ಬಿಜೆಪಿ ಬೂತ್ ಏಜೆಂಟನಿಗೆ ಹಲ್ಲೆ: ಸಿಪಿಎಂ ಕಾರ್ಯಕರ್ತರ ವಿರುದ್ಧ ಕೇಸು

ಕಾಸರಗೋಡು: ಕುಟ್ಟಿಕ್ಕೋಲ್ ಗ್ರಾಮ ಪಂಚಾಯತ್‌ನ ಎರಡನೇ  ವಾರ್ಡ್‌ನ ಬಿಜೆಪಿಯ ಬೂತ್ ಏಜೆಂಟ್ ಬಿಜೆಪಿ ಕಾರ್ಯಕರ್ತ ಗೋಪಾಲಕೃಷ್ಣನ್‌ರ ಮೇಲೆ ಮತದಾನ ದಿನದಂದು ಸಂಜೆ ಹಲ್ಲೆ ನಡೆಸಿದ ದೂರಿನಂತೆ ಐದು ಮಂದಿ ಸಿಪಿಎಂ ಕಾರ್ಯಕರ್ತರ ವಿರುದ್ಧ ಬೇಡಗಂ ಕೇಸು ದಾಖಲಿಸಿಕೊಂಡಿದ್ದಾರೆ.ನೈಮುದ್ದೀನ್ ಪರಪ್ಪ, ಅರ್ಶಾದ್, ರಾಖೇಶ್, ಅಭಿಲಾಷ್, ಗೋಪಿ ಮತ್ತು ಮಧು ಮೊಳೆಯ್ಕಲ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರಸ್ತುತ ವಾರ್ಡ್‌ನ ಬಿಜೆಪಿ ಉಮೇದ್ವಾರ ಪಿ. ಮಣಿ ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ಮತ ಚಲಾಯಿಸಲೆತ್ನಿಸಿದನ್ನು ತಡೆದ …

ಶಾಲೆಯ ಅಡುಗೆ ಕಾರ್ಮಿಕೆ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಶಾಲೆಯ ಅಡುಗೆ ಕಾರ್ಮಿಕೆ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಣತ್ತೂರು ಪೆರುತ್ತಡಿ ವಲಿಯವೀಟಿಲ್‌ನ ಶಾರದ (71) ಮೃತಪಟ್ಟ ಮಹಿಳೆ. ಇವರು ಪೆರುತ್ತಡಿ ಜಿಎಲ್‌ಪಿ ಶಾಲೆಯ  ಅಡುಗೆ ಕಾರ್ಮಿಕೆಯಾಗಿದ್ದರು. ನಿನ್ನೆ ಅಪರಾಹ್ನ 3 ಗಂಟೆ ವೇಳೆ ಮನೆ ಸಮೀಪದ ವ್ಯಕ್ತಿಯೋರ್ವರ ಕೆರೆಯಲ್ಲಿ ಇವರು ಮೃತಪಟ್ಟ  ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮೃತರು ಪತಿ ನಾರಾಯಣ ಮಾರಾರ್, ಪುತ್ರ ಹರೀಶ್, ಸೊಸೆ ರಜಿತ, ಸಹೋದರ ಉಣ್ಣಿಕೃಷ್ಣ ಮಾರಾರ್, ಸಹೋದರಿ ಸುಭದ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಶಿವಶಂಕರ ಮಾರಾರ್ …

ರೈಲಿಗೆ ಹತ್ತುತ್ತಿದ್ದ ವೇಳೆ ಕೆಳಕ್ಕೆ ಬಿದ್ದು ರೈಲ್ವೇ ನೌಕರನ ಕೈಗೆ ಗಂಭೀರ ಗಾಯ

ಕುಂಬಳೆ: ರೈಲು ಗಾಡಿಗೆ ಹತ್ತುತ್ತಿದ್ದ ವೇಳೆ ಉಂಟಾದ ದುರ್ಘಟನೆಯಲ್ಲಿ ರೈಲ್ವೇ ನೌಕರನ ಕೈ ತುಂಡರಿಸಲ್ಪಟ್ಟ ದಾರುಣ ಘಟನೆ ಕುಂಬಳೆಯಲ್ಲಿ ಸಂಭವಿಸಿದೆ.  ತಮಿಳುನಾಡಿನ ತಿರುನಲ್ವೇಲಿ ನಿವಾಸಿಯಾದ ರಾಜಶೇಖರನ್ (36) ಎಂಬವರ ಬಲದ ಕೈ ತುಂಡರಿಸಲ್ಪಟ್ಟಿದೆ. ನಿನ್ನೆ ಅಪರಾಹ್ನ 2.50ಕ್ಕೆ ಕುಂಬಳೆಗೆ ತಲುಪಿದ ತಿರುವನಂತಪುರ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿಗೆ ಹತ್ತುತ್ತಿದ್ದ ವೇಳೆ ರಾಜಶೇಖರನ್ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ಬಲಕೈ ಪ್ಲಾಟ್ ಫಾರ್ಮ್ ಹಾಗೂ  ರೈಲಿನ ಮಧ್ಯೆ ಸಿಲುಕಿಕೊಂಡು ತುಂಡರಿಸಲ್ಪ ಟ್ಟಿದೆ. ಅವರನ್ನು ಕಾಸರಗೋಡು ಜನ ರಲ್ …

ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಹಲ್ಲೆ: ಯುಡಿಎಫ್ ಅಭ್ಯರ್ಥಿ ಸೇರಿ 20 ಮಂದಿ ವಿರುದ್ಧ ಕೇಸು

ಕಾಸರಗೋಡು: ಪೊಲೀಸ್ ಇನ್ಸ್‌ಪೆಕ್ಟರ್‌ರ ಮೇಲೆ ಹಲ್ಲೆ ನಡೆಸಿದ ಆರೋಪದಂತೆ ಅಜಾನೂರು ಪಂಚಾ ಯತ್‌ನ ಯುಡಿಎಫ್ ಅಭ್ಯರ್ಥಿ ಸಿ.ಎಚ್. ನಿಝಾಮುದ್ದೀನ್ ಸೇರಿದಂತೆ ಒಟ್ಟು 20 ಮಂದಿ ವಿರುದ್ಧ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಅಜಾನೂರು ಪಂಚಾಯತ್‌ನ 24ನೇ ವಾರ್ಡ್‌ನಲ್ಲಿ ಮತದಾನದ ದಿನದಂದು ಸಂಜೆ ಅಲ್ಲಿನ ಬೂತ್ ಏಜೆಂಟ್ ಆಗಿದ್ದ ಐಎನ್‌ಎಲ್ ಕಾರ್ಯಕರ್ತರಿಗೆ ಯುಡಿಎಫ್‌ನ ತಂಡವೊಂದು ಬೆದರಿಕೆ ಒಡ್ಡಿತ್ತೆನ್ನಲಾಗಿದೆ. ಆ ಬಗ್ಗೆ ನೀಡಲಾದ ದೂರಿನಂತೆ ಅಲ್ಲಿಗೆ ಬಂದ ಹೊಸದುರ್ಗ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಇ.ಅನೂಬ್ ಕುಮಾರ್‌ರ ನೇತೃತ್ವದ ಪೊಲೀಸರ …

ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ: ಆರು ಮಂದಿ ಆರೋಪಿಗಳಿಗೆ 20 ವರ್ಷ ಕಠಿಣ ಸಜೆ, ಜುಲ್ಮಾನೆ

ಕೊಚ್ಚಿ: ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಎರ್ನಾಕುಳಂ ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ತಲಾ 20 ವರ್ಷ ಕಠಿಣ ಸಜೆ ಹಾಗೂ ಒಟ್ಟಾರೆಯಾಗಿ 9.75 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಕಳೆದ ಅವಧಿಯನ್ನೂ ಶಿಕ್ಷಾ ಅವಧಿಯಾಗಿ ಪರಿಗಣಿಸಿ ಬಾಕಿ ಶಿಕ್ಷೆಯನ್ನು ಆರೋಪಿಗಳು ಅನುಭವಿಸಿದರೆ ಸಾಕೆಂದು, ಜುಲ್ಮಾನೆ ಮೊತ್ತವನ್ನು ಆರೋಪಿಗಳು ಸಂತ್ರಸ್ಥೆಗೆ ನೀಡಬೇಕೆಂದು ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ. ಪಲ್ಸರ್ ಸುನಿ ಅಲಿಯಾಸ್ …

ಕುಸಿದು ಬಿದ್ದ ಬಡ ಕುಟುಂಬದ ಮನೆ : ಅದೃಷ್ಟವಶಾತ್ ಅಪಾಯದಿಂದ ಪಾರು

ಉಪ್ಪಳ: ಹೆಂಚು ಹಾಸಿದ ಮನೆಯೊಂದು  ಕುಸಿದು ಬಿದ್ದ ಘಟನೆ ಕುಬಣೂರು ಒಡ್ಡಂಬೆಟ್ಟು ಎಂಬಲ್ಲಿ ಜರಗಿದೆ. ಆದರೆ ಅದೃಷ್ಟವಶಾತ್ ಮನೆಯೊಳಗೆ ಯಾರೂ ಇಲ್ಲದ ಕಾರಣ ಅಪಾಯ ಸಂಭವಿಸಿಲ್ಲ. ಕುಬಣೂರು ಒಡ್ಡಂಬೆಟ್ಟುವಿನ ಮಾಣಿಗ ಎಂಬವರ ಮನೆ ನಿನ್ನೆ ಸಂಜೆ ಕುಸಿದು ಬಿದ್ದಿದೆ. ಮಾಣಿಗ ಹಾಗೂ ಪುತ್ರಿ ಲಕ್ಷ್ಮಿ ಇಲ್ಲಿ ವಾಸವಾಗಿದ್ದು, ಆದರೆ ನಿನ್ನೆ ಸಂಜೆ ಇವರು ಮನೆಯಲ್ಲಿಲ್ಲದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಮನೆಯ ಪಕ್ಕಾಸು, ಹೆಂಚು ಪೂರ್ತಿ ಕುಸಿದು ಬಿದ್ದಿದ್ದು, ಬಡ ಕುಟುಂಬ ಸಂಕಷ್ಟಕ್ಕೀಡಾಗಿದೆ. ಸ್ಥಳಕ್ಕೆ ಪಂಚಾಯತ್ ಮಾಜಿ ಸದಸ್ಯ …

ಹೃದಯಾಘಾತ ಸಾವಿಗೆ ಕೋವಿಡ್ ವ್ಯಾಕ್ಸಿನ್ ಕಾರಣವಲ್ಲ-ಐಸಿಎಂಆರ್‌ನ ವರದಿ ಸರಿಯೆಂದು ತಿಳಿಸಿದ ರಾಜ್ಯ ಆರೋಗ್ಯ ಇಲಾಖೆ

ತಿರುವನಂತಪುರ:  ಅಲ್ಪ ಕಾಲದಿಂದ ಹೃದಯಾಘಾತ ಉಂಟಾಗಿ ಯುಕ-ಯುವತಿಯರು ಕುಸಿದುಬಿದ್ದು ಸಾವಿಗೀಡಾಗುವ ಘಟನೆಗಳಿಗೆ  ಕೋವಿಡ್ ವ್ಯಾಕ್ಸಿನೇಶನ್‌ನೊಂದಿಗೆ ಯಾವುದೇ ಸಂಬಂಧವಿಲ್ಲವೆಂದು  ಐಸಿಎಂಆರ್‌ನ ಅಧ್ಯಯನ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆ ಕೂಡಾ ಸರಿಯೆಂದು ಅಭಿಪ್ರಾಯಪಟ್ಟಿದೆ. ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡಮೋಲಜಿ ಮೂಲಕ ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ನಡೆಸಿದ ಅಧ್ಯಯನ  ಅಧಿಕೃತವಾಗಿದೆಯೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು. ಇದರ ಬೆನ್ನಲ್ಲೇ ಈಗ ರಾಜ್ಯ ಆರೋಗ್ಯ ಇಲಾಖೆ ಕೂಡಾ ಅದನ್ನು ಒಪ್ಪಕೊಂಡಿದೆ. ಆದರೆ ಈ ಮೊದಲು ಆರೋಗ್ಯ ಸಮಸ್ಯೆಗಳಿಲ್ಲದ  ಯುವಕರು ಹಾಗೂ …

ರೈಲ್ವೇ ಗೇಟ್‌ನಲ್ಲಿ ಸಂಚಾರ ನಿಷೇಧ

ಕುಂಬಳೆ: ಕುಂಬಳೆ- ಮಂಜೇಶ್ವರ ರೈಲು ನಿಲ್ದಾಣಗಳ ಮಧ್ಯೆಗಿನ ಮುಟ್ಟಂ ರೈಲ್ವೇ ಕ್ರಾಸ್ ಎಲ್‌ಸಿ 287 ರೈಲ್ವೇ ಗೇಟ್ ದುರಸ್ತಿ ಕಾಮಗಾರಿಗಾಗಿ  ಮುಚ್ಚುಗಡೆ ಗೊಳಿಸುವ ದಿನಾಂಕವನ್ನು ಬದಲಿಸಲಾಗಿದೆ. ಈ ಮೊದಲು ಈ ತಿಂಗಳ 15, 16ರಂದು ಮುಚ್ಚು ವುದಾಗಿ ತಿಳಿಸಿದ್ದರೂ ಈಗ ಅದನ್ನು ಈ ತಿಂಗಳ 26ರಂದು ಬೆಳಿಗ್ಗೆ 8ರಿಂದ,  27ರಂದು ಸಂಜೆ 6 ಗಂಟೆವರೆಗೆ ಮುಚ್ಚಲು ತೀರ್ಮಾ ನಿಸಲಾಗಿದೆ. ಈ ಸಂದರ್ಭದಲ್ಲಿ ಈ ದಾರಿಯಾಗಿ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದ್ದು, ವಾಹನಗಳು ಉಪ್ಪಳ ಗೇಟ್ ಮೂಲಕ ಸಂಚರಿಸಬೇಕೆಂದು ದಕ್ಷಿಣ …

ಚುನಾವಣೆ ವೇಳೆ ಹಲವೆಡೆಗಳಲ್ಲಿ ಘರ್ಷಣೆ: ಮಂಗಲ್ಪಾಡಿಯಲ್ಲಿ ಬೂತ್ ಏಜೆಂಟ್‌ಗಳ ಮಧ್ಯೆ ವಿವಾದ; ಹೊಡೆದಾಟ ತಡೆದ ಪೊಲೀಸ್

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಿನ್ನೆ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಕೆಲವೆಡೆಗಳಲ್ಲಿ ಸಣ್ಣಪುಟ್ಟ ಘರ್ಷಣೆ ಉಂಟಾಗಿದೆ. ಮಂಗಲ್ಪಾಡಿ ಪಂಚಾಯತ್‌ನ ಎರಡನೇ ವಾರ್ಡ್‌ನ ಮತಗಟ್ಟೆಯೊಳಗೆ ಹಾಗೂ ಹೊರಗೆ ಎರಡು ತಂಡಗಳ ಮಧ್ಯೆ ನಿನ್ನೆ ಘರ್ಷಣೆ ಹುಟ್ಟಿಕೊಂಡಿದ್ದು ಪೊಲೀಸರು ತಕ್ಷಣ ನಡೆಸಿದ ಮಧ್ಯಪ್ರವೇಶದಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಎರಡನೇ ವಾರ್ಡ್‌ನ ಎರಡನೇ ಮತಗಟ್ಟೆಯಲ್ಲಿ ಸಂಜೆ ೫.೩೦ರ ವೇಳ ಮತ ಚಲಾಯಿಸಲು ಬಂದ  ಓರ್ವ ಮತದಾರನ ಹೆಸರಿಗೆ ಸಂಬಂಧಿಸಿ ಮುಸ್ಲಿಂ ಲೀಗ್ ಹಾಗೂ ಎಡರಂಗದ ಸ್ವತಂತ್ರ ಅಭ್ಯರ್ಥಿಯ ಮತ ಏಜೆಂಟ್‌ಗಳ …

ಪತಿ ಮನೆಯಲ್ಲಿ ಯುವತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಉಪ್ಪಳ ಸೋಂಕಾಲ್ ನಲ್ಲಿರುವ ಪತಿ ಮನೆಯಲ್ಲಿ ಯುವತಿಯೋರ್ವೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ಕೊಡಂಗೆ ರಸ್ತೆಯ ಮೊಯ್ದೀನ್ ಸವಾದ್‌ರ ಪತ್ನಿ ಫಾತಿಮತ್ ನಸ್‌ಬೀನ (25) ಮೃತಪಟ್ಟ ಯುವತಿ. ನಿನ್ನೆ ಸಂಜೆ ಮನೆಯ ಬೆಡ್‌ರೂಂನ ಕಿಟಿಕಿ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸ ಲಾಗಲಿಲ್ಲ.  ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದು ಬಂದಿಲ್ಲ. ಯಾವುದೋ ಮನೋವ್ಯಥೆಯಿಂದ …