕೊಂಡಿದೆ. ಆದರೆ ಸೇತುವೆ ಸಮೀಪದಲ್ಲಿ  ದೊಡ್ಡ ತಿರುವು ಇದ್ದು ಪೊದೆಗಳು ಆವರಿಸಿದ ಕಾರಣ ಗಮನಕ್ಕೆ ಬಾರದೆ ಅಪಾಯ ಉಂಟಾಗುವ ಸಾಧ್ಯತೆಯಿದೆಯೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಮೀಯಪದವು ಭಾಗದಿಂದ ಹೊಸಂಗಡಿಗೆ ಹಾಗೂ ಹೊಸಂಗಡಿ ಭಾಗದಿಂದ ಮೀಯಪದವಿಗೆ ತೆರಳುವ ವಾಹನಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ರಸ್ತೆ ಬದಿಯಲ್ಲಿ ತುಂಬಿಕೊಂಡಿರುವ …

ರೈಲು ಯಾತ್ರೆ ಮಧ್ಯೆ ಮೊಬೈಲ್ ಕದ್ದ ಆರೋಪಿ ಗಂಟೆಗಳೊಳಗೆ ಸೆರೆ

ಕಾಸರಗೋಡು: ರೈಲಿನಲ್ಲಿ ನಿದ್ರಿಸುತ್ತಿದ್ದ ಕಾಸರಗೋಡು ನಿವಾಸಿಯ ಮೊಬೈಲ್ ಫೋನ್ ಕಳವುಗೈದ ಕಳ್ಳನನ್ನು ಗಂಟೆಗಳೊಳಗೆ ರೈಲ್ವೇ ಪೊಲೀಸರು ಸೆರೆ ಹಿಡಿದಿದ್ದಾರೆ. ತಮಿಳುನಾಡು ಕನ್ಯಾಕುಮಾರಿ ನಿವಾಸಿ ಇ. ಸುರೇಶ್ (47) ಸೆರೆಯಾದವ. ಇತ್ತೀಚೆಗೆ ಕಾಸರಗೋಡು ನಿವಾಸಿ ಹಾಶಿಂ ಬಂಬ್ರಾಣಿಯವರ ಮೊಬೈಲ್ ಫೋನನ್ನು ಆರೋಪಿ ರೈಲಿನಿಂದ ಕಳವುಗೈದಿದ್ದನು. ಎರ್ನಾಕುಳಂನಿಂದ ಒಕೆ ಎಕ್ಸ್‌ಪ್ರೆಸ್‌ನಲ್ಲಿ ಕಾಸರಗೋಡಿಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಈ ಬಗ್ಗೆ ಹಾಶಿಂ ಬಂಬ್ರಾಣಿ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು.